ಕವಿತೆ ಓದುವ ಸಹೃದಯರು ಅಗತ್ಯ


Team Udayavani, Dec 29, 2019, 3:33 PM IST

kopala-tdy-2

ಕುಷ್ಟಗಿ: ಕಾವ್ಯಲೋಕದಲ್ಲಿ ಕವಿ ಹೃದಯ ಎರಡನೇ ಕಣ್ಣು ಇದ್ದಂತೆ. ಕವಿಗೆ ಕವಿತೆ ಎಷ್ಟು ಮುಖ್ಯವೋ ಕವಿತೆ ಆಲಿಸುವ ಸಹೃದಯರು ಅಷ್ಟೇ ಮುಖ್ಯ ಎಂದು ಸಾಹಿತಿ, ಕೊಪ್ಪಳ ಹಣಕಾಸು ಇಲಾಖೆಯ ಹಿರಿಯ ಉಪ ನಿರ್ದೇಶಕರು ಅಮೀನ್‌ ಅತ್ತಾರ ಹೇಳಿದರು.

ಇಲ್ಲಿನ ಬಾಲಕಿಯರ ಪಪೂ ಕಾಲೇಜಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಶಿಕ್ಷಕ ಡಾ| ಶರಣಪ್ಪ ನಿಡಶೇಸಿ ಅವರ “ಜೇಂಗೂಡು ಮುಕ್ತಕ’ ಕವನ ಸಂಕಲನ ಕುರಿತು ಮಾತನಾಡಿದರು. ಕವಿತೆ ಬರೆಯದೇ ಇದ್ದರೂ ಆಸಕ್ತಿಯಿಂದ ಕವಿತೆಗಳನ್ನು ಓದಿ ಅರ್ಥೈಸಿಕೊಂಡು ಸಂವಾದಿ  ಸುವ ಸಹೃದಯರಿರಬೇಕು. ಸಾಮಾಜಿಕ ಜಾಲತಾಣದಲ್ಲಿ ಲೈಕ್‌, ಕಮೆಂಟ್‌ಗಳಿಂದ ಸಹೃದಯತೆ ಹುಟ್ಟಿಕೊಳ್ಳುವುದಿಲ್ಲ. ಇತೀಚಿಗೆ ಮೊಬೈಲ್‌ ಗೀಳು ಹೆಚ್ಚಾಗಿದ್ದು, ಪಾಲಕರು ಮಕ್ಕಳಿಗೆ ಪುಸ್ತಕಗಳನ್ನು ನೀಡದೇ ಮೊಬೈಲ್‌ ನೀಡುತ್ತಿದ್ದು, ಪಬ್ಜಿ, ಬ್ಲೂವೇಲ್‌ ಗೇಮ್‌ ಆಕರ್ಷಿತರಾಗಿ ಪುಸ್ತಕ ಓದುವುದನ್ನೇ ಮರೆಯುತ್ತಿದ್ದಾರೆಂದು ಕಳವಳ ವ್ಯಕ್ತಪಡಿಸಿದರು.

ಪುಸ್ತಕಗಳಿಂದ ಓದುವ ಸಂತೃಪ್ತಿ, ಮೊಬೈಲ್‌ನಿಂದ ಸಿಗದು ಎಂದ ಅವರು, ಮಕ್ಕಳಿಗೆ ಮೊಬೈಲ್‌ ಶತ್ರುವಾಗಿದೆ. ಸಾಹಿತ್ಯ ಹಾಗೂ ವಿಜ್ಞಾನ ಬಗ್ಗೆ ಓದುವ ಗೀಳು ಹಚ್ಚಿಕೊಂಡಾಗ ಮಾತ್ರ ಬದುಕು ಬದಲಾವಣೆಯಾಗಲು ಸಾಧ್ಯವಿದೆ. ಪಿಯುಸಿ, ಪದವಿವರೆಗೂ ಮೊಬೈಲ್‌ ಸಹವಾಸವೇ ಬೇಡ ಎಂದರು.

ಡಾ| ಶರಣಪ್ಪ ನಿಡಶೇಸಿ ಅವರ ಈ ಮುಕ್ತಕ ಕವನ ಸಂಕಲನದಲ್ಲಿ ಗಂಭೀರವಾದರೂ ಹಾಸ್ಯ ಪ್ರಜ್ಞೆ, ವಿಡಂಬನೆಯೂ ಇದೆ. ಕಟುಕುತ್ತವೆ, ಸಂದೇಶಗಳು ಇವೆ. ಕವಿಯಾದವನು ತನ್ನ ಅನುಭವ ಸೇರಿಸಿ ಸಾರ್ವತ್ರಿಕಗೊಳಿಸಿದರೆ ಅದು ಲೋಕಾನುಭವ ಆಗುತ್ತದೆ. ಅದು ಉಪದೇಶವಾಗಿದ್ದರೆ ಭಾಷಣಕ್ಕೆ ಸೀಮಿತವಾಗುತ್ತದೆ ಎಂದರು. ಈ ಕವಿತೆಯಲ್ಲಿ ಶರಣಪ್ಪ ನಿಡಶೇಸಿ ಶಬ್ಧಗಳೊಂದಿಗೆ ಆಟವಾಡಿದ್ದರೂ ಬೇರೆ ಅನರ್ಥಕ್ಕೆ ಅವಕಾಶವಿಲ್ಲ, ಸಮಾಜಕ್ಕೆ ಉತ್ತಮ ಸಂದೇಶವಿರುವ ಹಿನ್ನೆಲೆಯಲ್ಲಿ ಈ ಪುಸ್ತಕ ಮಹತ್ವದ್ದು ಎನಿಸಿದೆ ಎಂದರು.

ಜೇಂಗೂಡು ಮುಕ್ತಕ ಕವನ ಸಂಕಲನ ಉದ್ಘಾಟಿಸಿದ ಸಿಪಿಐ ಜಿ. ಚಂದ್ರಶೇಖರ ಮಾತನಾಡಿ, ಓದುವ ಹವ್ಯಾಸದಿಂದ ಜ್ಞಾನ ವೃದ್ಧಿಸಿಕೊಂಡು ಪುಸ್ತಕ ಬರೆಯಲು ಸಾಧ್ಯವಿದ್ದು, ವಿಚಾರದ ದೃಷ್ಟಿಕೋನ, ಆಲೋಚನೆಯ ವಿಧಾನ ಬದಲಾಗಲಿದೆ ಎಂದ ಅವರು ಕ್ರಿಯಾಶೀಲತೆಯೂ ಹೆಚ್ಚಲಿದೆ ಎಂದರು.  ಅಧ್ಯಯನದಿಂದ ಜೀವನ ಸರಿದಾರಿಗೆ ತರಲು ಸಾಧ್ಯವಿದ್ದು ಜೀವನ ವಿಕಾಸಕ್ಕೂ ಪ್ರೇರಣೆಯಾಗಿದೆ ಎಂದರು.

ಸಾಹಿತಿ ಪ್ರಮೋದ ತುರ್ವಿಹಾಳ ಮಾತನಾಡಿದರು. ಲೇಖಕ ಕಿಶನ್‌ರಾವ್‌ ಕುಲಕರ್ಣಿ ಮಾತನಾಡಿದರು. ವೇದಿಕೆಯಲ್ಲಿ ಉಪ ಪ್ರಾಚಾರ್ಯ ಶರಣಯ್ಯ ಹಿರೇಮಠ ಮತ್ತೀತರಿದ್ದರು. ವೀರೇಶಪ್ಪ ಸ್ವಾಗತಿಸಿದರು. ನಟರಾಜ ಸೋನಾರ ಸನ್ಮಾನಿಸಿದರು.

ಟಾಪ್ ನ್ಯೂಸ್

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

22

Ganesh Chaturthi: ಗಣೇಶ ಬಂದ

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Actor Vinayakan: ವಿಮಾನ ನಿಲ್ದಾಣದ ಸಿಬ್ಬಂದಿಗಳ ಜತೆ ವಾಗ್ವಾದ; ನಟ ವಿನಾಯಗನ್ ವಶಕ್ಕೆ

Actor Vinayakan: ವಿಮಾನ ನಿಲ್ದಾಣದ ಸಿಬ್ಬಂದಿಗಳ ಜತೆ ವಾಗ್ವಾದ; ನಟ ವಿನಾಯಗನ್ ವಶಕ್ಕೆ

17-desiswara-ganaap

Ganesh Chaturthi Special Story: ವಿಶ್ವಪೂಜಿತ ವಿನಾಯಕ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Koppala: ಲಾರಿ ಡಿಕ್ಕಿ ಹೊಡೆದು ಪಲ್ಟಿಯಾದ ಟ್ರ್ಯಾಕ್ಟರ್… ಗಣೇಶನ ವಿಗ್ರಹಕ್ಕೆ ಹಾನಿ

Koppala: ಲಾರಿ ಡಿಕ್ಕಿ ಹೊಡೆದು ಪಲ್ಟಿಯಾದ ಟ್ರ್ಯಾಕ್ಟರ್… ಗಣೇಶನ ವಿಗ್ರಹಕ್ಕೆ ಹಾನಿ

Kushtagi: ಸಾಕಿದ ಮಾಲೀಕನಿಗೆ ಬೈಕ್ ಗೆದ್ದು ಕೊಟ್ಟ ಟಗರು!

Kushtagi: ಸಾಕಿದ ಮಾಲೀಕನಿಗೆ ಬೈಕ್ ಗೆದ್ದು ಕೊಟ್ಟ ಟಗರು!

2-gangavathi

Gangavathi: ಪ್ಲಾಸ್ಟಿಕ್ ತಿಂದ ಕರುವಿಗೆ ಉಸಿರಾಟ ತೊಂದರೆ; ನೆರವಿಗೆ ಬಂದ ಕ್ರಿಕೆಟ್ ಆಟಗಾರರು

Kushtagi; ಶಿಕ್ಷಕರ ಶ್ರಮ-ಹಳ್ಳಿಯ ಸರ್ಕಾರಿ ಶಾಲೆಗೆ ʼಹೈಟೆಕ್‌ʼ ಸ್ಪರ್ಶ

Kushtagi; ಶಿಕ್ಷಕರ ಶ್ರಮ-ಹಳ್ಳಿಯ ಸರ್ಕಾರಿ ಶಾಲೆಗೆ ʼಹೈಟೆಕ್‌ʼ ಸ್ಪರ್ಶ

5

Gangavathi: ಐತಿಹಾಸಿಕ ಪಂಪಾ ಸರೋವರಕ್ಕೆ ಬೇಕಿದೆ ಮೂಲಸೌಕರ್ಯ

MUST WATCH

udayavani youtube

ಗಜಪಯಣಕ್ಕೆ ಚಾಲನೆ : ಕ್ಯಾಪ್ಟನ್‌ ಅಭಿಮನ್ಯು ನೇತೃತ್ವದ 9 ಆನೆಗಳ ಗಜಪಡೆ

udayavani youtube

ರಕ್ಷಾ ಬಂಧನದ ಅರ್ಥ ಮತ್ತು ಮಹತ್ವ | ರಕ್ಷಾ ಬಂಧನ 2024

udayavani youtube

ಕಡಿಮೆ ಬೆಲೆಗೆ ಫಸ್ಟ್ ಕ್ಲಾಸ್ ಬಾಳೆಎಲೆ ಊಟ

udayavani youtube

ಆ.18 ರಿಂದ ಶ್ರೀಕೃಷ್ಣ ಮಠದಲ್ಲಿ ಕ್ರೀಡೋತ್ಸವ

udayavani youtube

ತಮ್ಮ ಮಕ್ಕಳನ್ನು ಬೆಳೆಸುವ ಸಲುವಾಗಿ ಕಂಡೋರ ಮಕ್ಕಳ ಭವಿಷ್ಯ ನಾಶ. ಈ ವ್ಯವಸ್ಥೆಗೆ ನಾನೂ ಬಲಿ

ಹೊಸ ಸೇರ್ಪಡೆ

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

22

Ganesh Chaturthi: ಗಣೇಶ ಬಂದ

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.