ಆ್ಯಪಲ್‌ ಬಾರಿ ರೈತ ಬೆಳೆದ “ಭಾರಿ’


Team Udayavani, Jan 2, 2020, 1:04 PM IST

gadaga-tdy-1

ನರಗುಂದ: ಸಕಾಲಕ್ಕೆ ಮಳೆಯಿಲ್ಲದೇ ರೈತರು ಕೃಷಿಯಿಂದ ವಿಮುಖವಾಗುತ್ತಿರುವ ಬೆನ್ನಲ್ಲೇ ಇಲ್ಲೊಬ್ಬ ಯುವ ರೈತ ಬಯಲು ಸೀಮೆಗೆ ಅಪರೂಪವೆನಿಸಿದ “ಆ್ಯಪಲ್‌ ಬಾರಿ’ ಬೆಳೆದು ಕೃಷಿಕರಿಗೆ ಮಾದರಿಯಾಗಿದ್ದಾನೆ.

ತಾಲೂಕಿನ ಸಂಕದಾಳ ಗ್ರಾಮದ ಬಿಎ ಪದವೀಧರ, ಯುವ ರೈತ ರುದ್ರಗೌಡ ಹನಮಂತಗೌಡ ಲಿಂಗನಗೌಡ್ರ ಅವರು, ಗ್ರಾಮದ ಮುಳ್ಳೂರ ಒಳರಸ್ತೆಗೆ ಹೊಂದಿಕೊಂಡ ಜಮೀನಿನ 1 ಎಕರೆ ಪ್ರದೇಶದಲ್ಲಿ ಆ್ಯಪಲ್‌ ಬಾರಿ ಬೆಳೆದು ಗಮನ ಸೆಳೆದಿದ್ದಾನೆ. ಕೃಷಿಹೊಂಡದಿಂದ ಹನಿ ನೀರಾವರಿ ಮಾಡುವ ಮೂಲಕ ಬೆಳೆಗೆ ನೀರುಣಿಸಿದ್ದಾನೆ. ಶೆಗಣಿ ಗೊಬ್ಬರ(ಸಾವಯವ) ಬಳಸಿದ್ದಾನೆ. ನವಲಗುಂದ ತಾಲೂಕು ಮಣಕವಾಡದ ಚಿಕ್ಕಪ್ಪ ಬಿ.ಸಿ. ಭರಮಗೌಡ್ರ ಅವರ ಪ್ರೇರಣೆ ಹಾಗೂ ಕೃಷಿ, ತೋಟಗಾರಿಕೆ ಅಧಿಕಾರಿಗಳ ಸಲಹೆ ಪಡೆದಿರುವ ರುದ್ರಗೌಡ ಅವರು 2018ರಲ್ಲಿ ಬೆಳಗಾವಿ ಜಿಲ್ಲೆ ಕಾಗವಾಡದ ಮಿರಾಕಲ್‌ ಅಗ್ರಿ ಟೆಕ್‌ ನರ್ಸರಿಯಿಂದ 40 ರೂ.ಗೆ ಒಂದರಂತೆ 300 ಸಸಿ ತಂದು ನಾಟಿ ಮಾಡಿದ್ದಾರೆ. 40ರಿಂದ 45 ಸಾವಿರ ರೂ. ಖರ್ಚು ಮಾಡಿ ಬೆಳೆಸಿದ ಆ್ಯಪಲ್‌ ಬಾರಿ(ದೊಡ್ಡ ಗಾತ್ರದ ಹಣ್ಣು) ಒಂದೂವರೆ ವರ್ಷದಲ್ಲಿ ಉತ್ತಮ ಫಲ ತಂದು ಕೊಡುತ್ತಿದೆ.

ವಿಶಿಷ್ಟ ಗಾತ್ರದ ಹಣ್ಣು : ಪ್ರತಿ ಹಣ್ಣು 120 ಗ್ರಾಂ ತೂಕ ಹೊಂದುತ್ತದೆ. ಈ ಬಾರಿ ಹ್ಣು ಸಣ್ಣ ಸೇಬು ಮಾದರಿಯಲ್ಲಿ ಇದ್ದುದರಿಂದ “ಆ್ಯಪಲ್‌ ಬಾರಿ’ ಎಂದೇ ಕರೆಯಲಾಗುತ್ತಿದೆ. ಆರಂಭದಲ್ಲಿ ರಾಸಾಯನಿಕ ಗೊಬ್ಬರ ಬಳಸಿದ್ದರಿಂದ 100 ಸಸಿ ಕಳೆದುಕೊಂಡೆ. ಬಳಿಕ ಉಳಿದ 200 ಸಸಿ ಸೆಗಣಿ ಗೊಬ್ಬರದಿಂದಲೇ ಬೆಳೆಸಲಾಗಿದ್ದು ಎನ್ನುತ್ತಾರೆ ರುದ್ರಗೌಡರು.

ಕೃಷಿಹೊಂಡದಲ್ಲೇ ಮೀನು ಸಾಕಾಣಿಕೆ: ಕೃಷಿಯಲ್ಲಿ ಹಲವಾರು ವಿಧಗಳನ್ನು ಅಳವಡಿಸಿಕೊಂಡ ರುದ್ರಗೌಡ ಅವರು ಕೃಷಿ ಹೊಂಡದಲ್ಲಿ ಮೀನು ಸಾಕಾಣಿಕೆ ಮಾಡಿದ್ದಾರೆ.ಸವದತ್ತಿ ಮೀನುಗಾರಿಕೆ ಇಲಾಖೆ ಉಚಿತ ನೀಡಿದ ಸಾಮಾನ್ಯ ಗೆಂಡೆ ತಳಿಯ 2 ಸಾವಿರ ಮೀನು ಮರಿಗಳನ್ನು ಸಾಕಿದ್ದಾರೆ.

ಕೃಷಿ, ತೋಟಗಾರಿಕೆ ಇಲಾಖೆ ನೆರವು: ಕೃಷಿ ಇಲಾಖೆ 10 ಫ್ರುಟ್ಸ್ ಟ್ಸ್ಟ್ರ್ಯಾಪ್ , 1 ಸೋಲಾರ ಟ್ಸ್ಟ್ರ್ಯಾಪ್ , ತೋಟಗಾರಿಕೆ ಇಲಾಖೆ 2 ಲಕ್ಷ ರೂ.ಸಹಾಯ ಧನದಲ್ಲಿ ನಿರ್ಮಿಸಿದ ಪ್ಯಾಕ್‌ ಹೌಸ್‌, 86 ಸಾವಿರ ರೂ. ವೆಚ್ಚದಲ್ಲಿ ನಿರ್ಮಿಸಿದ ಈರುಳ್ಳಿ ಸಂಸ್ಕರಣಾ ಘಟಕ ರೈತನಿಗೆ ನೆರವಾಗಿದೆ. ಕೈಸೇರಿದ ಆರು ಕ್ವಿಂಟಲ್‌ ಫಸಲು :  ಈಗಾಗಲೇ ಆರೂವರೆ ಕ್ವಿಂಟಲ್‌ ಆ್ಯಪಲ್‌ ಬಾರಿ ಉತ್ಪಾದಿಸಿದ ರುದ್ರಗೌಡರು ಕ್ವಿಂಟಲ್‌ಗೆ 3 ಸಾವಿರ ರೂ. ಮೊತ್ತದಲ್ಲಿ ಲಾಭ ಗಿಟ್ಟಿಸಿದ್ದಾರೆ. ಇನ್ನೂ 5, 6 ಕ್ವಿಂಟಲ್‌ ಬಾರಿ ದೊರೆಯುವ ನಿರೀಕ್ಷೆಯಲ್ಲಿದ್ದಾರೆ.ಜತೆಗೆ 1.16 ಎಕರೆ ಹೊಲದಲ್ಲಿ ಬೆಳೆಸಿದ 330 ಪೇರಲ ಗಿಡಗಳು ಫಲ ನೀಡುವ ಹಂತಕ್ಕೆ ಬಂದಿವೆ. ಕಡಿಮೆ ಪ್ರದೇಶದಲ್ಲಿ ಲಾಭದಾಯಕ ಕೃಷಿ ಮಾಡಲು ತೋಟಗಾರಿಕೆ ಸಹಾಯಕ ನಿರ್ದೇಶಕ ಆನಂದ ನರಸನ್ನವರ, ಸಹಾಯಕ ಕೃಷಿ ನಿರ್ದೇಶಕ ಚನ್ನಪ್ಪ ಅಂಗಡಿ ಮುಂತಾದವರುಸಹಕಾರ ನೀಡಿದ್ದಾರೆಂದು ರೈತ ರುದ್ರಗೌಡ ಲಿಂಗನಗೌಡ್ರ ಸ್ಮರಿಸುತ್ತಾರೆ.

ಮಿಶ್ರ ತಳಿ ಬೆಳೆ:  ಬಾರಿ ಹಣ್ಣು ತೋಟದಲ್ಲೇ ಮಿಶ್ರತಳಿ ಬೆಳೆಸಿದ ರುದ್ರಗೌಡರು ಒಂದು ಎಕರೆ ಪ್ರದೇಶದಲ್ಲೇ 200 ನುಗ್ಗೆ, 200 ಕರಿಬೇವು, 25 ಹುಣಸಿ, 20 ಸೀತಾ ಪೇರಲ, 200 ರಕ್ತ ಚಂದನ, ಔಷಧಿಯುಕ್ತ ರಾಮಫಲ, ಲಕ್ಷ್ಮಣಫಲ, ಹನುಮಫಲ ತಲಾ 5 ಸಸಿಗಳನ್ನೂ ಬೆಳೆಸಿದ್ದಾರೆ.

ಚಿಕ್ಕಪ್ಪನ ಪ್ರೇರಣೆಯಿಂದ ಬೆಳೆದಿರುವ ಆ್ಯಪಲ್‌ ಬಾರಿಗೆ ಬೇಡಿಕೆಯಿದೆ. ಈಗಾಗಲೇ ಫಸಲು ದೊರೆಯುತ್ತಿದೆ. ಅತಿ ಕಡಿಮೆ ಪ್ರದೇಶದಲ್ಲಿ ಲಾಭದಾಯಕ ಬೆಳೆ ತೆಗೆಯುವ ಉದ್ದೇಶ ಹೊಂದಿದ್ದೇನೆ. ಕೃಷಿ, ತೋಟಗಾರಿಕೆ ಅಧಿಕಾರಿಗಳ ಸಹಕಾರ ದೊಡ್ಡದು.-ರುದ್ರಗೌಡ ಲಿಂಗನಗೌಡ್ರ, ಯುವ ರೈತ

 

-ಸಿದ್ಧಲಿಂಗಯ್ಯ ಮಣ್ಣೂರಮಠ

 

ಟಾಪ್ ನ್ಯೂಸ್

Salman Khan: 5 ಕೋಟಿ ನೀಡಿ, ಇಲ್ಲದಿದ್ದರೆ… ಸಲ್ಮಾನ್ ಖಾನ್ ಗೆ ಮತ್ತೆ ಜೀವ ಬೆದರಿಕೆ

Salman Khan: 5 ಕೋಟಿ ನೀಡಿ, ಇಲ್ಲದಿದ್ದರೆ… ಸಲ್ಮಾನ್ ಖಾನ್ ಗೆ ಮತ್ತೆ ಜೀವ ಬೆದರಿಕೆ

2-vijayapura

Vijayapura: ಗ್ರಾಮಕ್ಕೆ ನುಗ್ಗಿದ ಮೊಸಳೆ ಸೆರೆ

Jaiswal

Canada Vs India: ನಿಜ್ಜರ್‌ ಹತ್ಯೆ ಕೇಸಲ್ಲಿ ಸತ್ಯ ಒಪ್ಪಿದ ಕೆನಡಾ ಪ್ರಧಾನಿ: ಕೇಂದ್ರ ಸರಕಾರ

Bhagavath

Helping Nature: ಭಾರತ ದಾಳಿ ಮಾಡಲ್ಲ, ತನ್ನ ಮೇಲಿನ ದಾಳಿಯನ್ನೂ ಸಹಿಸಲ್ಲ: ಭಾಗವತ್‌

ಪ್ರವಾಸ ಸಂದರ್ಭ ವಿದ್ಯಾರ್ಥಿನಿಯರಿಗೆ ಉಪನ್ಯಾಸಕರಿಂದ ಮದ್ಯಪಾನ: ದೂರು

Kanakapura: ಪ್ರವಾಸ ಸಂದರ್ಭ ವಿದ್ಯಾರ್ಥಿನಿಯರಿಗೆ ಉಪನ್ಯಾಸಕರಿಂದ ಮದ್ಯಪಾನ: ದೂರು

CJI-Ind

Recommendation: ನ್ಯಾ. ಸಂಜೀವ್‌ ಖನ್ನಾ ಸುಪ್ರೀಂಕೋರ್ಟ್‌ ಮುಂದಿನ ಮುಖ್ಯ ನ್ಯಾಯಮೂರ್ತಿ

Koppal: ಚಿಕನ್‌, ಮಟನ್‌ ಸೆಂಟರ್‌ಗೆ ಸಚಿವೆ ಶೋಭಾ ಕರಂದ್ಲಾಜೆ ಹೆಸರಿಟ್ಟ ಅಭಿಮಾನಿ

Koppal: ಚಿಕನ್‌, ಮಟನ್‌ ಸೆಂಟರ್‌ಗೆ ಸಚಿವೆ ಶೋಭಾ ಕರಂದ್ಲಾಜೆ ಹೆಸರಿಟ್ಟ ಅಭಿಮಾನಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನರಗುಂದ:”ಭಾರತ ಉನ್ನತ ಸಂಸ್ಕೃತಿ ಹೊಂದಿದ ದೇಶ’

ನರಗುಂದ:”ಭಾರತ ಉನ್ನತ ಸಂಸ್ಕೃತಿ ಹೊಂದಿದ ದೇಶ’

ನರಗುಂದ: ಹೆಸರು ಕಾಳು ಖರೀದಿಗೆ ಖಾಲಿ ಚೀಲ ಕೊರತೆ!

ನರಗುಂದ: ಹೆಸರು ಕಾಳು ಖರೀದಿಗೆ ಖಾಲಿ ಚೀಲ ಕೊರತೆ!

1-eq-weq

Darshan ಅಭಿಮಾನಿಗಳಿಂದಾಗಿ ಶ್ರವಣ ಶಕ್ತಿ ಕಳೆದುಕೊಂಡೆ: ಡಾ. ಗೊ.ರು.ಚನ್ನಬಸಪ್ಪ

ಹೆತ್ತ ತಾಯಿ, ಹೊತ್ತ ಭೂಮಿ ಸ್ವರ್ಗಕ್ಕಿಂತಲೂ ಮಿಗಿಲು- ಸಿದ್ಧಲಿಂಗಯ್ಯ

ಹೆತ್ತ ತಾಯಿ, ಹೊತ್ತ ಭೂಮಿ ಸ್ವರ್ಗಕ್ಕಿಂತಲೂ ಮಿಗಿಲು- ಸಿದ್ಧಲಿಂಗಯ್ಯ

ಲಿಂ. ಡಾ. ತೋಂಟದ ಸಿದ್ಧಲಿಂಗ ಸ್ವಾಮೀಜಿ 6ನೇ ಪುಣ್ಯಸ್ಮರಣೆ; ಮರಣವೇ ಮಹಾನವಮಿ ಆಚರಣೆ

Gadag; ಲಿಂ. ಡಾ. ತೋಂಟದ ಸಿದ್ಧಲಿಂಗ ಸ್ವಾಮೀಜಿ 6ನೇ ಪುಣ್ಯಸ್ಮರಣೆ; ಮರಣವೇ ಮಹಾನವಮಿ ಆಚರಣೆ

MUST WATCH

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

udayavani youtube

ಅಗಲಿದ ರತನ್ ಟಾಟಾಗೆ ಶ್ರದ್ಧಾಂಜಲಿ ಸಲ್ಲಿಸಿದ ಅಂಬಾನಿ ಕುಟುಂಬ

udayavani youtube

ಮಕ್ಕಳ ಸ್ಕ್ರೀನ್ ಟೈಮಿಂಗ್ ಕುರಿತು ಎಚ್ಚರಿಕೆ ಅತ್ಯವಶ್ಯಕ.. ಇಲ್ಲಿದೆ ಅಗತ್ಯ ಮಾಹಿತಿ

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

ಹೊಸ ಸೇರ್ಪಡೆ

Salman Khan: 5 ಕೋಟಿ ನೀಡಿ, ಇಲ್ಲದಿದ್ದರೆ… ಸಲ್ಮಾನ್ ಖಾನ್ ಗೆ ಮತ್ತೆ ಜೀವ ಬೆದರಿಕೆ

Salman Khan: 5 ಕೋಟಿ ನೀಡಿ, ಇಲ್ಲದಿದ್ದರೆ… ಸಲ್ಮಾನ್ ಖಾನ್ ಗೆ ಮತ್ತೆ ಜೀವ ಬೆದರಿಕೆ

2-vijayapura

Vijayapura: ಗ್ರಾಮಕ್ಕೆ ನುಗ್ಗಿದ ಮೊಸಳೆ ಸೆರೆ

Jaiswal

Canada Vs India: ನಿಜ್ಜರ್‌ ಹತ್ಯೆ ಕೇಸಲ್ಲಿ ಸತ್ಯ ಒಪ್ಪಿದ ಕೆನಡಾ ಪ್ರಧಾನಿ: ಕೇಂದ್ರ ಸರಕಾರ

Bhagavath

Helping Nature: ಭಾರತ ದಾಳಿ ಮಾಡಲ್ಲ, ತನ್ನ ಮೇಲಿನ ದಾಳಿಯನ್ನೂ ಸಹಿಸಲ್ಲ: ಭಾಗವತ್‌

ಪ್ರವಾಸ ಸಂದರ್ಭ ವಿದ್ಯಾರ್ಥಿನಿಯರಿಗೆ ಉಪನ್ಯಾಸಕರಿಂದ ಮದ್ಯಪಾನ: ದೂರು

Kanakapura: ಪ್ರವಾಸ ಸಂದರ್ಭ ವಿದ್ಯಾರ್ಥಿನಿಯರಿಗೆ ಉಪನ್ಯಾಸಕರಿಂದ ಮದ್ಯಪಾನ: ದೂರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.