![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
Team Udayavani, Dec 8, 2019, 12:41 AM IST
ಕಾಠ್ಮಂಡು: ಈಜು ಮತ್ತು ಕುಸ್ತಿಪಟುಗಳ ಅಮೋಘ ನಿರ್ವಹಣೆಯಿಂದ ಭಾರತವು ಸೌತ್ ಏಶ್ಯನ್ ಗೇಮ್ಸ್ನಲ್ಲಿ ಭಾರೀ ಪ್ರಮಾಣದಲ್ಲಿ ಪದಕಗಳನ್ನು ಗೆಲ್ಲುತ್ತಿದೆ. ಆರನೇ ದಿನ ಭಾರತೀಯ ಆಟಗಾರರು 29 ಚಿನ್ನ ಸಹಿತ 49 ಪದಕ ಗೆದ್ದುಕೊಂಡಿದ್ದಾರೆ.
ಈಜು ಮತ್ತು ಕುಸ್ತಿ ಪಟುಗಳ ಗಮನಾರ್ಹ ನಿರ್ವಹಣೆ ಯಿಂದಾಗಿ ಭಾರತ ಪದಕಪಟ್ಟಿಯಲ್ಲಿ ಅಗ್ರಸ್ಥಾ ನಕ್ಕೇರಿದೆ. 110 ಚಿನ್ನ, 69 ಬೆಳ್ಳಿ ಸಹಿತ ಒಟ್ಟು 214 ಪದಕ ಗೆದ್ದಿರುವ ಭಾರತ ಆತಿಥೇಯ ನೇಪಾಲವನ್ನು ದ್ವಿತೀಯ ಸ್ಥಾನಕ್ಕೆ ತಳ್ಳಿದೆ. 43 ಚಿನ್ನ ಸಹಿತ 142 ಪದಕ ಗೆದ್ದಿರುವ ನೇಪಾಲ ದ್ವಿತೀಯ ಮತ್ತು ಲಂಕಾ (170 ಪದಕ) 3ನೇ ಸ್ಥಾನದಲ್ಲಿದೆ. ಇನ್ನು ಮೂರು ದಿನದ ಸ್ಪರ್ಧೆಗಳು ಬಾಕಿ ಉಳಿದಿವೆೆ.
ಈಜಿನಲ್ಲಿ ಪ್ರಾಬಲ್ಯ
ಈಜುಕೊಳದಲ್ಲಿ ಭಾರತೀಯ ಈಜುತಾರೆಯರು ಪ್ರಾಬಲ್ಯ ಮೆರೆದಿದ್ದಾರೆ. 7 ಚಿನ್ನ ಗೆದ್ದು ಸಂಭ್ರಮಿಸಿದ್ದಾರೆ. ಶ್ರೀಹರಿ ನಟರಾಜ್, ರಿಚಾ ಮಿಶ್ರಾ, ಶಿವಾ, ಮಾನ ಪಟೇಲ್, ಚಹತ್ ಅರೋರ, ಲಿಕಿತ್, ರುಜುತಾ ಭಟ್ ಚಿನ್ನ ಗೆದ್ದ ಈಜುಪಟುಗಳಾಗಿದ್ದಾರೆ. ಜಯವೀಣ ಮತ್ತು ರಿಧಿಮಾ ವೀರೇಂದ್ರ ಬೆಳ್ಳಿ ಜಯಿಸಿದ್ದಾರೆ. ಈಜು ಸ್ಪರ್ಧೆ ಯ ಎರಡು ದಿನ ಭಾರತ ಒಟ್ಟು 30 ಪದಕ ಜಯಿಸಿದೆ.
ಕುಸ್ತಿಪಟುಗಳು ಕೂಡ ಉತ್ತಮ ನಿರ್ವಹಣೆ ನೀಡಿ ಗಮನ ಸೆಳೆದಿದ್ದಾರೆ. ಸತ್ಯವರ್ತ್ ಕದಿಯನ್, ಸುಮಿತ್ ಮಲಿಕ್, ಗುರ್ಶನ್ಪ್ರೀತ್ ಕೌರ್ ಮತ್ತು ಸರಿತಾ ಮೋರ್ ತಮ್ಮ ಸ್ಪರ್ಧೆಯಲ್ಲಿ ಚಿನ್ನ ಗೆದ್ದ ಸಾಧನೆ ಮಾಡಿದ್ದಾರೆ. ಕಾಮನ್ವೆಲ್ತ್ ಗೇಮ್ಸ್ ಬೆಳ್ಳಿ ವಿಜೇತ ಕದಿಯನ್ ತನ್ನ ಎದುರಾಳಿ ಪಾಕಿಸ್ಥಾನದ ತಬಿಯರ್ ಖಾನ್ ಅವರನ್ನು ಸುಲಭವಾಗಿ ನೆಲಕ್ಕುರುಳಿಸಿ ಚಿನ್ನ ಪಡೆದರು.
ಶೂಟಿಂಗ್ನಲ್ಲೂ ಭಾರತೀಯ ಶೂಟರ್ಗಳು ಗಮನಾರ್ಹ ನಿರ್ವಹಣೆ ನೀಡಿ ಮೂರು ಚಿನ್ನ ಗೆದ್ದರು. ಲಿಫ್ಟಿಂಗ್ನಲ್ಲಿ ಭಾರತಕ್ಕೆ ಎರಡು ಚಿನ್ನ ಬಂದಿದೆ.
ಮಾಲ್ದೀವ್ಸ್ 8 ರನ್ನಿಗೆ ಆಲೌಟ್
ಕಾಠ್ಮಂಡು: ಸೌತ್ ಏಶ್ಯನ್ ಗೇಮ್ಸ್ನ ವನಿತಾ ಕ್ರಿಕೆಟ್ ಪಂದ್ಯದಲ್ಲಿ ಮಾಲ್ದೀವ್ಸ್ ತಂಡ ಕೇವಲ 8 ರನ್ನಿಗೆ ಆಲೌಟಾಗಿದೆ. ಇದಕ್ಕುತ್ತರವಾಗಿ ನೇಪಾಲ ಕೇವಲ 7 ಎಸೆತಗಳಲ್ಲಿ ಯಾವುದೇ ವಿಕೆಟ್ ಕಳೆದುಕೊಳ್ಳದೇ ಜಯಭೇರಿ ಬಾರಿಸಿತು. ಇದು ಟಿ20 ಇತಿಹಾಸದ ನಾಲ್ಕನೇ ಅತೀವೇಗದ ಚೇಸ್ ಗೆಲುವು ಆಗಿದೆ.
ಮಾಲ್ದೀವ್ಸ್ ತಂಡದ 9 ಮಂದಿ ಆಟಗಾರ್ತಿಯರು ಶೂನ್ಯಕ್ಕೆ ಔಟಾಗಿದ್ದರು. ಆರಂಭಿಕ ಆಟಗಾರ್ತಿ ಐಮಾ ಅಶಥ್ 12 ಎಸೆತ ಎದುರಿಸಿ 1 ರನ್ ಗಳಿಸಿದರು. ಉಳಿದ ಏಳು ರನ್ ಇತರ ರನ್ ಮೂಲಕ ಬಂದಿತ್ತು. ಹೀಗಾಗಿ ಮಾಲ್ದೀವ್ಸ್ 8 ರನ್ನಿಗೆ ಆಲೌಟಾಯಿತು.
IPL 2025: ಐಪಿಎಲ್ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ
Team India: ಪಂತ್-ರಾಹುಲ್ ವಿಚಾರದಲ್ಲಿ ಗಂಭೀರ್- ಅಗರ್ಕರ್ ನಡುವೆ ಭಿನ್ನಾಭಿಪ್ರಾಯ
IPL 2025: ಮತ್ತೊಬ್ಬ ಅಫ್ಘಾನಿ ಬೌಲರ್ ಬದಲು ಮುಂಬೈ ಇಂಡಿಯನ್ಸ್ ತಂಡದ ಸೇರಿದ ಮುಜೀಬ್
ODI Ranking: ನಂ.1 ಸ್ಥಾನದಲ್ಲೇ ಉಳಿದ ಭಾರತ, 4ಕ್ಕೆ ಜಿಗಿದ ನ್ಯೂಜಿಲೆಂಡ್
Team India: ʼನಾವು ನಟರಲ್ಲ..ʼ: ಟೀಂ ಇಂಡಿಯಾದ ಸೂಪರ್ಸ್ಟಾರ್ ಸಂಸ್ಕೃತಿ ಟೀಕಿಸಿದ ಅಶ್ವಿನ್
Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ
Air Lift: ಪಂಜಾಬ್ನಲ್ಲಿ ರೈತ ಮುಖಂಡ ಶಾಂತಕುಮಾರ್ಗೆ ಅಪಘಾತ; ಬೆಂಗಳೂರಿಗೆ ಏರ್ಲಿಫ್ಟ್
Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?
Bharamasagara: ವಿದ್ಯುತ್ ಕಿಡಿಗೆ ಎರಡು ಮೇವಿನ ಬಣವೆ ಸಂಪೂರ್ಣ ಭಸ್ಮ
Udayavani-MIC ನಮ್ಮ ಸಂತೆ: ತೆಂಗಿನ ಗರಟೆಯಲ್ಲಿ ಅರಳಿದ ಕಲಾಕೃತಿ
You seem to have an Ad Blocker on.
To continue reading, please turn it off or whitelist Udayavani.