ಹೃದಯದಲ್ಲಿ ಪ್ರೀತಿಯ ಬೀಜ ಬಿತ್ತೋಣ


Team Udayavani, Jan 13, 2020, 5:44 AM IST

SHIV-3

“ಹೃದಯ ಅತ್ಯಂತ ಫ‌ಲವತ್ತಾದ ಜಾಗ. ಅಲ್ಲಿ ನೀವು ಪ್ರೇಮ, ದ್ವೇಷ, ಮತ್ಸರ, ಸೌಹಾರ್ದ ಏನನ್ನೇ ಬಿತ್ತಿದರೂ ಸೊಂಪಾಗಿ ಬೆಳೆಯುತ್ತದೆ. ಅದರಲ್ಲಿ ಬಿಡುವ ಫ‌ಲವನ್ನು ನಾವು ತಿನ್ನಲೇಬೇಕಿರುವುದು ಕಡ್ಡಾಯ. ಆದ್ದರಿಂದ ಬಿತ್ತುವಾಗಲೇ ಫ‌ಲದ ಬಗ್ಗೆ ಎಚ್ಚರವಿರಲಿ’ ಎನ್ನುವುದು ವಿವೇಕಾನಂದರ ಮಾತು. ಹೌದು… ನಮ್ಮ ಹೃದಯದಲ್ಲಿ ಪ್ರೀತಿಯ ಬೀಜ ಬಿತ್ತಿದರೆ ಅಲ್ಲಿ ಬೆಳೆಯುವುದು ಪ್ರೀತಿಯೇ. ಬೇರೆಯವರಿಗೂ ನಮ್ಮಿಂದ ಪ್ರೀತಿಯೇ ಹಂಚಲು ಸಾಧ್ಯ. ನಮ್ಮಲ್ಲಿ ದ್ವೇಷ, ಮತ್ಸರಗಳಿದ್ದರೆ ನಾವು ಯಾರನ್ನೂ ಪ್ರೀತಿಯಿಂದ ಕಾಣಲು ಸಾಧ್ಯವಿಲ್ಲ.

ನಮ್ಮ ಹೃದಯದೊಳಗಡೆ ಪ್ರೀತಿಯಿದ್ದರೆ ಎಲ್ಲರಲ್ಲೂ ನಾವು ಪ್ರೀತಿಯನ್ನೇ ಕಾಣುತ್ತೇವೆ. ದ್ವೇಷ, ಅಸೂಯೆಗಳು ಮನುಷ್ಯನಲ್ಲಿರುವ ಅನುಕಂಪ, ಮಾನವೀಯತೆಗಳನ್ನು ಕೊಲ್ಲುತ್ತವೆ. ಆ ವ್ಯಕ್ತಿಯಲ್ಲಿ ಪ್ರೀತಿಯನ್ನು ಕಾಣಲು ಸಾಧ್ಯವೇ ಇಲ್ಲ. ದ್ವೇಷದಿಂದ ಏನನ್ನೂ ಸಾಧಿಸಲು ಏನು ಸಾಧ್ಯವಿಲ್ಲ. ಮನೆ ಪಕ್ಕದಲ್ಲಿ ಇದ್ದ ಒಬ್ಬ ವ್ಯಕ್ತಿ ದ್ವೇಷ ದ್ವೇಷ ಎನ್ನುತ್ತಾ ತನ್ನ ಜೀವನವನ್ನೀಡಿ ದ್ವೇಷ ಸಾಧನೆಗೆ ಮೀಸಲಿರಿಸಿದ. ತನ್ನೊಂದಿಗಿದ್ದವರನ್ನೂ ಪ್ರೀತಿಸದೇ, ಅವರೊಂದಿಗೆ ಸಮಯ ಕಳೆಯದೆ ತನ್ನ ಜೀವನದ ಖುಷಿಯನ್ನೂ ಅನುಭವಿಸದೆ ದ್ವೇಷದ ಹಿಂದೆ ಹೊರಟ. ಆದರೆ ದ್ವೇಷ ಸಾಧನೆಯಲ್ಲೇ ಜೀವನ ಕಳೆಯುತ್ತಿದ್ದ ಆತನಿಗೆ ಒಂದು ದಿನ ಅಪಘಾತವಾಗಿ ಆಸ್ಪತ್ರೆ ಸೇರಿದ.ಆತನೊಂದಿಗಿದ್ದದ್ದು ಆತನ ದ್ವೇಷವೇ ಹೊರತು ಯಾರೂ ಜತೆಗಿರಲಿಲ್ಲ. ಆತನಿಗೇನೋ ತಾನು ಮತ್ತೆ ತನ್ನ ತಪ್ಪನ್ನು ತಿದ್ದಿಕೊಳ್ಳಲು ಅವಕಾಶ ಸಿಕ್ಕಿತು. ಆದರೆ ಇನ್ನು ಎಷ್ಟೋ ಮಂದಿಗೆ ಆ ಅವಕಾಶವೇ ಸಿಗುವುದಿಲ್ಲ. ತಾನು ಕಳೆದುಕೊಂಡಿರುವುದು ಏನು ಎನ್ನುವುದನ್ನು ತಿಳಿಯುವಾಗಲೇ ಜೀವನದ ಕೊನೆಯ ಹಂತದಲ್ಲಿರುತ್ತಾರೆ.

ಪ್ರತಿಯೊಬ್ಬರಲ್ಲೂ ಪ್ರೀತಿ ಕಾಣಿಸುವುದು ತಮಲ್ಲಿ ನಂಬಿಕೆಯಿದ್ದಾಗ. ನಮ್ಮಲ್ಲಿ ನಂಬಿಕೆಯಿದ್ದರೆ ಬೇರೆಯವರ ಮೇಲೂ ನಂಬಿಕೆ ಬರಲು ಸಾಧ್ಯ. ನಂಬಿಕೆಯಿದ್ದರೆ ಮಾತ್ರ ಪ್ರೀತಿ, ಸ್ನೇಹ. ನಂಬಿಕೆ ಮನುಷ್ಯ ಸಂಬಂಧಗಳ ಅಡಿಪಾಯ. ನಂಬಿಕೆಯೇ ಇಲ್ಲದಿದ್ದರೆ ಯಾವುದೇ ಸಂಬಂಧಗಳು ಬಾಳಿಕೆ ಬರುವುದು ಎರಡೇ ದಿನ. ಯಾವುದೇ ಸಂಬಂಧಗಳು ಉಳಿಯಬೇಕಾದರೆ ಅಲ್ಲಿ ನಂಬಿಕೆ ಬೇಕು. ಸಂಬಂಧಗಳಿಗಷ್ಟೇ ಅಲ್ಲ. ನಮ್ಮ ಕೆಲಸದಲ್ಲೂ ನಮಗೆ ನಂಬಿಕೆಯಿರಬೇಕು.

ಖುಷಿಯ ಮಾಪನ ಸಂಪತ್ತು ಆಗದಿರಲಿ
ಜೀವನದಲ್ಲಿ ಎಷ್ಟೇ ಸಂಪತ್ತು, ಸೌಂದರ್ಯ ಇದ್ದರೂ ಅದಾವುದೂ ಶಾಶ್ವತವಲ್ಲ ಎನ್ನುವುದು ಗೊತ್ತಿದ್ದರೂ ನಾವು ಅವುಗಳ ಬೆನ್ನತ್ತಿ ಸಂಬಂಧಗಳನ್ನು ಕಡೆಗಣಿಸುತ್ತೇವೆ. ಎಷ್ಟೇ ಬಡವನಾದರೂ ಆತ ಜೀವನದಲ್ಲಿ ಖುಷಿಯಲ್ಲಿರುತ್ತಾನೆ. ಯಾಕೆಂದರೆ ಆತನ ಖುಷಿಯ ಮಾಪನ ಹಣ, ಸೌಂದರ್ಯವಲ್ಲ. ಬದಲಾಗಿ ಜೀವನದ ಖುಷಿಯನ್ನು ಆತ ತನ್ನ ಜತೆಗಿದ್ದವರು, ತನ್ನ ಕೆಲಸ, ತನ್ನ ಸ್ವಾಭಿಮಾನದಲ್ಲೇ ಕಂಡಿರುತ್ತಾನೆ.

ಸಾಧನೆ, ಗುರಿಯ ಬೆನ್ನತ್ತಿ ಅಥವಾ ಸಂಪತ್ತಿನ ಹಿಂದೆ ಹೋಗಿ ಸಂಬಂಧಗಳನ್ನು ಕಳೆದುಕೊಳ್ಳುವುದು ಬೇಡ. ಒಂದು ದಿನ ಸಾಧನೆಯ ತುತ್ತತುದಿ ತಲುಪಿದ ಮೇಲೆ ನಮ್ಮ ಸಂತೋಷ ಆಚರಣೆಗೂ ಜತೆಗೆ ಯಾರೂ ಇರುವುದಿಲ್ಲ. ಗುರಿಯ ಜತೆಗೆ ಜತೆಗಿದ್ದವರಿಗೂ ಸಮಯ ನೀಡಿ. ಪ್ರೀತಿ ನೀಡಿ.

-  ರಂಜಿನಿ ಮಿತ್ತಡ್ಕ

ಟಾಪ್ ನ್ಯೂಸ್

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

22

Ganesh Chaturthi: ಗಣೇಶ ಬಂದ

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Actor Vinayakan: ವಿಮಾನ ನಿಲ್ದಾಣದ ಸಿಬ್ಬಂದಿಗಳ ಜತೆ ವಾಗ್ವಾದ; ನಟ ವಿನಾಯಗನ್ ವಶಕ್ಕೆ

Actor Vinayakan: ವಿಮಾನ ನಿಲ್ದಾಣದ ಸಿಬ್ಬಂದಿಗಳ ಜತೆ ವಾಗ್ವಾದ; ನಟ ವಿನಾಯಗನ್ ವಶಕ್ಕೆ

17-desiswara-ganaap

Ganesh Chaturthi Special Story: ವಿಶ್ವಪೂಜಿತ ವಿನಾಯಕ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ಗಜಪಯಣಕ್ಕೆ ಚಾಲನೆ : ಕ್ಯಾಪ್ಟನ್‌ ಅಭಿಮನ್ಯು ನೇತೃತ್ವದ 9 ಆನೆಗಳ ಗಜಪಡೆ

udayavani youtube

ರಕ್ಷಾ ಬಂಧನದ ಅರ್ಥ ಮತ್ತು ಮಹತ್ವ | ರಕ್ಷಾ ಬಂಧನ 2024

udayavani youtube

ಕಡಿಮೆ ಬೆಲೆಗೆ ಫಸ್ಟ್ ಕ್ಲಾಸ್ ಬಾಳೆಎಲೆ ಊಟ

udayavani youtube

ಆ.18 ರಿಂದ ಶ್ರೀಕೃಷ್ಣ ಮಠದಲ್ಲಿ ಕ್ರೀಡೋತ್ಸವ

udayavani youtube

ತಮ್ಮ ಮಕ್ಕಳನ್ನು ಬೆಳೆಸುವ ಸಲುವಾಗಿ ಕಂಡೋರ ಮಕ್ಕಳ ಭವಿಷ್ಯ ನಾಶ. ಈ ವ್ಯವಸ್ಥೆಗೆ ನಾನೂ ಬಲಿ

ಹೊಸ ಸೇರ್ಪಡೆ

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

22

Ganesh Chaturthi: ಗಣೇಶ ಬಂದ

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.