ಮೌನದೊಂದಿಗೆ ಮುಂದೆ ಸಾಗಲು ಪ್ರಯತ್ನಿಸಬಾರದೇಕೆ


Team Udayavani, Dec 31, 2019, 4:08 AM IST

ve-14

ಇನ್ನೇನು ಸೂರ್ಯ ತನ್ನ ಮನೆಗೆ ಮರಳುವಾಗ, ಹಕ್ಕಿಗಳು ಗೂಡುಗಳನ್ನು ಸೇರುವಾಗ, ಆಕಾಶದಲ್ಲಿ ಚಂದ್ರ ಬರೋವಾಗ, ನೀಲಾಕಾಶ ಮರೆಯಾಗಿ ಸಣ್ಣಗೆ ಕತ್ತಲು ಆವರಿಸಲು ತವಕಿಸುವಾಗ, ನಾನು ನಿನ್ನ ಕೈ ಹಿಡಿದುಕೊಂಡು ದಾರಿಯುದ್ದಕ್ಕೂ ನಡೆಯುತ್ತಿರಬೇಕು. ಸುತ್ತುವರಿದ ಎಲ್ಲ ಜಂಜಡಗಳನ್ನೂ ಕಿತ್ತೆಸೆದು ನಾನು ನಾನಾಗಿರಬೇಕೆಂಬ ತವಕ. ಹಕ್ಕಿಗಳ ಚಿಲಿಪಿಲಿಯೊಂದಿಗೆ ಹಾಡದೇ ಉಳಿದ ಹಾಡನ್ನು ದನಿಗೂಡಿಸುವ ಚೈತನ್ಯ ನನ್ನದು. ಮುಂಜಾನೆಯೇ ಅರಳಿದರೂ, ಸಂಜೆಯಾದರೂ ಬಾಡದ ಹೂವಿನ ರೀತಿಯ ಪ್ರೀತಿ ಅದು. ಸೂರ್ಯ ಮುಳುಗುತ್ತಿದ್ದಂತೆ ತಮ್ಮ ಅಸ್ತಿತ್ವವನ್ನು ತೋರಲು ಹಾತೊರೆಯುವ ನಕ್ಷತ್ರಗಳಂತೆ ನನ್ನ ಮನದ ಭಾವ. ಇಂಥದ್ದೇ ಎಲ್ಲ ಲಕ್ಷಣಗಳನ್ನು ಹೊಂದಿದ ಒಂದು ಸಂಜೆ, ನಿನ್ನ ಜೊತೆ ಮನಸೋ ಇಚ್ಛೆ ಸುತ್ತಾಡಬೇಕೆಂಬ ಆಸೆಯಾಗಿದೆ ಕಣೋ.

ಆ ಸಂಜೆ ನಾವಿಬ್ಬರೂ ಹಾಗೆ ನಡೆಯುತ್ತಿರುವಾಗ ಮೌನಕ್ಕೆ ಜಾಸ್ತಿ ಪ್ರಾಶಸ್ತ್ಯ. ಸಾಮಾನ್ಯ ಪ್ರೇಮಿಗಳಂತೆ ವಟಗುಡದೇ ಹಾಗೇ ಇದ್ದು ಬಿಡುವಾಸೆ. ವರ್ತಮಾನ, ಭವಿಷ್ಯ ಅಂತೆಲ್ಲ ಹೇಳಿ ಏನೇನೋ ವಿಚಾರಗಳನ್ನು ತುಂಬಿಕೊಂಡು ಮುಂದೆ ಬರಲಿರುವ ದಿನಗಳ ಬಗ್ಗೆ ಕಿಂಚಿತ್ತೂ ಯೋಚಿಸದೇ, ಈಗ ಇದ್ದದ್ದನ್ನು ಸವಿಯುವ ಪ್ರಜ್ಞೆ ನಮ್ಮಿಬ್ಬರದು.

ಬೀಸುವ ತಂಗಾಳಿಯ ದಿನದ ಕೆಲಸ ಮಾಡಿ ಸುಸ್ತಾಗಿ ತನ್ನ ಮನೆಗೆ ಹೋಗುವ ಮುಂಚೆ, ಹೂವುಗಳ ಸುವಾಸನೆಯನ್ನು ಎಲ್ಲೆಲ್ಲೂ ಬೀರಿ ಅದು ನಮಗೂ ತಾಕಿ ಸುಮಧುರ ಕ್ಷಣವನ್ನು ಆಸ್ವಾದಿಸುವಂತೆ ಪ್ರೇರೇಪಿಸುತ್ತಿದೆ ಆ ಸಂಜೆ. ಈ ಗಳಿಗೆಯನ್ನು ಮರೆಯಲಾರದೆ ನೆನಪಿನಂಗಳಲ್ಲಿ ಅಚ್ಚಾಗಿಸಬೇಕು. ತುಸು ಹೊತ್ತು ಈ ಎಲ್ಲ ವಿದ್ಯಮಾನಗಳಿಗೆ ಸಾಕ್ಷಿಯಾಗಿ ನಮ್ಮನ್ನೇ ನಾವು ಮರೆಯಬೇಕು. ಕಡೇ ಪಕ್ಷ ಆ ಸಂಜೆ ನಾವಿಬ್ಬರೂ ಮೌನದೊಂದಿಗೆ ಮುಂದೆ ಸಾಗಲು ಪ್ರಯತ್ನಿಸಬಾರದೇಕೆ ?

ಮಾಲಾ ಮ ಅಕ್ಕಿಶೆಟ್ಟಿ.

ಟಾಪ್ ನ್ಯೂಸ್

Salman Khan: 5 ಕೋಟಿ ನೀಡಿ, ಇಲ್ಲದಿದ್ದರೆ… ಸಲ್ಮಾನ್ ಖಾನ್ ಗೆ ಮತ್ತೆ ಜೀವ ಬೆದರಿಕೆ

Salman Khan: 5 ಕೋಟಿ ನೀಡಿ, ಇಲ್ಲದಿದ್ದರೆ… ಸಲ್ಮಾನ್ ಖಾನ್ ಗೆ ಮತ್ತೆ ಜೀವ ಬೆದರಿಕೆ

2-vijayapura

Vijayapura: ಗ್ರಾಮಕ್ಕೆ ನುಗ್ಗಿದ ಮೊಸಳೆ ಸೆರೆ

Jaiswal

Canada Vs India: ನಿಜ್ಜರ್‌ ಹತ್ಯೆ ಕೇಸಲ್ಲಿ ಸತ್ಯ ಒಪ್ಪಿದ ಕೆನಡಾ ಪ್ರಧಾನಿ: ಕೇಂದ್ರ ಸರಕಾರ

Bhagavath

Helping Nature: ಭಾರತ ದಾಳಿ ಮಾಡಲ್ಲ, ತನ್ನ ಮೇಲಿನ ದಾಳಿಯನ್ನೂ ಸಹಿಸಲ್ಲ: ಭಾಗವತ್‌

ಪ್ರವಾಸ ಸಂದರ್ಭ ವಿದ್ಯಾರ್ಥಿನಿಯರಿಗೆ ಉಪನ್ಯಾಸಕರಿಂದ ಮದ್ಯಪಾನ: ದೂರು

Kanakapura: ಪ್ರವಾಸ ಸಂದರ್ಭ ವಿದ್ಯಾರ್ಥಿನಿಯರಿಗೆ ಉಪನ್ಯಾಸಕರಿಂದ ಮದ್ಯಪಾನ: ದೂರು

CJI-Ind

Recommendation: ನ್ಯಾ. ಸಂಜೀವ್‌ ಖನ್ನಾ ಸುಪ್ರೀಂಕೋರ್ಟ್‌ ಮುಂದಿನ ಮುಖ್ಯ ನ್ಯಾಯಮೂರ್ತಿ

Koppal: ಚಿಕನ್‌, ಮಟನ್‌ ಸೆಂಟರ್‌ಗೆ ಸಚಿವೆ ಶೋಭಾ ಕರಂದ್ಲಾಜೆ ಹೆಸರಿಟ್ಟ ಅಭಿಮಾನಿ

Koppal: ಚಿಕನ್‌, ಮಟನ್‌ ಸೆಂಟರ್‌ಗೆ ಸಚಿವೆ ಶೋಭಾ ಕರಂದ್ಲಾಜೆ ಹೆಸರಿಟ್ಟ ಅಭಿಮಾನಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

udayavani youtube

ಅಗಲಿದ ರತನ್ ಟಾಟಾಗೆ ಶ್ರದ್ಧಾಂಜಲಿ ಸಲ್ಲಿಸಿದ ಅಂಬಾನಿ ಕುಟುಂಬ

udayavani youtube

ಮಕ್ಕಳ ಸ್ಕ್ರೀನ್ ಟೈಮಿಂಗ್ ಕುರಿತು ಎಚ್ಚರಿಕೆ ಅತ್ಯವಶ್ಯಕ.. ಇಲ್ಲಿದೆ ಅಗತ್ಯ ಮಾಹಿತಿ

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

ಹೊಸ ಸೇರ್ಪಡೆ

Salman Khan: 5 ಕೋಟಿ ನೀಡಿ, ಇಲ್ಲದಿದ್ದರೆ… ಸಲ್ಮಾನ್ ಖಾನ್ ಗೆ ಮತ್ತೆ ಜೀವ ಬೆದರಿಕೆ

Salman Khan: 5 ಕೋಟಿ ನೀಡಿ, ಇಲ್ಲದಿದ್ದರೆ… ಸಲ್ಮಾನ್ ಖಾನ್ ಗೆ ಮತ್ತೆ ಜೀವ ಬೆದರಿಕೆ

2-vijayapura

Vijayapura: ಗ್ರಾಮಕ್ಕೆ ನುಗ್ಗಿದ ಮೊಸಳೆ ಸೆರೆ

Jaiswal

Canada Vs India: ನಿಜ್ಜರ್‌ ಹತ್ಯೆ ಕೇಸಲ್ಲಿ ಸತ್ಯ ಒಪ್ಪಿದ ಕೆನಡಾ ಪ್ರಧಾನಿ: ಕೇಂದ್ರ ಸರಕಾರ

Bhagavath

Helping Nature: ಭಾರತ ದಾಳಿ ಮಾಡಲ್ಲ, ತನ್ನ ಮೇಲಿನ ದಾಳಿಯನ್ನೂ ಸಹಿಸಲ್ಲ: ಭಾಗವತ್‌

ಪ್ರವಾಸ ಸಂದರ್ಭ ವಿದ್ಯಾರ್ಥಿನಿಯರಿಗೆ ಉಪನ್ಯಾಸಕರಿಂದ ಮದ್ಯಪಾನ: ದೂರು

Kanakapura: ಪ್ರವಾಸ ಸಂದರ್ಭ ವಿದ್ಯಾರ್ಥಿನಿಯರಿಗೆ ಉಪನ್ಯಾಸಕರಿಂದ ಮದ್ಯಪಾನ: ದೂರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.