ಯಕ್ಷಗಾನ ಸಂಘಟಕ,ಕಲಾವಿದ ಕುಡ್ವರಿಗೆ ಸಮ್ಮಾನ
Team Udayavani, Jan 3, 2020, 1:15 AM IST
ಯಕ್ಷಗಾನ ವಿಮರ್ಶಕ , ಕಲಾವಿದ, ಸಂಘಟಕ ಎಂ.ಶಾಂತರಾಮ ಕುಡ್ವರು ಗೌಡ ಸಾರಸ್ವತ ಬ್ರಾಹ್ಮಣ ಮಹಿಳಾ ವೃಂದ ಮಂಗಳೂರು ಇದರ 2019ರ ಸಾಲಿನ ಕೊಂಕಣಿ ಸಾಹಿತ್ಯದ ಸಾಧಕರೆಂಬ ನೆಲೆಯಲ್ಲಿ ಸಮ್ಮಾನಕ್ಕೆ ಆಯ್ಕೆಯಾಗಿದ್ದಾರೆ . ಜ.5 ರಂದು ಮಂಗಳೂರಿನ ಶ್ರೀ ಗೋಕರ್ಣ ಮಠದಲ್ಲಿ ಈ ಸಮ್ಮಾನ ನಡೆಯಲಿದೆ .
ಬಾಲ್ಯದಿಂದಲೇ ಭಜನೆ , ಯಕ್ಷಗಾನ , ಪುರಾಣ ಸಾಹಿತ್ಯಗಳತ್ತ ಆಸಕ್ತಿ ಬೆಳಿಸಿಕೊಂಡು ಪ್ರತಿಭಾನ್ವಿತರಾಗಿದ್ದರು. 16ನೇ ವರ್ಷದಲ್ಲಿ ಮೂಡಬಿದಿರೆಗೆ ಬಂದು ಪದವಿ ಪೂರೈಸಿದ ಕುಡ್ವರಿಗೆ ಮೂಡಬಿದಿರೆಯ ಪರಿ ಸರ ಪ್ರತಿಭಾ ಪ್ರದರ್ಶನಕ್ಕೆ ಸಹಾಯಕವಾಯಿತು . ಪ್ರವೃತ್ತಿಯಲ್ಲಿ ಯಕ್ಷಗಾನ , ಸಾಹಿತ್ಯ , ನಾಟಕ , ಸಮಾಜ ಸೇವೆ ಮೊದಲಾದ ಕ್ಷೇತ್ರಗಳಲ್ಲಿ ಕೈಯಾಡಿಸಿದರು . ಯಕ್ಷಸಂಗಮ , ಯಕ್ಷೊàಪಾಸನಮ್ , ಯಕ್ಷ ಸಾರಸ್ವತ ಮುಂತಾದ ಯಕ್ಷಗಾನ ಸಂಘಗಳನ್ನು ಸ್ಥಾಪಿಸಿದ್ದಲ್ಲದೆ , ಅವು ಇಂದೂ ಅಸ್ತಿತ್ವದಲ್ಲಿದ್ದು ಚಟುವಟಿಕೆಯಲ್ಲಿವೆ . ಯಕ್ಷಸಂಗಮದ ಮೂಲಕ ಪ್ರತೀವರ್ಷ ರಾತ್ರಿ ಇಡೀ ತಾಳಮದ್ದಳೆ , ಕಲಾವಿದರಿಗೆ ಸಮ್ಮಾನ , ಯಕ್ಷೊ ಪಾಸನಮ್ ಸಂಘಟನೆಯ ಮೂಲಕ ಪ್ರತೀ ಮಂಗಳವಾರ ವಾರದ ತಾಳಮದ್ದಳೆ ಕೂಟ , ಯಕ್ಷ ಸಾರಸ್ವತದ ಮೂಲಕ ಕೊಂಕಣಿ ಯಕ್ಷಗಾನ , ನಾಟಕಗಳ ಪ್ರದರ್ಶನ ನಡೆಸಿಕೊಂಡು ಬರುತ್ತಿದ್ದಾರೆ .ಕನ್ನಡ,ತುಳು,ಕೊಂಕಣಿ ಭಾಷೆಗಳ ಯಕ್ಷಗಾನದಲ್ಲಿ ವೇಷಧಾರಿಯಾಗಿ, ತಾಳಮದ್ದಳೆ ಕೂಟದ ಅರ್ಥದಾರಿಯಾಗಿ ಸೈ ಎನಿಸಿಕೊಂಡ ಕಲಾವಿದ .
ಯಕ್ಷಗಾನದ ವಸ್ತುನಿಷ್ಟ ವಿಮರ್ಶೆ ಮಾಡುವುದರಲ್ಲಿ ಕುಡ್ವರು ನಿಷ್ಣಾತರಾಗಿದ್ದಾರೆ . ಯಕ್ಷಗಾನದ ಕುರಿತಾದ ಯಾವುದೇ ವಿಷಯಗಳಲ್ಲಿ ಅದು ಹೀಗೆಯೇ ಎಂದು ಹೇಳಬಲ್ಲ ಖಚಿತವಾದ ಜ್ಞಾನವನ್ನೂ ಹೊಂದಿದ್ದಾರೆ . ಹಲವಾರು ಕೊಂಕಣಿ ಯಕ್ಷಗಾನ , ನಾಟಕ ರಚಿಸಿ ತಾವೇ ನಿರ್ದೇಶಿಸಿ , ನಟಿಸಿದ್ದಾರೆ.
ಎಂ.ರಾಘವೇಂದ್ರ ಭಂಡಾರ್ಕರ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ನಾಗಮಂಗಲ ಗಣಪತಿ ಗಲಾಟೆ ಪ್ರಕರಣ ಸರ್ಕಾರದ ವಿರುದ್ಧ ಸಿ.ಟಿ.ರವಿ ವಾಗ್ದಾಳಿ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.