ಜಾತಕ ಕತೆಗಳು: ಸಿಂಹ ಮತ್ತು ಕತ್ತೆಯ ಸ್ನೇಹ


Team Udayavani, Jan 12, 2020, 5:09 AM IST

3

ಒಂದು ಕಾಡಿನಲ್ಲಿ ಸಿಂಹವೊಂದು ನೀರು ಕುಡಿಯಲು ಕೆರೆಗೆ ಇಳಿಯಿತು. ನೀರು ಕುಡಿದಾದ ಮೇಲೆ ಕೆರೆಯಿಂದ ಮೇಲೆ ಹೋಗಲು ಹೆಜ್ಜೆ ಇಡುವಾಗ ತನ್ನ ಕಾಲು ಕೆಸರಿನಲ್ಲಿ ಹೂತು ಹೋಗಿರುವುದು ಅರಿವಿಗೆ ಬಂತು. ಸಿಂಹಕ್ಕೆ ಸಹಾಯ ಮಾಡುವವರು ಯಾರೂ ಆ ದಾರಿಯಲ್ಲಿ ಬಾರದೇ ಇದ್ದುದರಿಂದ ಕೆಲವು ದಿನ ಆಹಾರವಿಲ್ಲದೇ ಸಿಂಹ ಅಲ್ಲಿಯೇ ಉಪವಾಸ ಬಿದ್ದಿತು.

ಒಂದು ದಿನ ಆ ದಾರಿಯಾಗಿ ಬಂದ ಕತ್ತೆಯು ಸಿಂಹದ ಅವಸ್ಥೆಯನ್ನು ಕಂಡು ಮರುಗಿತು. ಕೆಸರನ್ನು ಅತ್ತಿತ್ತ ಸರಿಸಿ ಸಿಂಹವನ್ನು ಮೇಲಕ್ಕೆ ಎಳೆದು ಕೆರೆಯಿಂದ ಹೊರಬರಲು ಸಹಾಯ ಮಾಡಿತು.

ಕತ್ತೆಯ ಉಪಕಾರದಿಂದ ಸಿಂಹಕ್ಕೆ ಬಹಳ ಖುಷಿಯಾಯಿತು. “”ನನ್ನ ಜೀವ ಉಳಿಸಿದ ನಿನಗೆ ಬಹಳ ಧನ್ಯವಾದ ಮಹರಾಯ” ಎಂದು ಸಿಂಹ ಹೇಳಿತು. ಅಲ್ಲದೆ, ತನ್ನ ಗುಹೆಯ ಬಳಿಯೇ ವಾಸಿಸುವಂತೆ ಕತ್ತೆಗೆ ಆಹ್ವಾನ ನೀಡಿತು. “”ನೀನು ನನ್ನ ಗುಹೆಯ ಬಳಿಯೇ ವಾಸಿಸು. ನನಗೆ ಸಿಕ್ಕಿದ ಆಹಾರದಲ್ಲಿ ನಿನಗೂ ಕೊಂಚ ಪಾಲು ಕೊಡುತ್ತೇನೆ” ಎಂದು ಸಿಂಹ ಹೇಳಿತು. ಸಿಂಹದ ಆಹ್ವಾನವನ್ನು ಒಪ್ಪಿಕೊಂಡ ಕತ್ತೆ, ಸಿಂಹದ ಗುಹೆಯ ಬಳಿಯೇ ವಾಸಮಾಡಲು ಶುರುಮಾಡಿತು. ಆಗಾಗ ಸಿಂಹವೂ ತನಗೆ ಸಿಕ್ಕ ಬೇಟೆಯಲ್ಲಿ ಕತ್ತೆಗೂ ಪಾಲು ಕೊಡುತ್ತಿತ್ತು.

ಸಿಂಹ ಮತ್ತು ಕತ್ತೆಯ ಸಂಸಾರ ದೊಡ್ಡದಾಯಿತು. ಸಿಂಹಕ್ಕೆ ಮದುವೆಯಾಗಿ ಮರಿಗಳು ಹುಟ್ಟಿದವು. ಕತ್ತೆಗೂ ಮದುವೆಯಾಗಿ, ಮರಿಗಳು ಹುಟ್ಟಿದವು. ಆದರೆ, ಸಿಂಹದ ಹೆಂಡತಿಗೆ ಈ ಕತ್ತೆ ಜೊತೆಗೆ ತನ್ನ ಗಂಡ ಸ್ನೇಹದಿಂದ ಇರುವುದನ್ನು ಕಂಡು ಬೇಸತ್ತು ಹೋಯಿತು. ತನ್ನ ಗಂಡನನ್ನು ಕತ್ತೆಯು ಸಂಕಷ್ಟದಿಂದ ಪಾರುಮಾಡಿರುವ ವಿಷಯ ಆಕೆಗೆ ಗೊತ್ತಿರಲಿಲ್ಲ. ಆಕೆ ತನ್ನ ಅಸಮಾಧಾನವನ್ನು ತನ್ನ ಮಕ್ಕಳ ಜೊತೆ ತೋಡಿಕೊಂಡಳು. ಮಕ್ಕಳು ತಮ್ಮ ಸ್ನೇಹಿತರಾದ ಕತ್ತೆ ಮರಿಗಳ ಬಗ್ಗೆ ಅಮ್ಮನ ಅಸಮಾಧಾನವನ್ನು ಹೇಳಿಕೊಂಡವು. ಆ ಮರಿಗಳು ಹೋಗಿ ಅಮ್ಮ ಕತ್ತೆಯ ಬಳಿ ವಿಷಯ ತಿಳಿಸಿದವು. ಅಮ್ಮ ಕತ್ತೆಯು ರಾತ್ರಿ ಮಾತನಾಡುತ್ತ, ಗಂಡನ ಬಳಿ ಈ ವಿಷಯ ತಿಳಿಸಿತು. ಇದನ್ನು ಕೇಳಿದ ಕತ್ತೆರಾಯನಿಗೆ ಬೇಸರವಾಗಿ ಸೀದಾ ಸ್ನೇಹಿತ ಸಿಂಹದ ಬಳಿಗೆ ಹೋಯಿತು. “”ಇನ್ನು ಮುಂದೆ ನಾವು ಇಲ್ಲಿ ವಾಸಿಸುವುದು ನಿಮಗೆ ಇಷ್ಟವಿಲ್ಲದೇ ಇದ್ದರೆ ಬೇರೆ ಕಡೆಗೆ ಹೋಗುತ್ತೇವೆ. ಈ ವಿಷಯವನ್ನು ಮುಂಚೆಯೇ ನಮಗೆ ಹೇಳಬೇಕಿತ್ತು” ಎಂದು ಹೇಳಿತು. ಕತ್ತೆಯ ಮಾತು ಕೇಳಿ ಸಿಂಹಕ್ಕೆ ಅಚ್ಚರಿಯಾಯಿತು. ಅಲ್ಲದೆ ತನಗೇನೂ ಸಮಸ್ಯೆ ಇಲ್ಲವೆಂದೂ, ನೀವೆಲ್ಲಾ ಇಲ್ಲಿಯೇ ವಾಸವಾಗಿರಿ ಎಂದೂ ಹೇಳಿತು.

ಆದರೆ, ಕತ್ತೆಯು ಇದನ್ನು ಒಪ್ಪಲಿಲ್ಲ. “”ಸ್ನೇಹಿತನೇ, ನನ್ನ ಮತ್ತು ನಿನ್ನ ನಡುವೆ ಆಪ್ತತೆ ಇರಬಹುದು. ಆದರೆ, ನಮ್ಮ ಕುಟುಂಬಗಳ ನಡುವೆ ಆಪ್ತತೆ ಇರಲೇಬೇಕು ಎಂದು ನಿರೀಕ್ಷಿಸುವುದು ಸರಿಯಲ್ಲ. ಆದ್ದರಿಂದ ನಾನು ಪ್ರತ್ಯೇಕವಾಗಿಯೇ ವಾಸಿಸುತ್ತೇನೆ. ನಾವಿಬ್ಬರೂ ಆಗಾಗ ಭೇಟಿಯಾಗಿ ಹರಟೆ ಹೊಡೆಯೋಣ, ಬೇಟೆಗೆ ಹೋಗೋಣ. ಆದರೆ, ಕುಟುಂಬವನ್ನು ಪ್ರತ್ಯೇಕವಾಗಿಯೇ ನೋಡಿಕೊಳ್ಳೋಣ” ಎಂದಿತು.

ಸಿಂಹಕ್ಕೂ ಕತ್ತೆಯ ಮಾತು ಸರಿ ಕಂಡಿತು.

ನೀತಿ: ನಮ್ಮ ವಿಚಾರವನ್ನೆಲ್ಲ ನಮ್ಮ ಕುಟುಂಬವೂ ಒಪ್ಪಬೇಕು ಎಂದು ನಿರೀಕ್ಷಿಸುವುದು ಸರಿಯಲ್ಲ.

ಟಾಪ್ ನ್ಯೂಸ್

18

Ganesh Chaturthi: ಸ್ವರ್ಣ ಗೌರಿ ಮತ್ತು ವಿಘ್ನ ವಿನಾಯಕನಿಗೊಂದು ನಮನ

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

22

Ganesh Chaturthi: ಗಣೇಶ ಬಂದ

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Actor Vinayakan: ವಿಮಾನ ನಿಲ್ದಾಣದ ಸಿಬ್ಬಂದಿಗಳ ಜತೆ ವಾಗ್ವಾದ; ನಟ ವಿನಾಯಗನ್ ವಶಕ್ಕೆ

Actor Vinayakan: ವಿಮಾನ ನಿಲ್ದಾಣದ ಸಿಬ್ಬಂದಿಗಳ ಜತೆ ವಾಗ್ವಾದ; ನಟ ವಿನಾಯಗನ್ ವಶಕ್ಕೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಹಸಿರು ವನಸಿರಿ ಸಂಡೂರಿನ ಸಿರಿ

ಹಸಿರು ವನಸಿರಿ ಸಂಡೂರಿನ ಸಿರಿ

Vinayak Torvi: ಸ್ವರ ಸಾಮ್ರಾಟರಿಗೆ ಅಮೃತ ಮಹೋತ್ಸವ 

Vinayak Torvi: ಸ್ವರ ಸಾಮ್ರಾಟರಿಗೆ ಅಮೃತ ಮಹೋತ್ಸವ 

18

World Dog Day: ನಾನು, ನನ್ನ ಕಾಳ..!

Krishna Janmashtami Special: ಸಂಭವಾಮಿ ಯುಗೇ ಯುಗೇ…

Krishna Janmashtami Special: ಸಂಭವಾಮಿ ಯುಗೇ ಯುಗೇ…

ದೇವರ ರೂಪದಲ್ಲಿ ಮಕ್ಕಳು!; ಶುರುವಾಗಿದೆ ಟ್ರೆಂಡ್‌

ದೇವರ ರೂಪದಲ್ಲಿ ಮಕ್ಕಳು!; ಶುರುವಾಗಿದೆ ಟ್ರೆಂಡ್‌

MUST WATCH

udayavani youtube

ಗಜಪಯಣಕ್ಕೆ ಚಾಲನೆ : ಕ್ಯಾಪ್ಟನ್‌ ಅಭಿಮನ್ಯು ನೇತೃತ್ವದ 9 ಆನೆಗಳ ಗಜಪಡೆ

udayavani youtube

ರಕ್ಷಾ ಬಂಧನದ ಅರ್ಥ ಮತ್ತು ಮಹತ್ವ | ರಕ್ಷಾ ಬಂಧನ 2024

udayavani youtube

ಕಡಿಮೆ ಬೆಲೆಗೆ ಫಸ್ಟ್ ಕ್ಲಾಸ್ ಬಾಳೆಎಲೆ ಊಟ

udayavani youtube

ಆ.18 ರಿಂದ ಶ್ರೀಕೃಷ್ಣ ಮಠದಲ್ಲಿ ಕ್ರೀಡೋತ್ಸವ

udayavani youtube

ತಮ್ಮ ಮಕ್ಕಳನ್ನು ಬೆಳೆಸುವ ಸಲುವಾಗಿ ಕಂಡೋರ ಮಕ್ಕಳ ಭವಿಷ್ಯ ನಾಶ. ಈ ವ್ಯವಸ್ಥೆಗೆ ನಾನೂ ಬಲಿ

ಹೊಸ ಸೇರ್ಪಡೆ

18

Ganesh Chaturthi: ಸ್ವರ್ಣ ಗೌರಿ ಮತ್ತು ವಿಘ್ನ ವಿನಾಯಕನಿಗೊಂದು ನಮನ

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

22

Ganesh Chaturthi: ಗಣೇಶ ಬಂದ

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.