ಕೊಠಡಿಯಲ್ಲಿ ಒಂದು ಮಂಚ ಬಿಟ್ಟರೆ ಎಲ್ಲೆಲ್ಲೂ ಪುಸ್ತಕಗಳೇ


Team Udayavani, Jan 12, 2020, 3:06 AM IST

kotadiyalli

ಬೆಂಗಳೂರು: ಸಂಶೋಧನೆಗೆ ಸಾಕ್ಷಿಪ್ರಜ್ಞೆಯಾಗಿದ್ದ ಡಾ.ಎಂ.ಚಿದಾನಂದ ಮೂರ್ತಿಯವರು ಮನೆ, ಮನದಲ್ಲಿ ಪುಸ್ತಕ, ಸಂಶೋಧನಾ ಕಡತಗಳನ್ನೇ ತುಂಬಿಕೊಂಡಿದ್ದು, ತಾವು ಮಲಗುವ ಕೊಠಡಿಯನ್ನು ಗ್ರಂಥಭಂಡಾರ ಮಾಡಿಕೊಂಡಿದ್ದರು.

ಮಲಗುವ ಕೊಠಡಿ, ವಿಶ್ರಾಂತಿ ಪಡೆಯುತ್ತಿದ್ದ ಕೊಠಡಿ ಸಹಿತವಾಗಿ ಮನೆಯ ಬಹುತೇಕ ಭಾಗಗಳಲ್ಲಿ ಕನ್ನಡ ಮತ್ತು ಇಂಗ್ಲಿಷ್‌ನ ಶ್ರೇಷ್ಠ ಗ್ರಂಥಗಳು, ಸಂಶೋಧನಾ ಕೃತಿಗಳು, ಸಂಶೋಧನೆಗೆ ಬೇಕಾಗಿದ್ದ ಆಯ್ದ ಗ್ರಂಥಮಾಲಿಕೆಗಳು ಹೀಗೆ ಜೀವನ ಪೂರ್ತಿ ಪುಸ್ತಕದ ಜತೆಗೆ ಜೀವಿಸಿ, ಮನೆಯೊಳಗೆ ದೊಡ್ಡ ಗ್ರಂಥಭಂಡಾರವನ್ನು ಬಿಟ್ಟು ಇಹಲೋಕ ತ್ಯಜಿಸಿದ್ದಾರೆ.

ಒಂದಿಂಚು ಜಾಗವಿಲ್ಲದಷ್ಟು ಪುಸ್ತಕವನ್ನು ಓದಿ, ಸಂರಕ್ಷಿಸಿಟ್ಟಿದ್ದಾರೆ. ಈ ಮಧ್ಯೆ ಅವರ ತಂದೆ- ತಾಯಿ ಫೋಟೋ ಒಂದನ್ನು ನೇತು ಹಾಕಿ ಕೊಂಡಿದ್ದಾರೆ. ರನ್ನ, ಪೊನ್ನ, ಜನ್ನ, ಕುವೆಂಪು, ಬೇಂದ್ರೆ, ಮಾಸ್ತಿ ಸಹಿತ ನವ್ಯ, ನವೋದಯ, ಬಂಡಾಯ ಹಾಗೂ ಎಲ್ಲ ರೀತಿಯ ಸಾಹಿತ್ಯವನ್ನು ಓದುವ ಅಭಿರುಚಿ ಅವರಲ್ಲಿತ್ತು.

ಇಂಗ್ಲಿಷ್‌ನ ದೊಡ್ಡ ದೊಡ್ಡ ಕೃತಿಗಳು ಅವರ ಮನೆಯಲ್ಲಿದೆ. ಇಡೀ ಮನೆಯೇ ಗ್ರಂಥಾಲಯವಾಗಿದ್ದರೂ, ಹಂಪಿ ನಗರದ ಸಾರ್ವಜನಿಕ ಗ್ರಂಥಾಲಯಕ್ಕೆ ಹೋಗುವುದನ್ನು ತಪ್ಪಿಸುತ್ತಿರಲಿಲ್ಲ. ಬಿಡುವು ಸಿಕ್ಕಾಗಲೆಲ್ಲಾ. ಸಾರ್ವಜನಿಕ ಗ್ರಂಥಾಲಯಕ್ಕೆ ಹೋಗಬೇಕಿರುವ ಪುಸ್ತಕವನ್ನು ಹುಡುಕಿ ಓದುತ್ತಿದ್ದ ಪ್ರವೃತ್ತಿ ಅವರದ್ದಾಗಿತ್ತು ಎಂದು ಒಡನಾಡಿಯೊಬ್ಬರು ಮಾಹಿತಿ ನೀಡಿದರು.

ಸಂಶೋಧನೆಗೆ ಓದು ಮೂಲವಾದರೆ ಸಂಶೋಧಕನಿಗೆ ಕ್ಷೇತ್ರ ಪರಿಚಯ ಅತಿಮುಖ್ಯ ಎಂಬಂತೆ, ಚಿದಾನಂದ ಮೂರ್ತಿಯವರು ತಾವು ಕೈಗೊಳ್ಳುವ ಯಾವುದೇ ಸಂಶೋಧನಾ ಕಾರ್ಯಕ್ಕಾಗಿ ಕ್ಷೇತ್ರ ಸರ್ವೆಗೆ ಹೋಗುವ ಮೊದಲು ಪುಸ್ತಕಾಧ್ಯಯನವನ್ನು ನಡೆಸುತ್ತಿದ್ದರು. ಸಂಶೋಧನೆಗೆ ಪೂರಕವಾದ ಎಲ್ಲ ಮಾಹಿತಿಗಳನ್ನು ಅಚ್ಚುಕಟ್ಟಾಗಿ ಕಲೆ ಹಾಕುತ್ತಿದ್ದರು. ಸಂಶೋಧನೆಯ ನೂರಾರು ಕಡತಗಳು ಅವರ ಮನೆಯಲ್ಲಿವೆ.

ಅಗೆದರು ಕಡಿಮೆಯಾಗದಷ್ಟು ಚಿನ್ನದ ಗಣಿ(ಪುಸ್ತಕಭಂಡಾರ) ಬಿಟ್ಟು ಹೋಗಿದ್ದಾರೆ. ಬಿಡುವಿನ ವೇಳೆ ಏನಾದರೂ ಬರೆಯುತ್ತಿದ್ದರು. ಇನ್ನು ಫೋನಿನಲ್ಲಿ ಹೆಚ್ಚು ಸಂಶೋಧನೆ ಕುರಿತ ಚರ್ಚೆ, ಸಂವಾದ ಮಾಡುತ್ತಿದ್ದರು ಎಂದು ಚಿ.ಮೂ. ಅವರ ಮಗ ವಿನಯಕುಮಾರ್‌ ವಿವರಿಸಿದರು.

ಹಿಂದೂಪರ ಚಿಂತನೆ ಹಾಗೂ ಸಿದ್ಧಾಂತ ಮೈಗೂಡಿಸಿಕೊಂಡಿದ್ದರೂ, ಭಾರತೀಯತೇ ಅಂತಿಮವೆಂದು ಪರಿಪಾಲಿಸುತ್ತಿದ್ದರು. ಕೇವಲ ಸಾಹಿತ್ಯಾತ್ಮಕವಾಗಿ ಪರಿಚಯವಾಗಿರಬಹುದು. ಆದರೆ, ಭಾರತವನ್ನು ಸಾಹಿತ್ಯಕ್ಕಿಂತ ಹೆಚ್ಚು ಪ್ರೀತಿಸುತ್ತಿದ್ದರು.
-ವಿನಯಕುಮಾರ್‌, ಚಿ.ಮೂ. ಅವರ ಮಗ

* ರಾಜು ಖಾರ್ವಿ ಕೊಡೇರಿ

ಟಾಪ್ ನ್ಯೂಸ್

DKSHi (3)

Water; ಗೌಡರು ಅಧಿಕಾರದಲ್ಲಿದ್ದಾಗ ನೀರಿನ ಹೋರಾಟ ಏಕೆ: ಡಿಕೆಶಿ

Beer

ಶಾಲೆ ಸಮೀಪ ಮದ್ಯದಂಗಡಿ ಇದ್ದರೆ ದೂರು ನೀಡಿ

1-dee

ಕಾಲೇಜುಗಳಲ್ಲಿ ಜಾನಪದ ಉತ್ಸವ: ಇಲಾಖೆ ಸೂಚನೆ

Gun-Fire

Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್‌: 3 ವರ್ಷದ ಮಗು ಮೃತ್ಯು!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

Delhi-Stamp

Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Instagram provides clues to finding suspect who had been on the run for 9 years

Bengaluru: 9 ವರ್ಷದಿಂದ ತಪ್ಪಿಸಿಕೊಂಡಿದ್ದ ಆರೋಪಿ ಪತ್ತೆಗೆ ಸುಳಿವು ನೀಡಿದ ಇನ್ಸ್ಟಾಗ್ರಾಮ್

21-cancer

Bengaluru: ಪ್ರತಿವರ್ಷ 500 ಮಕಳಲ್ಲಿ ಕ್ಯಾನ್ಸರ್‌ ಪತ್ತೆ !

20-metro

Metro: ಮರುಪರಿಷ್ಕರಣೆ: ತಪ್ಪದ ಮೆಟ್ರೋ ದರ ಗೊಂದಲ

19-bng

Bengaluru: 1.84 ಲಕ್ಷ ಬೀದಿ ನಾಯಿಗಳಿಗೆ ಸಂಯುಕ್ತ ಲಸಿಕೆ

18-bng

Bengaluru: ಇಂಧನ, ಪರಿಸರ ಸಂರಕ್ಷಣೆ ಎಲ್ಲರ ಜವಾಬ್ದಾರಿ

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

DKSHi (3)

Water; ಗೌಡರು ಅಧಿಕಾರದಲ್ಲಿದ್ದಾಗ ನೀರಿನ ಹೋರಾಟ ಏಕೆ: ಡಿಕೆಶಿ

Beer

ಶಾಲೆ ಸಮೀಪ ಮದ್ಯದಂಗಡಿ ಇದ್ದರೆ ದೂರು ನೀಡಿ

1-dee

ಕಾಲೇಜುಗಳಲ್ಲಿ ಜಾನಪದ ಉತ್ಸವ: ಇಲಾಖೆ ಸೂಚನೆ

arrested

CM ಕಚೇರಿಯ ಟಿಪ್ಪಣಿ ನಕಲು: ಬಂಧನ

Gun-Fire

Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್‌: 3 ವರ್ಷದ ಮಗು ಮೃತ್ಯು!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.