ವಿಳಾಸ ಹುಡುಕಿ ಹೊರಟವರ ಕಥೆ ವ್ಯಥೆ !

ತಂದೆ ತಾಯಿಯ ಬಿಟ್ಟುಬಂದ ಮೇಲೆ...

Team Udayavani, Dec 6, 2019, 5:59 AM IST

ws-31

ಪ್ರತಿಯೊಬ್ಬರಿಗೂ ಅವರದ್ದೇ ಆದ ವಿಳಾಸ ಅಂಥ ಇರುತ್ತದೆ. ನೋಡಲು, ಮಾತನಾಡಲು ಅಥವಾ ಸಂಪರ್ಕ ಸಾಧಿಸಲೋ ಒಬ್ಬರ ವಿಳಾಸವನ್ನು ಮತ್ತೂಬ್ಬರು ಹುಡುಕಿಕೊಂಡು ಹೋಗುವುದು ಸಹಜ. ಆದರೆ ಇಲ್ಲೊಂದು ತಂಡ ಗಾಂಧಿನಗರದಲ್ಲಿ ತಮ್ಮ ವಿಳಾಸವನ್ನು ತಾವೇ ಹುಡುಕಿಕೊಂಡು ಹೊರಟಿದೆ!

ಹೌದು, ಕನ್ನಡದಲ್ಲಿ ಬಹುತೇಕ ಹೊಸ ಪ್ರತಿಭೆಗಳೆ ಸೇರಿ ನಿರ್ಮಿಸಿರುವ ಮತ್ತೂಂದು ವಿಭಿನ್ನ ಟೈಟಲ್‌ನ ಚಿತ್ರ ತೆರೆಗೆ ಬರೋದಕ್ಕೆ ಸಿದ್ಧವಾಗುತ್ತಿದೆ. ಅಂದಹಾಗೆ, ಆ ಚಿತ್ರದ ಹೆಸರು “ಎಲ್ಲಿ ನನ್ನ ವಿಳಾಸ’ ಸದ್ದಿಲ್ಲದೆ ಚಿತ್ರೀಕರಣ ಮುಗಿಸಿ ಪೋಸ್ಟ್‌ ಪ್ರೊಡಕ್ಷನ್‌ ಅಂತಿಮ ಹಂತದಲ್ಲಿರುವ ಈ ಚಿತ್ರದ ಹಾಡುಗಳು ಇತ್ತೀಚೆಗೆ ಬಿಡುಗಡೆಯಾಗಿವೆ.

ಚಿತ್ರರಂಗದಲ್ಲಿ ನೆಲೆಯೂರುವ ಕನಸು ಕಾಣುತ್ತಿರುವ ನವ ಪ್ರತಿಭೆ ಅಜಯ್‌ ಅದಿತ್‌ ನಾಯಕನಾಗಿ, ಶಿವಮೊಗ್ಗ ಮೂಲದ ಪವಿತ್ರ ನಾಯಕ್‌ ನಾಯಕಿಯಾಗಿ ಈ ಚಿತ್ರದಲ್ಲಿ ತೆರೆಮೇಲೆ ಕಾಣಿಸಿಕೊಳ್ಳುತ್ತಿದ್ದಾರೆ. ಉಳಿದಂತೆ ಸೂರ್ಯದೀಪ್‌, ಲಕ್ಕಿ ರಘು, ಸಾಕ್ಷಿ, ಸುನಂದಾ ಮುಂತಾದವರು ಚಿತ್ರದ ಇತರ ಪಾತ್ರಗಳಲ್ಲಿ ಅಭಿನಯಿ­ಸಿದ್ದಾರೆ. ಸಾಗರ ಎಸ್‌. ಗಾವಡೆ ಈ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದು ನಿದೇಶಿ­ಸುತ್ತಿದ್ದಾರೆ.

ಚಿತ್ರದ ಕಥಾಹಂದರದ ಬಗ್ಗೆ ಮಾತನಾಡುವ ಚಿತ್ರತಂಡ, “ಪ್ರಪಂಚದಲ್ಲಿ ತಂದೆ- ತಾಯಿ ಮತ್ತವರ ಪ್ರೀತಿಗೆ ಬೆಲೆ ಕಟ್ಟ ಲಾಗದು. ನಾವು ಹುಟ್ಟಿದ ಮೇಲೆ ತಂದೆ-ತಾಯಿ ವಿಳಾಸವೇ ನಮ್ಮ ವಿಳಾಸವಾಗಿರುತ್ತದೆ. ಅವರಿಗೂ ನಾವೇ ಪ್ರೀತಿಯ ವಿಳಾಸವಾಗಿರುತ್ತೇವೆ. ಅಂತಹ ಒಂದು ಪ್ರೀತಿಯ ಪ್ರತೀಕವಾದ ವಿಳಾಸವನ್ನು ಬಿಟ್ಟು ನಮ್ಮದೆ ಆದ ವಿಳಾಸವನ್ನು ಹುಡುಕಿಕೊಂಡು ಹೊರಟಾಗ ಆಗುವ ತೊಂದರೆ, ಅನಾಹುತಗಳು ಏನೆಂಬುದನ್ನು ಈ ಚಿತ್ರದಲ್ಲಿ ಹೇಳಲು ಹೊರಟಿದ್ದೇವೆ. ಸೆಸ್ಪೆನ್ಸ್‌-ಥ್ರಿಲ್ಲರ್‌ ಶೈಲಿಯಲ್ಲಿ ಚಿತ್ರ ಸಾಗುತ್ತದೆ’ ಎಂದು ವಿವರಣೆ ಕೊಡುತ್ತದೆ.

“ಎಲ್ಲಿ ನನ್ನ ವಿಳಾಸ’ ಚಿತ್ರಕ್ಕೆ ಸಿ.ಎಸ್‌ ಸತೀಶ್‌ ಛಾಯಾಗ್ರಹಣ, ಸುಜೇಂದ್ರ ಸಂಕಲನ ಕಾರ್ಯವಿದೆ. ಚಿತ್ರದ ನಾಲ್ಕು ಹಾಡುಗಳಿಗೆ ಮಹೇಶ್‌ ಜೋಗಿ ಸಂಗೀತ ಸಂಯೋಜನೆಯಿದ್ದು, ಕಿನ್ನಾಳ್‌ ರಾಜು, ಶಿವು, ವಿನಯ ಪಾಂಡವಪುರ ಹಾಡುಗಳಿಗೆ ಸಾಹಿತ್ಯ ಒದಗಿಸಿದ್ದಾರೆ. ಚಿತ್ರಕ್ಕೆ ಅಕುಲ್‌.ಎನ್‌ ನೃತ್ಯ, ವಿ. ರಾವ್‌ದೇವ್‌ ಮತ್ತು ಕುಂಗ್‌ಫ‌ು ಚಂದ್ರು ಸಾಹಸ ಸಂಯೋಜಿಸಿದ್ದಾರೆ. “ಶ್ರೀ ಖಾಸYತೇಶ್ವರ ಪೊ›ಡಕ್ಷನ್‌’ ಬ್ಯಾನರ್‌ ಅಡಿಯಲ್ಲಿ ತಾಳಿಕೋಟೆ ಮೂಲದ ಸಂತೋಷ್‌ ಎಸ್‌. ಗಾವಡೆ, ಕಲಬುರ್ಗಿಯ ಲತೀಫ್.ಎನ್‌ ನಧಾಫ್ ಮತ್ತು ಮಿರ್ಜಾ ನಾದೀರ್‌ ಬೇಗ್‌ ಜಂಟಿಯಾಗಿ ಈ ಚಿತ್ರವನ್ನು ನಿರ್ಮಿಸಿದ್ದಾರೆ.

ಇನ್ನು “ಎಲ್ಲಿ ನನ್ನ ವಿಳಾಸ’ ಚಿತ್ರವನ್ನು ತಾಳಿಕೋಟೆ, ಯಲ್ಲಾಪುರ, ಶಿರಸಿ, ಮಂಗಳೂರು, ಉಡುಪಿ, ಹುಣಸಗಿ, ಬೆಂಗಳೂರು ಸುತ್ತಮುತ್ತ ಚಿತ್ರೀಕರಿಸಲಾಗಿದೆ. ಕನ್ನಡದ ಜೊತೆ ಜೊತೆಗೇ ತಮಿಳಿನಲ್ಲೂ ನಿರ್ಮಾಣವಾಗುತ್ತಿರುವ ಈ ಚಿತ್ರವನ್ನು ಏಕಕಾಲಕ್ಕೆ ಎರಡೂ ಭಾಷೆಗಳಲ್ಲಿ ಬಿಡುಗಡೆ ಮಾಡುವ ಯೋಜನೆ ಚಿತ್ರತಂಡದ್ದು. ಚಿತ್ರತಂಡದ ಯೋಜನೆಯಂತೆ ನಡೆದರೆ, ಮುಂದಿನ ವರ್ಷದ ಆರಂಭದಲ್ಲಿ ಚಿತ್ರ ತೆರೆಗೆ ಬರುವ ಸಾಧ್ಯತೆ ಇದೆ.

ಟಾಪ್ ನ್ಯೂಸ್

Arebashe-Academy

Madikeri: ಆರು ಮಂದಿಗೆ ಅರೆಭಾಷೆ ಅಕಾಡೆಮಿ ಗೌರವ ಪ್ರಶಸ್ತಿ ಪ್ರಕಟ; ಫೆ.28ಕ್ಕೆ ಪ್ರದಾನ

Santhe-last

Manipal: ಕಡೇ ದಿನವೂ ಉತ್ತಮ ಸ್ಪಂದನೆ; ಹಾಡು, ನೃತ್ಯದೊಂದಿಗೆ ʼನಮ್ಮ ಸಂತೆʼಗೆ ತೆರೆ

kambala2

Kambala: ದಾಖಲೆ ಬರೆದ ವಾಮಂಜೂರು ತಿರುವೈಲುಗುತ್ತು ಕಂಬಳ

Arrest

Davanagere: ಪೂಜೆಯಿಂದ ಕಷ್ಟ ಪರಿಹರಿಸುವ ನೆಪದಲ್ಲಿ ಮನೆಯಿಂದ ಕಳವು: ಇಬ್ಬರ ಬಂಧನ

Kodagu-Polcie

Madikeri: ವಿವಿಧ ಕಳವು ಪ್ರಕರಣ: ಕೊಡಗು ಪೊಲೀಸರಿಂದ ಮೂವರ ಸೆರೆ

DKSHi (3)

Water; ಗೌಡರು ಅಧಿಕಾರದಲ್ಲಿದ್ದಾಗ ನೀರಿನ ಹೋರಾಟ ಏಕೆ: ಡಿಕೆಶಿ

Beer

ಶಾಲೆ ಸಮೀಪ ಮದ್ಯದಂಗಡಿ ಇದ್ದರೆ ದೂರು ನೀಡಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Movies: ಲವ್‌ ಸ್ಟೋರಿ ಎಂಬ ಎವರ್‌ಗ್ರೀನ್‌ ಟ್ರೆಂಡ್: ಬೆಳ್ಳಿತೆರೆಯ ಪ್ರೇಮ ಪುರಾಣ

Movies: ಲವ್‌ ಸ್ಟೋರಿ ಎಂಬ ಎವರ್‌ಗ್ರೀನ್‌ ಟ್ರೆಂಡ್: ಬೆಳ್ಳಿತೆರೆಯ ಪ್ರೇಮ ಪುರಾಣ

Yogi spoke about Sidlingu 2 Movie

Sidlingu 2 Movie: ಕಾಮನ್‌ಮ್ಯಾನ್‌ ದುನಿಯಾದಲ್ಲಿ ಸಿದ್ಲಿಂಗು ಕನಸು

Pruthvi Amber spoke about his Bhuvanam Gaganam movie

Bhuvanam Gaganam: ನಗ್ತಾ ನಗ್ತಾ ಅಳಿಸ್ತೀನಿ…:  ಪೃಥ್ವಿ ನಿರೀಕ್ಷೆ

Unlock Raghava: ಅನ್‌ಲಾಕ್‌ ಮಿಲಿಂದ್‌; ಬರ್ತೀರಾ, ನೋಡ್ತೀರಾ, ನಗ್ತೀರಾ…

Unlock Raghava: ಅನ್‌ಲಾಕ್‌ ಮಿಲಿಂದ್‌; ಬರ್ತೀರಾ, ನೋಡ್ತೀರಾ, ನಗ್ತೀರಾ…

Roopesh Shetty starer Adhipatra kannada movie

Roopesh Shetty: ಕರಾವಳಿ ಸೊಗಡಿನ ‘ಅಧಿಪತ್ರ’

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

Arebashe-Academy

Madikeri: ಆರು ಮಂದಿಗೆ ಅರೆಭಾಷೆ ಅಕಾಡೆಮಿ ಗೌರವ ಪ್ರಶಸ್ತಿ ಪ್ರಕಟ; ಫೆ.28ಕ್ಕೆ ಪ್ರದಾನ

Santhe-last

Manipal: ಕಡೇ ದಿನವೂ ಉತ್ತಮ ಸ್ಪಂದನೆ; ಹಾಡು, ನೃತ್ಯದೊಂದಿಗೆ ʼನಮ್ಮ ಸಂತೆʼಗೆ ತೆರೆ

kambala2

Kambala: ದಾಖಲೆ ಬರೆದ ವಾಮಂಜೂರು ತಿರುವೈಲುಗುತ್ತು ಕಂಬಳ

Suside-Boy

Sulya: ಪಯಸ್ವಿನಿ ನದಿಯಲ್ಲಿ ಯುವಕನ ಶವ ಪತ್ತೆ

Arrest

Davanagere: ಪೂಜೆಯಿಂದ ಕಷ್ಟ ಪರಿಹರಿಸುವ ನೆಪದಲ್ಲಿ ಮನೆಯಿಂದ ಕಳವು: ಇಬ್ಬರ ಬಂಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.