ವಿಶ್ವಕಪ್ ಗೆದ್ದ ಧೋನಿಗಿಲ್ಲ ಬಿಸಿಸಿಐ ಗುತ್ತಿಗೆ: ಇಲ್ಲಿದೆ ಅಸಲಿ ಕಾರಣ
Team Udayavani, Jan 16, 2020, 4:58 PM IST
ಮುಂಬೈ: ಭಾರತಕ್ಕೆ ಎರಡು ವಿಶ್ವಕಪ್ ಗೆದ್ದು ಕೊಟ್ಟ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿಯ ನಿವೃತ್ತಿಯ ಬಗೆಗಿನ ಚರ್ಚೆಗಳು ಮತ್ತೆ ಹೆಚ್ಚಾಗಿದೆ. ಇದಕ್ಕೆ ಪುಷ್ಟಿ ಕೊಟ್ಟಿದ್ದು ಬಿಸಿಸಿಐ ಇಂದು ಪ್ರಕಟಿಸಿದ ಗುತ್ತಿಗೆ ಪಟ್ಟಿ.
ಬಿಸಿಸಿಐ ಇಂದು ತನ್ನ 2019-2020ರ ಪಾಲಿನ ವಾರ್ಷಿಕ ಕಾಂಟ್ರಾಕ್ಟ್ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಇದರಲ್ಲಿ ಎಲ್ಲರ ಅಚ್ಚರಿಗೆ ಕಾರಣವಾಗಿದ್ದು ಮಹೇಂದ್ರ ಸಿಂಗ್ ಧೋನಿಯ ಹೆಸರು ಕಾಣಿಸಿದೇ ಇದ್ದಿದ್ದು. ಇದುವರೆಗೆ ವಾರ್ಷಿಕ ಐದು ಕೋಟಿ ವೇತನದ ‘ಎ’ ಪಟ್ಟಿಯಲ್ಲಿದ್ದ ಧೋನಿಯನ್ನು ಈ ವರ್ಷ ಕೈಬಿಡಲಾಗಿದೆ. ‘
ಅಂತಾರಾಷ್ಟ್ರೀಯ ಕ್ರಿಕೆಟ್ ನಿಂದ ಧೋನಿ ದೂರವಾಗುತ್ತಾರೆ. ಅದಕ್ಕಾಗಿ ಮಾಹಿಯನ್ನು ಪಟ್ಟಿಯಿಂದ ಕೈಬಿಡಲಾಗಿದೆ ಎಂದು ಅಭಿಮಾನಿಗಳು ಮಾತನಾಡಿಕೊಂಡಿದ್ದರು. ಆದರೆ ಅಸಲಿ ವಿಷಯ ಈಗ ಬಯಲಾಗಿದೆ.
ಇಂದು ಬಿಸಿಸಿಐ ಬಿಡುಗಡೆ ಮಾಡಿರುವುದು 2019ರ ಅಕ್ಟೋಬರ್ ನಿಂದ 2020ರ ಸಪ್ಟೆಂಬರ್ ವರೆಗಿನ ಪಟ್ಟಿ. ಬಿಸಿಸಿಐನ ನಿಯಮದ ಪ್ರಕಾರ ವಾರ್ಷಿಕ ವೇತನ ಗುತ್ತಿಗೆ ಪಡೆಯಲು ಆಟಗಾರನೊಬ್ಬ ಆ ಋತುವಿನಲ್ಲಿ ಕನಿಷ್ಠ ಮೂರು ಟಿ ಟ್ವೆಂಟಿ ಪಂದ್ಯ ಆಡಿರಬೇಕು. ಆದರೆ 2019ರ ಜುಲೈ ನಂತರ ಧೋನಿ ಯಾವುದೇ ಪಂದ್ಯವನ್ನೂ ಆಡಿಲ್ಲ. ಹಾಗಾಗಿ ಧೋನಿಯನ್ನು ಗುತ್ತಿಗೆಯಿಂದ ಕೈಬಿಡಲಾಗಿದೆ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.