ಹೊಲದಲ್ಲಿ ಗರಿಕೆ ಕಳೆ

ಕೃಷಿ ಡಾಕ್ಟರ್‌; ಸಮಸ್ಯೆಗೊಂದು ಪರಿಹಾರ

Team Udayavani, Jan 6, 2020, 4:00 AM IST

1

ನಮ್ಮ ಹೊಲದಲ್ಲಿ ಗರಿಕೆ (ಜೇಕು) ಸಮಸ್ಯೆ ತುಂಬಾ ದಿನಗಳಿಂದ ಇದೆ. ಎಷ್ಟೆ ಉಳುಮೆ ಮಾಡಿದರೂ ಹೋಗಲಾಡಿಸಲು ಆಗುತ್ತಿಲ್ಲ.
– ನಾಗರಾಜ ಗೋಣೆಪ್ಪನವರ, ಹಡಗಲಿ, ಬಳ್ಳಾರಿ

ಪರಿಹಾರ-
ಕಳೆ ಮುಖದಲ್ಲಿದ್ದರೆ ಚೆನ್ನ, ಆದರೆ ಹೊಲದಲ್ಲಿ ಬೆಳೆವ ಕಳೆಯಿಂದ ನಷ್ಟವೇ ಹೆಚ್ಚು. “ಗರಿಕೆ’ ಬಹು ಸಮಸ್ಯಾತ್ಮಕ ಬಹುವಾರ್ಷಿಕ ಕಳೆಯಾಗಿದೆ. ಬೀಜಗಳಿಂದ ನೆಲದೊಳಗಿನ ಕಾಂಡದ ತುಂಡುಗಳಿಂದಲೂ, ಗರಿಕೆ ಬೆಳೆಯುವುದು. ಆದುದರಿಂದ ಉಳುಮೆಯಂಥ ಬೇಸಾಯ ಕ್ರಮಗಳಿಂದ ಅದರ ಹತೋಟಿ ಕಷ್ಟ. ಈ ಕ್ರಮಗಳಿಂದ ತಾತ್ಕಾಲಿಕ ಮುಕ್ತಿ ದೊರೆಯುತ್ತದೆ. ಕೆಲ ಸಮಯದ ನಂತರ ಗರಿಕೆ ಮತ್ತೆ ಬೆಳೆಯುತ್ತದೆ. ಇದಕ್ಕೆ ಶಾಶ್ವತ ಪರಿಹಾರ ಎಂದರೆ ಕೀಟನಾಶಕ ಸಿಂಪಡಣೆ. ಅದೂ ಮೂರು ಬಾರಿ ಮಾಡಬೇಕಾಗುತ್ತದೆ. ಈ ಕಳೆ (ಕರಿಕೆ/ ಜೇಕು) ಹಸಿರಾಗಿದ್ದಾಗ ಪ್ರತಿ ಲೀಟರ್‌ ನೀರಿಗೆ 12- 15 ಮಿ.ಲೀ. ಗ್ಲೆ„ಫೋಸೇಟ್‌ 41 ಇ.ಸಿ. ಅಥವಾ ಪ್ಯಾರಾಕ್ಟಾಟ್‌ 24 ಇ.ಸಿ. ಹಾಗೂ 20 ಗ್ರಾಂ. ಯೂರಿಯಾವನ್ನು ಬೆರೆಸಿ ಡಬ್ಲೂ ಎಫ್.ಎನ್‌.40 ಅಥವಾ ವಿ.ಎಲ್‌.ವಿ 200 ನಾಝಲ್‌ಅನ್ನು ಕೈಚಾಲಿತ ಪಂಪಿನಿಂದ ಮೂರು ಬಾರಿ ಸಿಂಪರಣೆ ಮಾಡಬೇಕು.

ಮೊದಲನೇ ಸಿಂಪರಣೆಯನ್ನು ಮುಂಗಾರು ಮಳೆಯಾದ ನಂತರ ಹೆಚ್ಚು ಹಸುರಾಗಿದ್ದಾಗ, ಗರಿಕೆ ಮಾತ್ರ ತೊಯುವಂತೆ ಚೆನ್ನಾಗಿ ಸಿಂಪಡಣೆ ಮಾಡಬೇಕು. ಎರಡನೇ ಸಿಂಪರಣೆಯು ಮೊದಲನೆಯ ಸಿಂಪರಣೆಯನ್ನು 3 ತಿಂಗಳ ನಂತರ (90 ದಿನಗಳು) ಪುನಃ ಚಿಗುರಿ ಹುಲುಸಾಗಿ ಬೆಳೆದ ಕರಿಕೆಯ ಮೇಲೆ ಮಾತ್ರ ಸಿಂಪಡಣೆ ಮಾಡಬೇಕು.

ಮೂರನೆ ಹಾಗೂ ಕೊನೆಯ ಸಿಂಪಡಣೆಯನ್ನು ಪುನಃ ಚಿಗುರಿ ಹುಲುಸಾಗಿ ಬೆಳೆದ ಕರಿಕೆಯ ಮೇಲೆ ಮಾತ್ರ ಸಿಂಪಡಣೆ ಮಾಡಬೇಕು. ಕಳೆನಾಶಕ ಸಿಂಪರಣೆ ಮಾಡಿದ 15ರಿಂದ 20 ದಿನಗಳ‌ ನಂತರ ಯಾವುದೇ ಬೆಳೆಯನ್ನು ಬೆಳೆಯಬಹುದು. ಈ ಸಿಂಪಡಣೆ ಮಾಡುವಾಗ ಯಾವುದೇ ಬೆಳೆಗಳಿಗೆ ತಗುಲದಂತೆ ಎಚ್ಚರಿಕೆ ವಹಿಸಬೇಕು. ನಂತರ ಸಿಂಪಡಕವನ್ನು ಚೆನ್ನಾಗಿ ತೊಳೆದು ಇಡಬೇಕು. ಕಳೆನಾಶಕಗಳನ್ನು ಸಿಂಪಡಣೆ ಮಾಡಲು ಪ್ರತ್ಯೇಕ ಸಿಂಪಡಕ ಇಡುವುದು ಸೂಕ್ತ.
ಸಂಪರ್ಕ: [email protected]

– ಡಾ. ಅಶೋಕ್‌ ಪಿ., ಹಿರಿಯ ಕೃಷಿ ವಿಜ್ಞಾನಿ

ಟಾಪ್ ನ್ಯೂಸ್

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

22

Ganesh Chaturthi: ಗಣೇಶ ಬಂದ

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Actor Vinayakan: ವಿಮಾನ ನಿಲ್ದಾಣದ ಸಿಬ್ಬಂದಿಗಳ ಜತೆ ವಾಗ್ವಾದ; ನಟ ವಿನಾಯಗನ್ ವಶಕ್ಕೆ

Actor Vinayakan: ವಿಮಾನ ನಿಲ್ದಾಣದ ಸಿಬ್ಬಂದಿಗಳ ಜತೆ ವಾಗ್ವಾದ; ನಟ ವಿನಾಯಗನ್ ವಶಕ್ಕೆ

17-desiswara-ganaap

Ganesh Chaturthi Special Story: ವಿಶ್ವಪೂಜಿತ ವಿನಾಯಕ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

ಪದವೀಧರನ ಕೈ ಹಿಡಿದ ಜೇನು ಕೃಷಿ

article about life story

ಬದುಕು ಕೊಟ್ಟ ಜೋಳದ ರೊಟ್ಟಿ!

suggestion to the sugarcane grower

ಕಬ್ಬು ಬೆಳೆವವರಿಗೆ ಕಿವಿಮಾತು

Oppo F19

ಒಪ್ಪಬಹುದಾದ ಒಪ್ಪೋ ಎಫ್19

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

MUST WATCH

udayavani youtube

ಗಜಪಯಣಕ್ಕೆ ಚಾಲನೆ : ಕ್ಯಾಪ್ಟನ್‌ ಅಭಿಮನ್ಯು ನೇತೃತ್ವದ 9 ಆನೆಗಳ ಗಜಪಡೆ

udayavani youtube

ರಕ್ಷಾ ಬಂಧನದ ಅರ್ಥ ಮತ್ತು ಮಹತ್ವ | ರಕ್ಷಾ ಬಂಧನ 2024

udayavani youtube

ಕಡಿಮೆ ಬೆಲೆಗೆ ಫಸ್ಟ್ ಕ್ಲಾಸ್ ಬಾಳೆಎಲೆ ಊಟ

udayavani youtube

ಆ.18 ರಿಂದ ಶ್ರೀಕೃಷ್ಣ ಮಠದಲ್ಲಿ ಕ್ರೀಡೋತ್ಸವ

udayavani youtube

ತಮ್ಮ ಮಕ್ಕಳನ್ನು ಬೆಳೆಸುವ ಸಲುವಾಗಿ ಕಂಡೋರ ಮಕ್ಕಳ ಭವಿಷ್ಯ ನಾಶ. ಈ ವ್ಯವಸ್ಥೆಗೆ ನಾನೂ ಬಲಿ

ಹೊಸ ಸೇರ್ಪಡೆ

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

22

Ganesh Chaturthi: ಗಣೇಶ ಬಂದ

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.