ಮನದಲ್ಲಿ ನಿನದೇ ಹೆಜ್ಜೆಯ ಸಪ್ಪಳ!


Team Udayavani, Dec 17, 2019, 6:06 AM IST

mnada

ಬರಿದಾಗಿದ್ದ ಮನದಲ್ಲಿ ನಿನ್ನ ಹೆಜ್ಜೆಯ ಗುರುತು ಮೂಡಿದಾಗಲೇ ನಾನೆಂದೂ ಕಾಣದ ಸಂತಸ, ಸಂಭ್ರಮದ ಅರ್ಥ ಅರಿತಿದ್ದು. ದಿನದ ಪ್ರತಿ ಕ್ಷಣದಲ್ಲೂ ನನ್ನನ್ನು ಕಾಡುವ ನಿನ್ನನ್ನು ನೆನೆದಾಗ ಅದೇನೋ, ಎಲ್ಲ ಮರೆತು ಮೊಗದಲ್ಲೊಂದು ನಗೆ ಅರಳುತ್ತದೆ. ನಾನು ನಿನ್ನನ್ನು ಕಣ್ತುಂಬಿಕೊಂಡಿದ್ದು ಎರಡೇ ಸಲ. ಆದರೂ, ಮನದಲ್ಲಿ ಅಚ್ಚಾಗಿರುವ ನಿನ್ನ ಚಿತ್ತಾರವ ನೆನೆದರೆ ಅಚ್ಚರಿಯೆನಿಸುತ್ತದೆ. ನಿನ್ನೊಟ್ಟಿಗೆ ಪ್ರತಿದಿನ ಅದೆಷ್ಟು ಹರಟಿದರೂ ಮತ್ತಷ್ಟು ಬಾಕಿ ಉಳಿದಿರುವಂತೆ ಹೃದಯ ಮತ್ತೆ ಮತ್ತೆ ನಿನ್ನ ಮಾತಿಗೆ, ನಗುವಿನ ಕಲರವಕ್ಕೆ ಹಂಬಲಿಸುತ್ತದೆ.

ನನ್ನ ಭಾವುಕತೆಯನ್ನು ತೆರದಿಡ­ಬಾರದೆಂದು ಬಚ್ಚಿಟ್ಟರೂ ನಿನ್ನೆದುರು ಮನಸು ತಾನಾಗಿಯೇ ತೆರೆದುಕೊಳ್ಳುತ್ತದೆ. ನೀನು ಕಣ್ಣೆದುರು ಸುಳಿದಾಗೆಲ್ಲಾ, ಅದ್ಯಾವುದೋ ಚೈತನ್ಯ ತುಂಬಿಕೊಂಡು ಮನದ ಬೇಸರವೆಲ್ಲಾ ಕಳೆದು ಹುಮ್ಮುಸ್ಸಿನ ಹುರುಪು ಹುಟ್ಟಿಕೊಳ್ಳುತ್ತದೆ. ಅದೆಂತಹ ಶಕ್ತಿ ನಿನ್ನದು? ಅದ್ಯಾವ ಮೋಡಿಯ ಜಾಡಿನಲ್ಲಿ ಬಲೆಯ ಬೀಸಿ ಬಿಗಿದು ಹಾಕಿರುವೆ? ಇಬ್ಬರೂ ಅದೆಷ್ಟು ಅಂತರದಲ್ಲಿದ್ದೇವೆ.

ಅಷ್ಟು ದೂರವನ್ನೂ ಸರಿಸಿ ಅದು ಹೇಗೆ ಹುರಿದುಂಬಿಸಿ ಹತಾಶೆಯ ಗಳಿಗೆಗಳನ್ನು ಅಳಿಸಿ ಹಾಕುವೆ? ನಿಜಕ್ಕೂ ನೀನೆಂದರೆ ನನ್ನ ಬದುಕಲ್ಲಿ ಮುಗಿಯದ‌ ಸಂಭ್ರಮ. ಬದುಕಿನ ಜೋಳಿಗೆಯಲ್ಲಿ ಮೊಗೆದಷ್ಟು, ಬರಿದಾಗದ ನಿನ್ನ ನೆನಪುಗಳನ್ನು ಜತನವಾಗಿ ಎತ್ತಿಟ್ಟುಕೊಂಡಿದ್ದೇನೆ. ಅದಷ್ಟು ಸಾಕು ನನ್ನ ನಾಳೆಗಳಿಗೆ. ಕಣ್ಣುಗಳು ನಿನ್ನ ಕನಸುಗಳನ್ನೇ ತುಂಬಿಕೊಂಡು ಎದೆಯೊಳಗೊಂದು ಇಂಪಾದ ಹೊಸರಾಗ ಹುಟ್ಟಿಸಿಕೊಂಡಿದೆ. ಬರಿದಾಗಿದ್ದ ಬದುಕಲ್ಲಿ ಭರವಸೆಯ ತುಂಬಿದ ನಿನ್ನ ಕನಸು ಹೊತ್ತೇ ಕಾಲ ಸವೆಸಬೇಕೆನ್ನುವ ಹಂಬಲ ಹೆಚ್ಚಾಗಿದೆ.

ಇಂತಿ
ಸೌಮ್ಯಶ್ರೀ ಎ.ಎಸ್‌.

ಟಾಪ್ ನ್ಯೂಸ್

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

naki

Naki Sumo: ಮಗುವನ್ನು ಅಳಿಸುವ ವಿಚಿತ್ರ ಆಚರಣೆ !; ನಡೆಯುವುದಾದರು ಎಲ್ಲಿ?

mohan bhagwat

RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

Lalu

Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

Politics: ಸಿದ್ದರಾಮಯ್ಯ 5 ವರ್ಷವೂ ಸಿಎಂ: ಕೊತ್ತೂರು ಮಂಜುನಾಥ್‌

Politics: ಸಿದ್ದರಾಮಯ್ಯ 5 ವರ್ಷವೂ ಸಿಎಂ: ಕೊತ್ತೂರು ಮಂಜುನಾಥ್‌

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!

Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!

20

Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.