ಹಿರಿಯಜ್ಜಿಯ ಬಜ್ಜಿ ಬ್ಯುಸಿನೆಸ್‌

ದುಡಿದು ತಿನ್ನೋರ್ಗೆ ಯಾವ ಕೆಲಸಾನೂ ಸಣ್ಣದಲ್ಲಾರೀ...

Team Udayavani, Jan 1, 2020, 5:53 AM IST

ms-4

ವರ್ಷಗಳು ಉರುಳಿದಂತೆಲ್ಲಾ ವಯಸ್ಸೂ ಹೆಚ್ಚುತ್ತದೆ. ವಯಸ್ಸಾದಂತೆಲ್ಲಾ ದುಡಿಯುವ ಸಾಮರ್ಥ್ಯ, ಆಸಕ್ತಿ ಕುಂದುತ್ತಾ ಹೋಗುತ್ತದೆ. ಆದರೆ, ಈ ಮಾತು ಈರಮ್ಮ ಅವರ ಪಾಲಿಗೆ ಸುಳ್ಳಾಗಿದೆ. ವಯಸ್ಸು ಎಂಬತ್ತರ ಸನಿಹಕ್ಕೆ ಬಂದಿದ್ದರೂ ಅವರ ದುಡಿಯುವ ಛಲದಲ್ಲಿ ಎಳ್ಳಷ್ಟೂ ಬದಲಾವಣೆಯಾಗಿಲ್ಲ. ಹೊಸ ದಶಕದ ಹೊಸ್ತಿಲಲ್ಲಿ ನಿಂತಿರುವ ಎಲ್ಲ ಹಿರಿ-ಕಿರಿಯರಿಗೆ ಈ ಅಜ್ಜಿಯ ಉತ್ಸಾಹ ಮಾದರಿಯಾಗಲಿ…

ಉತ್ತರ ಕರ್ನಾಟಕದ ಮಂದಿಗೆ ಗಿರ್‌ಮಿಟ್‌ ಜೊತೆಗೆ ಮೆಣಸಿಕಾಯಿ ಬಜ್ಜಿ ಭಾಳ ಪ್ರೀತಿಯ ತಿನಿಸು. ಅದರಲ್ಲೂ, ಮಳೆಗಾಲದಲ್ಲಿ ಗಿರ್‌ಮಿಟ್‌ ಬಜ್ಜಿ, ಚಹಾ ಸವಿಯುವ ಗಮ್ಮತ್ತೇ ಬೇರೆ. ಅಲ್ಲಿ, ಬೀದಿಗೊಂದರಂತೆ ಬಜ್ಜಿ ಅಂಗಡಿಗಳಿರುತ್ತವೆ. ಅಂಥ ಅಂಗಡಿಗಳಲ್ಲಿ, ಗದಗದ ಸ್ಟೇಷನ್‌ ರಸ್ತೆಯಲ್ಲಿರುವ “ತೋಂಟದಾರ್ಯ ಮಿರ್ಚಿ ಸೆಂಟರ್‌’ ಕೂಡಾ ಒಂದು. ಬೇರೆ ಅಂಗಡಿಗಳಿಗಿಂತ ಆ ಮಿರ್ಚಿ ಸೆಂಟರ್‌ ಭಿನ್ನ ಎನಿಸಲು ಕಾರಣ, ಅದರ ಮಾಲೀಕರಾದ ಈರಮ್ಮ ಹಿರೇಹಡಗಲಿ ಮತ್ತು ಅವರ ಕೈ ರುಚಿಯ ಬಜ್ಜಿ.

ಹಿರಿಯಜ್ಜಿ, ಫೇಮಸ್‌ ಬಜ್ಜಿ
ಕಳೆದ 25ವರ್ಷಗಳಿಂದ ಬಜ್ಜಿ ಮಾರಾಟದಲ್ಲಿ ತೊಡಗಿರುವ ಈರಮ್ಮ ಅವರ ವಯಸ್ಸು 78 ದಾಟಿದೆ. ಆರಂಭದಲ್ಲಿ, ಕುಟುಂಬದ ಹೊಟ್ಟೆ ಹೊರೆಯುವ ಉದ್ದೇಶದಿಂದ ಪ್ರಾರಂಭಿಸಿದ ಈ ಉದ್ಯೋಗ, ಅವರೊಂದಿಗೇ ಬೆಳೆದುಕೊಂಡು ಬಂದಿದೆ.ಮೊದಲು ಸಣ್ಣ ಅಂಗಡಿ ಇಟ್ಟುಕೊಂಡಿದ್ದ ಈರಮ್ಮ, 1 ರೂಪಾಯಿಗೆ ಬಜ್ಜಿ ಮಾರುತ್ತಿದ್ದರಂತೆ. ಆಗ ಇವರ ಬಜ್ಜಿ ಸವಿದಿದ್ದ ಅನೇಕರಿಗೆ, ಈಗಲೂ ಈರಮ್ಮನೇ ಬಜ್ಜಿ ಮಾಡಿ ಕೊಡಬೇಕಂತೆ.

ಅಂಗಡಿಗೆ ಹೊಸ ರೂಪ
ಬಜ್ಜಿಯ ಜನಪ್ರಿಯತೆ ಹೆಚ್ಚಿದಂತೆ, ವ್ಯಾಪಾರವೂ ಹೆಚ್ಚಿದ್ದರಿಂದ, ಆರು ವರ್ಷಗಳ ಹಿಂದೆ ಅಂಗಡಿಗೆ ಹೊಸ ರೂಪ ಸಿಕ್ಕಿತು. ಈಗ, ಮನೆ ಮಂದಿಯ ಸಹಕಾರ ಹಾಗೂ ಮೂವರು ಕೆಲಸಗಾರರ ಶ್ರಮದಿಂದ ಮಿರ್ಚಿ ಸೆಂಟರ್‌ ನಡೆಸುತ್ತಿದ್ದಾರೆ ಈರಮ್ಮ. ಆರಂಭದಲ್ಲಿ 2 ಕೆ.ಜಿ. ಹಿಟ್ಟಿನ ಬಜ್ಜಿ ತಯಾರಿಸುತ್ತಿದ್ದ ಇವರು, ಈಗ ದಿನಕ್ಕೆ 2-3 ಸಾವಿರ ರೂ. ದುಡಿಯುತ್ತಾರಂತೆ. ಮನೆ-ಅಂಗಡಿ ನಿರ್ವಹಣೆಗೆಂದು ಮಾಡಿದ್ದ ಸಾಲವನ್ನೂ, ಬಜ್ಜಿ ಮಾರಿಯೇ ತೀರಿಸಿದ್ದಾರೆ.

ವ್ಯಾಪಾರ ಬಲು ಜೋರು
ಸಂಜೆ 4ರಿಂದ ರಾತ್ರಿ 10 ಗಂಟೆಯವರೆಗೂ ಬಿಡುವಿಲ್ಲದ ಕೆಲಸ ಈರಮ್ಮನಿಗೆ. ಇವರು ಮಾಡುವ ಬದನೇಕಾಯಿ ಬಜ್ಜಿ, ಮಿರ್ಚಿ ಬಜ್ಜಿ, ಅಲಸಂದೆ ಕಾಳು ವಡೆ, ಗಿರಮಿಟ್‌, ಗಿರಾಕಿಗಳಿಗೆ ಬಲು ಇಷ್ಟವಂತೆ. ಸಂಜೆಯಾದರೆ ಸಾಕು: ಜನ, ಮಿರ್ಚಿ ಸೆಂಟರ್‌ ಮುಂದೆ ಜಮಾಯಿಸುತ್ತಾರೆ. 1 ಬಜಿಗೆ 10ರೂ, ಗಿರ್‌ಮಿಟ್‌ಗೆ 20 ರೂ. ಬಜ್ಜಿ ತಯಾರಿಸಲು ಶೇಂಗಾ ಎಣ್ಣೆ ಬಳಸುವ ಇವರು, ಈಗಲೂ ಕಟ್ಟಿಗೆ ಒಲೆಯನ್ನೇ ಬಳಸುತ್ತಾರೆ. ಅದರಿಂದಲೇ ಬಜ್ಜಿಯ ರುಚಿ ಹೆಚ್ಚುವುದು ಅಂತಾರೆ ಗಿರಾಕಿಗಳು.

“ದುಡಿದು ತಿನ್ನೋಕೆ ಯಾವ ಕೆಲಸಾನೂ ಸಣ್ಣದಲ್ಲಾರೀ. ಮಿರ್ಚಿ ಮಾಡೋದ್ರಿಂದ ನಮ್ಮ ಜೀವನ ಕಂಡುಕೊಂಡಿವ್ರಿ. ಎಂಥಾ ಕಷ್ಟ ಬಂದ್ರೂ ಬಜ್ಜಿ ಅಂಗಡೀನ ಮುಂದುವರಿಸಿಕೊಂಡು ಬಂದೀನ್ರಿ. ಇದು ನಮಗ ಅನ್ನಕೊಟ್ಟೈತ್ರೀ’
-ಈರಮ್ಮ ಹಿರೇಹಡಗಲಿ

-ಬಸಮ್ಮ ಭಜಂತ್ರಿ

ಟಾಪ್ ನ್ಯೂಸ್

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

22

Ganesh Chaturthi: ಗಣೇಶ ಬಂದ

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Actor Vinayakan: ವಿಮಾನ ನಿಲ್ದಾಣದ ಸಿಬ್ಬಂದಿಗಳ ಜತೆ ವಾಗ್ವಾದ; ನಟ ವಿನಾಯಗನ್ ವಶಕ್ಕೆ

Actor Vinayakan: ವಿಮಾನ ನಿಲ್ದಾಣದ ಸಿಬ್ಬಂದಿಗಳ ಜತೆ ವಾಗ್ವಾದ; ನಟ ವಿನಾಯಗನ್ ವಶಕ್ಕೆ

17-desiswara-ganaap

Ganesh Chaturthi Special Story: ವಿಶ್ವಪೂಜಿತ ವಿನಾಯಕ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಪರೂಪದ ಅತಿಥಿ

ಅಪರೂಪದ ಅತಿಥಿ

Untitled-2

ಅವತಾರಪುರುಷ ಶ್ರೀರಾಮ

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಮಾವಿನ ಬಗ್ಗೆ ಮನದ ಮಾತು…

ಮಾವಿನ ಬಗ್ಗೆ ಮನದ ಮಾತು…

MUST WATCH

udayavani youtube

ಗಜಪಯಣಕ್ಕೆ ಚಾಲನೆ : ಕ್ಯಾಪ್ಟನ್‌ ಅಭಿಮನ್ಯು ನೇತೃತ್ವದ 9 ಆನೆಗಳ ಗಜಪಡೆ

udayavani youtube

ರಕ್ಷಾ ಬಂಧನದ ಅರ್ಥ ಮತ್ತು ಮಹತ್ವ | ರಕ್ಷಾ ಬಂಧನ 2024

udayavani youtube

ಕಡಿಮೆ ಬೆಲೆಗೆ ಫಸ್ಟ್ ಕ್ಲಾಸ್ ಬಾಳೆಎಲೆ ಊಟ

udayavani youtube

ಆ.18 ರಿಂದ ಶ್ರೀಕೃಷ್ಣ ಮಠದಲ್ಲಿ ಕ್ರೀಡೋತ್ಸವ

udayavani youtube

ತಮ್ಮ ಮಕ್ಕಳನ್ನು ಬೆಳೆಸುವ ಸಲುವಾಗಿ ಕಂಡೋರ ಮಕ್ಕಳ ಭವಿಷ್ಯ ನಾಶ. ಈ ವ್ಯವಸ್ಥೆಗೆ ನಾನೂ ಬಲಿ

ಹೊಸ ಸೇರ್ಪಡೆ

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

22

Ganesh Chaturthi: ಗಣೇಶ ಬಂದ

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.