ಅಪ್ಪ ಕೊಟ್ಟದ್ದು ಬರೀ ಕೌದಿಯಲ್ಲ…


Team Udayavani, Jan 1, 2020, 5:16 AM IST

ms-6

ಅವರೊಬ್ಬ ದೊಡ್ಡ ಅಧಿಕಾರಿ. ಕೆಲಸದ ಸಲುವಾಗಿ ಆಗಾಗ್ಗೆ ಊರಿಂದೂರಿಗೆ ಹೋಗಬೇಕಾಗುತ್ತದೆ. ಅವರು ಎಲ್ಲಿಗೇ ಹೋದರೂ, ಅವರ ಜೊತೆಗೇ ಪ್ರಯಾಣ ಮಾಡುತ್ತಿತ್ತು ಆ ಹಳೆಯದಾದ, ಮಾಸಿದ ಕೌದಿ (ಹೊದಿಕೆ). ಹೊದೆಯಲು ಬೇಕಾದಷ್ಟು ಹೊಸ ರಜಾಯಿಗಳಿದ್ದರೂ, ಅವರಿಗೆ ಆ ಕೌದಿಯೇ ಬೇಕು. ಅದನ್ನು ಗಮನಿಸಿದ ಅವರ ಸಹೋದ್ಯೋಗಿ ತಡೆಯಲಾರದೆ, ಕೇಳಿಯೇ ಬಿಟ್ಟರು – “ಯಾಕೆ ಹೊಸ ಶಾಲು ಕೊಳ್ಳಬಾರದೆ?’ ಅಂತ! ಆಗ ಆ ಮೇಲಧಿಕಾರಿ, “ಶಾಲಿನ ಶಕಲಾತಿಗಿಂತ ತಾಯಿಯ ಕಕಲಾತಿ
( ಕಕ್ಕುಲತೆ) ಹೆಚ್ಚು. ಇದು ನಮ್ಮವ್ವ ಕೈಯಾರೆ ಹೊಲೆದ ಕೌದಿ, ಇದನ್ನು ಹೊದ್ದರೆ ಅವ್ವನ ಮಡಿಲಲ್ಲಿ ಮಲಗಿದ ಅನುಭವ’ ಎಂದರು.

ಹೌದು, ತಂದೆ ತಾಯಿಯರ ಪ್ರೀತಿಯೇ ಹಾಗೆ.
ನಾನಾಗ 4 ಅಥವಾ 5ನೇ ತರಗತಿಯಲ್ಲಿದ್ದೆ. ಒಂದು ದಿನ ಅಪ್ಪ ನನ್ನನ್ನು ಕರೆದು, ಒಂದು ಪಾಕೀಟನ್ನು ನನ್ನ ಕೈಯಲ್ಲಿಟ್ಟು “ಇದು ನಿನಗೆ’ ಎಂದರು. ತೆರೆದು ನೋಡಿದೆ. ಕೆನೆ ಬಣ್ಣದ ಮೆತ್ತನೆಯ ತುಪ್ಪಳದ ಕಂಬಳಿ ಬೆಚ್ಚಗೆ ಮಲಗಿತ್ತು. ಖುಷಿಯಿಂದ ಎದೆಗವುಚಿ ಓಡಿದೆ. ಅಂದಿನಿಂದ ಅದು ನನ್ನ ಜೊತೆಯಾಯಿತು. ಮಳೆಗಾಲ, ಚಳಿಗಾಲ ಕೊನೆಗೆ ಬೇಸಿಗೆ ಬಂದರೂ ಆ ಹೊದಿಕೆ ಬೇಕೇ ಬೇಕು. ಅದಿಲ್ಲದೇ ನಿದ್ದೆಯೇ ಬರುತ್ತಿರಲಿಲ್ಲ. ಹಾಗೇ ವರುಷಗಳು ಉರುಳಿದವು, ಹೊದ್ದು ಹೊದ್ದು ಕಂಬಳಿ ತೆಳ್ಳಗಾದ್ರೂ ಅದನ್ನು ಬಿಡಲು ಮನಸ್ಸಿಲ್ಲ. ಮದುವೆಯ ನಂತರವೂ ನನ್ನ ಜೊತೆಯೇ ಬಂತು. ಅದಕ್ಕಾಗಿ ಎಲ್ಲರೂ ಅಣಕಿಸುವವರೇ! ಅದಾದರೂ ಎಷ್ಟು ವರ್ಷ ಬಂದೀತು? ಎಲ್ಲರ ಈಷ್ಯೆìಗೆ ಗುರಿಯಾದ ನನ್ನ ಕಂಬಳಿ, ಮೊದಲ ಮಗ ಹುಟ್ಟಿದಾಗ ಸಣ್ಣಗೆ ಪಿಸಿಯತೊಡಗಿತು! ಆದರೆ, ಅದನ್ನು ಎಸೆಯಲು ಮನಸ್ಸಿಲ್ಲ. ಆಗ ಅದನ್ನು ಎರಡು ಭಾಗ ಮಾಡಿ ಮೇಲೆ ಹೊಸ ಬಟ್ಟೆ ಹಚ್ಚಿ, ಹೊಲಿದೇ ಬಿಟ್ಟೆ ಎರಡು ಕೌದಿ ಹೋಲುವ ಹೊದಿಕೆಗಳನ್ನು!

ಆ ಕಂಬಳಿಯ ಮೇಲೇಕಷ್ಟು ವ್ಯಾಮೋಹ? ಅಪ್ಪ ಯಾವಾಗ್ಲೂ ಶಿಸ್ತಿನ, ಗತ್ತಿನ ಆಸಾಮಿ. ನಮ್ಮನ್ನು ಎತ್ತಿ, ಮು¨ªಾಡಿ ಪ್ರೀತಿ ತೋರಿಸುತ್ತಿದ್ದಿಲ್ಲ. ಆದರೆ ಎಂದೂ ಗದರಿದವರಲ್ಲ.ಪ್ರೀತಿಯಿಂದ ತಲೆ ಮೇಲೆ ಕೈಯಾಡಿಸುತ್ತಿದ್ದರಷ್ಟೇ. ಅದು ಅಪ್ಪ ನನಗಾಗಿ ತಂದ ಪ್ರೀತಿಯ ಉಡುಗೊರೆ! ಅಪ್ಪ ಅದರಲ್ಲಿ, ಮಗಳಿಗೆಂದು ತುಂಬಿ ಕೊಟ್ಟ, ಪ್ರೀತಿ, ಮಮತೆ, ಕಕ್ಕುಲತೆ ಬೆರೆತ ಹದವಾದ ಬೆಚ್ಚನೆಯ ಅಪ್ಪುಗೆ ಇತ್ತು. ಅದಕ್ಕೇ ಅದನ್ನು ಬಿಟ್ಟಿರಲು ಆಗಲಿಲ್ಲ!

ಜೀವನೋತ್ಸಾಹದಿಂದ ತುಂಬಿದ್ದು, ನೂರನೇ ವರ್ಷದಲ್ಲಿ ಅಪ್ಪ ನನ್ನನ್ನು ಬಿಟ್ಟು ಹೋದಾಗ, ನಾನು ಚಿಪ್ಪಿನೊಳಗೆ ಹುದುಗಿ ಹೋದೆ. ಮತ್ತೆ ನನ್ನನ್ನು ಹೊರ ತಂದಿದ್ದು ಕೌದಿಯ ರೂಪ ಪಡೆದಿದ್ದ ಅದೇ ತುಪ್ಪಳದ ಕಂಬಳಿ! ಚಿಕ್ಕ ಮಗ, ನಾನು ಹೊಲಿದ ಕೌದಿಯನ್ನು ಇನ್ನೂ ಹೊದೆಯುತ್ತಾನೆ. ಆ ಕೌದಿಯ ರೂಪ ಪಡೆದ, ನನ್ನಪ್ಪ ಕೊಟ್ಟ ಕಂಬಳಿ ನೋಡಿದಾಗಲೊಮ್ಮೆ ಅಜಾನುಬಾಹು ಅಪ್ಪ ನನ್ನ ಕಣ್ಣೆದುರು ಬರುತ್ತಾನೆ. ಅದನ್ನು ಎದೆಗವುಚಿ ಹಿಡಿದಾಗ ಅಪ್ಪ ತಲೆ ಮೇಲೆ ಕೈಯಾಡಿಸಿದಂತಾಗುತ್ತದೆ!

-ಜಯಶ್ರೀ ಕಜ್ಜರಿ

ಟಾಪ್ ನ್ಯೂಸ್

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

22

Ganesh Chaturthi: ಗಣೇಶ ಬಂದ

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Actor Vinayakan: ವಿಮಾನ ನಿಲ್ದಾಣದ ಸಿಬ್ಬಂದಿಗಳ ಜತೆ ವಾಗ್ವಾದ; ನಟ ವಿನಾಯಗನ್ ವಶಕ್ಕೆ

Actor Vinayakan: ವಿಮಾನ ನಿಲ್ದಾಣದ ಸಿಬ್ಬಂದಿಗಳ ಜತೆ ವಾಗ್ವಾದ; ನಟ ವಿನಾಯಗನ್ ವಶಕ್ಕೆ

17-desiswara-ganaap

Ganesh Chaturthi Special Story: ವಿಶ್ವಪೂಜಿತ ವಿನಾಯಕ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಪರೂಪದ ಅತಿಥಿ

ಅಪರೂಪದ ಅತಿಥಿ

Untitled-2

ಅವತಾರಪುರುಷ ಶ್ರೀರಾಮ

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಮಾವಿನ ಬಗ್ಗೆ ಮನದ ಮಾತು…

ಮಾವಿನ ಬಗ್ಗೆ ಮನದ ಮಾತು…

MUST WATCH

udayavani youtube

ಗಜಪಯಣಕ್ಕೆ ಚಾಲನೆ : ಕ್ಯಾಪ್ಟನ್‌ ಅಭಿಮನ್ಯು ನೇತೃತ್ವದ 9 ಆನೆಗಳ ಗಜಪಡೆ

udayavani youtube

ರಕ್ಷಾ ಬಂಧನದ ಅರ್ಥ ಮತ್ತು ಮಹತ್ವ | ರಕ್ಷಾ ಬಂಧನ 2024

udayavani youtube

ಕಡಿಮೆ ಬೆಲೆಗೆ ಫಸ್ಟ್ ಕ್ಲಾಸ್ ಬಾಳೆಎಲೆ ಊಟ

udayavani youtube

ಆ.18 ರಿಂದ ಶ್ರೀಕೃಷ್ಣ ಮಠದಲ್ಲಿ ಕ್ರೀಡೋತ್ಸವ

udayavani youtube

ತಮ್ಮ ಮಕ್ಕಳನ್ನು ಬೆಳೆಸುವ ಸಲುವಾಗಿ ಕಂಡೋರ ಮಕ್ಕಳ ಭವಿಷ್ಯ ನಾಶ. ಈ ವ್ಯವಸ್ಥೆಗೆ ನಾನೂ ಬಲಿ

ಹೊಸ ಸೇರ್ಪಡೆ

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

22

Ganesh Chaturthi: ಗಣೇಶ ಬಂದ

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.