ಧೀರೋದ್ಧಾತ್ತ ಸಾಲ್ವ, ವಿಜೃಂಭಿಸಿದ ಭೀಷ್ಮ, ಪರಶುರಾಮ


Team Udayavani, Jan 3, 2020, 1:07 AM IST

55

ಬೆಳ್ತಂಗಡಿಯ ಮೆಲೆಬೆಟ್ಟು ಉದ್ಭವ ಸುಬ್ರಹ್ಮಣ್ಯ ಸ್ವಾಮಿ ದೇವಾಲಯದಲ್ಲಿ ಷಷ್ಠಿಯ ದಿನ ಪ್ರೇಕ್ಷಕರಿಗೆ ಯಕ್ಷ ರಸಾಮೃತ ಉತ್ತಮ ತಾಳಮದ್ದಳೆಯೊಂದರ ಮೂಲಕ ಕಿವಿಗಳಿಗೆ ತಂಪೆರೆಯಿತು. ಭೀಷ್ಮ ವಿಜಯ ಪ್ರಸಂಗದಲ್ಲಿ ಅಂಬೆಯು ಸಾಲ್ವನ ಬಳಿಗೆ ತೆರಳುವಲ್ಲಿಂದ ಪ್ರಸಂಗ ಆರಂಭವಾಗಿದೆ. ಬ್ರಾಹ್ಮಣನ ಜೊತೆಗೆ ತೆರಳಿದ ಅವಳು ಸಾಲ್ವನಿಂದ ತಿರಸ್ಕೃತಳಾಗಿ ಬಳಿಕ ಪರಶುರಾಮನಿಗೆ ಶರಣಾಗುತ್ತಾಳೆ. ಭೀಷ್ಮ- ಪರಶುರಾಮರ ಇಪ್ಪತ್ತೂಂದು ದಿನಗಳ ಘನಘೋರ ಸಂಗ್ರಾಮ ನಡೆದು ಕಡೆಗೂ ಜಯಾಪಜಯಗಳು ನಿಶ್ಚಯವಾಗದೆ ಹೋದಾಗ ದೇವತೆಗಳು ಯುದ್ಧ ನಿಲ್ಲಿಸುವಂತೆ ಕೇಳಿಕೊಳ್ಳುತ್ತಾರೆ. ಶಿಷ್ಯ ಭೀಷ್ಮನ ಧರ್ಮ ಪಾಲನೆಯ ಮುಂದೆ ಪರಶುರಾಮನು ಸೋಲೊಪ್ಪಿಕೊಂಡು ಹೊರಟುಹೋಗುತ್ತಾನೆ. ಮುಂದಿನ ಜನ್ಮದಲ್ಲಾದರೂ ಭೀಷ್ಮನನ್ನು ಕೊಲ್ಲುವ ಶಪಥ ಕೈಗೊಂಡು ಅಂಬೆಯು ಪ್ರಾಯೋಪವೇಶ ಮಾಡುವಲ್ಲಿಗೆ ಕತೆಗೆ ಮಂಗಳವಾಗುತ್ತದೆ.

ಅಂಬೆಯಾಗಿ ಶಿಕ್ಷಕ ದಿನೇಶ ರಾವ್‌ ಬಳಂಜ ಅವರು ಭೀಷ್ಮನಲ್ಲಿ ತನಗೆ ಸಾಲ್ವನಲ್ಲಿ ಪ್ರಣಯಾಂಕುರವಾಗಿರುವುದನ್ನು ತಿಳಿಸುವಾಗ ಸ್ತ್ರೀ ಸಹಜವಾದ ಲಜ್ಜೆಯಿಂದ ವಿಮುಕ್ತಳಾದ ಭಾವವನ್ನು ಸೊಗಸಾಗಿ ಬಿಂಬಿಸುತ್ತ ವೃದ್ಧ ಬ್ರಾಹ್ಮಣನ ಜೊತೆಗೆ ಸೌಭದೇಶದತ್ತ ಪಯಣ ಕೈಗೊಳ್ಳುವಾಗ ಕೈ ಹಿಡಿಯಲು ಹೇಳುವ ಬ್ರಾಹ್ಮಣನಲ್ಲಿ ತನ್ನ ಪಾತಿವ್ರತ್ಯವನ್ನು ಪ್ರಕಟಿಸುವ ಪರಿ ಮನೋಜ್ಞವಾಗಿ ಮೂಡಿಬಂತು. ಸಾಲ್ವನು ತಿರಸ್ಕರಿಸಿದಾಗ ಕೋಪಾಗ್ನಿ ಜ್ವಾಲೆಯಿಂದ ಕಂಪಿಸುತ್ತ ಕಡೆಗೆ ಘೋರ ಶಪಥಗೈದು ಅಗ್ನಿಪ್ರವೇಶ ಮಾಡುವ ಸನ್ನಿವೇಶದ ಚಿತ್ರಣ ಹೃದಯಂಗಮವಾಗಿತ್ತು.

ಸಾಲ್ವನಾಗಿ ರಂಗವನ್ನು ತುಂಬಿಕೊಂಡ ಬಾಸುಮೆ ನಾರಾಯಣ ಭಟ್ಟರು ವೃತ್ತಿಯಿಂದ ಕೃಷಿಕರಾದರೂ ಅನುಭವಿ ಯಕ್ಷ ಕಲಾವಿದನ ಎಲ್ಲ ಪ್ರೌಢಿಮೆಗಳನ್ನೂ ಬಳಸುವ ಮೂಲಕ ಅಸುರೇಶನ ಅಹಂಕಾರ, ದರ್ಪಗಳನ್ನು ಪ್ರದರ್ಶಿಸುತ್ತ ಕಟಕಿ ಮಾತುಗಳಿಂದ ವಿಪ್ರನನ್ನು ಭಂಗಿಸುತ್ತ, ಭೀಷ್ಮನು ಕರೆದೊಯ್ದ ಮಾನಿನಿಯನ್ನು ಯಾವ ಕಾರಣಕ್ಕೂ ಸ್ವೀಕರಿಸಲಾರೆನೆಂದು ದೂರೀಕರಿಸುವ ಪಾತ್ರದ ರಸಭಾವವನ್ನು ಸಾûಾತ್ಕರಿಸಿದರು. ಸಾಂದರ್ಭಿಕವಾಗಿದ್ದ ಅವರ ಧ್ವನಿಯ ಏರಳಿತಗಳು ಒಂದು ಸಂತೃಪ್ತ ಭಾವವನ್ನು ಮೂಡಿಸಿತು.

ಪರಶುರಾಮನಾಗಿ ವಿಜೃಂಭಿಸಿದವರು ಶಿಕ್ಷಕ ಬಳಂಜ ರಾಮಕೃಷ್ಣ ಭಟ್ಟರು. ಪಾತ್ರದ ಘನತೆಗೆ ಯೋಗ್ಯವಾದ ಮಾತುಗಾರಿಕೆಯ ಮೂಲಕ ಸನ್ನಿವೇಶವನ್ನು ಪೋಷಣೆ ಮಾಡುತ್ತಲೇ ಹೋದ ಅವರಿಗೆ ಸರಿಸಾಟಿಯಾಗಿ ಯಾವುದೇ ಪಾತ್ರವನ್ನೂ ನಿಭಾಯಿಸಬಲ್ಲ ಪ್ರೊ| ಮಧೂರು ಮೋಹನ ಕಲ್ಲೂರಾಯರು ಭೀಷ್ಮನಾಗಿ ಎದುರು ನಿಂತು ಎರಡೂ ಪಾತ್ರಗಳಲ್ಲಿ ಯಾವುದು ಗೆಲ್ಲುತ್ತದೆಂಬ ಕೌತುಕ ಉಸಿರು ಬಿಗಿ ಹಿಡಿಯುವಂತೆ ಮಾಡುವಲ್ಲಿ ಯಶಸ್ವಿಯಾಗಿ ಒಂದು ಅತ್ಯುತ್ತಮ ಪ್ರದರ್ಶನವನ್ನು ಮುಕ್ತಾಯಗೊಳಿಸಿತು.

ಹಿಮ್ಮೇಳವಂತೂ ಅನನ್ಯ ಅನುಭವ ನೀಡಿತು. ಮೇಳದ ಕಲಾವಿದರಾದ ಭಾಗವತ ಪಿ. ಟಿ. ಪ್ರಸಾದ್‌ ಅವರ ಭಾಗವತಿಕೆ ಬಹು ಸುಶ್ರಾವ್ಯವಾಗಿತ್ತು. ಎರಡು ಮೂರು ಪದ್ಯಗಳಿಗೆ ಅವರು ದುಡಿಸಿಕೊಂಡ ರಾಗಗಳಿಗೆ ಪ್ರಚಂಡ ಕರತಾಡನ ಮೊಳಗಿತು. ಎಳೆಯ ಪ್ರತಿಭೆ ಶ್ರವಣಕುಮಾರ್‌ ಮದ್ದಳೆ, ನರಸಿಂಹಮೂರ್ತಿಯವರ ಚೆಂಡೆ ಪೂರಕವಾಗಿತ್ತು. ಬಳಂಜ ರಾಮಕೃಷ್ಣ ಭಟ್‌ ಈ ಕಾರ್ಯಕ್ರಮವನ್ನು ಆಯೋಜಿಸಿದ್ದರು.

ಪ. ರಾಮಕೃಷ್ಣ ಶಾಸ್ತ್ರಿ

ಟಾಪ್ ನ್ಯೂಸ್

Mudhol: ಬೆಳ್ಳಂಬೆಳಗ್ಗೆ ಅಬ್ಬರಿಸಿದ ಮಳೆರಾಯ… ಜನಜೀವನ ಅಸ್ತವ್ಯಸ್ತ

Mudhol: ವಾರದ ಸಂತೆಗೆ ಮಳೆರಾಯನ ಕಾಟ… ಜನಜೀವನ ಅಸ್ತವ್ಯಸ್ತ

Manipur: ಸಿಎಂ ಬಿರೇನ್ ಸಿಂಗ್ ಪದಚ್ಯುತಿಗೆ ಆಗ್ರಹಿಸಿ ಬಿಜೆಪಿ ಶಾಸಕರಿಂದ ಪ್ರಧಾನಿಗೆ ಪತ್ರ

Manipur: ಸಿಎಂ ಬಿರೇನ್ ಸಿಂಗ್ ಪದಚ್ಯುತಿಗೆ ಆಗ್ರಹಿಸಿ ಬಿಜೆಪಿ ಶಾಸಕರಿಂದ ಪ್ರಧಾನಿಗೆ ಪತ್ರ

Salman Khan: 5 ಕೋಟಿ ನೀಡಿ, ಇಲ್ಲದಿದ್ದರೆ… ಸಲ್ಮಾನ್ ಖಾನ್ ಗೆ ಮತ್ತೆ ಜೀವ ಬೆದರಿಕೆ

Salman Khan: 5 ಕೋಟಿ ನೀಡಿ, ಇಲ್ಲದಿದ್ದರೆ… ಸಲ್ಮಾನ್ ಖಾನ್ ಗೆ ಮತ್ತೆ ಜೀವ ಬೆದರಿಕೆ

2-vijayapura

Vijayapura: ಗ್ರಾಮಕ್ಕೆ ನುಗ್ಗಿದ ಮೊಸಳೆ ಸೆರೆ

Jaiswal

Canada Vs India: ನಿಜ್ಜರ್‌ ಹತ್ಯೆ ಕೇಸಲ್ಲಿ ಸತ್ಯ ಒಪ್ಪಿದ ಕೆನಡಾ ಪ್ರಧಾನಿ: ಕೇಂದ್ರ ಸರಕಾರ

Bhagavath

Helping Nature: ಭಾರತ ದಾಳಿ ಮಾಡಲ್ಲ, ತನ್ನ ಮೇಲಿನ ದಾಳಿಯನ್ನೂ ಸಹಿಸಲ್ಲ: ಭಾಗವತ್‌

ಪ್ರವಾಸ ಸಂದರ್ಭ ವಿದ್ಯಾರ್ಥಿನಿಯರಿಗೆ ಉಪನ್ಯಾಸಕರಿಂದ ಮದ್ಯಪಾನ: ದೂರು

Kanakapura: ಪ್ರವಾಸ ಸಂದರ್ಭ ವಿದ್ಯಾರ್ಥಿನಿಯರಿಗೆ ಉಪನ್ಯಾಸಕರಿಂದ ಮದ್ಯಪಾನ: ದೂರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

19

ಸಂಪ್ರದಾಯಬದ್ಧವಾಗಿ ರಂಗಶಿಸ್ತಿನೊಂದಿಗೆ ಹೊಸತನ ಅಳವಡಿಸಿಕೊಂಡರೆ ತಪ್ಪಿಲ್ಲ

Ropesh Shetty: ಹಳ್ಳಿಯ ಸೊಗಡಿನಲ್ಲಿ ರೂಪೇಶ್‌ ಜೈಕಾರ !

Ropesh Shetty: ಹಳ್ಳಿಯ ಸೊಗಡಿನಲ್ಲಿ ರೂಪೇಶ್‌ ಜೈಕಾರ !

1-trrr

Yakshagana: ತೆಂಕುತಿಟ್ಟಿನ “ರಂಗಸ್ಥಳದ ರಾಜ’ʼ ಅರುವ ಕೊರಗಪ್ಪ ಶೆಟ್ಟಿ

Idu Entha Lokavayya: “ಕೋಸ್ಟಲ್‌” ನಿಂದ ಕರುನಾಡು!

Idu Entha Lokavayya: “ಕೋಸ್ಟಲ್‌” ನಿಂದ ಕರುನಾಡು!

3

Yakshagana: ಚಪ್ಪಾಳೆಗಾಗಿ ರಸಾಭಾಸ ಮಾಡಬಾರದು

MUST WATCH

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

udayavani youtube

ಅಗಲಿದ ರತನ್ ಟಾಟಾಗೆ ಶ್ರದ್ಧಾಂಜಲಿ ಸಲ್ಲಿಸಿದ ಅಂಬಾನಿ ಕುಟುಂಬ

udayavani youtube

ಮಕ್ಕಳ ಸ್ಕ್ರೀನ್ ಟೈಮಿಂಗ್ ಕುರಿತು ಎಚ್ಚರಿಕೆ ಅತ್ಯವಶ್ಯಕ.. ಇಲ್ಲಿದೆ ಅಗತ್ಯ ಮಾಹಿತಿ

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

ಹೊಸ ಸೇರ್ಪಡೆ

mantrika kannada movie

Kannada Cinema; ಮಾಂತ್ರಿಕ ಆಟ ಶುರು

Mudhol: ಬೆಳ್ಳಂಬೆಳಗ್ಗೆ ಅಬ್ಬರಿಸಿದ ಮಳೆರಾಯ… ಜನಜೀವನ ಅಸ್ತವ್ಯಸ್ತ

Mudhol: ವಾರದ ಸಂತೆಗೆ ಮಳೆರಾಯನ ಕಾಟ… ಜನಜೀವನ ಅಸ್ತವ್ಯಸ್ತ

Prakarana Tanikha Hantadallide: ತೆರೆಮೇಲೆ ಪ್ರಕರಣದ ವಿವರ

Prakarana Tanikha Hantadallide: ತೆರೆಮೇಲೆ ಪ್ರಕರಣದ ವಿವರ

3-aranthodu

Aranthodu: ಅರಮನೆಗಯ ಶಿಥಿಲಗೊಂಡ ತೂಗು ಸೇತುವೆಯಿಂದ ಕೆಳಗೆ ಬಿದ್ದು ಮೂವರಿಗೆ ಗಾಯ

Manipur: ಸಿಎಂ ಬಿರೇನ್ ಸಿಂಗ್ ಪದಚ್ಯುತಿಗೆ ಆಗ್ರಹಿಸಿ ಬಿಜೆಪಿ ಶಾಸಕರಿಂದ ಪ್ರಧಾನಿಗೆ ಪತ್ರ

Manipur: ಸಿಎಂ ಬಿರೇನ್ ಸಿಂಗ್ ಪದಚ್ಯುತಿಗೆ ಆಗ್ರಹಿಸಿ ಬಿಜೆಪಿ ಶಾಸಕರಿಂದ ಪ್ರಧಾನಿಗೆ ಪತ್ರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.