ಬರ್ರೀ, ಇದು ಸ್ಟ್ರಾಬೆರ್ರಿ!

ಹುಲ್ಲಂಬಿಯಲ್ಲಿ ಅಮೆರಿಕದ ಹಣ್ಣಿನ ಘಮಲು

Team Udayavani, Jan 6, 2020, 4:11 AM IST

2

ಝೀರೋ ಟು ಹೀರೋ
ಹೆಸರು- ಶಶಿಧರ ಗೊರವರ
ಸ್ಥಳ- ಹುಲ್ಲಂಬಿ ಗ್ರಾಮ, ಕಲಘಟಗಿ, ಧಾರವಾಡ
ಸಿನ್ಸ್‌- 2009

-200 ಕೆ.ಜಿ ಇಳುವರಿ
-65,000 ರೂ. ಲಾಭ
-ನರ್ಸರಿಯಲ್ಲಿ 40,000 ಸಸಿಗಳು

ಪ್ರಗತಿಪರ ರೈತ ಶಶಿಧರ ಗೊರವರ, ತಮ್ಮ ಜಮೀನಿನಲ್ಲಿ ಸಾವಯವ ಪದ್ಧತಿಯಲ್ಲಿ ಅಮೆರಿಕದ ಫಲ ಸ್ಟ್ರಾಬೆರ್ರಿ ಬೆಳೆದು ಯಶಸ್ವಿಯಾಗಿದ್ದಾರೆ. ಆ ಮೂಲಕ ನೆರೆಹೊರೆಯ ರೈತರಿಗೆ ಹೊಸದೊಂದು ವಾಣಿಜ್ಯ ಕೃಷಿಯಲ್ಲಿ ತೊಡಗಲು ಪ್ರೇರಣೆಯಾಗಿದ್ದಾರೆ.

ಮಹಾರಾಷ್ಟ್ರದ ಮಹಾಬಲೇಶ್ವರದಲ್ಲಿ ಸ್ವಂತ ಕಟ್ಟಡ ನಿರ್ಮಾಣ ಕಂಪನಿ ನಡೆಸುತ್ತಿದ್ದ ಶಶಿಧರ, ಅಲ್ಲಿ ಪ್ರತಿಯೊಬ್ಬ ರೈತರೂ ಸ್ಟ್ರಾಬೆರ್ರಿಯನ್ನು ಅಗಾಧ ಪ್ರಮಾಣದಲ್ಲಿ ಬೆಳೆಯುವುದನ್ನು ನೋಡಿ ಅದರ ಬಗ್ಗೆ ಆಸಕ್ತಿ ಬೆಳೆಸಿಕೊಂಡರು. ತಾವೂ ಊರಿನಲ್ಲಿ ಈ ಫಲವನ್ನು ಯಾಕೆ ಬೆಳೆಯಬಾರದು ಎಂಬ ಆಲೋಚನೆ ಅವರಿಗೆ ಬಂದಿತು. ಮುಂದೆ, ಸ್ಟ್ರಾಬೆರ್ರಿ ಬೆಳೆಯುವ ಬಗ್ಗೆ ತರಬೇತಿ ಪಡೆದರು. ಇಂದು, ಶಶಿಧರ್‌ ಅವರು ಕೇವಲ ಹಣ್ಣು ಬೆಳೆಯುವುದಷ್ಟೇ ಅಲ್ಲ, ಬೆಂಗಳೂರಿನ ಒಂದು ಕಂಪನಿಯಿಂದ ತಾವು ಬೆಳೆದ ಹಣ್ಣಿಗೆ ಆರ್ಡರ್‌ ಕೂಡ ಪಡೆದುಕೊಂಡಿದ್ದಾರೆ.

ಪ್ರಯೋಗಾತ್ಮಕ ಮನೋಭಾವ ಬೇಕು
ಒಂದು ಎಕರೆ ಭೂಮಿಯಲ್ಲಿ ಸ್ಟ್ರಾಬೆರ್ರಿ ಸಸಿಗಳನ್ನು ನಾಟಿ ಮಾಡಲಾಗಿದ್ದು, ಪ್ರತಿದಿನ 200 ಕೆ.ಜಿ. ಇಳುವರಿ ಪಡೆಯುತ್ತಿದ್ದಾರೆ. ಮುಂದಿನ ದಿನಗಳಲ್ಲಿ ದಿನಕ್ಕೆ 400 ಕೆ.ಜಿ. ಇಳುವರಿ ಪಡೆಯುವ ವಿಶ್ವಾಸ ಅವರಿಗಿದೆ. ಸದ್ಯ ಹೊಲದಲ್ಲಿಯೇ ಪ್ಯಾಕಿಂಗ್‌ ಮಾಡಿ ಮಾರುಕಟ್ಟೆಗೆ ಸಾಗಿಸುತ್ತಿದ್ದಾರೆ. ರೈತರು 10 ಗುಂಟೆ ಭೂಮಿಯಲ್ಲಿ ಸ್ಟ್ರಾಬೆರ್ರಿ ಬೆಳೆದೂ ಆರ್ಥಿಕ ಲಾಭ ಪಡೆಯಬಹುದು. ಒಂದು ಗುಂಟೆ ಜಾಗದಲ್ಲಿ 500 ಸಸಿಗಳನ್ನು ನೆಡಬಹುದು. ಹಳ್ಳಿಗಳಲ್ಲಿ ಮಾತ್ರವಲ್ಲ, ನಗರಗಳಲ್ಲಿನ ಖಾಲಿ ಪ್ಲಾಟ್‌ಗಳಲ್ಲಿಯೂ ಬೆರ್ರಿ ಹಣ್ಣಿನ ಕೃಷಿ ಮಾಡಬಹುದಾಗಿದೆ. ಈಗ “ವರ್ಟಿಕಲ್‌ ಫಾರ್ಮಿಂಗ್‌’ ಪದ್ಧತಿಯನ್ನು ಬಳಸಿ ಸ್ಟ್ರಾಬೆರ್ರಿ ಬೆಳೆಯಲಾಗುತ್ತಿದೆ. ಆದಾಯ ನಿಶ್ಚಿತ.

ಇಂಪೋರ್ಟೆಡ್‌ ಸಸಿಗಳು
ಸ್ಟ್ರಾಬೆರ್ರಿ ಹಣ್ಣು ಬೆಳೆಯುವ ಬಗ್ಗೆ ಶಶಿಧರ ಗೊರವರ ಕೃಷಿ ತಜ್ಞರನ್ನು, ಕೃಷಿ ವಿಜ್ಞಾನಿಗಳನ್ನು ಕೇಳಿದಾಗ ಅವರು, ಇಲ್ಲಿನ ಹವಾಗುಣ ಸೂಕ್ತವಾಗಿಲ್ಲ ಎಂದು ನಿರಾಸೆ ಮೂಡಿಸಿದ್ದರು. ಆದರೂ ಛಲ ಬಿಡದ ಶಶಿಧರ ಆದದ್ದಾಗಲಿ ಎಂದುಕೊಂಡು ಪ್ರಯತ್ನ ಮಾಡಲು ಮುಂದಾದರು. ಅಮೆರಿಕದಿಂದ 230 ಸಸಿಗಳನ್ನು ತರಿಸಿದರು. ತಾವೇ ಸ್ವತಃ ನರ್ಸರಿ ಮಾಡುವ ಮೂಲಕ 40,000 ಸಸಿಗಳನ್ನಾಗಿ ಮಾಡಿ ಅವುಗಳನ್ನು ನಾಟಿ ಮಾಡಿ ಬೆಳೆಸಿದರು. ಸಸಿಗಳ ಬುಡದಲ್ಲಿ ಮಲಿcಂಗ್‌ ಪೇಪರ್‌ ಹಾಕಿ ಕಸ ಬೆಳೆಯದಂತೆ ಮಾಡಿದ್ದಾರೆ. ಕೆ.ಜಿ 325 ರೂ.ಗಳಂತೆ ಮಾರುಕಟ್ಟೆಯ ಸಂಸ್ಥೆ ಶಶಿಧರ್‌ಅವರಿಂದ ಖರೀದಿಸುತ್ತಿದೆ.

ಹೊಲದಾಗೆ ನರ್ಸರಿ
ಸ್ಟ್ರಾಬೆರ್ರಿಯಲ್ಲಿ ಸ್ವೀಟ್‌ ಸೆನ್ಸೇಷನ್‌, ನಾಬಿಯಾ ತಳಿಗಳನ್ನು ಬೆಳೆಯುತ್ತಿದ್ದು, ಸ್ಟ್ರಾಬೆರ್ರಿಯಲ್ಲದೇ ಗೂಸ್‌ಬೆರ್ರಿ, ರಾಸ್‌ಬೆರ್ರಿ, ಮಾಲಬೆರ್ರಿ ಹಣ್ಣುಗಳನ್ನು ಕೂಡ ಬೆಳೆಯಲು ಶಶಿಧರ ಮುಂದಾಗಿದ್ದಾರೆ. ಹೊಲದಲ್ಲೇ ನರ್ಸರಿ ಆರಂಭಿಸಿ ಆಸಕ್ತರಿಗೆ ಸಸಿಗಳನ್ನು ಮಾರಾಟ ಮಾಡುವ ಉದ್ದೇಶವನ್ನೂ ಅವರು ಹೊಂದಿದ್ದಾರೆ.
ಹೆಚ್ಚಿನ ಮಾಹಿತಿಗೆ: 8698889944 (ಶಶಿಧರ)

ಮಧ್ಯವರ್ತಿಗಳ ಹಾವಳಿ ತಪ್ಪಿಸುವುದು ಅವಶ್ಯ. ರೈತರು ಕಷ್ಟ ಪಟ್ಟು ಹಗಲಿರುಳು ದುಡಿದ ನಂತರ ಬಂದ ಫಸಲಿಗೆ ಉತ್ತಮ ಬೆಲೆ ಸಿಗಬೇಕು. ಸೂಕ್ತ ಮಾರುಕಟ್ಟೆ ದೊರೆತರೆ ಇನ್ನಷ್ಟು ರೈತರು ಸ್ಟ್ರಾಬೆರ್ರಿ ಹಣ್ಣುಗಳನ್ನು ಬೆಳೆಯಲು ಮುಂದಾಗುತ್ತಾರೆ.
– ಶಶಿಧರ ಗೊರವರ

ಮೀನು ಗೊಬ್ಬರ, ಗೋಮೂತ್ರ
ಶಶಿಧರ್‌ ಅವರು ಸಾವಯವ ಕೃಷಿ ಪದ್ಧತಿ, ಇಸ್ರೇಲ್‌ ಪದ್ಧತಿಯನ್ನು ಅಳವಡಿಸಿಕೊಂಡಿದ್ದಾರೆ. ಹನಿ ನೀರಾವರಿ, ಎರೆಹುಳ ಗೊಬ್ಬರ, ಗೋಮೂತ್ರ, ಸೆಗಣಿ ಮುಂತಾದ ಜೈವಿಕ ತ್ಯಾಜ್ಯಗಳನ್ನೇ ಬಳಸಿ ಉತ್ತಮ ಫ‌ಸಲನ್ನು ಪಡೆಯುತ್ತಿದ್ದಾರೆ. ಸಮೀಪದ ಮಾರುಕಟ್ಟೆಯಲ್ಲಿ ಸಿಗುವ ಕೊಳೆತ, ಹಾಳಾದ ಮೀನುಗಳನ್ನು ಕೆ.ಜಿ.ಗಟ್ಟಲೆ ಖರೀದಿಸಿ ತಂದು ಪ್ಲಾಸ್ಟಿಕ್‌ ಟ್ಯಾಂಕ್‌ ಒಂದರಲ್ಲಿ ತುಂಬಿ, ಬೆಲ್ಲವನ್ನು ಸೇರಿಸಿ 21 ದಿನಗಳ ಕಾಲ ಕೊಳೆಸಿ ಮೀನುಗೊಬ್ಬರವನ್ನು ತಯಾರಿಸುತ್ತಾರೆ. ಸ್ಟ್ರಾಬೆರ್ರಿಯನ್ನು ದೇಶದ ಕೆಲ ರಾಜ್ಯಗಳಲ್ಲಿ ಬೆಳೆಯಲಾಗುತ್ತಿದೆ. ಮಹಾರಾಷ್ಟ್ರದ ಮಹಾಬಲೇಶ್ವರದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಬೆಳೆಯಲಾಗುತ್ತಿದೆ. ಇದನ್ನು ಐಸ್‌ಕ್ರೀಮ್‌, ಜಾಮ್‌ ಹಾಗೂ ಔಷಧ ತಯಾರಿಕೆಯಲ್ಲಿ ಬಳಸಲಾಗುತ್ತದೆ.

– ವಿಶ್ವನಾಥ ಕೋಟಿ

ಟಾಪ್ ನ್ಯೂಸ್

Salman Khan: 5 ಕೋಟಿ ನೀಡಿ, ಇಲ್ಲದಿದ್ದರೆ… ಸಲ್ಮಾನ್ ಖಾನ್ ಗೆ ಮತ್ತೆ ಜೀವ ಬೆದರಿಕೆ

Salman Khan: 5 ಕೋಟಿ ನೀಡಿ, ಇಲ್ಲದಿದ್ದರೆ… ಸಲ್ಮಾನ್ ಖಾನ್ ಗೆ ಮತ್ತೆ ಜೀವ ಬೆದರಿಕೆ

2-vijayapura

Vijayapura: ಗ್ರಾಮಕ್ಕೆ ನುಗ್ಗಿದ ಮೊಸಳೆ ಸೆರೆ

Jaiswal

Canada Vs India: ನಿಜ್ಜರ್‌ ಹತ್ಯೆ ಕೇಸಲ್ಲಿ ಸತ್ಯ ಒಪ್ಪಿದ ಕೆನಡಾ ಪ್ರಧಾನಿ: ಕೇಂದ್ರ ಸರಕಾರ

Bhagavath

Helping Nature: ಭಾರತ ದಾಳಿ ಮಾಡಲ್ಲ, ತನ್ನ ಮೇಲಿನ ದಾಳಿಯನ್ನೂ ಸಹಿಸಲ್ಲ: ಭಾಗವತ್‌

ಪ್ರವಾಸ ಸಂದರ್ಭ ವಿದ್ಯಾರ್ಥಿನಿಯರಿಗೆ ಉಪನ್ಯಾಸಕರಿಂದ ಮದ್ಯಪಾನ: ದೂರು

Kanakapura: ಪ್ರವಾಸ ಸಂದರ್ಭ ವಿದ್ಯಾರ್ಥಿನಿಯರಿಗೆ ಉಪನ್ಯಾಸಕರಿಂದ ಮದ್ಯಪಾನ: ದೂರು

CJI-Ind

Recommendation: ನ್ಯಾ. ಸಂಜೀವ್‌ ಖನ್ನಾ ಸುಪ್ರೀಂಕೋರ್ಟ್‌ ಮುಂದಿನ ಮುಖ್ಯ ನ್ಯಾಯಮೂರ್ತಿ

Koppal: ಚಿಕನ್‌, ಮಟನ್‌ ಸೆಂಟರ್‌ಗೆ ಸಚಿವೆ ಶೋಭಾ ಕರಂದ್ಲಾಜೆ ಹೆಸರಿಟ್ಟ ಅಭಿಮಾನಿ

Koppal: ಚಿಕನ್‌, ಮಟನ್‌ ಸೆಂಟರ್‌ಗೆ ಸಚಿವೆ ಶೋಭಾ ಕರಂದ್ಲಾಜೆ ಹೆಸರಿಟ್ಟ ಅಭಿಮಾನಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

ಪದವೀಧರನ ಕೈ ಹಿಡಿದ ಜೇನು ಕೃಷಿ

article about life story

ಬದುಕು ಕೊಟ್ಟ ಜೋಳದ ರೊಟ್ಟಿ!

suggestion to the sugarcane grower

ಕಬ್ಬು ಬೆಳೆವವರಿಗೆ ಕಿವಿಮಾತು

Oppo F19

ಒಪ್ಪಬಹುದಾದ ಒಪ್ಪೋ ಎಫ್19

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

MUST WATCH

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

udayavani youtube

ಅಗಲಿದ ರತನ್ ಟಾಟಾಗೆ ಶ್ರದ್ಧಾಂಜಲಿ ಸಲ್ಲಿಸಿದ ಅಂಬಾನಿ ಕುಟುಂಬ

udayavani youtube

ಮಕ್ಕಳ ಸ್ಕ್ರೀನ್ ಟೈಮಿಂಗ್ ಕುರಿತು ಎಚ್ಚರಿಕೆ ಅತ್ಯವಶ್ಯಕ.. ಇಲ್ಲಿದೆ ಅಗತ್ಯ ಮಾಹಿತಿ

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

ಹೊಸ ಸೇರ್ಪಡೆ

Salman Khan: 5 ಕೋಟಿ ನೀಡಿ, ಇಲ್ಲದಿದ್ದರೆ… ಸಲ್ಮಾನ್ ಖಾನ್ ಗೆ ಮತ್ತೆ ಜೀವ ಬೆದರಿಕೆ

Salman Khan: 5 ಕೋಟಿ ನೀಡಿ, ಇಲ್ಲದಿದ್ದರೆ… ಸಲ್ಮಾನ್ ಖಾನ್ ಗೆ ಮತ್ತೆ ಜೀವ ಬೆದರಿಕೆ

2-vijayapura

Vijayapura: ಗ್ರಾಮಕ್ಕೆ ನುಗ್ಗಿದ ಮೊಸಳೆ ಸೆರೆ

Jaiswal

Canada Vs India: ನಿಜ್ಜರ್‌ ಹತ್ಯೆ ಕೇಸಲ್ಲಿ ಸತ್ಯ ಒಪ್ಪಿದ ಕೆನಡಾ ಪ್ರಧಾನಿ: ಕೇಂದ್ರ ಸರಕಾರ

Bhagavath

Helping Nature: ಭಾರತ ದಾಳಿ ಮಾಡಲ್ಲ, ತನ್ನ ಮೇಲಿನ ದಾಳಿಯನ್ನೂ ಸಹಿಸಲ್ಲ: ಭಾಗವತ್‌

ಪ್ರವಾಸ ಸಂದರ್ಭ ವಿದ್ಯಾರ್ಥಿನಿಯರಿಗೆ ಉಪನ್ಯಾಸಕರಿಂದ ಮದ್ಯಪಾನ: ದೂರು

Kanakapura: ಪ್ರವಾಸ ಸಂದರ್ಭ ವಿದ್ಯಾರ್ಥಿನಿಯರಿಗೆ ಉಪನ್ಯಾಸಕರಿಂದ ಮದ್ಯಪಾನ: ದೂರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.