![Gun-Fire](https://www.udayavani.com/wp-content/uploads/2025/02/Gun-Fire-415x249.jpg)
![Gun-Fire](https://www.udayavani.com/wp-content/uploads/2025/02/Gun-Fire-415x249.jpg)
Team Udayavani, Jan 19, 2020, 10:46 AM IST
ಧಾರವಾಡ: ಕೃಷಿ ಮೇಳದ ಜಾನುವಾರು ಪ್ರದರ್ಶನದಲ್ಲಿ ಕಳೆದ ಬಾರಿಗೆ ಹೋಲಿಸಿದರೆ ಈ ಸಲ ಜಾನುವಾರುಗಳ ಸಂಖ್ಯೆ ಕಡಿಮೆ ಇದ್ದು, ವೀಕ್ಷಕರ ಸಂಖ್ಯೆಯೂ ತೀರಾ ಕಡಿಮೆ ಇತ್ತು. ಶನಿವಾರ ದಿನ ಮಾಜಿ ಸಚಿವ ವಿನಯ್ ಕುಲಕರ್ಣಿ ಒಡೆತನದ ವಿನಯ್ ಡೈರಿಯ ಜಾನುವಾರುಗಳು ಮೇಳಕ್ಕೆ ಮೆರಗು ತಂದಿವೆ. ವಿವಿಧ ತಳಿಯ ಹೋರಿಗಳು, ಎಚ್ಎಫ್ ತಳಿಯ ಆಕಳು, ಮುರ್ರಾ ತಳಿಯ ಕೋಣ ಮತ್ತು ಎಮ್ಮೆಗಳ ಪ್ರದರ್ಶನ ಆಕರ್ಷಕವಾಗಿದೆ.
ಮೇಳಕ್ಕೆ ವಾಹನದ ಮೂಲಕ ಜಾನುವಾರು ತರುವ ಕೆಲಸ ಶನಿವಾರ ಸಂಜೆವರೆಗೆ ಸಾಗಿತ್ತು. ಹೀಗಾಗಿ ರವಿವಾರ ದಿನದಂದು ಜಾನುವಾರು ಪ್ರದರ್ಶನಕ್ಕೆಪೂರ್ಣ ಪ್ರಮಾಣದಲ್ಲಿ ಜಾನುವಾರು ಲಭ್ಯವಾಗಲಿವೆ. ನಾನಾ ತಳಿಯ ಕುದುರೆ, ಆಕಳು, ಹೋರಿ, ಎತ್ತುಗಳು ಜಾನುವಾರು ಪ್ರದರ್ಶನದಲ್ಲಿ ಗಮನ ಸೆಳೆದವು.
ಆರೋಗ್ಯಕರ ಹಾಲು ನೀಡುವುದರ ಜೊತೆಗೆ ಕಷ್ಟದ ಕೆಲಸಗಳಿಗೆ ಹೆಸರುವಾಸಿ ಆಗಿರುವ ರಾಜಸ್ಥಾನದ ಕಾಂಕ್ರೇಜ್ ತಳಿಯ ಹೋರಿ, ಆಕಳು ಹಾಗೂ ಆಂಧ್ರಪ್ರದೇಶದ ಓಗೋಲ್ ಜಿಲ್ಲೆಯ ಓಗೋಲ್ ತಳಿಯ ಎತ್ತುಗಳು ಈ ಸಲದ ವಿಶೇಷತೆ. ಈ ತಳಿಯ ಆಕಳು ನೋಡಲು ಆಕರ್ಷಕವಾಗಿದ್ದರೆ ಎತ್ತುಗಳಂತೂ ದಷ್ಟ-ಪುಷ್ಟವಾಗಿದ್ದು, ನೋಡುಗರ ಕಣ್ಮನ ಸೆಳೆಯುತ್ತಿವೆ. ವಿನಯ್ ಡೈರಿಯಲ್ಲಿ ಇರುವ ಓಗೋಲ್ ತಳಿಯ ಎರಡು ಹೋರಿಗಳನ್ನು 3 ವರ್ಷಗಳ ಹಿಂದೆ 4 ಲಕ್ಷ ಕೊಟ್ಟು ತಂದಿದ್ದು, ಈಗಂತೂ ಎಲ್ಲರ ಗಮನ ಸೆಳೆದಿವೆ.
ಮೇಕೆ ತಳಿಗಳ ಹವಾ: ಜಮುನಾಪಾರಿ, ತೋತಾಪುರಿ, ಸಿರೋಹಿ, ಬಿಟಲ್, ಸೋಜತ್ ತಳಿಯ ಮೇಕೆಗಳು ಜಾನುವಾರು ಮೇಳದಲ್ಲಿ ಗಮನ ಸೆಳೆಯುತ್ತಿದ್ದು, ಈ ಪೈಕಿ ಸಿರೋಹಿ ಈ ಸಲದ ವಿಶೇಷತೆ. ರಾಜಸ್ಥಾನದ ಮೂಲದ ಈ ತಳಿ ಹಾಲು ಮತ್ತು ಮಾಂಸದ ಉತ್ಪಾದನೆಗೆ ಹೆಸರುವಾಸಿ. ಮೈಬಣ್ಣ ತಿಳಿ ಕಂದು, ಕಡುಗೆಂಪಾಗಿದ್ದು, ಕಿವಿಗಳು ದೊಡ್ಡದಾಗಿವೆ. ಬಾಲ ಚಿಕ್ಕವಿದ್ದು, ಮೇಲಕ್ಕೆ ತಿರುಗಿಸಿಕೊಂಡಿದೆ. ಒಂದು ಬಾರಿ 2-3 ಮರಿಗಳಿಗೆ ಜನ್ಮ ನೀಡುವ ಸಾಮರ್ಥಯವಿರುವ ಈ ತಳಿಯ ಮೇಕೆಯು ದಿನಕ್ಕೆ 3-4 ಲೀಟರ್ ಹಾಲು ನೀಡುತ್ತದೆ. ಇನ್ನೂ ಮಾಂಸವು 30 ರಿಂದ 50 ಕೆಜಿ ಲಭ್ಯ.
Train: ರೈಲು ಢಿಕ್ಕಿ ತಡೆಯಲು ಉಪಕ್ರಮ: ನೈಋತ್ಯ ರೈಲ್ವೇಗೆ ಮೊದಲ ಬಾರಿ “ಕವಚ’
ಮೂವರು ಲೇಖಕಿಯರಿಗೆ ಕವಿಸಂ ಮಾತೃಶ್ರೀ ರತ್ನಮ್ಮ ಹೆಗ್ಗಡೆ ಮಹಿಳಾ ಗ್ರಂಥ ಬಹುಮಾನಕ್ಕೆ ಆಯ್ಕೆ
Dharwad: ಪಂ.ಮನಸೂರ ಸಂಗೀತ ಪಾಠ ಶಾಲೆ ಮತ್ತೆ ಆರಂಭ; ಜಿಲ್ಲಾಧಿಕಾರಿ ದಿವ್ಯ ಪ್ರಭು
Hubli: ದಾಖಲೆ ಇಲ್ಲದೆ ಸಾಗಿಸುತ್ತಿದ್ದ 89.99 ಲಕ್ಷ ರೂ ಪೊಲೀಸ್ ವಶಕ್ಕೆ
ED summons: ಸಿದ್ದರಾಮಯ್ಯ ಪತ್ನಿ ಪಾರ್ವತಿ, ಬೈರತಿ ಸುರೇಶಗೆ ತಾತ್ಕಾಲಿಕ ರಿಲೀಫ್
Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್: 3 ವರ್ಷದ ಮಗು ಮೃತ್ಯು!
Kaup: ಸ್ಕೂಟಿ, ಕಾರಿಗೆ ಬಸ್ ಢಿಕ್ಕಿ; ಸವಾರನಿಗೆ ಗಾಯ
Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!
Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್ಮನ್ ಹಲ್ಲೆ; ದೂರು
Restriction: ನಿಷೇಧವಿದ್ದರೂ ಗೂಡ್ಸ್ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!
You seem to have an Ad Blocker on.
To continue reading, please turn it off or whitelist Udayavani.