ಹೆಣ್ಣು ಮತ್ತು ಸ್ವಾಭಿಮಾನದ ಪ್ರಶ್ನೆ


Team Udayavani, Jan 3, 2020, 4:41 AM IST

2

ಹೆಣ್ಣು ಅಂದಾಕ್ಷಣ ಎಲ್ಲರ ಮಾತಿನಲ್ಲೂ- ಹೆಣ್ಣುಮಗಳು ದೇವತೆ, ತಾಯಿಗೆ ಸಮಾನ, ಮಾತೆ, ಅವಳನ್ನು ಗೌರವದಿಂದ ಕಾಣಬೇಕು, ಅವಳಿಗೆ ರಕ್ಷಣೆ ನೀಡಬೇಕು, ಅವಳಿಗೆ ಅವಳ ಬದುಕು ಕಟ್ಟಲು ಸ್ವಾತಂತ್ರ್ಯ ಇರಬೇಕು, ಗಂಡಿನಂತೆ ಅವಳಿಗೂ ಎಲ್ಲ ಸಮಯದಲ್ಲೂ ಗೌರವ, ಸಮಾನತೆ ಇರಬೇಕು ಎಂದು.

ಆದರೆ, ಈ ಪದಗಳು ಕೇವಲ ಹೇಳಲು ಮತ್ತು ಬರೆಯಲು ಮಾತ್ರ. ಹೆಣ್ಣಿಗೆ ಈ ಆಧುನಿಕ ಕಾಲದಲ್ಲೂ ಸ್ವಾತಂತ್ರ್ಯವಾಗಲಿ, ಗೌರವವಾಗಲಿ ಮತ್ತು ಸಮಾನತೆಯಾಗಲಿ ಸಿಗುತ್ತಿಲ್ಲ. ಅವಳು ತನ್ನ ದೈನಂದಿನ ಜೀವನದಲ್ಲಿ ಎಷ್ಟೋ ರೀತಿಯ ನೋವು-ಕಷ್ಟಗಳನ್ನು ಎದುರಿಸುತ್ತಿದ್ದಾಳೆ. ತನಗೆ ಎಷ್ಟೇ ಕಷ್ಟಗಳು ಬಂದರೂ ಧೈರ್ಯಗೆಡದೇ ಎದೆಗುಂದದೆ ಮುಂದುವರಿಯುತ್ತಿದ್ದಾಳೆ. ಎಷ್ಟೋ ಜನರು ಪ್ರತಿಪಾದಿಸುತ್ತಾರೆ- ಹೆಣ್ಣು ಈಗ ಬಲಶಾಲಿ, ಈಗಿನ ಕಾಲದಲ್ಲಿ ಅವಳು ಏನು ಹೇಳಿದರೂ, ಏನು ಮಾಡಿದರೂ ನಡೆಯುತ್ತದೆ. ಹೆಣ್ಣು ಈಗ ಗಂಡಸಿಗಿಂತ ಎಲ್ಲಾ ಕ್ಷೇತ್ರದಲ್ಲಿ ಮುಂದಿದ್ದಾಳೆ ಎಂದು. ಆದರೆ, ಇತ್ತೀಚಿನ ಕೆಲವು ಪ್ರಕರಣಗಳನ್ನು ನೋಡಿ ನಾವು, “ಹೆಣ್ಣುಮಕ್ಕಳಿಗೆ ನ್ಯಾಯ ಕೊಡಿ’ ಎಂದು ಅಂಗಲಾಚಿ ಬೇಡುತ್ತಿದ್ದೇವೆ ಮತ್ತು ಇಂತಹ ಪ್ರಕರಣಗಳು ಮುಂದೆ ನಡೆಯಬಾರದು ಎಂದು ಪ್ರತಿಭಟನೆ ಕೂಡ ಮಾಡುತ್ತಿದ್ದೇವೆ. ಹೆಣ್ಣುಮಕ್ಕಳು ಎಲ್ಲ ಕ್ಷೇತ್ರದಲ್ಲೂ ಗಂಡಸಿಗಿಂತ ಮುಂದುವರಿದಿರಬಹುದು. ಆದರೆ, ಆ ಕ್ಷೇತ್ರವನ್ನು ತಲುಪಬೇಕಾದರೆ ಅವರು ಎಷ್ಟು ಕಷ್ಟಗಳನ್ನು ಎದುರಿಸಿದ್ದಾರೆ ಎನ್ನುವುದು ಆ ಹೆಣ್ಣುಮಕ್ಕಳಿಗೆ ಮಾತ್ರ ಗೊತ್ತು.

ಹೆಣ್ಣನ್ನು ದೈವೀಸ್ವರೂಪ ಎನ್ನುತ್ತಾರೆ. ಹೆಣ್ಣು ಕೆರಳಿದರೆ ರಣಚಂಡಿಯಾಗುತ್ತಾಳೆ ಎನ್ನುತ್ತಾರೆ. ಆದರೆ, ಆ ಹೆಣ್ಣು ಕೆಲವು ಕಾಮುಕರ ಮುಂದೆ ರಣಚಂಡಿಯಾದರೂ ಅವರ ಕಾಮುತಕನದ ಮುಂದೆ ಸೋತು ಹೋಗುತ್ತಾಳೆ. ಮೊದಲಿನ ಕಾಲದಲ್ಲಿ ಹೆಣ್ಣುಮಗುವೆಂದು ಗೊತ್ತಾದರೆ ಸಾಕು, ಅದನ್ನು ಭ್ರೂಣದಲ್ಲಿಯೇ ಕೊಂದುಹಾಕುತ್ತಿದ್ದರು. ಆದರೆ, ಈಗ ಇದರ ಪ್ರಮಾಣ ಕಡಿಮೆಯಾಗಿದೆ. ಹೆಣ್ಣು ಮಗುವನ್ನು ಬೆಳೆಸಬೇಕಾದರೆ ಎಷ್ಟು ಕಷ್ಟಗಳನ್ನು ಎದುರಿಸಬೇಕು ಎನ್ನುವುದು ಹೆಣ್ಣು ಹೆತ್ತವರಿಗಷ್ಟೇ ಗೊತ್ತು. ಹಾಗಂತ ಗಂಡುಮಗುವನ್ನು ಬೆಳೆಸುವುದು ಕೂಡ ಸುಲಭವಲ್ಲ. ತಮ್ಮ ಕಣ್ಣ ಮುಂದೆ ತಾವು ಪ್ರೀತಿಯಿಂದ ಬೆಳೆಸಿದ ಮಗಳನ್ನು ಕಾಮುಕತನದಿಂದ ಸಾಯಿಸಿದ ಸುದ್ದಿ ಕೇಳಿ ಆ ಹೆತ್ತ ಕರುಳಿಗೆ ಹೇಗಾಗಬಹುದು ಒಮ್ಮೆ ಯೋಚಿಸಿ?

“ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ’- ಇದು ಎಲ್ಲಾ ಶಾಲೆಯಲ್ಲೂ ನೇತುಹಾಕಿರುವ ಬೋರ್ಡು. ಒಂದು ಹೆಣ್ಣು ಮಗು ಕಲಿತು ತನ್ನ ಕ್ಷೇತ್ರದಲ್ಲಿ ಮುಂದುವರಿದರೆ ಅವಳು ಉಳಿದ ಹೆಣ್ಣು ಮಕ್ಕಳಿಗೆ ಸ್ಫೂರ್ತಿಯಾಗುತ್ತಾಳೆ. ಆದರೆ, ಕೆಲವು ಹೆಣ್ಣುಮಕ್ಕಳಿಗೆ ವಿದ್ಯೆ-ಬುದ್ಧಿಯ ಬದಲು ನೋವಿನ ಪಾಠವನ್ನು ಕಲಿಯುವ ಜಾಗ ಆ ಶಾಲೆ ಆಗುತ್ತದೆ. ಅಂದರೆ, ರಕ್ಷಣೆ ಸಿಗಬೇಕಾದ ಜಾಗದಲ್ಲಿ ರಕ್ಷಣೆ ಸಿಗುವುದಿಲ್ಲ. ಶಾಲೆಯಲ್ಲಿ ಬಿಡಿ ತಮ್ಮ ಮನೆಯಲ್ಲಿಯೇ ರಕ್ಷಣೆ ಸಿಗದೇ ಎಷ್ಟೋ ಹೆಣ್ಣು ಮಕ್ಕಳು ತಮ್ಮ ಜೀವನವನ್ನು ಬಿಟ್ಟಿದ್ದಾರೆ. ತಮಗೆ ಎಲ್ಲಿ ರಕ್ಷಣೆ ಸಿಗುತ್ತದೆ ಎಂದು ಭಾವಿಸಿರುತ್ತಾರೋ ಅಲ್ಲಿಯೇ ಅವರಿಗೆ ರಕ್ಷಣೆ ಇಲ್ಲದಿದ್ದರೆ ಜೀವನವನ್ನು ನಡೆಸುವುದಾದರೂ ಹೇಗೆ? ನಮ್ಮ ದೇಶದಲ್ಲಿಯೇ ನಮಗೆ ರಕ್ಷಣೆ ಇಲ್ಲದಿರುವಾಗ ನಾವು ಬದುಕುವುದು ಹೇಗೆ?

ಸುಶ್ಮಿತಾ ಶೆಟ್ಟಿ ಪೆರುವಾಯಿ
ಪ್ರಥಮ ಬಿ. ಕಾಂ., ಶ್ರೀರಾಮ ಪ್ರಥಮ ದರ್ಜೆ ಕಾಲೇಜು, ಕಲ್ಲಡ್ಕ

ಟಾಪ್ ನ್ಯೂಸ್

18

Ganesh Chaturthi: ಸ್ವರ್ಣ ಗೌರಿ ಮತ್ತು ವಿಘ್ನ ವಿನಾಯಕನಿಗೊಂದು ನಮನ

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

22

Ganesh Chaturthi: ಗಣೇಶ ಬಂದ

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Actor Vinayakan: ವಿಮಾನ ನಿಲ್ದಾಣದ ಸಿಬ್ಬಂದಿಗಳ ಜತೆ ವಾಗ್ವಾದ; ನಟ ವಿನಾಯಗನ್ ವಶಕ್ಕೆ

Actor Vinayakan: ವಿಮಾನ ನಿಲ್ದಾಣದ ಸಿಬ್ಬಂದಿಗಳ ಜತೆ ವಾಗ್ವಾದ; ನಟ ವಿನಾಯಗನ್ ವಶಕ್ಕೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

tdy-19

Great Indian Hornbill:‌ ನಿಸರ್ಗದ ನಡುವೆ ಬಣ್ಣದ ಚಿತ್ತಾರ

ಇಂಗ್ಲಿಷ್‌ ಪದಕತೆ: ಅಧ್ಯಯನ

ಇಂಗ್ಲಿಷ್‌ ಪದಕತೆ: ಅಧ್ಯಯನ

bags

ಕರೋಲ್‌ಬಾಗ್‌ನ ಚೌಕಾಸಿ ಲೋಕ

ಬಾಲ್ಯವೇ ಮರಳಿ ಬಾ

ಬಾಲ್ಯವೇ ಮರಳಿ ಬಾ

Chukubuku-train

ಚುಕುಬುಕು ಟ್ರೇನ್‌ ಏರಿದಾಗ…

MUST WATCH

udayavani youtube

ಗಜಪಯಣಕ್ಕೆ ಚಾಲನೆ : ಕ್ಯಾಪ್ಟನ್‌ ಅಭಿಮನ್ಯು ನೇತೃತ್ವದ 9 ಆನೆಗಳ ಗಜಪಡೆ

udayavani youtube

ರಕ್ಷಾ ಬಂಧನದ ಅರ್ಥ ಮತ್ತು ಮಹತ್ವ | ರಕ್ಷಾ ಬಂಧನ 2024

udayavani youtube

ಕಡಿಮೆ ಬೆಲೆಗೆ ಫಸ್ಟ್ ಕ್ಲಾಸ್ ಬಾಳೆಎಲೆ ಊಟ

udayavani youtube

ಆ.18 ರಿಂದ ಶ್ರೀಕೃಷ್ಣ ಮಠದಲ್ಲಿ ಕ್ರೀಡೋತ್ಸವ

udayavani youtube

ತಮ್ಮ ಮಕ್ಕಳನ್ನು ಬೆಳೆಸುವ ಸಲುವಾಗಿ ಕಂಡೋರ ಮಕ್ಕಳ ಭವಿಷ್ಯ ನಾಶ. ಈ ವ್ಯವಸ್ಥೆಗೆ ನಾನೂ ಬಲಿ

ಹೊಸ ಸೇರ್ಪಡೆ

18

Ganesh Chaturthi: ಸ್ವರ್ಣ ಗೌರಿ ಮತ್ತು ವಿಘ್ನ ವಿನಾಯಕನಿಗೊಂದು ನಮನ

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

22

Ganesh Chaturthi: ಗಣೇಶ ಬಂದ

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.