ಸರ್ಕಾರಿ ನೌಕರಿಗೆ ಬೈ; ಬಡಿಗತನಕ್ಕೆ ಜೈ


Team Udayavani, Jan 12, 2020, 11:05 AM IST

bk-tdy-1

ಬಾಗಲಕೋಟೆ: ಕಷ್ಟಪಟ್ಟು ಓದಿ ಅವರು ಸರ್ಕಾರಿ ಶಾಲೆಯೊಂದರ ಶಿಕ್ಷಕರಾಗಿದ್ದರು. ಮಕ್ಕಳಿಗೆ ನಿತ್ಯ ಪಾಠವೂ ಮಾಡುತ್ತಿದ್ದರು. ಆದರೆ, ತಲೆ ತಲಾಂತರದಿಂದ ಅವರ ಕುಟುಂಬ ಮಾಡಿಕೊಂಡು ಬಂದಿದ್ದ ಬಡಿಗತನ ಅವರನ್ನು ಕೈಬೀಸಿ ಕರೆಯುತ್ತಿತ್ತು. ಹೀಗಾಗಿ ಶಿಕ್ಷಕ ವೃತ್ತಿಯಲ್ಲಿದ್ದ ಅವರು, ತಮ್ಮ ಸಹೋದರನೊಂದಿಗೆ ಸರ್ಕಾರಿ ನೌಕರಿ ಬಿಟ್ಟು ಬಡಿಗತನಕ್ಕೆ ಮುಂದಾದರು. ಈಗ ಅದೇ ಕಸಬು ಅವರ ಕೈ ಹಿಡಿದಿದೆ.

ಇತ್ತೀಚಿನ ದಿನಗಳಲ್ಲಿ ಸರ್ಕಾರಿ ನೌಕರಿ ಸಿಗುವುದೇ ಕಷ್ಟ. ನೌಕರಿಗಾಗಿ ಅಲೆದಾಡುವವರ ಸಂಖ್ಯೆ ಹೆಚ್ಚಿದೆ. ಆದರೆ, ಹೊಳೆಆಲೂರಿನ ಇಬ್ಬರು ಸಹೋದರರು, ತಮಗೆ ಬಂದಿದ್ದ ಸರ್ಕಾರಿ ನೌಕರಿಯನ್ನೇ ತ್ಯಜಿಸಿ, ಬಡಿಗತನ ಮಾಡುತ್ತಿದ್ದಾರೆ. ತಮ್ಮ ಅಜ್ಜ, ತಂದೆ ಮಾಡಿಕೊಂಡು ಬಂದಿದ್ದ ಕಸಬನ್ನು ಮುಂದುವರಿಸಿದ್ದಾರೆ. ಅದರಿಂದಲೇ ಕೈತುಂಬ ಹಣವನ್ನೂ ಎಣಿಸುತ್ತಿದ್ದಾರೆ.

ಶಿಕ್ಷಕ-ಲೈನ್‌ಮನ್‌ ಹುದ್ದೆಗೆ ಬೈ: ಹೊಳೆಆಲೂರಿನ ಬಾಬು ಮತ್ತು ಅಬ್ದುಲ್‌ ಇಬ್ಬರು ಸಹೋದರರಿಗೆ ಸರ್ಕಾರಿ ನೌಕರಿ ಬಂದಿತ್ತು. ಬಾಬು ಅವರು, ರಾಯಚೂರು ಜಿಲ್ಲೆಯ ಮಾನ್ವಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರಾಗಿದ್ದರೆ, ಅಬ್ದುಲ್‌ ಅವರು ಹೆಸ್ಕಾಂನಲ್ಲಿ ಲೈನ್‌ಮನ್‌ ಆಗಿ ನೇಮಕಗೊಂಡಿದ್ದರು. ಆದರೆ, ಅವರಿಬ್ಬರೂ ಸರ್ಕಾರಿ ನೌಕರಿ ಬಿಟ್ಟು, ಕಟ್ಟಿಗೆ ಅಡ್ಡೆ ಇಟ್ಟುಕೊಂಡಿದ್ದಾರೆ. ಕಟ್ಟಿಗೆಯಲ್ಲಿ ಸುಂದರವಾದ ಮನೆಯ ಬಾಗಿಲು, ಕಿಟಕಿ ತಯಾರಿಸುತ್ತಾರೆ. ಅವುಗಳನ್ನು ರಾಜ್ಯದ ನಾನಾ ಭಾಗಗಳಿಗೆ ಮಾರಾಟ ಮಾಡಿ, ಕುಟುಂಬ ನಿರ್ವಹಿಸುತ್ತಿದ್ದಾರೆ.

ಕಲೆಯಿಂದಲೇ ಬಂತು ಕಲೇಗಾರ ಹೆಸರು: ಬಾಬು ಮತ್ತು ಅಬ್ದುಲ್‌ ಅವರಿಗೆ ಕಲೇಗಾರ ಎಂಬ ಅಡ್ಡ ಹೆಸರಿದೆ. ಅವರನ್ನು ಹೊಳೆಆಲೂರಿನಲ್ಲಿ ಕಲೇಗಾರ ಕುಟುಂಬ ಎಂದೇ ಕರೆಯಲಾಗುತ್ತಿದೆ. ಇದು ಬಾಬು ಅವರ ಮುತ್ತಜ್ಜ ಉಮ್ಮರಸಾಬ ಅವರ ಕಾಲದಿಂದಲೂ ಚಾಲ್ತಿಯಲ್ಲಿದೆ. ಇವರ ಮುತ್ತಜ್ಜ ಉಮ್ಮರಸಾಬ, ತಾಮ್ರದ ಕೊಡ ತಯಾರಿಸುತ್ತಿದ್ದರು. ಆ ಕೊಡಗಳ ಮೇಲೆ ಸುಂದರ ಡಿಸೈನ್‌ ಮಾಡುತ್ತಿದ್ದರು. ಉತ್ತಮ ಕಲೆ ಇವರಿಗೆ ಕುಟುಂಬದ ಪರಂಪರೆಯಾಗಿದೆ. ಹೀಗಾಗಿ ಇವರಿಗೆ ಕಲೇಗಾರ ಎಂದು ಹೆಸರು ಬಂದಿದೆ ಎನ್ನುತ್ತಾರೆ ಬಾಬು ಕಲೇಗಾರ. ಮೊದಲು ತಾಮ್ರದ ಕೊಡ ತಯಾರಿಸುತ್ತಿದ್ದ ಇವರ ಕುಟುಂಬ, ಕ್ರಮೇಣ ಕಟ್ಟಿಗೆಗೆ ಕಲೆ ನೀಡಿ, ಬಾಗಿಲು, ಕಿಟಕಿ ತಯಾರಿಸುವುದು ರೂಢಿಸಿಕೊಂಡಿದ್ದಾರೆ. ಅವರ ಇಡೀ ಕುಟುಂಬವೇ ಬಾಗಿಲು, ಕಿಟಕಿ ತಯಾರಿಕೆಯಲ್ಲಿ ತೊಡಗಿದೆ.

ಶುದ್ಧ ಸಾಗವಾನಿ ಕಟ್ಟಿಗೆ ಬಳಕೆ: ಕಲೇಗಾರ ಅವರು ಮೈಸೂರು ಸಾಗವಾನಿ, ಶುದ್ಧ ಸಾಗವಾನಿ ಕಟ್ಟಿಗೆಗಳಿಂದ ಮನೆಗಳ ಬಾಗಿಲು, ಕಿಟಕಿ ತಯಾರಿಸುತ್ತಾರೆ. ಹೀಗಾಗಿ ಇವರು ತಯಾರಿಸುವ ಕಿಟಕಿ, ಬಾಗಿಲುಗಳಿಗೆ ಉತ್ತರ ಕರ್ನಾಟಕ ಅಷ್ಟೇ ಅಲ್ಲ, ದಕ್ಷಿಣ ಕರ್ನಾಟಕದ ಮೈಸೂರು, ಹಾಸನ, ಧರ್ಮಸ್ಥಳ,ಬೆಂಗಳೂರು ಹೀಗೆ ವಿವಿಧೆಡೆಯಿಂದ ಖರೀದಿದಾರರು ಬರುತ್ತಾರೆ. ಇವರಲ್ಲಿಗೆ ಬಂದು, ತಮಗೆ ಬೇಕಾದ ಅಳತೆ, ಡಿಸೈನ್‌ ಎಲ್ಲವೂ ಹೇಳಿ ಹೋಗುತ್ತಾರೆ. ಅವರು ಹೇಳಿದಂತೆ ಉತ್ತಮ ಗುಣಮಟ್ಟದ ಬಾಗಿಲು, ಕಿಟಕಿ ತಯಾರಿಸಿ ಕೊಡುತ್ತಾರೆ. ಒಂದೊಂದು ಬಾಗಿಲುಗಳ ಬೆಲೆ 10 ಸಾವಿರದಿಂದ 50 ಸಾವಿರವರೆಗೂ ಮಾರಾಟವಾಗುತ್ತದೆ.

ವ್ಯಾಪಾರಕ್ಕಾಗಿ ಬನಶಂಕರಿ ಜಾತ್ರೆಗೆ: ಕಲೇಗಾರ ಕುಟುಂಬದವರು ಕಳೆದ 40 ವರ್ಷಗಳಿಂದಲೂ ಬನಶಂಕರಿದೇವಿ ಜಾತ್ರೆಯಲ್ಲಿ ಬಾಗಿಲು-ಕಿಟಕಿಮಾರಾಟ ಮಾಡುತ್ತ ಬಂದಿದ್ದಾರೆ. ಹೊಳೆಆಲೂರಿನಲ್ಲಿ ಸ್ವಂತ ಕಟಗಿ ಅಡ್ಡೆ ಹೊಂಡಿರುವ ಇವರು, ಬನಶಂಕರಿ ಜಾತ್ರೆಗಾಗಿಯೇ ವಿಶೇಷ ಕಲೆಯುಳ್ಳ, ಸುಂದರ ಬಾಗಿಲು, ಕಿಟಗಿ ಸಿದ್ಧಪಡಿಸಿಕೊಂಡು, ಜಾತ್ರೆಗೆ ಬರುತ್ತಾರೆ. ಅಂದು ಸರ್ಕಾರಿ ಅಧೀನದಲ್ಲಿ ದುಡಿಯುತ್ತಿದ್ದ ಇವರು, ಈಗ ಅವರೇ ಸುಮಾರು 25 ಜನರಿಗೆ ಉದ್ಯೋಗವೂ ನೀಡಿದ್ದಾರೆ. ಪ್ರತಿವರ್ಷ ಬನಶಂಕರಿ ಜಾತ್ರೆಯಲ್ಲಿ 10ರಿಂದ 15 ಲಕ್ಷ ಮೊತ್ತದ ಬಾಗಿಲು, ಕಿಟಕಿ ಮುಂತಾದ ಸಾಮಗ್ರಿ ಮಾರಾಟ ಮಾಡುತ್ತಾರೆ. ಒಂದು ತಿಂಗಳವರೆಗೆ ನಡೆಯುವ ಜಾತ್ರೆಯಲ್ಲಿ ಕೆಲಸಗಾರರ ವೇತನ, ಜಾಗದ ಬಾಡಿಗೆ, ಮೂಲ ಬಂಡವಾಳ ಎಲ್ಲವೂ ತೆಗೆದು ಕನಿಷ್ಠ 1 ಲಕ್ಷವಾದರೂ ಆದಾಯ ಮಾಡುತ್ತಾರೆ. ಸರ್ಕಾರಿ ನೌಕರಿಗಾಗಿ ಹಾತೊರೆಯುವ ಇಂದಿನ ದಿನಗಳಲ್ಲಿ, ಸರ್ಕಾರಿ ನೌಕರಿ ಬಿಟ್ಟು, ಕುಟುಂಬದ ಪಾರಂಪರಿಕ ವೃತ್ತಿಯ ಕೈಹಿಡಿದ ಈ ಕಲೇಗಾರ ಕುಟುಂಬ, ಬಡಿಗತನದಲ್ಲೇ ನೆಮ್ಮದಿ ಕಾಣುತ್ತಿದೆ.

ನಮ್ಮ ಇಡೀ ಕುಟುಂಬ ಬಡಿಗತನ ಮಾಡುತ್ತ ಬಂದಿದೆ. ನಮ್ಮ ಅಜ್ಜ ಉಮ್ಮರಸಾಬ ಅವರ ಕಲೆಯಿಂದಲೇ ನಮ್ಮ ಕುಟುಂಬಕ್ಕೆ ಕಲೇಗಾರ ಎಂಬ ಹೆಸರೂ ಬಂದಿದೆ. ನಾನು ಶಿಕ್ಷಕನಾಗಿದ್ದೆ. ನಮ್ಮ ಸಹೋದರ ಹೆಸ್ಕಾಂ ಲೈನ್‌ಮನ್‌ ಆಗಿದ್ದರು. ಇಬ್ಬರೂ ನೌಕರಿ ಬಿಟ್ಟು, ಸಾಗವಾನಿ ಕಟ್ಟಿಗೆ ಬಾಗಿಲು, ಕಿಟಕಿ ಕೆತ್ತನೆ ಮಾಡುತ್ತೇವೆ. ಬೆಂಗಳೂರು-ಮೈಸೂರು ಭಾಗದಿಂದ ಜನ ಬಂದು ನಮ್ಮಲ್ಲಿ ಖರೀದಿಸುತ್ತಾರೆ. ಇದರಲ್ಲೇ ನೆಮ್ಮದಿ-ಹಣ ಎರಡೂ ಕಂಡಿದ್ದೇವೆ.  –ಬಾಬು ಕಲೇಗಾರ, ಶಿಕ್ಷಕ ವೃತ್ತಿ ಬಿಟ್ಟು, ಬಡಿಗತನ ಮಾಡುವಾತ

 

-ಶ್ರೀಶೈಲ ಕೆ. ಬಿರಾದಾರ

ಟಾಪ್ ನ್ಯೂಸ್

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

22

Ganesh Chaturthi: ಗಣೇಶ ಬಂದ

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Actor Vinayakan: ವಿಮಾನ ನಿಲ್ದಾಣದ ಸಿಬ್ಬಂದಿಗಳ ಜತೆ ವಾಗ್ವಾದ; ನಟ ವಿನಾಯಗನ್ ವಶಕ್ಕೆ

Actor Vinayakan: ವಿಮಾನ ನಿಲ್ದಾಣದ ಸಿಬ್ಬಂದಿಗಳ ಜತೆ ವಾಗ್ವಾದ; ನಟ ವಿನಾಯಗನ್ ವಶಕ್ಕೆ

17-desiswara-ganaap

Ganesh Chaturthi Special Story: ವಿಶ್ವಪೂಜಿತ ವಿನಾಯಕ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Mudhol: ಈ ಸಾರ್ವಜನಿಕ ಆಸ್ಪತ್ರೆಗೆ 10 ತಿಂಗಳಿನಿಂದ ಪ್ರಭಾರಿ ವೈದ್ಯಾಧಿಕಾರಿಯೇ ದಿಕ್ಕು

Mudhol: ಈ ಸಾರ್ವಜನಿಕ ಆಸ್ಪತ್ರೆಗೆ 10 ತಿಂಗಳಿನಿಂದ ಪ್ರಭಾರಿ ವೈದ್ಯಾಧಿಕಾರಿಯೇ ದಿಕ್ಕು

ಮಹಾಲಿಂಗಪುರದಲ್ಲಿ ಮತ್ತೊಂದು ಭ್ರೂಣಹತ್ಯೆ ಪ್ರಕರಣ ಬೆಳಕಿಗೆ: ಪಾಟೀಲ ಆಸ್ಪತ್ರೆ ಸೀಜ್

ಮಹಾಲಿಂಗಪುರದಲ್ಲಿ ಮತ್ತೊಂದು ಭ್ರೂಣಹತ್ಯೆ ಪ್ರಕರಣ ಬೆಳಕಿಗೆ: ಪಾಟೀಲ ಆಸ್ಪತ್ರೆ ಸೀಜ್

festcide

Feticide: ಮಹಾಲಿಂಗಪುರದಲ್ಲಿ ಮತ್ತೊಂದು ಭ್ರೂಣಹತ್ಯೆ ಪ್ರಕರಣ ಪತ್ತೆ

Bagalkote: ದ್ವಿಚಕ್ರ ವಾಹನಗಳ ಮುಖಾಮುಖಿ; ಸಾಪ್ಟ್ ವೇರ್ ಇಂಜಿನಿಯರ್ ಸೇರಿ ಮೂವರು ಸಾವು!

Bagalkote: ದ್ವಿಚಕ್ರ ವಾಹನಗಳ ಮುಖಾಮುಖಿ; ಸಾಪ್ಟ್ ವೇರ್ ಇಂಜಿನಿಯರ್ ಸೇರಿ ಮೂವರು ಸಾವು!

1-MLP

BJP:ಮಹಾಲಿಂಗಪುರ ಪುರಸಭೆಯ 4 ಸದಸ್ಯರು, 3 ಮುಖಂಡರು ಪಕ್ಷದಿಂದ ಉಚ್ಛಾಟನೆ

MUST WATCH

udayavani youtube

ಗಜಪಯಣಕ್ಕೆ ಚಾಲನೆ : ಕ್ಯಾಪ್ಟನ್‌ ಅಭಿಮನ್ಯು ನೇತೃತ್ವದ 9 ಆನೆಗಳ ಗಜಪಡೆ

udayavani youtube

ರಕ್ಷಾ ಬಂಧನದ ಅರ್ಥ ಮತ್ತು ಮಹತ್ವ | ರಕ್ಷಾ ಬಂಧನ 2024

udayavani youtube

ಕಡಿಮೆ ಬೆಲೆಗೆ ಫಸ್ಟ್ ಕ್ಲಾಸ್ ಬಾಳೆಎಲೆ ಊಟ

udayavani youtube

ಆ.18 ರಿಂದ ಶ್ರೀಕೃಷ್ಣ ಮಠದಲ್ಲಿ ಕ್ರೀಡೋತ್ಸವ

udayavani youtube

ತಮ್ಮ ಮಕ್ಕಳನ್ನು ಬೆಳೆಸುವ ಸಲುವಾಗಿ ಕಂಡೋರ ಮಕ್ಕಳ ಭವಿಷ್ಯ ನಾಶ. ಈ ವ್ಯವಸ್ಥೆಗೆ ನಾನೂ ಬಲಿ

ಹೊಸ ಸೇರ್ಪಡೆ

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

22

Ganesh Chaturthi: ಗಣೇಶ ಬಂದ

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.