ವ್ಯಾಪಾರದ ಬಂಡವಾಳ


Team Udayavani, Jan 7, 2020, 5:00 AM IST

Business-capital

ತನ್ನ ಕಾಲಕ್ಕಿಂತ ಹಿಂದೆ ಗಣಿತಜ್ಞರು ಕಂಡುಹಿಡಿದ, ಬರೆದ ಗಣಿತವನ್ನೆಲ್ಲ ಶಿಸ್ತುಬದ್ಧವಾಗಿ ಮತ್ತು ಅತ್ಯಂತ ಶಾಸ್ತ್ರೀಯವಾಗಿ ಜೋಡಿಸಿದ ಕೀರ್ತಿ ಯೂಕ್ಲಿಡನದು. ಅವನು ತನ್ನ ಕಾಲದ ಅತ್ಯಂತ ಪ್ರಾಮಾಣಿಕ ಮತ್ತು ಬುದ್ಧಿವಂತ ಸಂಪಾದಕ ಮಾತ್ರವಲ್ಲ, ಅತ್ಯಂತ ಯಶಸ್ವಿ ಶಿಕ್ಷಕನೂ ಕೂಡ. ಮೊದಲಿಗೆ, ಅವನಿಗೆ ತಾನು ಸಂಕಲಿಸಿದ ವಿಷಯಗಳ ಅನುಕ್ರಮಣಿಕೆ ಸರಿಯಾಗಿದೆಯೇ ಇಲ್ಲವೇ ತಿಳಿಯಬೇಕಾಗಿತ್ತು. ಹಾಗಾಗಿ, ಜ್ಯಾಮಿತಿಯನ್ನು ಸಂಕಲಿಸಿದ ಕ್ರಮದಲ್ಲೇ ಇನ್ನೊಬ್ಬನಿಗೆ ಕಲಿಸುವುದಕ್ಕಿಂತ ಬೇರೆ ಉಪಾಯವಿರಲಿಲ್ಲ. ಆದರೆ, ಯೂಕ್ಲಿಡ್‌ನ‌ ಕಾಲದ ಜನರಿಗೂ, ಈಗಿನಂತೆಯೇ ಗಣಿತ ಎಂದರೇನೆ ಅಲರ್ಜಿ!

ಅಷ್ಟೆಲ್ಲ ತಲೆನೋವು ಬರಿಸಿಕೊಂಡು ಈ ಗಣಿತವನ್ನು ಯಾಕಾದರೂ ಕಲಿಯಬೇಕು ಎಂಬ ಅಸಡ್ಡೆ ಬೇರೆ. ಇದಕ್ಕೆ ಯೂಕ್ಲಿಡ್‌ ಒಂದು ಉಪಾಯ ಮಾಡಿದ. ತನ್ನ ಗಣಿತದ ತರಗತಿಗಳಿಗೆ ಬರುವವರಿಗೆ ಪ್ರತಿಯೊಬ್ಬರಿಗೂ ಪ್ರತಿ ಅಧ್ಯಾಯದ ಕೊನೆಗೂ ಒಂದೊಂದು ಚಿನ್ನದ ನಾಣ್ಯ ಕೊಡುತ್ತೇನೆ ಎಂದು ಡಂಗುರ ಹೊಡೆಸಿದ. ಚಿನ್ನದ ಆಸೆಗಾಗಿ ಗಣಿತದ ಕಷಾಯ ಕುಡಿಯಲು ಸಾಕಷ್ಟು ಜನ ಬಂದರು. ಮೊದಮೊದಲಿಗೆ ಉಡಾಫೆ ತೋರಿದವರೂ ಬಳಿಕ ಆಸಕ್ತಿಯಿಂದ ಕಲಿಯುತ್ತಿದ್ದಾರೆ ಎಂದು ಯೂಕ್ಲಿಡ್‌ ಖಚಿತಪಡಿಸಿಕೊಂಡ. ಹಲವಾರು ಅಧ್ಯಾಯಗಳ ಪಾಠ ಮುಗಿಯಿತು. ಕೊನೆಗೊಂದು ದಿನ,&quot ಇಂದಿಗೆ ನನ್ನ ಗಣಿತ ಪಾಠಗಳು ಮುಗಿದವು. ಆದರೆ, ಈ ತರಗತಿಗಳು ಮುಗಿದದ್ದರ ದ್ಯೋತಕವಾಗಿ ಒಂದು ಪ್ರಶ್ನೆಯನ್ನು ನಿಮ್ಮೆದುರು ಇಡುತ್ತೇನೆ. ಉತ್ತರ ತೆಗೆಯುವುದು ಬಿಡುವುದು ನಿಮಗೆ ಬಿಟ್ಟದ್ದು|; ಎಂದು ಹೇಳಿ ಒಂದು ಸಮಸ್ಯೆಯನ್ನು ಕೊಟ್ಟ. ಅವನ ವಿದ್ಯಾರ್ಥಿಗಳಿಗೆ ಗಣಿತದ ಹುಚ್ಚು ಎಷ್ಟೊಂದು ತೀವ್ರವಾಗಿತ್ತೆಂದರೆ, ಆ ಸಮಸ್ಯೆಗೆ ಉತ್ತರ ತೆಗೆಯಲು ಹಗಲುರಾತ್ರಿ ಒದ್ದಾಡಿದರು. ಏನೇನೇ ತಿಪ್ಪರಲಾಗ ಹೊಡೆದರೂ ಸಮಸ್ಯೆ ಒಡೆಯುವುದಕ್ಕಾಗಲಿಲ್ಲ.

ಉತ್ತರಕ್ಕಾಗಿ ಯೂಕ್ಲಿಡ್‌ ಬಳಿ ಬಂದರು. ಆಗ ಯೂಕ್ಲಿಡ್‌, -quot ಸಮಸ್ಯೆಯೇನೋ ಪರಿಹರಿಸಬಲ್ಲೆ. ಆದರೆ, ಅದಕ್ಕೆ ಒಂದು ಚಿನ್ನದ ನಾಣ್ಯ ಖರ್ಚು ಮಾಡಬೇಕಾಗುತ್ತಲ್ಲ! -quot ಎಂದು ಮುಗುಳ್ನಕ್ಕ. ಹೀಗೆ, ಗಣಿತದ ರುಚಿ ಹತ್ತಿಸಿ, ಕೊನೆಗೆ ಅತ್ಯಂತ ಸ್ವಾರಸ್ಯಕರ ಪ್ರಶ್ನೆಗಳನ್ನು ನೀಡುತ್ತ ತಾನು ಖರ್ಚು ಮಾಡಿದ್ದ ಎಲ್ಲ ಚಿನ್ನದ ನಾಣ್ಯಗಳನ್ನು ಯೂಕ್ಲಿಡ್‌ ವಾಪಸ್‌ ಪಡೆದನಂತೆ.

ರೋಹಿತ್‌ ಚಕ್ರತೀರ್ಥ

ಟಾಪ್ ನ್ಯೂಸ್

Salman Khan: 5 ಕೋಟಿ ನೀಡಿ, ಇಲ್ಲದಿದ್ದರೆ… ಸಲ್ಮಾನ್ ಖಾನ್ ಗೆ ಮತ್ತೆ ಜೀವ ಬೆದರಿಕೆ

Salman Khan: 5 ಕೋಟಿ ನೀಡಿ, ಇಲ್ಲದಿದ್ದರೆ… ಸಲ್ಮಾನ್ ಖಾನ್ ಗೆ ಮತ್ತೆ ಜೀವ ಬೆದರಿಕೆ

2-vijayapura

Vijayapura: ಗ್ರಾಮಕ್ಕೆ ನುಗ್ಗಿದ ಮೊಸಳೆ ಸೆರೆ

Jaiswal

Canada Vs India: ನಿಜ್ಜರ್‌ ಹತ್ಯೆ ಕೇಸಲ್ಲಿ ಸತ್ಯ ಒಪ್ಪಿದ ಕೆನಡಾ ಪ್ರಧಾನಿ: ಕೇಂದ್ರ ಸರಕಾರ

Bhagavath

Helping Nature: ಭಾರತ ದಾಳಿ ಮಾಡಲ್ಲ, ತನ್ನ ಮೇಲಿನ ದಾಳಿಯನ್ನೂ ಸಹಿಸಲ್ಲ: ಭಾಗವತ್‌

ಪ್ರವಾಸ ಸಂದರ್ಭ ವಿದ್ಯಾರ್ಥಿನಿಯರಿಗೆ ಉಪನ್ಯಾಸಕರಿಂದ ಮದ್ಯಪಾನ: ದೂರು

Kanakapura: ಪ್ರವಾಸ ಸಂದರ್ಭ ವಿದ್ಯಾರ್ಥಿನಿಯರಿಗೆ ಉಪನ್ಯಾಸಕರಿಂದ ಮದ್ಯಪಾನ: ದೂರು

CJI-Ind

Recommendation: ನ್ಯಾ. ಸಂಜೀವ್‌ ಖನ್ನಾ ಸುಪ್ರೀಂಕೋರ್ಟ್‌ ಮುಂದಿನ ಮುಖ್ಯ ನ್ಯಾಯಮೂರ್ತಿ

Koppal: ಚಿಕನ್‌, ಮಟನ್‌ ಸೆಂಟರ್‌ಗೆ ಸಚಿವೆ ಶೋಭಾ ಕರಂದ್ಲಾಜೆ ಹೆಸರಿಟ್ಟ ಅಭಿಮಾನಿ

Koppal: ಚಿಕನ್‌, ಮಟನ್‌ ಸೆಂಟರ್‌ಗೆ ಸಚಿವೆ ಶೋಭಾ ಕರಂದ್ಲಾಜೆ ಹೆಸರಿಟ್ಟ ಅಭಿಮಾನಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

udayavani youtube

ಅಗಲಿದ ರತನ್ ಟಾಟಾಗೆ ಶ್ರದ್ಧಾಂಜಲಿ ಸಲ್ಲಿಸಿದ ಅಂಬಾನಿ ಕುಟುಂಬ

udayavani youtube

ಮಕ್ಕಳ ಸ್ಕ್ರೀನ್ ಟೈಮಿಂಗ್ ಕುರಿತು ಎಚ್ಚರಿಕೆ ಅತ್ಯವಶ್ಯಕ.. ಇಲ್ಲಿದೆ ಅಗತ್ಯ ಮಾಹಿತಿ

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

ಹೊಸ ಸೇರ್ಪಡೆ

Salman Khan: 5 ಕೋಟಿ ನೀಡಿ, ಇಲ್ಲದಿದ್ದರೆ… ಸಲ್ಮಾನ್ ಖಾನ್ ಗೆ ಮತ್ತೆ ಜೀವ ಬೆದರಿಕೆ

Salman Khan: 5 ಕೋಟಿ ನೀಡಿ, ಇಲ್ಲದಿದ್ದರೆ… ಸಲ್ಮಾನ್ ಖಾನ್ ಗೆ ಮತ್ತೆ ಜೀವ ಬೆದರಿಕೆ

2-vijayapura

Vijayapura: ಗ್ರಾಮಕ್ಕೆ ನುಗ್ಗಿದ ಮೊಸಳೆ ಸೆರೆ

Jaiswal

Canada Vs India: ನಿಜ್ಜರ್‌ ಹತ್ಯೆ ಕೇಸಲ್ಲಿ ಸತ್ಯ ಒಪ್ಪಿದ ಕೆನಡಾ ಪ್ರಧಾನಿ: ಕೇಂದ್ರ ಸರಕಾರ

Bhagavath

Helping Nature: ಭಾರತ ದಾಳಿ ಮಾಡಲ್ಲ, ತನ್ನ ಮೇಲಿನ ದಾಳಿಯನ್ನೂ ಸಹಿಸಲ್ಲ: ಭಾಗವತ್‌

ಪ್ರವಾಸ ಸಂದರ್ಭ ವಿದ್ಯಾರ್ಥಿನಿಯರಿಗೆ ಉಪನ್ಯಾಸಕರಿಂದ ಮದ್ಯಪಾನ: ದೂರು

Kanakapura: ಪ್ರವಾಸ ಸಂದರ್ಭ ವಿದ್ಯಾರ್ಥಿನಿಯರಿಗೆ ಉಪನ್ಯಾಸಕರಿಂದ ಮದ್ಯಪಾನ: ದೂರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.