ಸೀಟು ಉಳಿಸಿದ ಯುವಕ


Team Udayavani, Dec 31, 2019, 4:25 AM IST

ve-2

ಸಾಂದರ್ಭಿಕ ಚಿತ್ರ

ಆ ಬಸ್‌ಗಾಗಿ ಜನ ಜಂಗುಳಿಯೇ ಕಾದಿತ್ತು, ಅದು ನಮ್ಮೂರಿಗೆ ರಾತ್ರಿಯ ಕೊನೆಯ ಬಸ್‌. ಅದು ಬಂದಾಗ ಜನ ನುಗ್ಗಿದ್ದೇ ನುಗ್ಗಿದ್ದು, ನಾನೂ ಅದೇ ಜೋಶ್‌ನಲ್ಲಿ ಬಲಭೀಮನಂತೆ ಬಾಗಿಲಿನ ಒಳನುಗ್ಗಿ 2 ಸೀಟು ಹುಡುಕಿ ಅದರ ಮೇಲೆ ಕೈ ಚೀಲಗಳನ್ನಿರಿಸಿ, ನನ್ನ ಹೆಸರಿಗೆ ರಿಸರ್ವ್‌ ಮಾಡಿಕೊಂಡು ಉಸಿರು ಬಿಟ್ಟೆ. ಅಷ್ಟರಲ್ಲಿ, ಕಿಟಕಿಯಿಂದ ಕೈಯೊಂದು ಸೀಟಿನ ಮೇಲೆ ಎರಡು ಚಪ್ಪಲಿ ತೂರಿ ಹಾಕಿತ್ತು! ಈ ವೇಳೆಗೆ, ನನ್ನ ಪತ್ನಿಯೂ ಹತ್ತಿ ಬಂದಳು. ನಾವು ಆ ಚಪ್ಪಲಿಗಳನ್ನು ಕೆಳಗೆ ಹಾಕಿ ಕುಳಿತೆವು. ಐದು ನಿಮಿಷದ ಬಳಿಕ, ದಢಿಯನೊಬ್ಬ ಮೇಲೆ ಬಂದವನೇ ತಾನು ಚಪ್ಪಲಿ ಹಾಕಿ ಸೀಟು ಹಿಡಿದಿರುವುದಾಗಿ ಗಲಾಟೆ ಆರಂಭಿಸಿದ.

“ನಾನು ನಿನಗಿಂತ ಮೊದಲೇ ಒಳಬಂದು ಸೀಟು ಹಿಡಿದಿದ್ದೇನೆ’ ಎಂದೆ. ಹೊಡೆಯುವ ರೀತಿಯಲ್ಲಿ ಕೈ, ಬಾಯಿ ಹಾರಿಸುತ್ತಾ ಚಪ್ಪಲಿ ತೋರಿಸುತ್ತಾ ಗದರತೊಡಗಿದ. ನನ್ನ ಪತ್ನಿ, ಬೆದರಿದ ಜಿಂಕೆಯಂತಾಗಿದ್ದಳು. “ಏಳ್ರಿ ಮೇಲೆ ‘ ಎಂದು ನನ್ನ ಕೈ ಹಿಡಿದು ಎಳೆಯಲಾರಂಭಿಸಿದ. ಯಾರಾದರೂ ಮಧ್ಯೆ ಪ್ರವೇಶಿಸಬಾರದೇ ಎಂದು ಹಿಂದೆ ಮುಂದೆಲ್ಲ ನೋಡಿದೆ. ಅಷ್ಟರಲ್ಲಿ ಪಕ್ಕದ ಸೀಟಿನ ಬಳಿ ನಿಂತಿದ್ದ ಸುಪುಷ್ಠ ಯುವಕನೊಬ್ಬ ಏನೆಂದು ವಿಚಾರಿಸಿದ. ಇಬ್ಬರೂ ನಮ್ಮ ನಮ್ಮ ಅಹವಾಲು ಹೇಳಿಕೊಂಡೆವು.

“ಅಪ್ಪಾ ಮಹಾರಾಯ, ಅವರು ಬಾಗಿಲಿನಿಂದ ಒಳಬಂದು ಖಾಲಿಯಿದ್ದ ಸೀಟಿಗೆ ಬ್ಯಾಗ್‌ ಹಾಕಿದ್ದನ್ನು ನಾನೇ ನೋಡಿದ್ದೇನೆ. ನೀನು ಆ ಮೇಲೆ ಕಿಟಕಿಯಿಂದ ರಿಸರ್ವೇಷನ್‌ ಮಾಡಿದ್ದೀಯ, ಅದೂ ಚಪ್ಪಲಿ ಎಸೆದು! ಆದರೂ, ನಿನ್ನ ಪರ ಹೇಳುತ್ತೇನೆ. ಅವರು ಬಾಗಿಲಿನಿಂದ ಒಳ ಬಂದು ಸೀಟ್‌ ಹಿಡಿದಿದ್ದು ಕುಳಿತಿದ್ದಾರೆ. ನೀನು ಕಿಟಕಿಯಿಂದ ಸೀಟು ಹಿಡಿದಿರುವುದರಿಂದ ಕಿಟಕಿಯಿಂದಲೇ ಒಳಬಾ ಸೀಟು ಕೊಡಿಸುತ್ತೇನೆ’ ಎಂದು ಬಿಟ್ಟರು. ಸಹಪ್ರಯಾಣಿಕರೆಲ್ಲ ಒಮ್ಮೆಲೇ ಹೋ! ಎಂದರು, “ಹೌದು, ಹೌದು’ ಎಂದರು. ದಢಿಯನಿಗೆ ಅವಮಾನವೆನಿಸಿತು. ಕಿಟಕಿಯ ಕಡೆ ನೋಡಿದ. ಅದರಲ್ಲಿ ತನ್ನ ಬಲಭೀಮನ ದೇಹ ತೂರಿಸಲು ಸಾಧ್ಯವೇ?.

ನಿಧಾನವಾಗಿ ಕಾಲಿಗೆ ಚಪ್ಪಲಿಗಳನ್ನು ಧರಿಸಿ, ಭುಸುಗುಡುತ್ತ ಹಿಂದೆ ಹೋಗಿ, ಕಂಬಿ ಹಿಡಿದು ನಿಂತುಕೊಂಡ. ಅಬ್ಟಾ! ಬದುಕಿದೆಯಾ ಬಡಜೀವವೇ ಎಂದುಕೊಂಡೆ. ಬಸ್‌ ಹೊರಡುವಾಗ ಅವನಿರಲಿಲ್ಲ. ಅವನ ಚಿಕ್ಕಪ್ಪನನ್ನು ಬಸ್‌ ಹತ್ತಿಸಲು ಬಂದಿದ್ದನಂತೆ. ಇಳಿದು ಹೋಗಿದ್ದ. ಆ ಮೂರು ನಿಮಿಷದ ರಕ್ಷಕನಿಗೆ ಮನದಲ್ಲಿಯೇ ನೂರು ಬಾರಿ ವಂದಿಸಿದೆ.

ಕೆ. ಶ್ರೀನಿವಾಸರಾವ್‌

ಟಾಪ್ ನ್ಯೂಸ್

Relief for Sadhguru: ಇಶಾ ಫೌಂಡೇಶನ್ ವಿರುದ್ಧದ ಪ್ರಕರಣ ವಜಾಗೊಳಿಸಿದ ಸುಪ್ರೀಂ ಕೋರ್ಟ್

Relief for Sadhguru: ಇಶಾ ಫೌಂಡೇಶನ್ ವಿರುದ್ಧದ ಪ್ರಕರಣ ವಜಾಗೊಳಿಸಿದ ಸುಪ್ರೀಂ ಕೋರ್ಟ್

darshan

Bellary Jail: ಬೆನ್ನು ನೋವು ತಡೆಯಲಾಗದು..: ಪತ್ನಿ, ಸೋದರನ ಎದುರು ದರ್ಶನ್‌ ಅಳಲು

director suri

Cini Talk: ಸಿನಿಮಾ ನಿರ್ದೇಶಕ ಬಿಝಿನೆಸ್‌ ಮ್ಯಾನ್‌ ಅಲ್ಲ!: ನಿರ್ದೇಶಕ ಸೂರಿ ಮಾತು

Victory is possible if CP Yogeshwar becomes candidate for Channapatna: Arvind Bellad

BJP: ಚನ್ನಪಟ್ಟಣಕ್ಕೆ ಸಿಪಿ ಯೋಗೇಶ್ವರ್ ಅಭ್ಯರ್ಥಿಯಾದರೆ ಗೆಲುವು ಸಾಧ್ಯ: ಅರವಿಂದ ಬೆಲ್ಲದ್

ESI Hospital : ಕೋಲ್ಕತ್ತಾದ ಇಎಸ್‌ಐ ಆಸ್ಪತ್ರೆಯಲ್ಲಿ ಅಗ್ನಿ ಅವಘಡ… ಓರ್ವ ರೋಗಿ ಮೃತ್ಯು

ESI Hospital: ಬೆಳ್ಳಂಬೆಳಗ್ಗೆ ಇಎಸ್‌ಐ ಆಸ್ಪತ್ರೆಯಲ್ಲಿ ಅಗ್ನಿ ಅವಘಡ… ರೋಗಿ ಮೃತ್ಯು

Bhavani Revanna: ಅಪಹರಣ ಕೇಸ್-ಭವಾನಿ ರೇವಣ್ಣ ಜಾಮೀನು ರದ್ದತಿಗೆ ಸುಪ್ರೀಂ ನಕಾರ

Bhavani Revanna: ಅಪಹರಣ ಕೇಸ್-ಭವಾನಿ ರೇವಣ್ಣ ಜಾಮೀನು ರದ್ದತಿಗೆ ಸುಪ್ರೀಂ ನಕಾರ

4-bng-crime

Bengaluru: ಪತ್ನಿ, ಪ್ರಿಯಕರನ ಕೊಂದು ಪತಿ ಆತ್ಮಹತ್ಯೆ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

udayavani youtube

ಅಗಲಿದ ರತನ್ ಟಾಟಾಗೆ ಶ್ರದ್ಧಾಂಜಲಿ ಸಲ್ಲಿಸಿದ ಅಂಬಾನಿ ಕುಟುಂಬ

udayavani youtube

ಮಕ್ಕಳ ಸ್ಕ್ರೀನ್ ಟೈಮಿಂಗ್ ಕುರಿತು ಎಚ್ಚರಿಕೆ ಅತ್ಯವಶ್ಯಕ.. ಇಲ್ಲಿದೆ ಅಗತ್ಯ ಮಾಹಿತಿ

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

ಹೊಸ ಸೇರ್ಪಡೆ

Relief for Sadhguru: ಇಶಾ ಫೌಂಡೇಶನ್ ವಿರುದ್ಧದ ಪ್ರಕರಣ ವಜಾಗೊಳಿಸಿದ ಸುಪ್ರೀಂ ಕೋರ್ಟ್

Relief for Sadhguru: ಇಶಾ ಫೌಂಡೇಶನ್ ವಿರುದ್ಧದ ಪ್ರಕರಣ ವಜಾಗೊಳಿಸಿದ ಸುಪ್ರೀಂ ಕೋರ್ಟ್

4

Mangaluru: ಸೇತುವೆ ಮೇಲೆ ಸಂಚಾರ ನಿರ್ಬಂಧದಿಂದ ಕಂಗೆಟ್ಟ ನಾಗರಿಕರು

9-maski

ಆಟೋ, ದ್ವಿಚಕ್ರ ವಾಹನಗಳಿಗೆ ಪ್ರತ್ಯೇಕ ಪಾರ್ಕಿಂಗ್‌ ವ್ಯವಸ್ಥೆ ಕಲ್ಪಿಸಲು ಸಾರ್ವಜನಿಕರ ಒತ್ತಾಯ

darshan

Bellary Jail: ಬೆನ್ನು ನೋವು ತಡೆಯಲಾಗದು..: ಪತ್ನಿ, ಸೋದರನ ಎದುರು ದರ್ಶನ್‌ ಅಳಲು

3(1)

Mangaluru: ಪ್ಲಾಸ್ಟಿಕ್‌ ಬ್ರಹ್ಮರಾಕ್ಷಸನ ತಡೆವ ಮಂತ್ರದಂಡ ಬೇಕಿದೆ !

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.