ಆಧಾರ್‌-ಪಾನ್‌ ಲಿಂಕ್‌ ಗಡು ಮಾರ್ಚ್ 31ಕ್ಕೆ ವಿಸ್ತರಣೆ

ನಿಮ್ಮ ಪಾನ್‌-ಆಧಾರ್‌ ಇನ್ನೂ ಲಿಂಕ್‌ ಆಗಿಲ್ವ? ಹೀಗೆ ಮಾಡಿ

Team Udayavani, Dec 30, 2019, 9:30 PM IST

adhar-link

ಹೊಸದಿಲ್ಲಿ: ನಿಮ್ಮ ಪಾನ್‌ ಕಾರ್ಡ್‌ ಮತ್ತು ಆಧಾರ್‌ ಸಂಖ್ಯೆ ಲಿಂಕ್‌ ಆಗಿಲ್ಲವೇ? ಹಾಗಿದ್ದರೆ ಚಿಂತೆ ಬೇಡ. ಡಿ.31ಕ್ಕೆ ಇದ್ದ ಕೊನೆಯ ದಿನಾಂಕವನ್ನು 2020ರ ಮಾ.31ರವರೆಗೆ ವಿಸ್ತರಿಸಿ ಕೇಂದ್ರ ನೇರ ತೆರಿಗೆ ಮಂಡಳಿ ಆದೇಶ ನೀಡಿದೆ. ಈ ಮೂಲಕ ಇನ್ನೂ ಆಧಾರ್‌ – ಪಾನ್‌ ಲಿಂಕ್‌ ಮಾಡದವರಿಗೆ ಇನ್ನೊಂದು ಅವಕಾಶ ನೀಡಲಾಗಿದೆ.

ಆದಾಯ ತೆರಿಗೆ ಇಲಾಖೆ ಕಾಯ್ದೆಯ ಅನ್ವಯ ಪಾನ್‌-ಆಧಾರ್‌ ಲಿಂಕ್‌ ಮಾಡದೇ ಇದ್ದರೆ, ಪಾನ್‌ ಸಂಖ್ಯೆಯ ಮೂಲಕ ವಹಿವಾಟು ನಡೆಸಲು ಸಾಧ್ಯವೇ ಇಲ್ಲ. ಗಮನಾರ್ಹ ಅಂಶವೆಂದರೆ ಕೇಂದ್ರ ಸರಕಾರ ಇನ್ನೂ ಕೂಡ ಯಾವ ರೀತಿ ಅದನ್ನು ಬಳಕೆ ಮಾಡಲು (ಇನ್‌ ಆಪರೇಟಿವ್‌) ಸಾಧ್ಯವಿಲ್ಲ ಎಂಬ ಅಂಶದ ಬಗ್ಗೆ ವಿವರಣೆ ನೀಡಿಲ್ಲ.

ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸಬೇಕಾದರೆ ಆಧಾರ್‌ ಸಂಖ್ಯೆ ಅನಿವಾರ್ಯವಾಗಿತ್ತು. ಈ ವೇಳೆ ನಿಮ್ಮಲ್ಲಿ ಆಧಾರ್‌ ಕಾರ್ಡ್‌ ಇಲ್ಲದೇ ಇದ್ದರೆ ಅಥವ ನಿಮ್ಮ ಆಧಾರ್‌ ಪಾನ್‌ ಕಾರ್ಡ್‌ಗೆ ಲಿಂಕ್‌ ಆಗದೇ ಇದ್ದರೆ ನೀವು ತೆರಿಗೆ ಲಿಟರ್ನ್ಸ್ ಸಲ್ಲಿಸಲು ಬರುವುದಿಲ್ಲ. ಲಿಂಕ್ ಮಾಡುವ ಗಡುವನ್ನು ನೇರ ತೆರಿಗೆ ಮಂಡಳಿ ವಿಸ್ತರಿಸಿರುವುದು ಸಾರ್ವಜನಿಕರಿಗೆ ಅನುಕೂಲವಾದಂತಾಗಿದೆ.

ಲಿಂಕ್‌ ಮಾಡುವ ಬಗೆಯನ್ನು ಈ ಕೆಳಗೆ ಹಂತ ಹಂತವಾಗಿ ನೀಡಲಾಗಿದೆ.
ಹಂತ 1: https://www.incometaxindiaefiling.gov.in/home
ಹಂತ 2: ವೆಬ್‌ಸೈಟ್‌ನ ನಿಮ್ಮ ಎಡಬದಿಯ ಮೆಲೆ ಕಾಣಿಸಿಕೊಳ್ಳುವ ಲಿಂಕ್‌ ಆಧಾರ್‌ ಮೇಲೆ ಕ್ಲಿಕ್‌ ಮಾಡಿ.
ಹಂತ 3: ಅಲ್ಲಿ ಸೂಚಿಸಿದಂತೆ ನಿಮ್ಮ ಪಾನ್‌ ಮತ್ತು ಆಧಾರ್‌ ಸಂಖ್ಯೆಯನ್ನು ನಮೂದಿಸಿ.
ಹಂತ 4: ನಿಮ್ಮ ಆಧಾರ್‌ ಕಾರ್ಡ್‌ನಲ್ಲಿ ಮುದ್ರಣವಾಗಿರುವ ಹೆಸರನ್ನು ಅಲ್ಲಿ ನಮೂದಿಸಬೇಕು
ಹಂತ 5: ಕೆಲವು ಆಧಾರ್‌ ಕಾರ್ಡ್‌ಗಳಲ್ಲಿ ಹುಟ್ಟಿದ ವರ್ಷ ಮಾತ್ರ ದಾಖಲಾಗಿರುತ್ತದೆ. ಅಂತಹ ಪ್ರಕರಣಗಳಲ್ಲಿ ಅಲ್ಲಿ ನೀಡಲಾಗಿರುವ “https://www.incometaxindiaefiling.gov.in ಬಾಕ್ಸ್‌ ಆಯ್ಕೆಯ ಮೇಲೆ ಕ್ಲಿಕ್‌ ಮಾಡಿ
ಹಂತ 6: ನೀವು ಮೆಲೆ ನೀಡಲಾಡ ಎಲ್ಲಾ ವಿವರಗಳು ಸರಿಯಾಗಿದೆಯೇ ಎಂದು ಮತ್ತೂಮ್ಮೆ ಪರೀಕ್ಷಿಸಿ, ಎಲ್ಲವೂ ಸರಿಯಾಗಿದ್ದರೆ “”I agree to validate my Aadhar details with UIDAI” ಆಯ್ಕೆ ಮೇಲೆ ಕ್ಲಿಕ್‌ ಮಾಡಿ.
ಹಂತ 7: ಬಳಿಕ ಕೆಳಗೆ ಬಾಕ್ಸ್‌ನಲ್ಲಿ ಕಾಣಿಸಿಕೊಳ್ಳುವ ಕೋಡ್‌ (ಸರಿಯಾಗಿ ಗಮನಿಸಿ ಇದು ಹಲವು ಕ್ಯಾಪ್ಸ್‌ ಮತ್ತು ಸ್ಮಾಲ್‌ ಲೆಟರ್‌ಗಳನ್ನು ಅಂಕಿಯೊಂದಿಗೆ ಒಳಗೊಂಡಿರುತ್ತದೆ) ಅನ್ನು ನಮೂದು ಮಾಡಿ.
ಹಂತ 8: ಬಳಿಕ ಕೆಳಕೆ ಕಾಣಿಸಿಕೊಳ್ಳುವ ಲಿಂಕ್‌ ಆಧಾರ್‌ ಮತ್ತು ಕ್ಯಾನ್ಸಲ್‌ ಎಂಬ ಬಟನ್‌ಗಳನ್ನು ಗಮನಿಸಿಸಿ, ಅಲ್ಲಿ ನೀವು ಲಿಂಕ್‌ ಆಧಾರ್‌ ಬಟನ್‌ ಮೆಲೆ ಕ್ಲಿಕ್‌ ಮಾಡಬೇಕು.
ಹಂತ 9: ಕಡೆಯದಾಗಿ ನಿಮ್ಮಿಂದ ಮಾಹಿತಿಯನ್ನು ಪಡೆದು ಕೊಂಡ ವೆಬ್‌ಸೈಟ್‌ ಎಲ್ಲವೂ ಸರಿಯಾಗಿದೆ ಎಂದಾದ ಬಳಿಕ ‘Your Pan is already linked’ಎಂಬ ಸಂದೇಶವನ್ನು ತೋರಿಸುತ್ತದೆ.

ಮೊಬೈಲ್‌ನಲ್ಲೇ ಲಿಂಕ್‌ ಮಾಡುವುದು ಹೇಗೆ?
ನಿಮ್ಮ ಮೊಬೈಲ್‌ನಿಂದ ಎಸ್‌ಎಂಎಸ್‌ ಮೂಲಕ ಪಾನ್‌ ಮತ್ತು ಆಧಾರ್‌ ಕಾರ್ಡ್‌ ಅನ್ನು ಲಿಂಕ್‌ ಮಾಡಬಹುದು. ಇದಕ್ಕೆ ನೀವು ಮಾಡಬೇಕಾಗಿರುವುದು ಇಷ್ಟೇ.

ಉದಾ: ನಿಮ್ಮ ಆಧಾರ್‌ ಸಂಖ್ಯೆ 111122224444 ಎಂದೂ, ಪಾನ್‌ ಕಾರ್ಡ್‌ ನಂಬರ್‌ ಅಅಅಕಅ9999ಕಿಎಂದು ಇದೆ ಎಂದುಕೊಳ್ಳೋಣ. ನಿಮ್ಮ ಪೋನ್‌ನಿಂದ UIDPAN 111122224444 ಅಅಅಕಅ9999ಕಿ ಎಂದು 567678 ಅಥವ 56161 ಸಂಖ್ಯೆಗೆ ಮೆಸೇಜ್‌ ಮಾಡಬಹುದಾಗಿದೆ. ಇದಕ್ಕೆ ನಿಮ್ಮ ನೆಟ್ ವರ್ಕ್ ಪೂರೈಕೆದಾರರ ಮೆಸೇಜ್‌ ದರ ಅನ್ವಯವಾಗಲಿದೆ.

ಟಾಪ್ ನ್ಯೂಸ್

Gun-Fire

Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್‌: 3 ವರ್ಷದ ಮಗು ಮೃತ್ಯು!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

Delhi-Stamp

Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Delhi-Stamp

Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು

mohan bhagwat

RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್

Lalu

Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್

1sadgu

Pariksha Pe Charcha: ಸ್ಮಾರ್ಟ್ ಫೋನ್‌ಗಿಂತಲೂ ನೀವು ಸ್ಮಾರ್ಟ್ ಆಗಬೇಕು:ಸದ್ಗುರು

15-monalisa

Mahakumbh sensation: ಕೇರಳದಲ್ಲಿ ಕುಂಭಮೇಳದ ಮೊನಾಲಿಸಾ ಹವಾ

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

Gun-Fire

Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್‌: 3 ವರ್ಷದ ಮಗು ಮೃತ್ಯು!

accident

Kaup: ಸ್ಕೂಟಿ, ಕಾರಿಗೆ ಬಸ್‌ ಢಿಕ್ಕಿ; ಸವಾರನಿಗೆ ಗಾಯ

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

1

Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್‌ಮನ್‌ ಹಲ್ಲೆ; ದೂರು

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.