ಗುರುತರದ ವ್ಯಕ್ತಿತ್ವ


Team Udayavani, Dec 29, 2019, 4:10 AM IST

80

ಹಿರಿಯರಾದ ಎಂ. ರಾಮಚಂದ್ರರನ್ನು ಹಲವು ಬಾರಿ ನೋಡಿದ್ದೆ, ಅವರ ಚಿಂತನಗಳನ್ನು ರೇಡಿಯೋದಲ್ಲಿ ಕೇಳಿದ್ದೆ. ಹಲವು ಬರಹಗಳನ್ನು ಪತ್ರಿಕೆಯಲ್ಲಿ, ಕೆಲವು ಪುಸ್ತಕಗಳನ್ನು ಅಲ್ಲಿ-ಇಲ್ಲಿ ಓದಿದ್ದೆ. ಭಾಷಣಗಳನ್ನು ಕೇಳಿದ್ದೆ. ಆದರೆ, ನನಗವರು ಆತ್ಮೀಯರಾದದ್ದು ಇತ್ತೀಚೆಗೆ. ಅವರ ಹತ್ತು ಹಲವು ಪುಸ್ತಕದ ಒಂದು ಪ್ಯಾರಾವನ್ನು ನಾನು ನನ್ನ ಒಂದು ಬರಹದಲ್ಲಿ ಬಳಸುವ ಯೋಚನೆ ಮಾಡಿದ್ದೆ. ಅದಕ್ಕಾಗಿ ಅನುಮತಿ ಕೇಳ್ಳೋಣ ಎಂದು ನೀಲಾವರ ಸುರೇಂದ್ರ ಅಡಿಗರಿಗೆ ಫೋನ್‌ ಮಾಡಿ, ರಾಮಚಂದ್ರರವರ ಮೊಬೈಲ್‌ ಸಂಖ್ಯೆ ಪಡೆದೆ.

ವಯೋವೃದ್ದರೂ, ಜ್ಞಾನ‌ವೃದ್ದರೂ ಆಗಿದ್ದ ರಾಮಚಂದ್ರ ಸರ್‌ ಜೊತೆ ನನ್ನ ಪರಿಚಯ ಹೇಳಿಕೊಂಡು ಫೋನ್‌ ಮಾಡಿ ಮಾತನಾಡಿದೆ. ವಿಷಯ ತಿಳಿಸಿದೆ, ಅನುಮತಿ ಬೇಡಿದೆ. “”ಅಯ್ಯೋ ಪೂರ್ಣಿಮಾ! ಅದೊಂದು ನಾಣ್ನುಡಿ. ಅದನ್ನು ಯಾರು ಬೇಕಾದರೂ ಬಳಸಬಹುದು. ಅನುಮತಿಯ ಅಗತ್ಯ ಇಲ್ಲ ನಿಮಗೆ” ಎಂದರು ಬಹುವಚನದಲ್ಲಿ. ನಾನೆಂದೆ, “”ಸರ್‌, ನಾನು ತುಂಬಾ ಕಿರಿಯಳು. ನೀವು ನನ್ನನ್ನು “ನೀನು’ ಎನ್ನುವುದೇ ಚಂದ” ಎಂದೆ.

“”ಹೋ, ಹಾಗಾ! ನಿನ್ನ ಉಪಯೋಗಕ್ಕಾಗಿ ಮತ್ತು ನೀನಾಡಿದ ಈ ಕಿರಿಯಳು ಎಂಬ ಪದಕ್ಕಾಗಿ ನಿನಗೊಂದು ಪುಸ್ತಕ ಕಳುಹಿಸುವೆ. ಅದನ್ನು ನೀನು ನಿನ್ನ ಯಾವುದೇ ಬರವಣಿಗೆಯಲ್ಲಿ ಬೇಕಾದರೂ ಬಳಸಿಕೊಳ್ಳಬಹುದು” ಎಂದವರೇ ನನ್ನ ವಿಳಾಸ ಪಡೆದು ಉಷಾಸೂಕ್ತಿ ಎಂಬ ಅಮೂಲ್ಯ ಪುಸ್ತಕವನ್ನು ನನಗೆ ಕಳುಹಿಸಿ ಕೊಟ್ಟರು.

ಆ ಚಿಕ್ಕ ಚೆಂದದ ಪುಸ್ತಕವು ರಾಮಚಂದ್ರರವರು ಮಂಗಳೂರು ಆಕಾಶವಾಣಿಯಲ್ಲಿ ನೀಡಿದ ಚಿಂತನಗಳ ಸಂಗ್ರಹ! ಎಷ್ಟು ಅದ್ಭುತ ವಿಷಯಗಳನ್ನು ಒಳಗೊಂಡ ಹೊತ್ತಗೆಯದು. ಅದನ್ನು ತೆರೆದೊಡನೆ ರಾಮಚಂದ್ರರು ಹಸ್ತಾಕ್ಷರದಲ್ಲಿ ಬರೆದ ಶುಭಹಾರೈಕೆ. ಉಷಾ ಸೂಕ್ತಿ ನೋಡಿ ಮನ ತುಂಬಿ ಬಂತು. ಕಣ್ಣು ಹನಿಗೂಡಿತು. ನಾನು ಯಾರೆಂದೇ ತಿಳಿಯದ ಹಿರಿಯ ಸಾಹಿತಿಯೊಬ್ಬರ ಅಕ್ಕರೆಯನ್ನು ಅಕ್ಷರಗಳಲ್ಲಿ ಬಣ್ಣಿಸಲು ಪದ ಇಲ್ಲವಾಯಿತು. ಒಂದೇ ಗುಟುಕಿಗೆ ಉಷಾಸೂಕ್ತಿ ಓದಿದೆ. ರಾಮಚಂದ್ರರಿಗೆ ಫೋನ್‌ ಮಾಡಿದೆ. “”ಗುರುಗಳೇ, ಎಷ್ಟು ಅಮೂಲ್ಯ ಪುಸ್ತಕವನ್ನು ಕಳುಹಿಸಿದ್ದೀರಿ. ಓದಿ ಮುಗಿಸಿದೆ. ನನಗಂತೂ ಇದೊಂದು ನೆನಪಿನ ಬುತ್ತಿ ಮತ್ತು ಪ್ರೀತಿಯ ಆಸ್ತಿ” ಎಂದೆ.

ಹಾಗೆ, ನನಗೆ ಆ ಹಿರಿಯರ ಸತ್ಸಂಗ ದೊರೆಯಿತು. ಅವಳ ಉಳಿದ ಪುಸ್ತಕಗಳನ್ನು ಓದಲು ಹೇಳಿದರು. ಕೆಲವನ್ನು ಕಳುಹಿಸಿಕೊಟ್ಟರು.  ಒಮ್ಮೆಯಂತೂ, “”ನೋಡು ಪೂರ್ಣಿಮಾ, ನಮ್ಮ ಸಾಹಿತ್ಯ ಸಂಘದ ಕಾರ್ಯಕ್ರಮಕ್ಕೆ ನೀನೂ ಅತಿಥಿಯಾಗಿ ಬರಬೇಕು” ಎಂದಿದ್ದರು. ವಾರದಲ್ಲಿ ಒಂದೆರಡು ಬಾರಿ ನಾವು ಫೋನ್‌ನಲ್ಲಿ ಮಾತನಾಡುತ್ತಿದ್ದೆವು. ಅವರೇ ಹೇಳುತ್ತಿದ್ದಂತೆ ಕೈಬರಹದಲ್ಲಿಯೇ ಒಂದು ಪತ್ರ ಬರೆದಿಟ್ಟಿದ್ದೆ. “ತೀರ್ಥರೂಪ ಸಮಾನರಾದ…’ ಎಂದು ಆರಂಭಿಸಿದ ಆ ಪತ್ರದಲ್ಲಿ ಅವರ ಗುರುತ್ವದ ಕುರಿತು ಕೃತಜ್ಞತೆಯ ನುಡಿಗಳನ್ನು ಬರೆದಿದ್ದೆ. ಹೇಗೆ ಕಳುಹಿಸಲಿ ಈಗ ಈ ಪತ್ರವನ್ನು !

ಪೂರ್ಣಿಮಾ ಕಮಲಶಿಲೆ

ಟಾಪ್ ನ್ಯೂಸ್

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

22

Ganesh Chaturthi: ಗಣೇಶ ಬಂದ

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Actor Vinayakan: ವಿಮಾನ ನಿಲ್ದಾಣದ ಸಿಬ್ಬಂದಿಗಳ ಜತೆ ವಾಗ್ವಾದ; ನಟ ವಿನಾಯಗನ್ ವಶಕ್ಕೆ

Actor Vinayakan: ವಿಮಾನ ನಿಲ್ದಾಣದ ಸಿಬ್ಬಂದಿಗಳ ಜತೆ ವಾಗ್ವಾದ; ನಟ ವಿನಾಯಗನ್ ವಶಕ್ಕೆ

17-desiswara-ganaap

Ganesh Chaturthi Special Story: ವಿಶ್ವಪೂಜಿತ ವಿನಾಯಕ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಹಸಿರು ವನಸಿರಿ ಸಂಡೂರಿನ ಸಿರಿ

ಹಸಿರು ವನಸಿರಿ ಸಂಡೂರಿನ ಸಿರಿ

Vinayak Torvi: ಸ್ವರ ಸಾಮ್ರಾಟರಿಗೆ ಅಮೃತ ಮಹೋತ್ಸವ 

Vinayak Torvi: ಸ್ವರ ಸಾಮ್ರಾಟರಿಗೆ ಅಮೃತ ಮಹೋತ್ಸವ 

18

World Dog Day: ನಾನು, ನನ್ನ ಕಾಳ..!

Krishna Janmashtami Special: ಸಂಭವಾಮಿ ಯುಗೇ ಯುಗೇ…

Krishna Janmashtami Special: ಸಂಭವಾಮಿ ಯುಗೇ ಯುಗೇ…

ದೇವರ ರೂಪದಲ್ಲಿ ಮಕ್ಕಳು!; ಶುರುವಾಗಿದೆ ಟ್ರೆಂಡ್‌

ದೇವರ ರೂಪದಲ್ಲಿ ಮಕ್ಕಳು!; ಶುರುವಾಗಿದೆ ಟ್ರೆಂಡ್‌

MUST WATCH

udayavani youtube

ಗಜಪಯಣಕ್ಕೆ ಚಾಲನೆ : ಕ್ಯಾಪ್ಟನ್‌ ಅಭಿಮನ್ಯು ನೇತೃತ್ವದ 9 ಆನೆಗಳ ಗಜಪಡೆ

udayavani youtube

ರಕ್ಷಾ ಬಂಧನದ ಅರ್ಥ ಮತ್ತು ಮಹತ್ವ | ರಕ್ಷಾ ಬಂಧನ 2024

udayavani youtube

ಕಡಿಮೆ ಬೆಲೆಗೆ ಫಸ್ಟ್ ಕ್ಲಾಸ್ ಬಾಳೆಎಲೆ ಊಟ

udayavani youtube

ಆ.18 ರಿಂದ ಶ್ರೀಕೃಷ್ಣ ಮಠದಲ್ಲಿ ಕ್ರೀಡೋತ್ಸವ

udayavani youtube

ತಮ್ಮ ಮಕ್ಕಳನ್ನು ಬೆಳೆಸುವ ಸಲುವಾಗಿ ಕಂಡೋರ ಮಕ್ಕಳ ಭವಿಷ್ಯ ನಾಶ. ಈ ವ್ಯವಸ್ಥೆಗೆ ನಾನೂ ಬಲಿ

ಹೊಸ ಸೇರ್ಪಡೆ

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

22

Ganesh Chaturthi: ಗಣೇಶ ಬಂದ

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.