ಇವ್ರೆಲ್ಲಾ ಯಾರ್ ಮಗ

ರೀಲ್‌, ರಿಯಲ್‌ ಮತ್ತು ರೌಡಿಸಂ

Team Udayavani, Jan 3, 2020, 5:30 AM IST

24

“ತನ್ವೀರ್‌, ಇಸ್ತಾಕ್‌ ಪೈಲ್ವಾನ್‌ ಹಾಗೂ ಕುಟ್ಟಿರಾಜು…’

-ಇವರು ಶಿವಾಜಿನಗರದ ಒಂದು ಕಾಲದ ರಿಯಲ್‌ ರೌಡಿಗಳು! ಅರೇ, ಇವರ ಬಗ್ಗೆ ಇಲ್ಲೇಕೆ ಸುದ್ದಿ ಎಂಬ ಸಣ್ಣದ್ದೊಂದು ಪ್ರಶ್ನೆಗೆ ಉತ್ತರ, “ಯಾರ್‌ ಮಗ’ ಚಿತ್ರ. ಹೌದು, ಇತ್ತೀಚೆಗೆ ಚಿತ್ರಕ್ಕೆ ಮುಹೂರ್ತ ನೆರವೇರಿದೆ. ಈ ಚಿತ್ರದಲ್ಲಿ ರಿಯಲ್‌ ರೌಡಿಗಳು ಬಣ್ಣ ಹಚ್ಚುತ್ತಿದ್ದಾರೆ. ರಿಯಲ್‌ ರೌಡಿಗಳು ಸಿನಿಮಾದಲ್ಲಿ ಕಾಣಿಸಿಕೊಂಡಿರುವುದು ಹೊಸದೇನಲ್ಲ. ಈ ಹಿಂದೆ “ಓಂ’, “ಕರಿಯ’ ಸೇರಿದಂತೆ ಹಲವು ಕನ್ನಡ ಚಿತ್ರಗಳಲ್ಲಿ ರಿಯಲ್‌ ರೌಡಿಗಳು ನಟಿಸಿರುವುದುಂಟು. ಈ ಚಿತ್ರದ ಕಥೆ 1995 ರಿಂದ 2000ರವರೆಗೆ ನಡೆಯುವ ರೌಡಿಸಂ ಕಥೆ ಆಗಿದ್ದರಿಂದ ಸನ್ನಿವೇಶಗಳು ಕೂಡ ನೈಜವಾಗಿಯೇ ಕಾಣಬೇಕೆಂಬ ಕಾರಣಕ್ಕೆ, ಇವರನ್ನು ಒಪ್ಪಿಸಿ ಸಿನಿಮಾದಲ್ಲಿ ನಟಿಸುವಂತೆ ಮಾಡಲಾಗಿದೆ.

ಅಂದಹಾಗೆ, ಚಿತ್ರಕ್ಕೆ ಸುರೇಶ್‌ ರಾಜು ನಿರ್ದೇಶಕರು. ಕಥೆ ಬಗ್ಗೆ ಹೇಳುವ ಅವರು, “ಎಲ್ಲಾ ಇದ್ದವರು ಕೆಟ್ಟ ದಾರಿ ಹಿಡಿಯುತ್ತಾರೆ. ಯಾರ ಮನೆಯಲ್ಲೂ ಕೂಡ ಇಂತಹ ಘಟನೆಗಳು ನಡೆಯಬಾರದು. ಸಿನಿಮಾ ನೋಡುಗರಿಗೆ ಅದು ನಮ್ಮ ಏರಿಯಾದಲ್ಲೇ ನಡೆದ ಘಟನೆ ಎಂಬಂತಹ ಅನುಭವ ಆಗುತ್ತೆ. ಅಂಥದ್ದೊಂದು ಕಥೆ ಚಿತ್ರದಲ್ಲಿದೆ. ಶೇ. 50ರಷ್ಟು ನೈಜ ಘಟನೆಗಳು ಸ್ಫೂರ್ತಿಯಾಗಿವೆ. ಮುಂಬೈ, ಮಂಗಳೂರು, ಬೆಂಗಳೂರು ಸುತ್ತ ಮುತ್ತ ಚಿತ್ರೀಕರಣ ನಡೆಯಲಿದೆ. ಬಹುತೇಕ ಶಿವಾಜಿನಗರದಲ್ಲೂ ಚಿತ್ರೀಕರಿಸುವ ಯೋಚನೆ ಇದೆ’ ಎಂದು ವಿವರ ಕೊಡುತ್ತಾರೆ ನಿರ್ದೇಶಕ ಸುರೇಶ್‌ ರಾಜು.

ಚಿತ್ರಕ್ಕೆ ರಘು ಪಡಕೋಟೆ ಹೀರೋ. ಚಿತ್ರಕ್ಕೆ ಕಥೆ ಕೂಡ ಬರೆದಿದ್ದಾರೆ. ಅವರಿಲ್ಲಿ ಒರಟನಾಗಿ, ಡ್ರಗ್ಸ್‌ ವ್ಯಸನಿಯಾಗಿ ರಗಡ್‌ ಲುಕ್‌ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಕೊನೆಯಲ್ಲಿ ಎಲ್ಲವನ್ನೂ ಬಿಟ್ಟು, ಒಳ್ಳೆಯವನಾಗಿ ಸಮಾಜದ ಕಣ್ಣಿಗೆ ಉತ್ತಮ ಪ್ರಜೆ ಎನಿಸಿಕೊಳ್ಳುವ ವ್ಯಕ್ತಿಯಾಗಿ ಬದಲಾಗುವಂತಹ ಪಾತ್ರ ಮಾಡಿದ್ದಾರಂತೆ. ಇನ್ನು, ನಾಯಕ ರಘು ಪಡಕೋಟೆ ಅವರಿಗೆ ವಿದ್ಯಾ ಪ್ರಭು ನಾಯಕಿ. ಮಂಗಳೂರು ಮೂಲದ ವಿದ್ಯಾಪ್ರಭು, ಮಾಡೆಲ್‌ ಕ್ಷೇತ್ರದಿಂದ ಸಿನಿಮಾ ರಂಗಕ್ಕೆ ಎಂಟ್ರಿಯಾಗಿದ್ದಾರೆ. ನಾಯಕನ ಪ್ರೀತಿಗೆ ಬಿದ್ದಾಗ, ಮುಂದೆ ಆಗುವಂತಹ ಅನಾಹುತದಿಂದ ಹೇಗೆಲ್ಲಾ ಚಡಪಡಿಸುತ್ತಾಳೆ ಎಂಬ ಪಾತ್ರ ನಿರ್ವಹಿಸಲಿದ್ದಾರೆ ವಿದ್ಯಾ ಪ್ರಭು. ಬಲರಾಜ್‌ ವಾಡಿ ಚಿತ್ರದ ನಾಯಕನನ್ನು ಸಾಕುಮಗನಂತೆ ಬೆಳಸಿ, ಅವನನ್ನು ದುರುಪಯೋಗ ಪಡಿಸಿಕೊಳ್ಳುವ ದಾದಾ ಪಾತ್ರ ಮಾಡುತ್ತಿದ್ದಾರೆ. “ಕಾಕ್ರೋಚ್‌’ ಖ್ಯಾತಿಯ ಸುಧೀರ್‌ ಖಳನಟನಾಗಿ ಅಬ್ಬರಿಸಲಿದ್ದಾರೆ. ಗಣೇಶ್‌ ರಾವ್‌ ಪೊಲೀಸ್‌ ಅಧಿಕಾರಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ.

ಚಿತ್ರದಲ್ಲಿ ಐದು ಹಾಡುಗಳಿರಲಿದ್ದು, ಐವರು ಸಂಗೀತ ನಿರ್ದೇಶಕರಿಂದ ಒಂದೊಂದು ಹಾಡನ್ನು ಸಂಯೋಜಿಸಿಕೊಳ್ಳುವ ಯೋಚನೆ ಚಿತ್ರತಂಡಕ್ಕಿದೆ. ಚಿತ್ರಕ್ಕೆ ಬಸವರಾಜ್‌ ಪಡಕೋಟೆ ನಿರ್ಮಾಪಕರು. ರಾಯಚೂರು ಮೂಲದ ಬಸವರಾಜ್‌ ಪಡಕೋಟೆ, ಯೌವ್ವನದಲ್ಲಿದ್ದಾಗ ಅವರು ಹೀರೋ ಆಗಬೇಕು ಅಂತ ಬಯಸಿದ್ದವರು. ಆದರೆ, ಆ ಆಸೆ ಈಡೇರಲಿಲ್ಲ. ಕೊನೆಗೆ ಡಾ.ರಾಜಕುಮಾರ್‌ ಅಭಿಮಾನಿಯಾಗಿದ್ದ ಅವರು, ಬೆಂಗಳೂರಿಗೆ ಬಂದು, ಇಲ್ಲೊಂದು ಕನ್ನಡ ಸಂಘ ಕಟ್ಟಿ ಈಗ ತಮ್ಮ ಪುತ್ರ ರಘು ಪಡಕೋಟೆ ಅವರನ್ನು ಹೀರೋ ಮಾಡುವ ಮೂಲಕ ತಮ್ಮ ಆಸೆ ಈಡೇರಿಸಿಕೊಂಡಿದ್ದಾರೆ. ಚಿತ್ರದಲ್ಲಿ ತಾರಾ, ಮಾಲತಿ, ಅಶ್ವಿ‌ನಿಗೌಡ, ಪ್ರಶಾಂತ್‌ ಸಿದ್ದಿ, ಗುರುರಾಜ ಹೊಸಕೋಟೆ ಸೇರಿದಂತೆ ಹಲವರು ನಟಿಸುತ್ತಿದ್ದಾರೆ. ಸಿ.ಎಸ್‌. ಸತೀಶ್‌ ಅವರ ಛಾಯಾಗ್ರಹಣವಿದೆ. ಸುಜೇಂದ್ರ.ಎನ್‌.ಮೂರ್ತಿ ಸಂಕಲನವಿದೆ. ಆರ್‌.ಯಶ್‌ ಯಲ್ಲಾಲಿಂಗ್‌, ಕೆ.ಅಂಕೀತ್‌ಕುಮಾರ್‌ ಮತ್ತು ಗುರುಪ್ರಸಾದ್‌ ಸಂಭಾಷಣೆ ಬರೆದಿದ್ದಾರೆ.

ಟಾಪ್ ನ್ಯೂಸ್

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

22

Ganesh Chaturthi: ಗಣೇಶ ಬಂದ

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Actor Vinayakan: ವಿಮಾನ ನಿಲ್ದಾಣದ ಸಿಬ್ಬಂದಿಗಳ ಜತೆ ವಾಗ್ವಾದ; ನಟ ವಿನಾಯಗನ್ ವಶಕ್ಕೆ

Actor Vinayakan: ವಿಮಾನ ನಿಲ್ದಾಣದ ಸಿಬ್ಬಂದಿಗಳ ಜತೆ ವಾಗ್ವಾದ; ನಟ ವಿನಾಯಗನ್ ವಶಕ್ಕೆ

17-desiswara-ganaap

Ganesh Chaturthi Special Story: ವಿಶ್ವಪೂಜಿತ ವಿನಾಯಕ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Ganesh Chaturthi; ನಟಿಮಣಿಯರ ಚೌತಿ ಸಂಭ್ರಮ; ಬಾಲ್ಯದ ಹಬ್ಬದ ನೆನಪು ಹಂಚಿಕೊಂಡ ನಟಿಯರು…

Ganesh Chaturthi; ನಟಿಮಣಿಯರ ಚೌತಿ ಸಂಭ್ರಮ; ಬಾಲ್ಯದ ಹಬ್ಬದ ನೆನಪು ಹಂಚಿಕೊಂಡ ನಟಿಯರು…

ಇಂದಿನಿಂದ ತೆರೆಯಲ್ಲಿ ಅನ್ನ ಪ್ರಸಾದ

Anna Movie; ಇಂದಿನಿಂದ ತೆರೆಯಲ್ಲಿ ‘ಅನ್ನ’ ಪ್ರಸಾದ

Bhuvanam Gaganam ಹಾಡಿನ ಸದ್ದು; ರೊಮ್ಯಾಂಟಿಕ್‌ ಹಾಡಿನಲ್ಲಿ ರಚೆಲ್‌-ಪ್ರಮೋದ್‌

Bhuvanam Gaganam ಹಾಡಿನ ಸದ್ದು; ರೊಮ್ಯಾಂಟಿಕ್‌ ಹಾಡಿನಲ್ಲಿ ರಚೆಲ್‌-ಪ್ರಮೋದ್‌

Sandalwood; 8 ತಿಂಗಳು 150 ಸಿನಿಮಾ.. ಗೆದಿದ್ದು ಕೆಲವು, ಸೋತಿದ್ದು ಹಲವು

Sandalwood; 8 ತಿಂಗಳು 150 ಸಿನಿಮಾ.. ಗೆದ್ದಿದ್ದು ಕೆಲವು, ಸೋತಿದ್ದು ಹಲವು

Vinay Rajkumar; ಪೆಪೆ ನೋಡಿದ ಬಳಿಕ ಮೌನ ಕಾಡಿತು..: ವಿನಯ್‌ ಮಾತು

Vinay Rajkumar; ಪೆಪೆ ನೋಡಿದ ಬಳಿಕ ಮೌನ ಕಾಡಿತು..: ವಿನಯ್‌ ಮಾತು

MUST WATCH

udayavani youtube

ಗಜಪಯಣಕ್ಕೆ ಚಾಲನೆ : ಕ್ಯಾಪ್ಟನ್‌ ಅಭಿಮನ್ಯು ನೇತೃತ್ವದ 9 ಆನೆಗಳ ಗಜಪಡೆ

udayavani youtube

ರಕ್ಷಾ ಬಂಧನದ ಅರ್ಥ ಮತ್ತು ಮಹತ್ವ | ರಕ್ಷಾ ಬಂಧನ 2024

udayavani youtube

ಕಡಿಮೆ ಬೆಲೆಗೆ ಫಸ್ಟ್ ಕ್ಲಾಸ್ ಬಾಳೆಎಲೆ ಊಟ

udayavani youtube

ಆ.18 ರಿಂದ ಶ್ರೀಕೃಷ್ಣ ಮಠದಲ್ಲಿ ಕ್ರೀಡೋತ್ಸವ

udayavani youtube

ತಮ್ಮ ಮಕ್ಕಳನ್ನು ಬೆಳೆಸುವ ಸಲುವಾಗಿ ಕಂಡೋರ ಮಕ್ಕಳ ಭವಿಷ್ಯ ನಾಶ. ಈ ವ್ಯವಸ್ಥೆಗೆ ನಾನೂ ಬಲಿ

ಹೊಸ ಸೇರ್ಪಡೆ

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

22

Ganesh Chaturthi: ಗಣೇಶ ಬಂದ

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.