ಸ್ಕ್ರಿಪ್ಟ್ ಕೇಳದೇ ಸಿನಿಮಾ ಒಪ್ಪಿಕೊಂಡೆ
ಡೆಮೋ ಪೀಸ್ ಬಗ್ಗೆ ಸೋನಾಲ್ ಮಾತು
Team Udayavani, Jan 13, 2020, 7:03 AM IST
“ಪಂಚತಂತ್ರ’ ಚಿತ್ರದಲ್ಲಿ ನಟ ವಿಹಾನ್ ಜೊತೆಗೆ “ಶೃಂಗಾರದ ಹೊಂಗೇ ಮರ ಹೂ ಬಿಟ್ಟಿದೆ…’ ಹಾಡಿನಲ್ಲಿ ರೊಮ್ಯಾಂಟಿಕ್ ಆಗಿ ಕಾಣಿಸಿಕೊಂಡಿದ್ದ ನಟಿ ಸೋನಾಲ್ ಮಂತೇರೊ ಈಗ “ಡೆಮೋ ಪೀಸ್’ ಚಿತ್ರದಲ್ಲಿ ಮತ್ತೆ ಪ್ರೇಕ್ಷಕರ ಮುಂದೆ ಬರೋದಕ್ಕೆ ತಯಾರಾಗಿದ್ದಾರೆ. ಅಂದಹಾಗೆ, “ಡೆಮೋ ಪೀಸ್’ ಚಿತ್ರದಲ್ಲೂ ಸೋನಾಲ್ ಕಾಲೇಜು ಹುಡುಗಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ನವ ನಟ ಭರತ್ ಭೂಪಣ್ಣಗೆ ಜೋಡಿಯಾಗಿ ಹೆಜ್ಜೆ ಹಾಕಿದ್ದಾರೆ.
ಈ ಹಿಂದೆ ಕೊಂಚ ರೊಮ್ಯಾಂಟಿಕ್ ಆಗಿ ಕಾಣಿಸಿಕೊಂಡಿದ್ದ ಸೋನಾಲ್ “ಡೆಮೋ ಪೀಸ್’ನಲ್ಲಿ ಪಕ್ಕಾ ಫ್ಯಾಮಿಲಿ ಗರ್ಲ್ ಲುಕ್ನಲ್ಲಿ ಆಡಿಯನ್ಸ್ ಮುಂದೆ ಬರಲಿದ್ದಾರಂತೆ. “ಡೆಮೋ ಪೀಸ್’ ಪಾತ್ರದ ಬಗ್ಗೆ ಮಾತನಾಡುವ ಸೋನಾಲ್. “ಈ ಚಿತ್ರದಲ್ಲಿ ನನ್ನು ಆದ್ಯ ಎಂಬ ಕಾಲೇಜು ಹುಡುಗಿಯ ಪಾತ್ರ. ಲವ್ ಬಗ್ಗೆ ನಂಬಿಕೆಯಿರದ, ಲವ್ ಅಂದ್ರೆ ಆಗೋದೇ ಇಲ್ಲ ಅಂತಿರುವ ಹುಡುಗಿಯೊಬ್ಬಳು ಹೇಗೆ ಲವ್ನಲ್ಲಿ ಬೀಳ್ತಾಳೆ ಎನ್ನುವುದೇ ನನ್ನ ಪಾತ್ರ.
ನಿಜ ಹೇಳಬೇಕೆಂದರೆ ಪಾತ್ರ ಚಿಕ್ಕದಾದರೂ ನನಗಂತೂ ಬಹಳ ಹತ್ತಿರವಾಗಿದೆ. ಈ ಪಾತ್ರವನ್ನು ನಾನಂತೂ ತುಂಬ ಎಂಜಾಯ್ ಮಾಡಿದ್ದೇನೆ. ಪಾತ್ರ ಕೂಡ ಆಡಿಯನ್ಸ್ ಮೇಲೆ ಇಂಪ್ಯಾಕ್ಟ್ ಮಾಡಿ ಅವರ ಮನಸ್ಸಿನಲ್ಲಿ ಉಳಿಯುತ್ತದೆ. ಚಿತ್ರದಲ್ಲಿ ಲವ್, ರೋಮ್ಯಾನ್ಸ್, ಆ್ಯಕ್ಷನ್ ಎಲ್ಲಾ ಇದೆ. ಆಡಿಯನ್ಸ್ಗೆ ಕಂಪ್ಲೀಟ್ ಎಂಟರ್ಟೈನ್ಮೆಂಟ್ ಪ್ಯಾಕೇಜ್ ಇರುವ ಚಿತ್ರ’ ಎಂದು ವಿವರಣೆ ಕೊಡುತ್ತಾರೆ. ಇನ್ನು ಈ ಚಿತ್ರವನ್ನು ನಟಿ ಸ್ಪರ್ಶ ರೇಖಾ ನಿರ್ಮಿಸುತ್ತಿದ್ದು,
ಈ ಹಿಂದೆ ಸೋನಾಲ್ “ಎಂಎಲ್ಎ’ ಚಿತ್ರ ಮಾಡುವಾಗ ರೇಖಾ ಅವರ ಪರಿಚಯವಾಗಿ ನಂತರ ಈ ಚಿತ್ರದಲ್ಲಿ ನಟಿಸಲು ಒಪ್ಪಿಕೊಂಡರಂತೆ. ಇಲ್ಲಿಯವರೆಗೆ ಹಲವು ಚಿತ್ರಗಳಿಗೆ ಸಹ ನಿರ್ದೇಶಕನಾಗಿ ಕೆಲಸ ಮಾಡಿದ ಅನುಭವವಿರುವ ವಿವೇಕ್ “ಡೆಮೋ ಪೀಸ್’ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡುವ ಮೂಲಕ ಸ್ವತಂತ್ರ ನಿರ್ದೇಶಕರಾಗುತ್ತಿದ್ದಾರೆ. “ಮೊದಲು ಚಿತ್ರವನ್ನು ಒಪ್ಪಿಕೊಂಡು ಆ ನಂತರ ಈ ಚಿತ್ರದ ಸ್ಕ್ರಿಪ್ಟ್ ಕೇಳಿದೆ. ಸ್ಕ್ರಿಪ್ಟ್ ತುಂಬ ಇಷ್ಟವಾಯ್ತು.
ನಿರ್ದೇಶಕ ವಿವೇಕ್ ಮತ್ತು ತಂಡ ತುಂಬ ಚೆನ್ನಾಗಿ ಸಿನಿಮಾ ಮಾಡಿದ್ದಾರೆ. ನಾನು ಸಾಮಾನ್ಯವಾಗಿ ಯಾವ ಚಿತ್ರದ ಬಗ್ಗೆಯೂ ಹೆಚ್ಚು ನಿರೀಕ್ಷೆ ಇಟ್ಟುಕೊಳ್ಳುವುದಿಲ್ಲ. ಆದರೆ, ಈ ಚಿತ್ರದ ಮೇಲೆ ಖಂಡಿತ ಸ್ವಲ್ಪ ಹೆಚ್ಚಾಗಿಯೇ ನಿರೀಕ್ಷೆ ಇದೆ. ಈ ವರ್ಷ ಈ ಚಿತ್ರದಿಂದ ನನಗೊಂದು ಒಳ್ಳೆಯ ಓಪನಿಂಗ್ ಸಿಗುತ್ತದೆ. ನಟ ಭರತ್, ನಿರ್ಮಾಪಕಿ ರೇಖಾ ಮತ್ತು ನಿರ್ದೇಶಕ ವಿವೇಕ್ ಅವರಿಗೂ ಚಿತ್ರ ಒಳ್ಳೆಯ ಹೆಸರು ತಂದು ಕೊಡುತ್ತದೆ ಎಂಬ ನಂಬಿಕೆ ಇದೆ’ ಎನ್ನುತ್ತಾರೆ ಸೋನಾಲ್.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
BBK11 ಬಿಗ್ ಬಾಸ್ ಮನೆಯಲ್ಲಿ ಸದ್ದು ಮಾಡಿದ 5 ಕೋಟಿ ಲಂಚ, ರೋಲ್ ಕಾಲ್ ಲಾಯರ್..
Komal Kumar: ತೆರೆಗೆ ಬರಲು ಸಿದ್ದವಾಯ್ತು ʼಯಲಾ ಕುನ್ನಿʼ
Seetha Payana: ಅರ್ಜುನ್ ಸರ್ಜಾ ನಿರ್ದೇಶನದಲ್ಲಿ ʼಸೀತಾ ಪಯಣʼ; ನಿರಂಜನ್ ಹೀರೋ
Chethan Kumar: ನಟ ಚೇತನ್ ವಿರುದ್ಧದ ವಾರಂಟ್ ಹಿಂಪಡೆದ ಕೋರ್ಟ್
Actor Darshan: ಅ.22ಕ್ಕೆ ದರ್ಶನ್ ಜಾಮೀನು ಅರ್ಜಿ ವಿಚಾರಣೆ ಸಾಧ್ಯತೆ
MUST WATCH
ಹೊಸ ಸೇರ್ಪಡೆ
Salman Khan: 5 ಕೋಟಿ ನೀಡಿ, ಇಲ್ಲದಿದ್ದರೆ… ಸಲ್ಮಾನ್ ಖಾನ್ ಗೆ ಮತ್ತೆ ಜೀವ ಬೆದರಿಕೆ
Vijayapura: ಗ್ರಾಮಕ್ಕೆ ನುಗ್ಗಿದ ಮೊಸಳೆ ಸೆರೆ
Canada Vs India: ನಿಜ್ಜರ್ ಹತ್ಯೆ ಕೇಸಲ್ಲಿ ಸತ್ಯ ಒಪ್ಪಿದ ಕೆನಡಾ ಪ್ರಧಾನಿ: ಕೇಂದ್ರ ಸರಕಾರ
Helping Nature: ಭಾರತ ದಾಳಿ ಮಾಡಲ್ಲ, ತನ್ನ ಮೇಲಿನ ದಾಳಿಯನ್ನೂ ಸಹಿಸಲ್ಲ: ಭಾಗವತ್
Kanakapura: ಪ್ರವಾಸ ಸಂದರ್ಭ ವಿದ್ಯಾರ್ಥಿನಿಯರಿಗೆ ಉಪನ್ಯಾಸಕರಿಂದ ಮದ್ಯಪಾನ: ದೂರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.