ಕಿಷ್ಕಿಂಧೆಯ ಪ್ರವೇಶಿಸುತ್ತಾ…


Team Udayavani, Jan 4, 2020, 7:10 AM IST

kishkinde

ಹಂಪಿಯ ಭೌಗೋಳಿಕ ರಚನೆಯೇ ವಿಶಿಷ್ಟ. ಅಲ್ಲಿ ಭೂಭಾಗ ಕಡಿಮೆ, ಬಂಡೆ- ಬೆಟ್ಟಗಳೇ ಅಧಿಕ. ಇದು ಚಿರತೆ, ಕರಡಿ, ವಾನರರಿಗೆ ನೆಲೆಸಲು ಪ್ರಶಸ್ತವಾದ ಸ್ಥಳ. ಹೀಗಾಗಿ, ವಾನರರು ಕಿಷ್ಕಿಂಧೆಯನ್ನು ತಮ್ಮ ರಾಜ್ಯವನ್ನಾಗಿ ಮಾಡಿಕೊಂಡಿದ್ದರು…

ವಿಶ್ವ ಪರಂಪರೆಯ ತಾಣವಾದ ನಮ್ಮ ಹೆಮ್ಮೆಯ ಹಂಪಿ, ರಾಮಾಯಣದ ಪ್ರಮುಖ ಘಟ್ಟಕ್ಕೆ ಸಾಕ್ಷಿಯಾದ ಕ್ಷೇತ್ರ. ಸಾಕ್ಷಾತ್‌ ಭಗವಂತನ ಅವತಾರಿ ಶ್ರೀರಾಮನಿಗೆ ಬಂಟನಾಗಿ, ಸಖನಾಗಿ, ಕಾವ್ಯದ ಉಪನಾಯಕನಂತಿದ್ದ ಹನುಮ ಮುಂದಿನ ದಿನಗಳಲ್ಲಿ ಪ್ರಮುಖ ದೈವಗಳ ಸಾಲಿಗೆ ಸೇರಿ ತನ್ನ ಒಡೆಯನನ್ನೂ ಮೀರಿ ಆರಾಧಿಸಲ್ಪ­ಡುತ್ತಿರುವ ಹನುಮನ ಜನ್ಮಸ್ಥಾನವೇ ಹಂಪಿಯ ಕಿಷ್ಕಿಂಧ.

ಈತ ರುದ್ರಾಂಶ ಸಂಭೂತನ­ಲ್ಲವೇ? ಹೀಗಾಗಿ, ಸಾಕ್ಷಾತ್‌ ವಿರೂಪಾಕ್ಷನ ನೆಲೆಯನ್ನೇ ತಾನು ಜನಿಸಲು ಆರಿಸಿಕೊಂಡಿ­ರಬೇಕು. ಅಚ್ಚರಿಯೆಂದರೆ, ಹಂಪಿಯ ಚಂದ್ರಮೌಳೇಶ್ವರ ಗುಡಿಯಿಂದ ಹನುಮ ಹುಟ್ಟಿದ ಆಂಜನೇಯ ಪರ್ವತವನ್ನು ನೋಡಿದರೆ, ಅದು ಥೇಟ್‌ ಕಪಿ ಮುಖದಂತೆಯೇ ಕಾಣುತ್ತದೆ. ಹಂಪಿಯ ಭೌಗೋಳಿಕ ರಚನೆಯೇ ವಿಶಿಷ್ಟ. ಅಲ್ಲಿ ಭೂಭಾಗ ಕಡಿಮೆ, ಬಂಡೆ- ಬೆಟ್ಟಗಳೇ ಅಧಿಕ. ಪಕ್ಕದಲ್ಲೇ ತುಂಬಿ ಹರಿಯುವ ತುಂಗಾಭದ್ರಾ ಹೊಳೆ.

ಇದು ಚಿರತೆ, ಕರಡಿ, ವಾನರರಿಗೆ ನೆಲೆಸಲು ಪ್ರಶಸ್ತವಾದ ಸ್ಥಳ. ಹೀಗಾಗಿ, ವಾನರರು ಕಿಷ್ಕಿಂಧೆಯನ್ನು ತಮ್ಮ ರಾಜ್ಯವನ್ನಾಗಿ ಮಾಡಿಕೊಂಡಿದ್ದರು. ಇಲ್ಲಿನ ಕೆಲ ಗುಹೆಗಳಲ್ಲಿ ಬಾಲವಿರುವ ಮಾನವರ ಚಿತ್ರಗಳು ಪತ್ತೆಯಾಗಿವೆ. ಇಲ್ಲಿನ ಆದಿವಾಸಿ ಜನಾಂಗವೊಂದು ತಾವು ವಾನರರ ವಂಶಜರೆಂದು ಹೇಳಿಕೊಳ್ಳುತ್ತಿದ್ದರು; ಕಪಿಧ್ವಜ ಹಿಡಿದಿರುತ್ತಿದ್ದರು ಎಂದು ಬ್ರಿಟಿಷ್‌ ಅಧಿಕಾರಿ, ಬಳ್ಳಾರಿ ಗೆಝೆಟಿಯರ್‌ನಲ್ಲಿ ದಾಖಲಿಸಿದ್ದಾನೆ.

ಅಂದರೆ, ಮಾನವ- ಚಿಂಪಾಂಜಿಗಳ ಮಧ್ಯದಲ್ಲಿ ಮಾತನಾಡಬಲ್ಲ ಪ್ರಭೇದವೊಂದಿದ್ದು, ನಂತರ ನಶಿಸಿರಬಹುದೇ? ಗೊತ್ತಿಲ್ಲ. ನಮ್ಮ ಹನುಮ ಹುಟ್ಟಿದಂದಿನಿಂದಲೇ ಭಾರೀ ಬಲವಂತ. ಆತ ಮಗುವಿದ್ದಾಗ ಸೂರ್ಯನನ್ನು ಹಣ್ಣೆಂದು ಭ್ರಮಿಸಿ, ಹಿಡಿಯಹೋದದ್ದು; ಇಂದ್ರನ ವಜ್ರಾಯುಧ­ದಿಂದ ಹೊಡೆತ ತಿಂದು ಅವನ ಹನು (ದವಡೆ) ಊ­­ದಿ, ಆತ ಹನುವಾ(ಮಾ)ನ್‌ ಆದ ಕಥೆ ಜನಪ್ರಿಯ. ಹಂಪಿಯ ಜನರು ಹಾಡುವ ಒಂದು ಹಾಡು ಇನ್ನೂ ಸ್ವಾರಸ್ಯವಾಗಿದೆ.

ಅಡಿವ್ಯಾ ರಂಜನದೇವಿ ಹನುಮಾನ ಹಡೆದಾಳೆ
ತೊಡೆಯ ತೊಳಿಯೋಕೆ ನೀರಿಲ್ಲ | ಹನುಮಣ್ಣ
ಸುತ್ತಲ ಹೊಳೆಯ ತಿರುವ್ಯಾನು |
ತಿರುವಿ ತಾ ನೀರ ತಂದಾನು ||

ಇವರ ಪ್ರಕಾರ, ಚಕ್ರತೀರ್ಥದಲ್ಲಿ ಹನುಮನೇ ತುಂಗಭದ್ರೆಯ ಹರಿವ ದಿಕ್ಕು ಬದಲಿಸಿದ್ದು, ಅವರು ಅದನ್ನು “ಹನುಮನ ಮಡು’ ಎಂದೇ ಕರೆಯುತ್ತಾರೆ. ಈ ಮುಗ್ಧ ಜನರ ನಂಬಿಕೆ, ಕಲ್ಪನೆಗೆ ಒಂದು ಶರಣು. ಇಂಥ ಹನುಮ ಬಲು ಬುದ್ಧಿವಂತ ಕೂಡ. ಅಂತೆಯೇ, ಆತ ವಾನರ ರಾಜ್ಯದ ಪ್ರಧಾನಿ. ಸೀತೆಯನ್ನರಸುತ್ತ ರಾಮ- ಲಕ್ಷ್ಮಣರು ಕಿಷ್ಕಿಂಧೆಗೆ ಬಂದಾಗಲೇ ರಾಮ- ಹನುಮರ ಪ್ರಥಮ ಭೇಟಿ. ಇಬ್ಬರದೂ ಜನ್ಮ ಜನ್ಮಾಂತರಗಳ ಸಂಬಂಧವಲ್ಲವೇ? ಇಬ್ಬರಿಗೂ ಪ್ರಥಮ ನೋಟದಲ್ಲಿಯೇ ಪ್ರೀತಿ, ವಿಶ್ವಾಸ, ಗೌರವ ಮೊಳೆತದ್ದು ರಾಮಾಯಣ­ದುದ್ದಕ್ಕೂ, ಅಷ್ಟೇ ಅಲ್ಲ; ಇಂದಿನವರೆಗೂ ಸಾಗಿಬಂದಿದೆ.

* ವಸುಂಧರಾ ದೇಸಾಯಿ

ಟಾಪ್ ನ್ಯೂಸ್

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

22

Ganesh Chaturthi: ಗಣೇಶ ಬಂದ

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Actor Vinayakan: ವಿಮಾನ ನಿಲ್ದಾಣದ ಸಿಬ್ಬಂದಿಗಳ ಜತೆ ವಾಗ್ವಾದ; ನಟ ವಿನಾಯಗನ್ ವಶಕ್ಕೆ

Actor Vinayakan: ವಿಮಾನ ನಿಲ್ದಾಣದ ಸಿಬ್ಬಂದಿಗಳ ಜತೆ ವಾಗ್ವಾದ; ನಟ ವಿನಾಯಗನ್ ವಶಕ್ಕೆ

17-desiswara-ganaap

Ganesh Chaturthi Special Story: ವಿಶ್ವಪೂಜಿತ ವಿನಾಯಕ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bachuilar-of-coro

ಬ್ಯಾಚುಲರ್‌ ಆಫ್ ಕೊರೊನಾ

niffa-kanna

ನಿಫಾ ಕನ್ನಡಿಯಲ್ಲಿ ಕೊರೊನಾ ಬಿಂಬ

yava-sama

ಯಾವ ಸಮಸ್ಯೆಯೂ ಶಾಶ್ವತವಲ್ಲ…

mole

ಮೊಳೆ ಕೀಳುವ ಸೈನಿಕರು

hiriyarige

ಹಿರಿಯರಿಗೆ ಟೆರೇಸೇ ಪಾರ್ಕು, ಮೈದಾನ

MUST WATCH

udayavani youtube

ಗಜಪಯಣಕ್ಕೆ ಚಾಲನೆ : ಕ್ಯಾಪ್ಟನ್‌ ಅಭಿಮನ್ಯು ನೇತೃತ್ವದ 9 ಆನೆಗಳ ಗಜಪಡೆ

udayavani youtube

ರಕ್ಷಾ ಬಂಧನದ ಅರ್ಥ ಮತ್ತು ಮಹತ್ವ | ರಕ್ಷಾ ಬಂಧನ 2024

udayavani youtube

ಕಡಿಮೆ ಬೆಲೆಗೆ ಫಸ್ಟ್ ಕ್ಲಾಸ್ ಬಾಳೆಎಲೆ ಊಟ

udayavani youtube

ಆ.18 ರಿಂದ ಶ್ರೀಕೃಷ್ಣ ಮಠದಲ್ಲಿ ಕ್ರೀಡೋತ್ಸವ

udayavani youtube

ತಮ್ಮ ಮಕ್ಕಳನ್ನು ಬೆಳೆಸುವ ಸಲುವಾಗಿ ಕಂಡೋರ ಮಕ್ಕಳ ಭವಿಷ್ಯ ನಾಶ. ಈ ವ್ಯವಸ್ಥೆಗೆ ನಾನೂ ಬಲಿ

ಹೊಸ ಸೇರ್ಪಡೆ

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

22

Ganesh Chaturthi: ಗಣೇಶ ಬಂದ

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.