ಸ್ಟಾರ್‌ ನಟರಿಗೆ ಸಿನಿಮಾ ಮಾಡಲ್ಲ…


Team Udayavani, Dec 6, 2019, 6:15 AM IST

ws-34

ಯಾವುದೇ ಚಿತ್ರರಂಗವಿರಲಿ, ಸಾಮಾನ್ಯವಾಗಿ ಸ್ಟಾರ್‌ ನಟರು ಅಲ್ಲಿನ ಹಿರಿಯ ನಿರ್ದೇಶಕರು, ಅದರಲ್ಲೂ ಸಾಕಷ್ಟು ಹಿಟ್‌ ಚಿತ್ರಗಳನ್ನು ನಿರ್ದೇಶಿಸಿ ಜನಪ್ರಿಯವಾದ ನಿರ್ದೇಶಕರ ಚಿತ್ರಗಳಲ್ಲಿ ಅಭಿನಯಿಸಲು ಉತ್ಸುಕರಾಗಿರುತ್ತಾರೆ. ಇನ್ನು ಅಂತಹ ನಿರ್ದೇಶಕರು ಕೂಡ ಸ್ಟಾರ್‌ಗಳಿಗಾಗಿ ಹೊಸ ಕಥೆಗಳನ್ನು ಹೆಣೆದು, ಅವರನ್ನು ನಿರ್ದೇಶಿಸಲು ಆಸಕ್ತರಾಗಿರುತ್ತಾರೆ. ಒಬ್ಬ ಸದಭಿರುಚಿ ನಿರ್ದೇಶಕ ಮತ್ತೂಬ್ಬ ಸ್ಟಾರ್‌ ನಟ ಒಟ್ಟಿಗೆ ಚಿತ್ರ ಮಾಡುತ್ತಿದ್ದಾರೆಂದರೆ, ಸಹಜವಾಗಿಯೇ ಪ್ರೇಕ್ಷಕರು ಮತ್ತು ಚಿತ್ರರಂಗದ ಚಿತ್ತ ಈ ಕಾಂಬಿನೇಶನ್‌ ಕಡೆಗೆ ನೆಟ್ಟಿರುತ್ತದೆ. ಅಂಥ ಚಿತ್ರಗಳ ಕಡೆಗೆ ನಿರೀಕ್ಷೆ ಕೂಡ ಜಾಸ್ತಿಯಿರುತ್ತದೆ.

ಆದರೆ ಕನ್ನಡ ಚಿತ್ರರಂಗದಲ್ಲಿ “ಸುಪ್ರಭಾತ’, “ಲಾಲಿ’, “ಅಮೃತವರ್ಷಿಣಿ’ಯಂತಹ ಅನೇಕ ಸೂಪರ್‌ ಹಿಟ್‌ ಚಿತ್ರಗಳನ್ನು ಕೊಟ್ಟ ಖ್ಯಾತ ನಿರ್ದೇಶಕ ದಿನೇಶ್‌ ಬಾಬು ಮಾತ್ರ ತಮಗೆ “ಸ್ಟಾರ್‌ ನಟರ ಸಹವಾಸವೇ ಬೇಡ. ನನಗೆ ಯಾವುದೇ ಸ್ಟಾರ್ಗೆ ಸಿನಿಮಾ ಮಾಡುವ ಯೋಚನೆ ಇಲ್ಲ’ ಅಂತಿದ್ದಾರೆ.

ಅಷ್ಟಕ್ಕೂ ದಿನೇಶ್‌ ಬಾಬು ಇಂಥದ್ದೊಂದು ಮಾತು ಹೇಳ್ಳೋದಕ್ಕೆ ಕಾರಣವೇನು? ಕನ್ನಡದಲ್ಲಿ ಸಾಹಸ ಸಿಂಹ ವಿಷ್ಣುವರ್ಧನ್‌, ಶಂಕರನಾಗ್‌, ಅನಂತನಾಗ್‌, ಶ್ರೀನಾಥ್‌, ಪ್ರಭಾಕರ್‌, ಶಿವರಾಜಕುಮಾರ್‌, ಉಪೇಂದ್ರ, ಪುನೀತ್‌ ರಾಜಕುಮಾರ್‌, ರಮೇಶ್‌ ಅರವಿಂದ್‌, ದೇವರಾಜ್‌, ಮಹಾಲಕ್ಷ್ಮೀ, ಸುಹಾಸಿನಿ, ಖುಷ್ಬೂ, ರೋಜಾ, ಪ್ರಿಯಾಂಕಾ ಉಪೇಂದ್ರ ಹೀಗೆ ಬಿಗ್‌ ಸ್ಟಾರ್‌ ಹೀರೋ-ಹೀರೋಯಿನ್ಸ್‌ ಜೊತೆ ನಲವತ್ತಕ್ಕೂ ಹೆಚ್ಚು ಚಿತ್ರಗಳನ್ನು ಯಶಸ್ವಿಯಾಗಿ ಮಾಡಿರುವ ದಿನೇಶ್‌ ಬಾಬು, ಇದ್ದಕ್ಕಿದ್ದಂತೆ ಇಂಥದ್ದೊಂದು ನಿರ್ಧಾರಕ್ಕೆ ಬರಲು ಕಾರಣ ಏನು ಅನ್ನೋದನ್ನ ಕೂಡ ಅವರೇ ಹೇಳುತ್ತಾರೆ.

“ಕನ್ನಡ ಚಿತ್ರರಂಗ ಕಳೆದ ಒಂದೆರಡು ದಶಕಗಳಿಂದ ಸಂಪೂರ್ಣ ಬದಲಾಗಿದೆ. ಹೊಸ ಕಲಾವಿದರು, ನಿರ್ದೇಶಕರು, ನಿರ್ಮಾಪಕರು, ತಂತ್ರಜ್ಞರು ಎಲ್ಲರೂ ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿರುವುದರಿಂದ ಚಿತ್ರರಂಗದ ದಿಕ್ಕು-ದೆಸೆ ಬದಲಾಗಿದೆ. ತಾಂತ್ರಿಕವಾಗಿ ಸಿನಿಮಾ ಮೇಕಿಂಗ್‌ ಅನ್ನೋದು ಸಾಕಷ್ಟು ಬದಲಾಗಿದೆ. ಕಾಲಾಂತರಕ್ಕೆ ಆಗುವ ಈ ಬದಲಾವಣೆಯನ್ನು ಎಲ್ಲರೂ ಒಪ್ಪಿಕೊಳ್ಳಬೇಕು. ಇದು ಕೇವಲ ಸಿನಿಮಾ ಮಾತ್ರ ಅಂತಲ್ಲ, ಎಲ್ಲಾ ಕಡೆಯೂ ಆಗುತ್ತಿದೆ.

ಆದ್ರೆ, ನಮ್ಮಲ್ಲಿ ತಾಂತ್ರಿಕವಾಗಿ ಸಿನಿಮಾ ಮೇಕಿಂಗ್‌ ಬದಲಾಗಿಯೇ ಹೊರತು, ಬೇರೆ ಭಾಷೆಗಳಲ್ಲಿ ಆಗುತ್ತಿರುವಂತೆ ಚಿತ್ರದ ಸಬ್ಜೆಕ್ಟ್(ಕಥಾವಸ್ತು)ನಲ್ಲಿ, ನಿರೂಪಣೆಯಲ್ಲಿ ಯಾವುದೇ ಪ್ರಯೋಗಗಳು ಆಗುತ್ತಿಲ್ಲ’ ಎನ್ನುತ್ತಾರೆ ದಿನೇಶ್‌ ಬಾಬು.

“ಈಗ ಬರುತ್ತಿರುವ ಹೊಸ ತಲೆಮಾರಿನ ನಿರ್ದೇಶಕರಿಗೆ ಮೇಕಿಂಗ್‌ ಕಡೆಗಿರುವ ಆಸಕ್ತಿ, ಚಿತ್ರದ ಸಬೆjಕ್ಟ್ (ಕಥಾವಸ್ತು) ಕಡೆಗೆ ಇರುವಂತೆ ಕಾಣುತ್ತಿಲ್ಲ. ಯಾವುದೇ ಚಿತ್ರಕ್ಕೆ ಸಬ್ಜೆಕ್ಟ್ (ಕಥಾವಸ್ತು) ತುಂಬಾ ಮುಖ್ಯ. ಒಂದು ಕಥೆಯನ್ನು ವಿಭಿನ್ನವಾಗಿ ಹೇಗೆ ಕಟ್ಟಿಕೊಡುತ್ತೇವೆ ಎನ್ನುವ ಮೂಲಕವೇ ನೋಡುಗರಲ್ಲಿ ಕುತೂಹಲ ಹುಟ್ಟಿಸಬೇಕು. ಅದಕ್ಕೆ ಸ್ಕ್ರಿಪ್ಟ್ ಹಂತದಲ್ಲೇ ಸಾಕಷ್ಟು ತಯಾರಿ ಮುಖ್ಯ. ಆನಂತರ ಅದನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಸ್ಕ್ರೀನ್‌ ಮೇಲೆ ತರಬಹುದು. ಆದರೆ ಈಗ ಹೆಚ್ಚಿನ ಸಿನಿಮಾ ಮೇಕರ್ಗೆ ಆ ಬಗ್ಗೆ ಯೋಚನೆಯೂ ಇಲ್ಲ, ಆಸಕ್ತಿಯೂ ಇಲ್ಲ. ಇನ್ನು ಸ್ಟಾರ್ ನಟರು ಅಂದುಕೊಂಡವರಿಗೆ ಕೂಡ ಚಿತ್ರದ ಸಬೆjಕ್ಟ್ಗಿಂತ, ಬಜೆಟ್‌, ರಿಚ್‌ನೆಸ್‌, ಕ್ಯಾರವಾನ್‌, ಬಿಲ್ಡಪ್ಸ್‌, ಓವರ್‌ ಪಬ್ಲಿಸಿಟಿ ಇಂಥವುಗಳೇ ಮುಖ್ಯ­ವಾಗುತ್ತದೆ. ಆದರೆ ನಾನು ಸಬ್ಜೆಕ್ಟ್ ಮೇಲೆ ಸಿನಿಮಾ ಮಾಡುವವನು. ಹಾಗಾಗಿ ಅಂಥ ಸ್ಟಾರ್ ಜೊತೆಗೆ ಮಾಡೋದಕ್ಕೆ ಸಾಧ್ಯವೇ ಇಲ್ಲ’ ಅಂತಾರೆ ದಿನೇಶ್‌ ಬಾಬು.

ಇದೇ ವೇಳೆ ದಿನೇಶ್‌ ಬಾಬು ತಮ್ಮ ಸಿನಿಯಾನವನ್ನು ಮೆಲುಕು ಹಾಕುತ್ತಾರೆ. “ನಾನು ಹಿಂದೆ ಕೆಲಸ ಮಾಡಿದ ಎಲ್ಲಾ ಸ್ಟಾರ್ ನಟ-ನಟಿಯರಲ್ಲಿ ಒಂದು ಶಿಸ್ತು ಇರುತ್ತಿತ್ತು. ಒಂದು ಸಿನಿಮಾಕ್ಕೆ ಸಬೆjಕ್ಟ್ ಎಷ್ಟು ಮುಖ್ಯ, ನಾವು ಎಂಥ ಪಾತ್ರ ಮಾಡುತ್ತಿದ್ದೇವೆ. ಅದಕ್ಕೆ ಎಂಥ ತಯಾರಿ ಬೇಕು. ಒಂದು ಸಿನಿಮಾಕ್ಕೆ ನಾವು ಹೇಗಿರಬೇಕು ಅನ್ನೋದು ಅವರಿಗೆ ಚೆನ್ನಾಗಿ ಗೊತ್ತಿತ್ತು. ಹಾಗಾಗಿಯೇ ವಿಷ್ಣುವರ್ಧನ್‌ ಅವರಂಥ ಸ್ಟಾರ್‌ ನಟನ ಜೊತೆ ಅಷ್ಟೊಂದು ಸಿನಿಮಾ ಮಾಡೋದಕ್ಕೆ ಸಾಧ್ಯವಾಯ್ತು. ಎಲ್ಲದಕ್ಕಿಂತ ಹೆಚ್ಚಾಗಿ ಸಿನಿಮಾ ಮಾಡುವಾಗ ಆ ಕಲಾವಿದರಿಗೆ ತಾವು ಸ್ಟಾರ್ ಅನ್ನೋ ಯೋಚನೆಯೇ ತಲೆಯಲ್ಲಿ ಇರುತ್ತಿರಲಿಲ್ಲ. ಹಾಗಾಗಿ ಅಂಥ ಸಿನಿಮಾಗಳು ಬರೋದಕ್ಕೆ ಸಾಧ್ಯವಾಯ್ತು. ಆದ್ರೆ ಈಗ ಹಾಗಿಲ್ಲ. ನಟನೊಬ್ಬ ತಾನು ಸ್ಟಾರ್‌ ಅನ್ನೋದನ್ನ ತಲೆಯಲ್ಲಿ ಇಟ್ಟುಕೊಂಡೆ ಸೆಟ್‌ಗೆ ಬರುತ್ತಾನೆ. ಸಿನಿಮಾದ ಸಬೆjಕ್ಟ್ಗಿಂತ, ಬೇರೆ ಬೇರೆ ವಿಷಯಗಳೇ ಅವರಿಗೆ ಮುಖ್ಯವಾಗುತ್ತದೆ. ಹೀಗಿರುವಾಗ ನಿರ್ದೇಶಕನೊಬ್ಬ ಒಂದೊಳ್ಳೆ ಸದಭಿರುಚಿ ಸಿನಿಮಾ ಮಾಡೋದಾದ್ರೂ ಹೇಗೆ?’ ಎಂದು ಬೇಸರದ ಪ್ರಶ್ನೆಯನ್ನು ಮುಂದಿಡುತ್ತಾರೆ ಬಾಬು.

ಒಬ್ಬ ನಿರ್ದೇಶಕನಿಗೆ ನಿರ್ಮಾಪಕ, ಕಲಾವಿದರ ಸಹಕಾರ ಕೂಡಾ ಮುಖ್ಯ ಎಂಬುದು ದಿನೇಶ್‌ ಬಾಬು ಅವರ ಮಾತು. “ಒಬ್ಬ ಹೊಸ ನಿರ್ದೇಶಕರ ಮೂರು-ನಾಲ್ಕು ವರ್ಷ ಕಷ್ಟಪಟ್ಟು ಒಂದೊಳ್ಳೆ ಕಥೆ ಮಾಡಿ, ಅದರ ಮೇಲೆ ಸಾಕಷ್ಟು ಕೆಲಸ ಮಾಡಿ, ಅದನ್ನು ಸಿನಿಮಾ ಮಾಡುತ್ತಾನೆ. ಅವನ ಆ ಸಿನಿಮಾ ಹಿಟ್‌ ಆಗುತ್ತಿದ್ದಂತೆ, ಅವರ ಕೆಲಸದ ಶೈಲಿಯೇ ಬದಲಾಗುತ್ತದೆ. ಹಿಂದೆಯೇ ಹತ್ತಾರು ಪ್ರೊಡ್ನೂಸರ್ ಬರುತ್ತಾರೆ. ಆ ನಿರ್ದೇಶಕ ಒಂದರ ಹಿಂದೊಂದು ಸಿನಿಮಾ ಒಪ್ಪಿಕೊಳ್ಳುತ್ತಾನೆ. ಎರಡು ತಿಂಗಳಿ­ಗೊಂದು ಸಿನಿಮಾ ಮಾಡಲು ಶುರು ಮಾಡ್ತಾನೆ. ಒಂದು ಒಳ್ಳೆಯ ಸಿನಿಮಾ ಕೊಟ್ಟ ನಿರ್ದೇಶಕ ನಂತರ ಒಂದರ ಹಿಂದೊಂದು ಕೆಟ್ಟ ಸಿನಿಮಾ ಮಾಡ್ತಾನೆ. ತನ್ನ ಭವಿಷ್ಯವನ್ನೇ ಹಾಳು ಮಾಡಿಕೊಳ್ಳುತ್ತಾನೆ. ಒಳ್ಳೆಯ ಸಬೆjಕ್ಟ್ ಇಟ್ಟುಕೊಂಡು ಅದರ ಮೇಲೆ ವರ್ಕ್‌ ಮಾಡಿ ಸಿನಿಮಾ ಮಾಡೋದು ದಿನ ಬೆಳಗಾಗುವುದರೊಳಗೆ ಆಗುವಂಥದ್ದಲ್ಲ. ಯಾವುದೇ ಸಿನಿಮಾ ಆಗಲಿ ಅದಕ್ಕೆ ಒಂದಷ್ಟು ಸಮಯ ಹಿಡಿಯುತ್ತದೆ. ಅದರಲ್ಲೂ ಒಳ್ಳೆಯ ಸಿನಿಮಾ ಆಗ್ಬೇಕು ಅಂದ್ರೆ ಅದಕ್ಕೆ ಸಮಯ ಬೇಕೆ ಬೇಕು. ಕಲಾವಿದರು, ನಿರ್ಮಾಪಕರು, ತಂತ್ರಜ್ಞರು ಹೀಗೆ ಎಲ್ಲರ ಸಹಕಾರವಿರಬೇಕು. ಬೇರೆ ಭಾಷೆಗಳಲ್ಲಿ ಈ ಥರದ ಪರಿಸ್ಥಿತಿ ಇಲ್ಲ. ಕಲಾವಿದರು, ನಿರ್ದೇಶಕರು, ನಿರ್ಮಾಪಕರು ವಿವೇಚನೆಯಿಂದ, ಶಿಸ್ತಿನಿಂದ ಸಿನಿಮಾ ಮಾಡುತ್ತಾರೆ. ನಮ್ಮವರು ಇಂಥದ್ದನ್ನು ನೋಡಿ ಕಲಿತುಕೊಳ್ಳಲು ಸಾಕಷ್ಟಿದೆ’ ಎಂದು ಹೊಸಬರಿಗೆ ಕಿವಿ ಮಾತು ಹೇಳುತ್ತಾರೆ.

ಜಿ.ಎಸ್‌.ಕಾರ್ತಿಕ ಸುಧನ್‌

ಟಾಪ್ ನ್ಯೂಸ್

Delhi-Stamp

Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

naki

Naki Sumo: ಮಗುವನ್ನು ಅಳಿಸುವ ವಿಚಿತ್ರ ಆಚರಣೆ !; ನಡೆಯುವುದಾದರು ಎಲ್ಲಿ?

mohan bhagwat

RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Movies: ಲವ್‌ ಸ್ಟೋರಿ ಎಂಬ ಎವರ್‌ಗ್ರೀನ್‌ ಟ್ರೆಂಡ್: ಬೆಳ್ಳಿತೆರೆಯ ಪ್ರೇಮ ಪುರಾಣ

Movies: ಲವ್‌ ಸ್ಟೋರಿ ಎಂಬ ಎವರ್‌ಗ್ರೀನ್‌ ಟ್ರೆಂಡ್: ಬೆಳ್ಳಿತೆರೆಯ ಪ್ರೇಮ ಪುರಾಣ

Yogi spoke about Sidlingu 2 Movie

Sidlingu 2 Movie: ಕಾಮನ್‌ಮ್ಯಾನ್‌ ದುನಿಯಾದಲ್ಲಿ ಸಿದ್ಲಿಂಗು ಕನಸು

Pruthvi Amber spoke about his Bhuvanam Gaganam movie

Bhuvanam Gaganam: ನಗ್ತಾ ನಗ್ತಾ ಅಳಿಸ್ತೀನಿ…:  ಪೃಥ್ವಿ ನಿರೀಕ್ಷೆ

Unlock Raghava: ಅನ್‌ಲಾಕ್‌ ಮಿಲಿಂದ್‌; ಬರ್ತೀರಾ, ನೋಡ್ತೀರಾ, ನಗ್ತೀರಾ…

Unlock Raghava: ಅನ್‌ಲಾಕ್‌ ಮಿಲಿಂದ್‌; ಬರ್ತೀರಾ, ನೋಡ್ತೀರಾ, ನಗ್ತೀರಾ…

Roopesh Shetty starer Adhipatra kannada movie

Roopesh Shetty: ಕರಾವಳಿ ಸೊಗಡಿನ ‘ಅಧಿಪತ್ರ’

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

crimebb

Kasaragod: ಹಲ್ಲೆ ಪ್ರಕರಣ; ಕೇಸು ದಾಖಲು

Jagadish Shettar: ಯಾವಾಗ ಬೇಕಾದರೂ ಸರ್ಕಾರ ಪತನ: ಶೆಟ್ಟರ್‌

Jagadish Shettar: ಯಾವಾಗ ಬೇಕಾದರೂ ಸರ್ಕಾರ ಪತನ: ಶೆಟ್ಟರ್‌

Delhi-Stamp

Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು

WPL: ಮುಂಬೈ-ಡೆಲ್ಲಿ ಪಂದ್ಯದಲ್ಲಿ ರನೌಟ್‌ ವಿವಾದ

WPL: ಮುಂಬೈ-ಡೆಲ್ಲಿ ಪಂದ್ಯದಲ್ಲಿ ರನೌಟ್‌ ವಿವಾದ

de

Vitla: ಕಾಲು ಜಾರಿ ಕೆರೆಗೆ ಬಿದ್ದು ಯುವಕ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.