ಇಂದ್ರಿಯ ಸೆಳೆತದ ಸಾಮರ್ಥ್ಯ
Team Udayavani, Jan 11, 2020, 4:29 AM IST
ವೇದವ್ಯಾಸರು ಹೇಳಿದ್ದನ್ನು ಅವರ ಪ್ರಿಯ ಶಿಷ್ಯರಾದ ಜೈಮಿನಿಗಳು ಶ್ರದ್ಧೆಯಿಂದ ಬರೆಯುತ್ತಿದ್ದರು. ಇಂದ್ರಿಯ ಸಂಯಮವೆಷ್ಟು ಕಠಿಣ ಎಂಬುದನ್ನು ಬಲ್ಲ ವ್ಯಾಸರು, “ಬಲವಾನ್ನಿಂದ್ರಿಯಗ್ರಾಮೋ, ವಿದ್ವಾಂಸಮಪಿಕರ್ಷತಿ’ ಎಂದು ಉತ್ಛರಿಸಿದರು. ಈ ಘಟ್ಟದಲ್ಲಿ ಜೈಮಿನಿಗಳಿಗೆ, “ಇದು ಹೇಗೆ ಸಾಧ್ಯ? ಇಂದ್ರಿಯಗಳು ಸಾಮಾನ್ಯ ಮಾನವರನ್ನು ಆಕರ್ಷಿಸಿ ದುರ್ಬಲಗೊಳಿಸಬಹುದು. ಆದರೆ, ವಿಶೇಷವಾದ ಸಾಧನೆ ಮಾಡಿದ ವಿದ್ವಾಂಸರನ್ನು ಜಾರಿಸಲಾರದಲ್ಲವೇ?’ ಎನ್ನಿಸಿತು. ತಕ್ಷಣವೇ ಜೈಮಿನಿಗಳು “ವಿದ್ವಾಂಸಮಪಿಕರ್ಷತಿ’ ಎಂದು ವ್ಯಾಸರು ಹೇಳಿದ್ದರೆ, ಅದನ್ನು “ವಿದ್ವಾಂಸಂ ನಾಪಕರ್ಷತಿ’ ಎಂದು ಬದಲಾಯಿಸಿದರು. ವ್ಯಾಸರೂ, ಏನೂ ತಿಳಿಯದವರಂತೆ ಮೌನವಹಿಸಿಬಿಟ್ಟರು.
ಅದು ಮಳೆಗಾಲದ, ಸ್ವತ್ಛಂದ ವಾತಾವರಣ. ಜೈಮಿನಿಗಳು ಸಂಧ್ಯಾಕಾಲದ ನಿತ್ಯಕರ್ಮಗಳನ್ನು ನೆರವೇರಿಸಿ ನೆಮ್ಮದಿಯಿಂದ ಆಸೀನರಾಗಿದ್ದರು. ಎದುರಿನಲ್ಲಿ ಅಗ್ನಿದೇವ ಪ್ರಜ್ವಲಿಸುತ್ತಿದ್ದ. ಪರಂಜ್ಯೋತಿಯನ್ನು ಪ್ರತಿನಿಧಿಸುವ ಜ್ಯೋತಿಯೊಂದು ದೀಪಸ್ಥಂಭದಲ್ಲಿ ಬೆಳಗುತ್ತಿತ್ತು. ಆ ಸಂದರ್ಭದಲ್ಲಿ ಹೆಣ್ಣೊಬ್ಬಳ ಮೊರೆ ಕೇಳಿಸಿತು. ಬಾಗಿಲಲ್ಲಿ ಮಳೆಯಲ್ಲಿ ನೆನೆದ ಒಬ್ಬಳು ಸುಂದರಿ ನಿಂತಿದ್ದಳು. “ಮಳೆ ನಿಲ್ಲುವವರೆಗೆ ಆಶ್ರಮದಲ್ಲಿ ನನಗೆ ಆಶ್ರಯ ದೊರೆಯಬಹುದೇ?’ ಎಂದು ಕೇಳಿದಳು.
ಮಹರ್ಷಿಗಳಿಗೆ ಅವಳ ಪರಿಸ್ಥಿತಿಯನ್ನು ನೋಡಿ ದಯೆ ಹುಟ್ಟಿತು. ಅನುಮತಿ ನೀಡಿದರು. ಆಕೆಯನ್ನು ಅಗ್ನಿಕುಂಡದ ಎದುರಿನಲ್ಲಿ ಕೂರಲು ಸೂಚಿಸಿದರು. ಆ ಸುಂದರಿಯನ್ನು ನೋಡುತ್ತಾ, ಕ್ರಮೇಣ ಜೈಮಿನಿಗಳ ಮನಸ್ಸು ವಿಚಲಿತವಾಯಿತು. ಆಕೆಯನ್ನು ಪತ್ನಿಯಾಗುವಂತೆ ಕೇಳಿಕೊಂಡರು. ಆಗ ಆಕೆ, “ನನ್ನನ್ನು ಎತ್ತಿಕೊಂಡು 3 ಬಾರಿ ಅಗ್ನಿಪ್ರದಕ್ಷಿಣೆ ಮಾಡಿದರೆ, ವಿವಾಹಕ್ಕೆ ನನ್ನ ಅನುಮತಿ ಸಿಕ್ಕಂತೆಯೇ’ ಎಂದಳು. ಜೈಮಿನಿಗಳು ಹಾಗೆಯೇ ಮಾಡಲು ಮುಂದಾದರು.
ಇನ್ನೇನು ಕೊನೆಯ ಪ್ರದಕ್ಷಿಣೆ. “ವಿದ್ವಾಂಸಂ ನಾಪಕರ್ಷತಿ’ ಎಂದರೇನೆಂದು, ಕೇಳಿದಳು. ಏನಾಶ್ಚರ್ಯ! ಅವರ ಕೈಯಲ್ಲಿ ಹೆಂಗಸಿನ ಬದಲಾಗಿ ಇದ್ದವರು ವ್ಯಾಸರು. ಜೈಮಿನಿಗಳಿಗೆ ಸೂಕ್ತ ಪಾಠ ಕಲಿಸಲು ವ್ಯಾಸರು ಈ ಪ್ರಯೋಗ ನಡೆಸಿದ್ದರು. ಇಂದ್ರಿಯ ನಿಯಂತ್ರಣ ಸುಲಭಸಾಧ್ಯವಲ್ಲ. ಶ್ರೀಗುರುವಿನ ಅನುಗ್ರಹ, ಮಾರ್ಗದರ್ಶನ, ಅದರಂತೆ ನಡೆಸಬೇಕಾದ ನಿರಂತರವಾದ ಅಭ್ಯಾಸ- ಇವೆಲ್ಲವೂ ಜತೆಗಿರಬೇಕು. “ಜೀವವು ತನಗೆ ಅನುಗುಣವಾಗಿ ಇಂದ್ರಿಯಗಳನ್ನಿಟ್ಟುಕೊಂಡರೆ ಜೀವನ’ ಎನ್ನುವುದು ಶ್ರೀರಂಗ ಮಹಾಗುರುಗಳ ನುಡಿ.
– ತಾರೋಡಿ ಸುರೇಶ, ಅಷ್ಟಾಂಗ ಯೋಗ ವಿಜ್ಞಾನ ಮಂದಿರಂ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Bhavani Revanna: ಅಪಹರಣ ಕೇಸ್-ಭವಾನಿ ರೇವಣ್ಣ ಜಾಮೀನು ರದ್ದತಿಗೆ ಸುಪ್ರೀಂ ನಕಾರ
Puttur: ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ್ಯನಿರ್ವಹಣಾಧಿಕಾರಿ ಅಪಘಾತದಲ್ಲಿ ಮೃತ್ಯು
Simha Roopini: ಭಕ್ತಿ ಭಾವದ ʼಸಿಂಹ ರೂಪಿಣಿʼ: ಕಿನ್ನಾಳ್ ರಾಜ್ ನಿರ್ದೇಶನ
Bengaluru: ಪತಿ, ಪ್ರಿಯಕರನ ಕೊಂದು ಪತಿ ಆತ್ಮಹತ್ಯೆ!
INDvsNZ: ಪಂತ್ ಬದಲು ಧ್ರುವ್ ಜುರೆಲ್ ವಿಕೆಟ್ ಕೀಪಿಂಗ್; ರಿಷಭ್ ಪಂತ್ ಗೆ ಏನಾಗಿದೆ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.