ಕನಸಿನೂರಿಗೆ ಪಯಣ


Team Udayavani, Jan 3, 2020, 4:35 AM IST

1

ಸಾಂದರ್ಭಿಕ ಚಿತ್ರ

ಪ್ರವಾಸ ಹೋಗಲಿಕ್ಕಿದೆ ಅಂತ ಹೇಳಿದರೆ ಸಾಕು; ಯಾವ ಸ್ಥಳಕ್ಕೆ, ಎಷ್ಟು ದಿನ, ಎಷ್ಟು ಖರ್ಚು ಅಂತ ಶಿಕ್ಷಕರೊಂದಿಗೆ ವಿದ್ಯಾರ್ಥಿಗಳೂ ತಲೆಕೆಡಿಸಿಕೊಳ್ಳುವುದಕ್ಕೆ ಶುರು ಮಾಡುತ್ತಾರೆ. ನಮ್ಮ ಕಾಲೇಜಿನಲ್ಲೂ “ಪ್ರವಾಸ’ಕ್ಕೆ ಹೋಗಲಿಕ್ಕಿದೆ ಅಂತ ತೀರ್ಮಾನ ಮಾಡಿದ ಮೇಲೆ, ಒಂದಷ್ಟು ಚರ್ಚೆಗಳಾದ ಮೇಲೆ ದೆಹಲಿ, ಜೈಪುರ, ಆಗ್ರಾಗಳಿಗೆ ಪ್ರವಾಸ ಹೋಗುವುದು ಅಂತ ತೀರ್ಮಾನಕ್ಕೆ ಬರಲಾಯಿತು. ಅದೂ ನನ್ನ‌ ಕನಸಿನಂಥ ಊರಿಗೆ ಪಯಣ ಬೆಳೆಸುವ ಪ್ರವಾಸ ಅಂದ್ರೆ ಕೇಳಬೇಕೆ? ಅಲ್ಲಿ ಏನೆಲ್ಲಾ ನೋಡೋಕಿದೆ, ಯಾವಾಗ ಹೊರಡೋದು ಹೀಗೆ ಉಪನ್ಯಾಸಕರ ತಲೆ ತಿನ್ನುವುದಕ್ಕೆ ಶುರು ಮಾಡಿದೆವು.

ಮೊದಲೇ ಇವೆಲ್ಲಾ ಸೂಪರ್‌ ಆಗಿರೋ ಸ್ಥಳಗಳು. ನಮ್ಮ ಕಾಟ ತಡೆಯಲಾರದೆ ಪ್ರಾಧ್ಯಾಪಕರು ಒಂದಷ್ಟು ಸ್ಥಳಗಳ ಪಟ್ಟಿ ಕೊಟ್ಟರು. ಅದರಲ್ಲಿ ಆಗ್ರಾದ ತಾಜ್‌ಮಹಲ್‌ ಕೂಡ ಇದ್ದದ್ದನ್ನು ನೋಡಿ ನಮಗಂತೂ ತುಂಬಾ ಖುಷಿ. “ರೈಲಿನಲ್ಲಿ ಎರಡು ದಿನದ ಪ್ರಯಾಣವಿದೆ’ ಎಂದು ಹೇಳಿದಾಗ ಸ್ವಲ್ಪ ತಲೆಬಿಸಿ ಆಯಿತು. ಆದರೆ, ಅದನ್ನೆಲ್ಲ ಬದಿಗಿಟ್ಟು ಪ್ರವಾಸದ ದಿನ ಬರೋವರೆಗೂ ಕನಸು ಕಾಣುತ್ತಾ ಕೂತೆವು.

ಅಂತೂ ಇಂತೂ ಪ್ರವಾಸದ ದಿನ ಬಂದೇ ಬಿಟ್ಟಿತು. ಗಂಟುಮೂಟೆ ಎಲ್ಲಾ ಹಿಡ್ಕೊಂಡು ನಾವು ರೈಲಿನಲ್ಲಿ ಹೊರಟೆವು. “ಹೇಗಪ್ಪಾ ರೈಲಿನಲ್ಲಿ ಎರಡು ದಿನ ಪ್ರಯಾಣ ಮಾಡೋದು ಅಂತ ಅಂದುಕೊಂಡಿದ್ದ ನಾವು ರೈಲಿನಲ್ಲಿ ಕೂತು ಒಂದಷ್ಟು ದೂರ ಹೋದ ಮೇಲೆ ಗೊತ್ತಾದದ್ದು ರೈಲಿನ ಪ್ರಯಾಣ ಎಷ್ಟು ಮಜಾ ಕೊಡುತ್ತದೆ ಅಂತ! ಸುಂದರ ಪರಿಸರ, ಸುರಂಗ ಮಾರ್ಗಗಳು, ಬೆಟ್ಟಗುಡ್ಡಗಳು… ಹೀಗೆ ಇವೆಲ್ಲವನ್ನು ನೋಡುವ ಸದವಕಾಶ ರೈಲಿನಲ್ಲಿ ಪ್ರಯಾಣ ಮಾಡುವಾಗ ಮಾತ್ರ ಸಿಗುವಂತಹ ಅಪೂರ್ವವಾದ ದೃಶ್ಯಗಳು.

ಪ್ರಕೃತಿಯ ಒಳಹೊಕ್ಕು ಪ್ರಯಾಣ ಬೆಳೆಸುವ ಅನುಭವ ಸಿಗುವುದರಲ್ಲಿ ಎರಡು ಮಾತಿಲ್ಲ. ಹೀಗೆ ಒಂದೆರಡು ದಿನದ ರೈಲಿನ ಪ್ರಯಾಣ ಮುಗಿದು ಹೊಟೇಲ್‌ನತ್ತ ನಮ್ಮ ಪ್ರಯಾಣ ಸಾಗಿತು. ಅಲ್ಲಿ ಸ್ವಲ್ಪ ಹೊತ್ತು ವಿಶ್ರಾಂತಿ ಪಡೆದು, ನಂತರ ದೆಹಲಿಯತ್ತ ನಮ್ಮ ಪಯಣ ಆರಂಭವಾಯಿತು. ದೆಹಲಿಯ ಕೆಂಪುಕೋಟೆ, ಇಂಡಿಯಾಗೇಟ್‌, ಕುತುಬ್‌ಮಿನಾರ್‌ನಂತಹ ಅಪರೂಪದ ಸ್ಥಳಗಳನ್ನು ನೋಡಿ ನಮಗೆ ಅಚ್ಚರಿಯುಂಟಾಯಿತು. ಮಾರನೆಯ ದಿನ ವಿಶ್ವದ ಏಳು ಅದ್ಭುತಗಳಲ್ಲಿ ಒಂದಾದ ಆಗ್ರಾದ ತಾಜ್‌ಮಹಲ್‌ನ್ನು ನೋಡಿ ಕಣ್ಣುಗಳಿಗೆ ಹಬ್ಬವುಂಟಾಯಿತು. ಮನಸ್ಸಿಗೆ ರೋಮಾಂಚನವೂ ಆಯಿತು. ಅಲ್ಲಿ ಸೆಲ್ಫಿ ಕ್ಲಿಕ್ಕಿಸಿಕೊಂಡು, ತಾಜ್‌ಮಹಲ್‌ನ ಸೌಂದರ್ಯವನ್ನು ಸವಿದುಕೊಂಡು, ಅಲ್ಲಿಂದ ಮನಸ್ಸಿಲ್ಲದ ಮನಸ್ಸಿನಿಂದ ಹೊರಟೆವು. “ಬಂದೂ ಆಯಿತು. ಹೋಗಿಯೂ ಆಯಿತು’ ಎಂಬಂತೆ ಕೊನೆಯ ದಿನ ಜೈಪುರದಲ್ಲಿರುವ ಅರಮನೆಯನ್ನು ನೋಡಿದೆವು.

“ಪ್ರವಾಸ’ ಅನ್ನುವುದು ಕೇವಲ ಸ್ಥಳಗಳ ಭೇಟಿಯಲ್ಲ. ಸ್ನೇಹದ ಕೊಂಡಿಯನ್ನು ಇನ್ನಷ್ಟು ಬಿಗಿಗೊಳಿಸುವ, ಅಪೂರ್ವ ಕ್ಷಣವನ್ನು ಸೃಷ್ಟಿಸುವ, ಸಂತೋಷದ ಸವಿ ಪಯಣ.

ವಾಣಿ ಕಿನ್ನಿಗೋಳಿ
ಸರಕಾರಿ ಶಿಕ್ಷಣ ಮಹಾವಿದ್ಯಾಲಯ, ಮಂಗಳೂರು

ಟಾಪ್ ನ್ಯೂಸ್

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

22

Ganesh Chaturthi: ಗಣೇಶ ಬಂದ

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Actor Vinayakan: ವಿಮಾನ ನಿಲ್ದಾಣದ ಸಿಬ್ಬಂದಿಗಳ ಜತೆ ವಾಗ್ವಾದ; ನಟ ವಿನಾಯಗನ್ ವಶಕ್ಕೆ

Actor Vinayakan: ವಿಮಾನ ನಿಲ್ದಾಣದ ಸಿಬ್ಬಂದಿಗಳ ಜತೆ ವಾಗ್ವಾದ; ನಟ ವಿನಾಯಗನ್ ವಶಕ್ಕೆ

17-desiswara-ganaap

Ganesh Chaturthi Special Story: ವಿಶ್ವಪೂಜಿತ ವಿನಾಯಕ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

tdy-19

Great Indian Hornbill:‌ ನಿಸರ್ಗದ ನಡುವೆ ಬಣ್ಣದ ಚಿತ್ತಾರ

ಇಂಗ್ಲಿಷ್‌ ಪದಕತೆ: ಅಧ್ಯಯನ

ಇಂಗ್ಲಿಷ್‌ ಪದಕತೆ: ಅಧ್ಯಯನ

bags

ಕರೋಲ್‌ಬಾಗ್‌ನ ಚೌಕಾಸಿ ಲೋಕ

ಬಾಲ್ಯವೇ ಮರಳಿ ಬಾ

ಬಾಲ್ಯವೇ ಮರಳಿ ಬಾ

Chukubuku-train

ಚುಕುಬುಕು ಟ್ರೇನ್‌ ಏರಿದಾಗ…

MUST WATCH

udayavani youtube

ಗಜಪಯಣಕ್ಕೆ ಚಾಲನೆ : ಕ್ಯಾಪ್ಟನ್‌ ಅಭಿಮನ್ಯು ನೇತೃತ್ವದ 9 ಆನೆಗಳ ಗಜಪಡೆ

udayavani youtube

ರಕ್ಷಾ ಬಂಧನದ ಅರ್ಥ ಮತ್ತು ಮಹತ್ವ | ರಕ್ಷಾ ಬಂಧನ 2024

udayavani youtube

ಕಡಿಮೆ ಬೆಲೆಗೆ ಫಸ್ಟ್ ಕ್ಲಾಸ್ ಬಾಳೆಎಲೆ ಊಟ

udayavani youtube

ಆ.18 ರಿಂದ ಶ್ರೀಕೃಷ್ಣ ಮಠದಲ್ಲಿ ಕ್ರೀಡೋತ್ಸವ

udayavani youtube

ತಮ್ಮ ಮಕ್ಕಳನ್ನು ಬೆಳೆಸುವ ಸಲುವಾಗಿ ಕಂಡೋರ ಮಕ್ಕಳ ಭವಿಷ್ಯ ನಾಶ. ಈ ವ್ಯವಸ್ಥೆಗೆ ನಾನೂ ಬಲಿ

ಹೊಸ ಸೇರ್ಪಡೆ

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

22

Ganesh Chaturthi: ಗಣೇಶ ಬಂದ

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.