ಎಳೆಯರ ಭಾವಾಭಿವ್ಯಕ್ತಿಯಲ್ಲಿ ದಮಯಂತಿ ಪುನರ್‌ ಸ್ವಯಂವರ


Team Udayavani, Jan 3, 2020, 12:58 AM IST

49

ಸತ್ಯಸಂದ ಹಾಗೂ ಪ್ರಜೆಗಳ ಕ್ಷೇಮವನ್ನೇ ತನ್ನ ಉಸಿರಾಗಿಸಿಕೊಂಡಿದ್ದವನು ನಿಷದ ದೇಶದ ರಾಜ ನಳ ಚಕ್ರವರ್ತಿ. ಈತನ ರೂಪ ಮತ್ತು ಗುಣಕ್ಕೆ ಅನುರೂಪಳಾದ ಪತ್ನಿಯಾಗಿದ್ದವಳು ವಿದರ್ಭ ದೇಶದ ಅರಸ ಭೀಮಕನ ಮಗಳು ದಮಯಂತಿ. ಇವರಿಗೆ ಈರ್ವರು ಮಕ್ಕಳು. ಹೀಗೆ ಸುಖದಿಂದಿದ್ದ ನಳನ ಮೇಲೆ ಶನೀಶ್ವರನ ವಕ್ರ ದೃಷ್ಟಿ ಬೀಳುತ್ತದೆ. ಪರಿಣಾಮವಾಗಿ ಈರ್ವರೂ ರಾಜ್ಯ ತೊರೆದು ಕಾಡು ಪಾಲಾಗುತ್ತಾರೆ. ಅಡವಿಯಲ್ಲಿ ಮಡದಿ ತನ್ನಂತೆ ಕಷ್ಟ ಪಡಬಾರದೆಂದು ನಿದ್ರಾಸ್ಥಿತಿಯಲ್ಲಿದ್ದ ಆಕೆಯನ್ನು ಬಿಟ್ಟು ನಳನು ಮುಂದಕ್ಕೆ ಸಾಗುತ್ತಾನೆ. ಕಾಡ ದಾರಿಯಲ್ಲಿ ಬರುತ್ತಿದ್ದ ವಜ್ರ ವೈಡೂರ್ಯದ ವ್ಯಾಪಾರಿಗಳ ಸಹಾಯದಿಂದ ದಮಯಂತಿಯು ಛೇದಿ ದೇಶವನ್ನು ಸೇರಿ ಅಲ್ಲಿನ ಅರಮನೆಯಲ್ಲಿ ವೇಷ ಮರೆಸಿ ಕೆಲಸಕ್ಕೆ ಸೇರುತ್ತಾಳೆ. ಇತ್ತ ನಳನು ಕಾಡ ಹಾದಿ ಸವೆಸುತ್ತಿರುವ ಸಂದರ್ಭದಲ್ಲಿ ಕಾಳ್ಗಿಚ್ಚಿಗೆ ಸಿಲುಕಿಕೊಂಡ ಕಾರ್ಕೋಟಕವೆನ್ನುವ ವಿಷ ಸರ್ಪವನ್ನು ಬದುಕಿಸಿದರೂ ಅದರ ದಂಶನಕ್ಕೆ ಒಳಗಾಗಿ ವಿರೂಪಗೊಳ್ಳುತ್ತಾನೆ.

ದುಃಖತಪ್ತನಾದ ನಳನನ್ನು ಸಂತೈಸಿದ ಕಾರ್ಕೋಟಕ ಅಕ್ಷ ವಿದ್ಯಾ ಪ್ರವೀಣನಾದ ಋತುಪರ್ಣ ರಾಜನ ಅರಮನೆಯಲ್ಲಿ ಬಾಹುಕನೆನ್ನುವ ಹೆಸರಿನಲ್ಲಿ ಅಶ್ವ ಪಾಲಕನಾಗಿ ಸೇರಲು ಸಲಹೆ ನೀಡುತ್ತಾನೆ. ಇತ್ತ ಭೀಮಕನ ಆಜ್ಞೆಯಂತೆ ದಮಯಂತಿಯನ್ನು ಅರಸುತ್ತಾ ಹೊರಟ ಸುದೇವ ಬ್ರಾಹ್ಮಣರು ಛೇದಿ ದೇಶದ ಅರಮನೆಯಲ್ಲಿದ್ದ ದಮಯಂತಿಯನ್ನು ಗುರುತಿಸಿ ರಾಜನ ಒಪ್ಪಿಗೆ ಪಡೆದು ಕುಂಡಿನಾಪುರಕ್ಕೆ ಕರೆತರುತ್ತಾರೆ. ದಮಯಂತಿಯ ಒತ್ತಾಯದಂತೆ ಭೀಮಕನು ನಳನನ್ನು ಅರಸಿ ಕರೆತರಲು ವಿಪ್ರರನ್ನು ಕಳುಹಿಸುತ್ತಾನೆ. ಅರಸುತ್ತಾ ಬಂದ ಪರ್ಣಾದನೆಂಬ ಬ್ರಾಹ್ಮಣನು ಋತುಪರ್ಣ ರಾಜನ ಸಭೆಯಲ್ಲಿ ದಮಯಂತಿ ಹೇಳಿದ ಮಾತನ್ನು ಪುನರುಚ್ಚರಿಸಿದಾಗ ಬಾಹುಕ ಮೂರ್ಚಿತನಾಗುತ್ತಾನೆ. ಇದನ್ನು ತಿಳಿದ ದಮಯಂತಿ ದುಃಖೀತಳಾಗಿ ತಂದೆಯಲ್ಲಿ ವಿಚಾರ ತಿಳಿಸಿದಾಗ, ಕೂಡಲೇ ರಾಜನು ದಮಯಂತಿಯ ಪುನರ್‌ಸ್ವಯಂವರದ ಡಂಗುರ ಸಾರಿಸಿ, ಋತುಪರ್ಣನಿಗೂ ಆಮಂತ್ರಣ ಕಳುಹಿಸುತಾನೆ. ಈ ಎರಡನೇ ವಿವಾಹವನ್ನು ವಿರೋಧಿಸಿದ ಋತುಪರ್ಣನು, ನೂರಾರು ಯೋಜನ ದೂರವಿರುವ ಕುಂಡಿನಪುರಕ್ಕೆ ಮದುವೆ ಮುಹೂರ್ತದ ಮೊದಲು ತಲುಪಬೇಕೆಂಬ ವಿಚಾರವನ್ನು ಬಾಹುಕನಿಗೆ ತಿಳಿಸಿದಾಗ, ಒಪ್ಪಿದ ಆತನು ಕ್ಷಣ ಮಾತ್ರದಲ್ಲಿ ರಥವನ್ನು ಒಂದು ಯೋಜನ ದೂರಕ್ಕೆ ತಂದಾಗ, ರಾಜನಿಗೆ ಬಾಹುಕನ ಮೇಲೆ ಸಂಶಯ ಕಾಡಿ ಪ್ರಶ್ನಿಸಿದಾಗ, ನಾನೇ ನಳನೆಂದು ಒಪ್ಪಿಕೊಳ್ಳುತ್ತಾನೆ. ಈರ್ವರೂ ಮುಹೂರ್ತಕ್ಕೆ ಮೊದಲು ತಲುಪುತ್ತಾರೆ.

ಸತ್ಕಾರ ಗೃಹದಲ್ಲಿ ಬಾಹುಕನ ಕೆಲಸ ಕಾರ್ಯಗಳನ್ನು ಸಖೀಯ ಮೂಲಕ ಅರಿತ ದಮಯಂತಿಗೆ ಬಾಹುಕನೇ ತನ್ನ ಪತಿ ನಳನೆಂದು ಅರಿವಿಗೆ ಬಂದು ಆತನ ಪಾದಗಳನ್ನು ಹಿಡಿದಾಗ, ಬಾಹುಕನು ನಿಜ ವಿಚಾರವನ್ನು ಆಕೆಗೆ ತಿಳಿಸುತ್ತಾನೆ. ಮುಂದೆ ಪುನರ್‌ ವಿವಾಹವಾಗುವಲ್ಲಿಗೆ ಪ್ರಸಂಗ ಮುಕ್ತಾಯಗೊಳ್ಳುತ್ತದೆ. ಈ ಕರುಣಾರಸ ಪ್ರಧಾನವಾದ ಆಖ್ಯಾನವನ್ನು ನರಸಿಂಹ ತುಂಗರ ನಿರ್ದೇಶನದಲ್ಲಿ ಪ್ರದರ್ಶಿಸಿದವರು ಬ್ರಹ್ಮಾವರ ಸರಕಾರಿ ಪ. ಪ‌ೂ. ಕಾಲೇಜಿನ ಪ್ರೌಢಶಾಲಾ ವಿಭಾಗದ ವಿದ್ಯಾರ್ಥಿಗಳು. ಬಾಹುಕನಾಗಿ ಪ್ರಸಾದ್‌, ದಮಯಂತಿಯಾಗಿ ಶಶಿಧರ್‌, ನಳ ಚಕ್ರವರ್ತಿಯಾಗಿ ನಿತಿನ್‌, ಋತುಪರ್ಣನಾಗಿ ಶಶಾಂಕ್‌, ಭೀಮಕನಾಗಿ ರಾಮನಾಥ್‌ ಪಾತ್ರೋಚಿತ ಅಭಿನಯದಿಂದ ಸೈ ಎನಿಸಿಕೊಂಡರೆ, ಸುದೇವ ಬ್ರಾಹ್ಮಣನಾಗಿ ಮನೀಷ್‌ ಹಾಸ್ಯರಸದ ಸಿಂಚನಗೈದರು. ಛೇದಿ ರಾಣಿಯಾಗಿ ಚಂದನ್‌ ಮತ್ತು ಶನೀಶ್ವರನಾಗಿ ಅಕ್ಷಯ ಪಾತ್ರಕ್ಕೆ ನ್ಯಾಯ ಒದಗಿಸಿದರು. ಪೂರ್ವರಂಗದಲ್ಲಿ ಸೊಗಸಾದ ಸಾಂಪ್ರದಾಯಿಕ ಹೆಜ್ಜೆಗಳೊಂದಿಗೆ ಬಾಲಗೋಪಾಲರಾಗಿ ತೇಜಸ್‌ ಮತ್ತು ಶ್ರೇಯಸ್‌ ಹಾಗೂ ಒಡ್ಡೋಲಗದಲ್ಲಿ ಸುಶಾಂತ್‌, ಅಭಿಲಾಷ್‌, ನಿತಿನ್‌, ಅಕ್ಷತಾ ಮತ್ತು ತೃಪ್ತಿ ಇವರುಗಳು ರಂಗಕ್ಕೆ ಕಳೆ ನೀಡಿದರು. ಹಿಮ್ಮೇಳದಲ್ಲಿ ಭಾಗವತರಾಗಿ ಕೆ. ಪಿ. ಹೆಗಡೆ ಮತ್ತು ನರಸಿಂಹ ತುಂಗ, ಮದ್ದಲೆಯಲ್ಲಿ ದೇವದಾಸ ಕೂಡ್ಲಿ, ಚೆ‌ಂಡೆಯಲ್ಲಿ ಗಣೇಶ್‌ ಶೆಣೈ ಮತ್ತು ಸುದೀಪ್‌ ಉರಾಳ ಸಹಕರಿಸಿದ್ದರು.

ಕೆ. ದಿನಮಣಿ ಶಾಸ್ತ್ರಿ

ಟಾಪ್ ನ್ಯೂಸ್

Salman Khan: 5 ಕೋಟಿ ನೀಡಿ, ಇಲ್ಲದಿದ್ದರೆ… ಸಲ್ಮಾನ್ ಖಾನ್ ಗೆ ಮತ್ತೆ ಜೀವ ಬೆದರಿಕೆ

Salman Khan: 5 ಕೋಟಿ ನೀಡಿ, ಇಲ್ಲದಿದ್ದರೆ… ಸಲ್ಮಾನ್ ಖಾನ್ ಗೆ ಮತ್ತೆ ಜೀವ ಬೆದರಿಕೆ

2-vijayapura

Vijayapura: ಗ್ರಾಮಕ್ಕೆ ನುಗ್ಗಿದ ಮೊಸಳೆ ಸೆರೆ

Jaiswal

Canada Vs India: ನಿಜ್ಜರ್‌ ಹತ್ಯೆ ಕೇಸಲ್ಲಿ ಸತ್ಯ ಒಪ್ಪಿದ ಕೆನಡಾ ಪ್ರಧಾನಿ: ಕೇಂದ್ರ ಸರಕಾರ

Bhagavath

Helping Nature: ಭಾರತ ದಾಳಿ ಮಾಡಲ್ಲ, ತನ್ನ ಮೇಲಿನ ದಾಳಿಯನ್ನೂ ಸಹಿಸಲ್ಲ: ಭಾಗವತ್‌

ಪ್ರವಾಸ ಸಂದರ್ಭ ವಿದ್ಯಾರ್ಥಿನಿಯರಿಗೆ ಉಪನ್ಯಾಸಕರಿಂದ ಮದ್ಯಪಾನ: ದೂರು

Kanakapura: ಪ್ರವಾಸ ಸಂದರ್ಭ ವಿದ್ಯಾರ್ಥಿನಿಯರಿಗೆ ಉಪನ್ಯಾಸಕರಿಂದ ಮದ್ಯಪಾನ: ದೂರು

CJI-Ind

Recommendation: ನ್ಯಾ. ಸಂಜೀವ್‌ ಖನ್ನಾ ಸುಪ್ರೀಂಕೋರ್ಟ್‌ ಮುಂದಿನ ಮುಖ್ಯ ನ್ಯಾಯಮೂರ್ತಿ

Koppal: ಚಿಕನ್‌, ಮಟನ್‌ ಸೆಂಟರ್‌ಗೆ ಸಚಿವೆ ಶೋಭಾ ಕರಂದ್ಲಾಜೆ ಹೆಸರಿಟ್ಟ ಅಭಿಮಾನಿ

Koppal: ಚಿಕನ್‌, ಮಟನ್‌ ಸೆಂಟರ್‌ಗೆ ಸಚಿವೆ ಶೋಭಾ ಕರಂದ್ಲಾಜೆ ಹೆಸರಿಟ್ಟ ಅಭಿಮಾನಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

19

ಸಂಪ್ರದಾಯಬದ್ಧವಾಗಿ ರಂಗಶಿಸ್ತಿನೊಂದಿಗೆ ಹೊಸತನ ಅಳವಡಿಸಿಕೊಂಡರೆ ತಪ್ಪಿಲ್ಲ

Ropesh Shetty: ಹಳ್ಳಿಯ ಸೊಗಡಿನಲ್ಲಿ ರೂಪೇಶ್‌ ಜೈಕಾರ !

Ropesh Shetty: ಹಳ್ಳಿಯ ಸೊಗಡಿನಲ್ಲಿ ರೂಪೇಶ್‌ ಜೈಕಾರ !

1-trrr

Yakshagana: ತೆಂಕುತಿಟ್ಟಿನ “ರಂಗಸ್ಥಳದ ರಾಜ’ʼ ಅರುವ ಕೊರಗಪ್ಪ ಶೆಟ್ಟಿ

Idu Entha Lokavayya: “ಕೋಸ್ಟಲ್‌” ನಿಂದ ಕರುನಾಡು!

Idu Entha Lokavayya: “ಕೋಸ್ಟಲ್‌” ನಿಂದ ಕರುನಾಡು!

3

Yakshagana: ಚಪ್ಪಾಳೆಗಾಗಿ ರಸಾಭಾಸ ಮಾಡಬಾರದು

MUST WATCH

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

udayavani youtube

ಅಗಲಿದ ರತನ್ ಟಾಟಾಗೆ ಶ್ರದ್ಧಾಂಜಲಿ ಸಲ್ಲಿಸಿದ ಅಂಬಾನಿ ಕುಟುಂಬ

udayavani youtube

ಮಕ್ಕಳ ಸ್ಕ್ರೀನ್ ಟೈಮಿಂಗ್ ಕುರಿತು ಎಚ್ಚರಿಕೆ ಅತ್ಯವಶ್ಯಕ.. ಇಲ್ಲಿದೆ ಅಗತ್ಯ ಮಾಹಿತಿ

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

ಹೊಸ ಸೇರ್ಪಡೆ

Salman Khan: 5 ಕೋಟಿ ನೀಡಿ, ಇಲ್ಲದಿದ್ದರೆ… ಸಲ್ಮಾನ್ ಖಾನ್ ಗೆ ಮತ್ತೆ ಜೀವ ಬೆದರಿಕೆ

Salman Khan: 5 ಕೋಟಿ ನೀಡಿ, ಇಲ್ಲದಿದ್ದರೆ… ಸಲ್ಮಾನ್ ಖಾನ್ ಗೆ ಮತ್ತೆ ಜೀವ ಬೆದರಿಕೆ

2-vijayapura

Vijayapura: ಗ್ರಾಮಕ್ಕೆ ನುಗ್ಗಿದ ಮೊಸಳೆ ಸೆರೆ

Jaiswal

Canada Vs India: ನಿಜ್ಜರ್‌ ಹತ್ಯೆ ಕೇಸಲ್ಲಿ ಸತ್ಯ ಒಪ್ಪಿದ ಕೆನಡಾ ಪ್ರಧಾನಿ: ಕೇಂದ್ರ ಸರಕಾರ

Bhagavath

Helping Nature: ಭಾರತ ದಾಳಿ ಮಾಡಲ್ಲ, ತನ್ನ ಮೇಲಿನ ದಾಳಿಯನ್ನೂ ಸಹಿಸಲ್ಲ: ಭಾಗವತ್‌

ಪ್ರವಾಸ ಸಂದರ್ಭ ವಿದ್ಯಾರ್ಥಿನಿಯರಿಗೆ ಉಪನ್ಯಾಸಕರಿಂದ ಮದ್ಯಪಾನ: ದೂರು

Kanakapura: ಪ್ರವಾಸ ಸಂದರ್ಭ ವಿದ್ಯಾರ್ಥಿನಿಯರಿಗೆ ಉಪನ್ಯಾಸಕರಿಂದ ಮದ್ಯಪಾನ: ದೂರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.