![DKSHi (3)](https://www.udayavani.com/wp-content/uploads/2025/02/DKSHi-3-2-415x276.jpg)
![DKSHi (3)](https://www.udayavani.com/wp-content/uploads/2025/02/DKSHi-3-2-415x276.jpg)
Team Udayavani, Dec 3, 2019, 10:43 PM IST
ಬೆಳಗಾವಿ: ಉಪಚುನಾವಣೆಯ ಮತದಾನಕ್ಕೆಇನ್ನೆರಡು ದಿನಗಳು ಬಾಕಿ ಇರುವಾಗಲೇ ಬಹಿರಂಗ ಪ್ರಚಾರ ಅಂತ್ಯಗೊಂಡ ಕೆಲವೇ ಗಂಟೆಯಲ್ಲಿ ಬೈಕಿನಲ್ಲಿ ಸಾಗಿಸುತ್ತಿದ್ದ 18.5 ಲಕ್ಷ ರೂ. ಹಣವನ್ನು ಮಂಗಳವಾರ ವಶಪಡಿಸಿಕೊಳ್ಳಲಾಗಿದೆ.
ಗೋಕಾಕ ತಾಲೂಕಿನ ಮರಡಿಮಠ ಗ್ರಾಮದ ಬಳಿ ಬೈಕಿನಲ್ಲಿ ಹಣ ಸಾಗಿಸುವಾಗ ಖಚಿತ ಮಾಹಿತಿ ಪಡೆದ ಚುನಾವಣಾ ಫ್ಲೈಯಿಂಗ್ ಸ್ಕ್ವಾಡ್ ಅಧಿಕಾರಿಗಳು ನಗದು ಹಣವನ್ನು ವಶಪಡಿಸಿಕೊಂಡಿದ್ದಾರೆ. ಗೋಕಾಕ ತಾಲೂಕಿನ ಕೊಣ್ಣೂರ ಪಟ್ಟಣದ ರಾಜು ಭೀಮಪ್ಪ ಬೆಳಮರಡಿ ಹಾಗೂ ವಿಶಾಲ ಯಲ್ಲಪ್ಪ ಹಂಚಿನಮನಿ ಎಂಬುವರನ್ನು ವಶಕ್ಕೆಪಡೆದಿದ್ದಾರೆ .
ಪ್ರವೀಣ ಭೀಮಪ್ಪ ಗುಡ್ಡಾಕಾಯಿ ಎಂಬವರಿಂದ 18.5 ಲಕ್ಷ ರೂ. ಹಣ ಪಡೆದುಕೊಂಡು ರಮೇಶ ಮರಡಿಮಠ ಎಂಬವರಿಗೆ ಹಣ ನೀಡಲು ಹೊರಟಿದ್ದರು ಎಂಬುದು ಪ್ರಾಥಮಿಕ ತನಿಖೆಯಲ್ಲಿ ಗೊತ್ತಾಗಿದ್ದು. ಚುನಾವಣಾ ಫ್ಲೈಯಿಂಗ್ ಸ್ಕ್ವಾಡ್ ಅಧಿಕಾರಿ ಜಗದೀಶ ಈಟಿ ಹಾಗೂ ಸಿಬ್ಬಂದಿ ಹಣ ವಶಪಡಿಸಿಕೊಂಡಿದ್ದಾರೆ.
10 ಲಕ್ಷ ರೂ.ಗಳಿಗಿಂತ ಹೆಚ್ಚಿನ ನಗದು ಹಣ ಸಾಗಿಸುತ್ತಿರುವುದರಿಂದ ಇದರ ದಾಖಲೆಗಳ ಪರಿಶೀಲನೆಗೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳಿಗೆ ಒಪ್ಪಿಸಲಾಗಿದೆ ಎಂದು ಎಸ್ ಪಿ ಲಕ್ಷ್ಮಣ ನಿಂಬರಗಿ ಉದಯವಾಣಿಗೆ ತಿಳಿಸಿದ್ದಾರೆ.
You seem to have an Ad Blocker on.
To continue reading, please turn it off or whitelist Udayavani.