ಗ್ರಾಹಕರಿಗೆ ಬರೆ! Jio,ವೋಡಾಫೋನ್, ಏರ್ ಟೆಲ್ ಪರಿಷ್ಕೃತ ದರ ಎಷ್ಟೆಷ್ಟು ಹೆಚ್ಚಾಗಲಿದೆ ಗೊತ್ತಾ


Team Udayavani, Dec 2, 2019, 11:43 AM IST

Jio-new

ನವದೆಹಲಿ: ದೇಶದ ಪ್ರಮುಖ ಮೂರು ಖಾಸಗಿ ಟೆಲಿಕಾಂ ಆಪರೇಟರ್ಸ್ ಗಳಾದ ವೋಡಾಫೋನ್ ಐಡಿಯಾ ಲಿಮಿಟೆಡ್, ಭಾರ್ತಿ ಏರ್ ಟೆಲ್ ಡಿಸೆಂಬರ್ 3ರಿಂದ ತಮ್ಮ ಸೇವಾ ಶುಲ್ಕಗಳನ್ನು ಹೆಚ್ಚಿಸುವುದಾಗಿ ತಿಳಿಸಿದೆ. ರಿಲಯನ್ಸ್ ಜಿಯೋ ಕೂಡಾ ಡಿಸೆಂಬರ್ 6ರಿಂದ ಶೇ.40ರಷ್ಟು ಪರಿಸ್ಕೃತ ಶುಲ್ಕ ಹೆಚ್ಚಿಸುವುದಾಗಿ ಘೋಷಿಸಿದೆ.

ವೋಡಾಫೋನ್- ಭಾರ್ತಿ ಏರ್ ಟೆಲ್ ಶೇ.15ರಿಂದ 47ರಷ್ಟು ಏರಿಕೆ:

ವೋಡಾಫೋನ್ ಐಡಿಯಾ ಮತ್ತು ಭಾರ್ತಿ ಏರ್ ಟೆಲ್ ನ ನೂತನ ಟಾರಿಫ್ಸ್ ನಲ್ಲಿ ಮೊಬೈಲ್ ಕರೆಗಳು, ಡೇಟಾ ಮೇಲಿನ ದರವನ್ನು ಶೇ.15ರಿಂದ 47ರಷ್ಟು ಏರಿಕೆ ಮಾಡಲಿದ್ದು, ಇದು ಡಿಸೆಂಬರ್ 3ರಿಂದ ಜಾರಿಗೊಳ್ಳಲಿದೆ ಎಂದು ತಿಳಿಸಿದೆ.

ಅನ್ ಲಿಮಿಡೆಟ್ ಯೋಜನೆಯಡಿ ವರ್ಗೀಕರಿಸಲಾಗಿದ್ದ ಸೇವೆಗಳನ್ನು ಸಂಪೂರ್ಣ ಬದಲಾಯಿಸಿ ನವೀಕರಿಸುವುದಾಗಿ ತಿಳಿಸಿದೆ. ಏರ್ ಟೆಲ್ ಸೇವಾ ಶುಲ್ಕದಲ್ಲಿ ದಿನಕ್ಕೆ 50ಪೈಸೆಯಿಂದ 2.85 ರೂ.ವರೆಗೆ ಏರಿಕೆಯಾಗಲಿದೆ ಎಂದು ಹೇಳಿದೆ.

ಸುಮಾರು ಒಂದು ದಶಕಗಳ ಕಾಲ ಬೆಲೆ ಸ್ಪರ್ಧೆಯಲ್ಲಿ ವೋಡಾಫೋನ್, ಭಾರ್ತಿ ಏರ್ ಟೆಲ್ ಕರೆಗಳ ದರದಲ್ಲಿ, ಡಾಟಾ ಸರ್ವೀಸ್ ದರದಲ್ಲಿ ಮೇಲಾಟ ನಡೆಸಿದ್ದವು. ಇದೀಗ ಹತ್ತು ವರ್ಷಗಳ ನಂತರ ಮತ್ತೆ ಬೆಲೆ ಏರಿಕೆಯ ಮೊರೆ ಹೋಗಿರುವುದಾಗಿ ವರದಿ ತಿಳಿಸಿದೆ.

ಏರ್ ಟೆಲ್ ನ ಜನಪ್ರಿಯ 169 ರೂಪಾಯಿ ಹಾಗೂ 199 ರೂಪಾಯಿ ಪ್ಲ್ಯಾನ್ ಇನ್ಮುಂದೆ 248 ರೂಪಾಯಿ ಪ್ಯಾಕ್ ಆಗಲಿದೆ. ಏರ್ ಟೆಲ್ ನ ಹಿಂದಿನ 28 ದಿನಗಳ ಕಾಲದ ವ್ಯಾಲಿಡಿಟಿ ಈಗಲೂ ಮುಂದುವರಿಯಲಿದೆ. ಪರಿಷ್ಕೃತ ಬೆಲೆಯಲ್ಲಿ ಗ್ರಾಹಕರಿಗೆ 169 ರೂಪಾಯಿ ಪ್ಯಾಕ್ ನಲ್ಲಿ ದಿನಂಪ್ರತಿ 1.5ಜಿಬಿ ಡಾಟಾ ಪಡೆಯಲಿದ್ದಾರೆ. ಈ ಮೊದಲು ಪಡೆಯುತ್ತಿದ್ದುಕ್ಕಿಂತ ಶೇ.50ರಷ್ಟು ಹೆಚ್ಚಿನ ಸೇವೆ ಲಭ್ಯವಾಗಲಿದೆ. 199 ರೂ. ಪ್ಲ್ಯಾನ್ ಗ್ರಾಹಕರು ಈ ಮೊದಲಿನ ಸೇವೆ ಪಡೆಯಲಿದ್ದಾರೆ.

ಭಾರ್ತಿ ಏರ್ ಟೆಲ್ ಹೊರ ಹೋಗುವ ಕರೆ 28ದಿನಕ್ಕೆ 1000 ನಿಮಿಷ, 84 ದಿನ 3 ಸಾವಿರ ನಿಮಿಷ, 365 ದಿನ 12 ಸಾವಿರ ನಿಮಿಷ. ಹೀಗೆ ನಿಗದಿತ ನಿಮಿಷಗಳ ಮಿತಿ ಮೀರಿದರೆ ಪ್ರತಿ ನಿಮಿಷಕ್ಕೆ 6 ಪೈಸೆ ಹೆಚ್ಚಿಗೆ ನೀಡಬೇಕಾಗುತ್ತದೆ ಎಂದು ಹೇಳಿದೆ.

ವೋಡಾಫೋನ್ ಕೂಡಾ ನೂತನ ಪ್ರೀಪೇಯ್ಡ್ ಮತ್ತು ಸರ್ವೀಸಸ್ ನ ವ್ಯಾಲಿಡಿಟಿ ಸಮಯವನ್ನು ನಿಗದಿಪಡಿಸಿದೆ. ಅದರಂತೆ 2 ದಿನ, 28 ದಿನ, 84 ದಿನ ಹಾಗೂ 365 ದಿನಗಳು ಎಂದು ಘೋಷಿಸಿದೆ. ವೋಡಾಫೋನ್ ಮತ್ತು ಭಾರ್ತಿಏರ್ ಟೆಲ್ ಈಗಾಗಲೇ ಭಾರೀ ದೊಡ್ಡ ಪ್ರಮಾಣದ ಆರ್ಥಿಕ ಹೊಡೆತಕ್ಕೆ ಸಿಲುಕಿದ್ದು, ಇದೀಗ ದರ ಏರಿಕೆಗೆ ಮುಂದಾಗಿದೆ ಎಂದು ವರದಿ ವಿವರಿಸಿದೆ.

ಜಿಯೋ ಕರೆ, ಡೇಟಾ ದರ ಶೇ.40ರಷ್ಟು ಏರಿಕೆ:

ಜಿಯೋ ಕರೆಗಳ ದರ ಮತ್ತು ಡೇಟಾ ಬೆಲೆ ಶೇ.40ರಷ್ಟು ಏರಿಕೆಯಾಗಲಿದೆ. ಹೊಸ ಯೋಜನೆ ಅನ್ವಯ ಗ್ರಾಹಕರು ಶೇ.300ರಷ್ಟು ಹೆಚ್ಚು ಪ್ರಯೋಜನ ಪಡೆಯಲಿದ್ದಾರೆ ಎಂದು ರಿಲಯನ್ಸ್ ಹೇಳಿದೆ. ಆಲ್ ಇನ್ ಒನ್ ಪ್ಲ್ಯಾನ್ ನಡಿ ಅನಿಯಮಿತ ಕರೆ ಮತ್ತು ಡೇಟಾ ಸೌಲಭ್ಯ ಲಭ್ಯವಾಗಲಿದೆ ಎಂದು ಹೇಳಿದೆ.

ಗ್ರಾಹಕ ಮೊದಲು ಎಂಬ ಧ್ಯೇಯ ನಮ್ಮದು ಹೀಗಾಗಿ ಜಿಯೋ ಗ್ರಾಹಕರು ಹೆಚ್ಚಿನ ಲಾಭ ಪಡೆದುಕೊಳ್ಳಲಿದ್ದಾರೆ ಎಂದು ಕಂಪನಿ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ. ಆದರೆ ಕರೆಗಳ ದರ ಎಷ್ಟು ಹೆಚ್ಚಾಗಲಿದೆ, ಡೇಟಾ ದರ ಎಷ್ಟು, ಅನ್ ಲಿಮಿಟೆಡ್ ಕರೆಗಳು, ವೈಸ್ ಸಂದೇಶ, ವಿಡಿಯೋ ಕರೆಗಳ ಪರಿಷ್ಕೃತ ದರದ ಬಗ್ಗೆ ಜಿಯೋ ಇನ್ನಷ್ಟೇ ನಿಖರವಾಗಿ ಘೋಷಿಸಬೇಕಾಗಿದೆ. ಸದ್ಯ ಶೇ.40ರಷ್ಟು ಎಂದು ಹೇಳಿದೆ. ಅದು ಯಾವ್ಯಾವ ಫ್ಲ್ಯಾನ್ ಗೆ ಎಷ್ಟೆಷ್ಟು ಎಂಬುದು ಡಿಸೆಂಬರ್ 3ರಂದು ಬಹಿರಂಗವಾಗಬಹುದು.

ಟಾಪ್ ನ್ಯೂಸ್

Mudhol: ಬೆಳ್ಳಂಬೆಳಗ್ಗೆ ಅಬ್ಬರಿಸಿದ ಮಳೆರಾಯ… ಜನಜೀವನ ಅಸ್ತವ್ಯಸ್ತ

Mudhol: ವಾರದ ಸಂತೆಗೆ ಮಳೆರಾಯನ ಕಾಟ… ಜನಜೀವನ ಅಸ್ತವ್ಯಸ್ತ

Manipur: ಸಿಎಂ ಬಿರೇನ್ ಸಿಂಗ್ ಪದಚ್ಯುತಿಗೆ ಆಗ್ರಹಿಸಿ ಬಿಜೆಪಿ ಶಾಸಕರಿಂದ ಪ್ರಧಾನಿಗೆ ಪತ್ರ

Manipur: ಸಿಎಂ ಬಿರೇನ್ ಸಿಂಗ್ ಪದಚ್ಯುತಿಗೆ ಆಗ್ರಹಿಸಿ ಬಿಜೆಪಿ ಶಾಸಕರಿಂದ ಪ್ರಧಾನಿಗೆ ಪತ್ರ

Salman Khan: 5 ಕೋಟಿ ನೀಡಿ, ಇಲ್ಲದಿದ್ದರೆ… ಸಲ್ಮಾನ್ ಖಾನ್ ಗೆ ಮತ್ತೆ ಜೀವ ಬೆದರಿಕೆ

Salman Khan: 5 ಕೋಟಿ ನೀಡಿ, ಇಲ್ಲದಿದ್ದರೆ… ಸಲ್ಮಾನ್ ಖಾನ್ ಗೆ ಮತ್ತೆ ಜೀವ ಬೆದರಿಕೆ

2-vijayapura

Vijayapura: ಗ್ರಾಮಕ್ಕೆ ನುಗ್ಗಿದ ಮೊಸಳೆ ಸೆರೆ

Jaiswal

Canada Vs India: ನಿಜ್ಜರ್‌ ಹತ್ಯೆ ಕೇಸಲ್ಲಿ ಸತ್ಯ ಒಪ್ಪಿದ ಕೆನಡಾ ಪ್ರಧಾನಿ: ಕೇಂದ್ರ ಸರಕಾರ

Bhagavath

Helping Nature: ಭಾರತ ದಾಳಿ ಮಾಡಲ್ಲ, ತನ್ನ ಮೇಲಿನ ದಾಳಿಯನ್ನೂ ಸಹಿಸಲ್ಲ: ಭಾಗವತ್‌

ಪ್ರವಾಸ ಸಂದರ್ಭ ವಿದ್ಯಾರ್ಥಿನಿಯರಿಗೆ ಉಪನ್ಯಾಸಕರಿಂದ ಮದ್ಯಪಾನ: ದೂರು

Kanakapura: ಪ್ರವಾಸ ಸಂದರ್ಭ ವಿದ್ಯಾರ್ಥಿನಿಯರಿಗೆ ಉಪನ್ಯಾಸಕರಿಂದ ಮದ್ಯಪಾನ: ದೂರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

sensex-down

Share Market: ಸೆನ್ಸೆಕ್ಸ್‌ ಸತತ ಪತನ: 2 ತಿಂಗಳ ಕನಿಷ್ಠ ಕುಸಿತ ದಾಖಲಿಸಿದ ಷೇರುಪೇಟೆ

ಪ್ರಯಾಣಿಕರ ಗಮನಕ್ಕೆ- ರೈಲು ಪ್ರಯಾಣದ Advance Ticket ಬುಕ್ಕಿಂಗ್‌ ನಿಯಮದಲ್ಲಿ ಬದಲಾವಣೆ…

ಪ್ರಯಾಣಿಕರ ಗಮನಕ್ಕೆ- ರೈಲು ಪ್ರಯಾಣದ Advance Ticket ಬುಕ್ಕಿಂಗ್‌ ನಿಯಮದಲ್ಲಿ ಬದಲಾವಣೆ…

1-muskkk

Tesla; ಈ ರೋಬೋ ಮಾತಾಡುತ್ತೆ, ಮಕ್ಕಳನ್ನೂ ಆರೈಕೆ ಮಾಡುತ್ತೆ!

adani (2)

Dollar Earnings: ಭಾರತದಲ್ಲಿ ಗೌತಮ್‌ ಅದಾನಿ ನಂ.1, ಮೌಲ್ಯ 9.62 ಲಕ್ಷ ಕೋಟಿ

UPI: ವಹಿವಾಟು ಮಿತಿ ಏರಿಕೆಗೆ ಆರ್‌ಬಿಐ ನಿರ್ಧಾರ.. ಮಿತಿ 2,000ರೂ.ನಿಂದ 5,000ರೂ.ಗೆ ಏರಿಕೆ

UPI: ವಹಿವಾಟು ಮಿತಿ ಏರಿಕೆಗೆ ಆರ್‌ಬಿಐ ನಿರ್ಧಾರ.. ಮಿತಿ 2,000ರೂ.ನಿಂದ 5,000ರೂ.ಗೆ ಏರಿಕೆ

MUST WATCH

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

udayavani youtube

ಅಗಲಿದ ರತನ್ ಟಾಟಾಗೆ ಶ್ರದ್ಧಾಂಜಲಿ ಸಲ್ಲಿಸಿದ ಅಂಬಾನಿ ಕುಟುಂಬ

udayavani youtube

ಮಕ್ಕಳ ಸ್ಕ್ರೀನ್ ಟೈಮಿಂಗ್ ಕುರಿತು ಎಚ್ಚರಿಕೆ ಅತ್ಯವಶ್ಯಕ.. ಇಲ್ಲಿದೆ ಅಗತ್ಯ ಮಾಹಿತಿ

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

ಹೊಸ ಸೇರ್ಪಡೆ

mantrika kannada movie

Kannada Cinema; ಮಾಂತ್ರಿಕ ಆಟ ಶುರು

Mudhol: ಬೆಳ್ಳಂಬೆಳಗ್ಗೆ ಅಬ್ಬರಿಸಿದ ಮಳೆರಾಯ… ಜನಜೀವನ ಅಸ್ತವ್ಯಸ್ತ

Mudhol: ವಾರದ ಸಂತೆಗೆ ಮಳೆರಾಯನ ಕಾಟ… ಜನಜೀವನ ಅಸ್ತವ್ಯಸ್ತ

Prakarana Tanikha Hantadallide: ತೆರೆಮೇಲೆ ಪ್ರಕರಣದ ವಿವರ

Prakarana Tanikha Hantadallide: ತೆರೆಮೇಲೆ ಪ್ರಕರಣದ ವಿವರ

3-aranthodu

Aranthodu: ಅರಮನೆಗಯ ಶಿಥಿಲಗೊಂಡ ತೂಗು ಸೇತುವೆಯಿಂದ ಕೆಳಗೆ ಬಿದ್ದು ಮೂವರಿಗೆ ಗಾಯ

Manipur: ಸಿಎಂ ಬಿರೇನ್ ಸಿಂಗ್ ಪದಚ್ಯುತಿಗೆ ಆಗ್ರಹಿಸಿ ಬಿಜೆಪಿ ಶಾಸಕರಿಂದ ಪ್ರಧಾನಿಗೆ ಪತ್ರ

Manipur: ಸಿಎಂ ಬಿರೇನ್ ಸಿಂಗ್ ಪದಚ್ಯುತಿಗೆ ಆಗ್ರಹಿಸಿ ಬಿಜೆಪಿ ಶಾಸಕರಿಂದ ಪ್ರಧಾನಿಗೆ ಪತ್ರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.