ಜಗಳಗಳ ಕಳೆದು ಪ್ರೀತಿಯಿಂದ ಗುಣಿಸವಾ…


Team Udayavani, Dec 17, 2019, 6:09 AM IST

jagala

ನಿನಗೇನೋ ಆಗಿರೋದು! ನೋ ಶೇವ್‌ ನವೆಂಬರ್‌ ಅಂತ ಸ್ಟೈಲಿಗೆ ಬಿಟ್ಟ ಮಾಮೂಲಿ ಗಡ್ಡವೇನೋ ಅದು? ಆದರೆ, ನನಗೆ ನಿನ್ನ ಮೋಡಿಗಿಂತ ಅದರ ಮೋಡಿಯೇ ಇಮ್ಮಡಿಯೇನೋ ಎಂಬ ಭಾವನೆ. ಡಿಸೆಂಬರ್‌ ಕೊನೆಗೆ ಕ್ಲೀನ್‌ ಶೇವ್‌ ಮಾಡಿ ಬೋಲ್ಡಾಗಿ ಎದ್ದು ಕಾಣಿಸುವ ಲೆಕ್ಕಾಚಾರವನ್ನು ನೀನು ಹಾಕಿರಬಹುದು.ಆದರೆ, ಪ್ರೀತಿಯಲ್ಲಿ ಕೂಡಿಸಿ, ಕಳೆದು, ಗುಣಿಸಿ,ಭಾಗಿಸುವ ಲೆಕ್ಕಕಿಂತ ಮಿಗಿಲಾದದ್ದೇ ಇದೆಯಲ್ಲ…

ನನ್ನ ನಿನ್ನ ಪ್ರೀತಿಸಾಗರಕ್ಕೆ ವಿಸ್ತೀರ್ಣ ಕಂಡುಹಿಡಿಯುವ ಮಾಪಕವನ್ನು ಯಾವ ವಿಜ್ಞಾನಿಯೂ ಶೋಧಿಸಿಲ್ಲ? ಇನ್ನು ಉದ್ದಳತೆ, ಅಗಲಗಳ ಕುರಿತು ಮಾಹಿತಿ ಯಾರಿಗಿದೆ ಹೇಳು? ಕೋನಮಾಪಕ, ತ್ರಿಜ್ಯ,ಇಂಚುಪಟ್ಟಿ ಇವೆಲ್ಲ ಯಾವುದೂ ಸಾಲದು ನನ್ನೊಡೆಯ. ನಮ್ಮಿಬ್ಬರ ಪ್ರೀತಿ ಶುರುವಾದದ್ದಕ್ಕೆ ಸೂತ್ರ, ಪ್ರಮೇಯಗಳು ಕೂಡ ಉತ್ತರ ಹೇಳಲಾರವೇನೋ. ಪ್ರೀತಿಯ ವರ್ಗ, ಘನ, ಇತ್ಯಾದಿ ಕಂಡುಹಿಡಿಯಲು, ಘಾತ ಸಂಖ್ಯೆಯನ್ನು ಬಿಡಿಸಲು ಗಣಕಯಂತ್ರಕ್ಕೂ ಅಸಾಧ್ಯವೇನೋ.

ವರ್ಗ,ಘನಮೂಲವ ಬಿಡಿಸಲು ಕೂತ ಗಣಿತಜ್ಞ ಅರ್ಧ ಶತಮಾನ ಕಳೆದರೂ ಅಸಾಧ್ಯವೆಂದು ಹೊರಬಂದಾನೇನೋ. ಇನ್ನು ಅಪವರ್ತನ,ಲ.ಸಾ.ಅ,ಮ.ಸಾ.ಅಗಳು ಪ್ರೀತಿಯಲ್ಲಿ ಬಿಡಿಸಿದಷ್ಟು ದೊಡ್ಡ ಪ್ರೀತಿಯ ಮೊತ್ತವನ್ನೇ ನೀಡುತ್ತವಲ್ಲವೆ? ನಮ್ಮ ಪ್ರೀತಿಗೆ ನಾವೇ ಸಮವಾಗಿರುವ ವಿಷಮ,ಮಿಶ್ರ ಭಿನ್ನರಾಶಿಗಳ ಗೊಡವೆಯೇಕೆ? ದಶಮಾಂಶ,ಅನುಪಾತ, ಸಮಾನುಪಾತವೆಂಬ ಬಹು ಕಠಿಣ ಅಂಶಗಳನ್ನು ದೂರವೇ ಇಡೋಣ.

ಯಾಕೀ ಲೆಕ್ಕಾಚಾರದ ದೊಡ್ಡ ತಲೆನೋವಿನ ಕೆಲಸ? ನಮ್ಮ ಸ್ನೇಹ, ಪ್ರೇಮ, ಪ್ರೀತಿಯನ್ನೆಲ್ಲ ಕೂಡಿಸಿ,ವಿರಸ,ಜಗಳಗಳ ಕಳೆದು,ಪ್ರೀತಿಯಿಂದ ಗುಣಿಸಿ,ನೆಗೆಟಿವ್‌ ಎನರ್ಜಿಯನ್ನು ಭಾಗಿಸಿ ಸಮ,ಬೆಸಗಳ ಭೇದ ತೊರದೇ ಅವಿಭಾಜ್ಯ, ಭಾಜ್ಯವೆಂಬ ಗೊಡವೆಗೆ ಹೋಗದ ಪ್ರೀತಿಯೆಂಬ ದೊಡ್ಡ ಸಂಖ್ಯೆಯನ್ನು ಅಪ್ಪಿಕೊಳ್ಳೊಣ ಬಾ.

* ಸಾವಿತ್ರಿ ಶ್ಯಾನುಭಾಗ

ಟಾಪ್ ನ್ಯೂಸ್

DKSHi (3)

Water; ಗೌಡರು ಅಧಿಕಾರದಲ್ಲಿದ್ದಾಗ ನೀರಿನ ಹೋರಾಟ ಏಕೆ: ಡಿಕೆಶಿ

Beer

ಶಾಲೆ ಸಮೀಪ ಮದ್ಯದಂಗಡಿ ಇದ್ದರೆ ದೂರು ನೀಡಿ

1-dee

ಕಾಲೇಜುಗಳಲ್ಲಿ ಜಾನಪದ ಉತ್ಸವ: ಇಲಾಖೆ ಸೂಚನೆ

Gun-Fire

Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್‌: 3 ವರ್ಷದ ಮಗು ಮೃತ್ಯು!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

Delhi-Stamp

Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

DKSHi (3)

Water; ಗೌಡರು ಅಧಿಕಾರದಲ್ಲಿದ್ದಾಗ ನೀರಿನ ಹೋರಾಟ ಏಕೆ: ಡಿಕೆಶಿ

Beer

ಶಾಲೆ ಸಮೀಪ ಮದ್ಯದಂಗಡಿ ಇದ್ದರೆ ದೂರು ನೀಡಿ

1-dee

ಕಾಲೇಜುಗಳಲ್ಲಿ ಜಾನಪದ ಉತ್ಸವ: ಇಲಾಖೆ ಸೂಚನೆ

arrested

CM ಕಚೇರಿಯ ಟಿಪ್ಪಣಿ ನಕಲು: ಬಂಧನ

Gun-Fire

Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್‌: 3 ವರ್ಷದ ಮಗು ಮೃತ್ಯು!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.