ಜ್ವರನಾಶಿನಿ….ಅಮೃತ ಬಳ್ಳಿಯಂತಾಗಬೇಕು!


Team Udayavani, Sep 21, 2020, 5:00 AM IST

ws-17

ಬರೋಬ್ಬರಿ ಒಂದು ತಿಂಗಳಿನಿಂದ ನೆಗಡಿಯ ಕಾಟ. ಅದೆಷ್ಟೋ ವೈದ್ಯ ಮಹಾಶಯರನ್ನೂ ಕಂಡರೂ, ಬಗೆ ಬಗೆಯ ಗುಳಿಗೆ ನುಂಗಿದರೂ ನನಗೆ ನೆಗಡಿಯಿಂದ ಮುಕ್ತಿ ದೊರಕಲಿಲ್ಲ. ಹೀಗಿರಲು ನನ್ನ ಆಪ್ತರೊಬ್ಬರು ಅಮೃತಬಳ್ಳಿಯ ಕಷಾಯ ಕುಡಿಯಲು ಸಲಹೆಯನ್ನಿತ್ತರು. ಅಷ್ಟು ಪರಿಣಾಮಕಾರಿಯಾದ ಇಂಗ್ಲಿಷ್‌ ಮಾತ್ರೆಗಳಿಂದಾಗದ್ದು, ಈ “ಬರಿಯ ಬಳ್ಳಿ’ಯಿಂದ ಸಾಧ್ಯವೇ ಎಂದು ನಕ್ಕು ಸುಮ್ಮನಾದೆ. ಅಷ್ಟಕ್ಕೂ ನಾವು ಬದುಕುತ್ತಿರುವುದು ಸ್ಪರ್ಧಾತ್ಮಕ ಪ್ರಪಂಚದಲ್ಲಿ. ಇಲ್ಲಿ ಒಂದು ನಿಮಿಷ ಹಳೆಯದ್ದು, ಹಳಸಿದ್ದು ಎನ್ನುವ ಭಾವ. ಹೀಗಿರಲು ತ್ವರಿತ ಉಪಶಮನ ನೀಡುವ ಇಂಗ್ಲಿಷ್‌ ಮದ್ದುಗಳ ಹೊರತು, ತಿಂಗಳು°ಗಟ್ಟಲೇ ಪಥ್ಯ, ಜೊತೆಗೆ ಕಹಿಯಾದ ಈ ಆಯುರ್ವೇದಿಕ್‌ ಔಷಧಿಗಳು ನಮಗೆ ಸೇರುವುದೆಂತು?

ಆದರೆ, ಕಾಕತಾಳೀಯ ಎಂಬಂತೆ ಇದೇ ಸಮಯದಲ್ಲಿ ಲೇಖಕಿ ನೇಮಿಚಂದ್ರರ ಬದುಕು ಬದಲಿಸಬಹುದು ಎಂಬ ಹೊತ್ತಗೆ ನನ್ನ ಕೈ ಸೇರಿತು. ಈ ಪುಸ್ತಕದಲ್ಲಿ ನೇಮಿಚಂದ್ರರವರು ಅಮೃತ ಬಳ್ಳಿಗೆ ಸಾವಿಲ್ಲ ಎಂಬ ತಲೆಬರಹದಡಿ ಅಮೃತಬಳ್ಳಿಯ ಮಹಿಮೆಯ ಹಾಡಿ ಹೊಗಳಿದ್ದರು. ಆಗಲೆ ನನಗೆ ಈ “ಬರಿಯ ಬಳ್ಳಿಯ’ ಕುರಿತು ಅರಿವಾದದ್ದು

ಅಮೃತಬಳ್ಳಿ ವಾತ, ಪಿತ್ತ ಮತ್ತು ಕಫ‌ಹರವಾಗಿದೆ. ಇದರ ಎಲೆ, ಕಾಂಡ, ಬೇರು ಹೀಗೆ ಎಲ್ಲದರಲ್ಲೂ ಔಷಧೀಯ ಗುಣವಿದೆ. ಜ್ವರಕ್ಕೆ ಅಮೃತಬಳ್ಳಿ ರಾಮಬಾಣ. “ಅಮೃತ’ (ಸಾವಿಲ್ಲದ)ಎಂಬ ಹೆಸರಿನ ಈ ಬಳ್ಳಿಯ ಕಷಾಯ “ಜ್ವರನಾಶಿನಿ’ ಎಂದು “ಚರಕ ಸಂಹಿತೆ’ಯಲ್ಲಿ ಉಲ್ಲೇಖವಿದೆ. ಅಮೃತಬಳ್ಳಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಗುಣ ಪಡೆದಿದೆ. ಈ ಗುಣ ಕ್ಯಾನ್ಸರ್‌ ವಿರುದ್ಧದ ಹೋರಾಟದಲ್ಲೂ ನೆರವಾಗುತ್ತದೆ ಎನ್ನುತ್ತಾರೆ. ಈ ಬಳ್ಳಿಗೆ ಸಾಕ್ಷಾತ್‌ ಧನ್ವಂತರಿಯ ವರವೇ ಏನೋ, ಅಷ್ಟು ಔಷಧೀಯ ಗುಣವನ್ನು ತನ್ನೊಡಲಲ್ಲಿ ಇರಿಸಿದೆ.

ಆದರೆ, ನನಗೆ ಅಮೃತ ಬಳ್ಳಿಯ ಪರಿಚಯವಿರಲಿಲ್ಲ. ಅಮ್ಮನನ್ನು ಕೇಳಲು ಅವರು, “ನೆರೆಮನೆಯವರ ಹಿತ್ತಲಲ್ಲಿ ಕಂಡಿ¨ªೆ’ ಅಂದರು. ಆದರೆ, ನೆರೆಮನೆಯವರು ಮನೆಮುಂದೆ ಪೊದೆಯಂತಾಗುತ್ತದೆ ಎಂದು ಕಡಿದಿದ್ದರು. ನಿರಾಸೆಯಿಂದ ಅವರು ಕಡಿದು ರಾಶಿ ಹಾಕಿದ್ದ ಕಡೆಗೆ ನೋಡಲು ಹೋದೆ. ಅಲ್ಲಿ ಅಚ್ಚರಿ ಕಾದಿತ್ತು. ಕಾರಣ, ಆ ಒಣ ಕಡ್ಡಿಯಲ್ಲೂ ಜೀವಂತಿಕೆ ಹಾಗೇ ಇತ್ತು.

ಅಲ್ಲೇ ಇತ್ತು ನೋಡಿ, “ಪ್ರಕೃತಿಯ ಪಾಠ’. ಕಡಿದೆಸೆದವರು ಬಳ್ಳಿಯ ಅಮೃತೀಯ ಗುಣವರಿಯರು. ಆದರೆ, ತನ್ನನ್ನು ಎಸೆದರು ಎಂದ ಮಾತ್ರಕ್ಕೆ ಅಮೃತಬಳ್ಳಿ ತನ್ನ ಔಷಧೀಯ ಗುಣಗಳನ್ನು ಕಳೆದುಕೊಳ್ಳಲಿಲ್ಲ. ಅದೇ ರೀತಿ ಒಬ್ಬ ವ್ಯಕ್ತಿಯನ್ನು ಈ ಸಮಾಜ ಎಲ್ಲೂ ಸಲ್ಲದವನು ಎಂದು ನಿಂದಿಸಿ, ತಿರಸ್ಕರಿಸಿದ ಮಾತ್ರಕ್ಕೆ ಆ ವ್ಯಕ್ತಿ ಕೆಲಸಕ್ಕೆ ಬಾರದವನು ಎಂದರ್ಥವಲ್ಲ. ಆತನಲ್ಲಿ ಎಲ್ಲರನ್ನೂ ಮೀರಿಸುವ ಪ್ರತಿಭೆ ಸುಪ್ತವಾಗಿರಬಹುದು. ಜನ ತನ್ನನ್ನು ದೂರ ತಳ್ಳಿದರೆಂದು ಆತ ತನ್ನತನವನ್ನು ತ್ಯಜಿಸಬಾರದು, ಬದುಕುವ ಛಲ ಬಿಡಬಾರದು. ಈ ಮೂಲಕ ಕಡಿದವರ ಮುಂದೆಯೇ ಹುಲುಸಾಗಿ ಬೆಳೆಯುವ ಸಾಹಸ ಮಾಡುವ ಅಮೃತಬಳ್ಳಿಯಂತಾಗಬೇಕು.

ಹರ್ಷಿತಾ
ದ್ವಿತೀಯ ಬಿಎ (ಪತ್ರಿಕೋದ್ಯಮ), ವಿಶ್ವವಿದ್ಯಾನಿಲಯದ ಕಾಲೇಜು, ಮಂಗಳೂರು

ಟಾಪ್ ನ್ಯೂಸ್

18

Ganesh Chaturthi: ಸ್ವರ್ಣ ಗೌರಿ ಮತ್ತು ವಿಘ್ನ ವಿನಾಯಕನಿಗೊಂದು ನಮನ

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

22

Ganesh Chaturthi: ಗಣೇಶ ಬಂದ

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Actor Vinayakan: ವಿಮಾನ ನಿಲ್ದಾಣದ ಸಿಬ್ಬಂದಿಗಳ ಜತೆ ವಾಗ್ವಾದ; ನಟ ವಿನಾಯಗನ್ ವಶಕ್ಕೆ

Actor Vinayakan: ವಿಮಾನ ನಿಲ್ದಾಣದ ಸಿಬ್ಬಂದಿಗಳ ಜತೆ ವಾಗ್ವಾದ; ನಟ ವಿನಾಯಗನ್ ವಶಕ್ಕೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Recipe; ಈ ಸ್ನಾಕ್ಸ್ ಒಂದು ಸಲ ಮಾಡಿದ್ರೆ ಸಾಕು ಪದೇ ಪದೇ ಮಾಡ್ತೀರಾ ಏನ್ ರುಚಿ ಗೊತ್ತಾ!

Recipe; ಈ ಸ್ನಾಕ್ಸ್ ಒಂದು ಸಲ ಮಾಡಿದ್ರೆ ಸಾಕು ಪದೇ ಪದೇ ಮಾಡ್ತೀರಾ ಏನ್ ರುಚಿ ಗೊತ್ತಾ!

Sheetal Devi: ಕೈಗಳಿಲ್ಲದ ಹುಡುಗಿ ಬಿಲ್ಗಾರಿಕೆಯಲ್ಲಿ ನಿಪುಣೆ; ಇದು ಸ್ಪೂರ್ತಿಯ ಕಥೆ

Sheetal Devi: ಕೈಗಳಿಲ್ಲದ ಹುಡುಗಿ ಬಿಲ್ಗಾರಿಕೆಯಲ್ಲಿ ನಿಪುಣೆ; ಇದು ಸ್ಪೂರ್ತಿಯ ಕಥೆ

1-asaasas

Haryana ಗೆಲ್ಲಲು ಕೈ ಕಸರತ್ತು: ರಾಹುಲ್ ಭೇಟಿಯಾದ ವಿನೇಶ್, ಬಜರಂಗ್ !

6-WLD

Weight Loss Drinks: ತೂಕ, ಕೊಬ್ಬು ಕಡಿಮೆ ಮಾಡಿಕೊಳ್ಳಲು ಈ ಪಾನೀಯಗಳನ್ನು ಸೇವಿಸಿ

Death Penalty: ಸ್ವಾತಂತ್ರ್ಯ ನಂತರ ಭಾರತದಲ್ಲಿ ಗಲ್ಲಿಗೇರಿಸಲ್ಪಟ್ಟ ಮೊದಲ ಮಹಿಳಾ ಕೈದಿ ಈಕೆ!

Death Penalty: ಸ್ವಾತಂತ್ರ್ಯ ನಂತರ ಭಾರತದಲ್ಲಿ ಗಲ್ಲಿಗೇರಿಸಲ್ಪಟ್ಟ ಮೊದಲ ಮಹಿಳಾ ಕೈದಿ ಈಕೆ!

MUST WATCH

udayavani youtube

ಗಜಪಯಣಕ್ಕೆ ಚಾಲನೆ : ಕ್ಯಾಪ್ಟನ್‌ ಅಭಿಮನ್ಯು ನೇತೃತ್ವದ 9 ಆನೆಗಳ ಗಜಪಡೆ

udayavani youtube

ರಕ್ಷಾ ಬಂಧನದ ಅರ್ಥ ಮತ್ತು ಮಹತ್ವ | ರಕ್ಷಾ ಬಂಧನ 2024

udayavani youtube

ಕಡಿಮೆ ಬೆಲೆಗೆ ಫಸ್ಟ್ ಕ್ಲಾಸ್ ಬಾಳೆಎಲೆ ಊಟ

udayavani youtube

ಆ.18 ರಿಂದ ಶ್ರೀಕೃಷ್ಣ ಮಠದಲ್ಲಿ ಕ್ರೀಡೋತ್ಸವ

udayavani youtube

ತಮ್ಮ ಮಕ್ಕಳನ್ನು ಬೆಳೆಸುವ ಸಲುವಾಗಿ ಕಂಡೋರ ಮಕ್ಕಳ ಭವಿಷ್ಯ ನಾಶ. ಈ ವ್ಯವಸ್ಥೆಗೆ ನಾನೂ ಬಲಿ

ಹೊಸ ಸೇರ್ಪಡೆ

18

Ganesh Chaturthi: ಸ್ವರ್ಣ ಗೌರಿ ಮತ್ತು ವಿಘ್ನ ವಿನಾಯಕನಿಗೊಂದು ನಮನ

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

22

Ganesh Chaturthi: ಗಣೇಶ ಬಂದ

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.