ವಿಪರೀತ ಒತ್ತಡದಿಂದ ಬಿಲ್ಗಾರಿಕೆಯನ್ನೇ ತ್ಯಜಿಸಲು ಚಿಂತಿಸಿದ್ದೆ
ಕೆಲವೊಮ್ಮೆ ಅತ್ತಿದ್ದೆ, ಬಿಲ್ಗಾರಿಕೆ ಬದಲು ಬೇರೆ ಕ್ರೀಡೆಗೆ ಬದಲಾಯಿಸಿಕೊಳ್ಳಲೂ ಚಿಂತಿಸಿದ್ದೆ
Team Udayavani, Jan 23, 2020, 8:28 PM IST
ಪುಣೆ: ಮಾನಸಿಕ ಸ್ತಿಮಿತ ಸಾಧಿಸುವುದು ಬಹಳ ಕಷ್ಟದ ಸಂಗತಿ. ಇತ್ತೀಚೆಗೆ ಕ್ರೀಡಾಪಟುಗಳು ಮಾನಸಿಕ ಕಾರಣ ನೀಡಿ, ವಿಶ್ರಾಂತಿ ಪಡೆಯುವ ಬೆಳವಣಿಗೆ ಶುರುವಾಗಿದೆ. ಇಂತಹ ಪ್ರಕರಣಗಳು ನಡೆಯುತ್ತಿರುವಾಗಲೇ ಭಾರತದ ವಿಶ್ವವಿಖ್ಯಾತ ಬಿಲ್ಗಾರ್ತಿ ದೀಪಿಕಾ ಕುಮಾರಿ, ಮಹತ್ವದ ಸಂಗತಿಯೊಂದನ್ನು ಬಾಯ್ಬಿಟ್ಟಿದ್ದಾರೆ. ಬಿಲ್ಗಾರಿಕೆಯಲ್ಲಿ ಉಂಟಾದ ನಿರಂತರ ಒತ್ತಡದಿಂದ ಒಂದುಹಂತದಲ್ಲಿ ಕ್ರೀಡೆಯನ್ನೇ ಬದಲಿಸುವ ಬಗ್ಗೆ ಚಿಂತಿಸಿದ್ದೆ, ಕೆಲವು ಬಾರಿ ಒತ್ತಡ ತಡೆಯಲಾರದೆ ಅತ್ತಿದ್ದೆ ಎಂದು ದೀಪಿಕಾ ಹೇಳಿಕೊಂಡಿದ್ದಾರೆ.
ಬಿಲ್ಗಾರಿಕೆ ಸಂಪೂರ್ಣವಾಗಿ ಮನೋಬಲವನ್ನು ಆಧರಿಸಿರುವಂತಹ ಕ್ರೀಡೆ. ಸ್ವಲ್ಪ ವ್ಯತ್ಯಾಸವಾದರೂ ಪಂದ್ಯ ಕೈಬಿಟ್ಟಂತೆಯೇ ಸರಿ. ಈ ಹಿಂದೆಲ್ಲ ನಿರಂತರವಾಗಿ ಎದುರಾದ ಒತ್ತಡದಿಂದ ಒಬ್ಬಳೆ ಕುಳಿತು ಅತ್ತಿದ್ದೆ. ಕಡೆಗೊಮ್ಮೆ ಈ ಕ್ರೀಡೆಯನ್ನೇ ಬದಲಿಸಿ ಬೇರೆ ಕ್ರೀಡೆ ಆಯ್ದುಕೊಳ್ಳೋಣ ಎಂದೂ ಯೋಚಿಸಿದ್ದೆ ಎಂದು ದೀಪಿಕಾ ಹೇಳಿದ್ದಾರೆ.
ರಾಷ್ಟ್ರೀಯಮಟ್ಟದಲ್ಲಿ ನಡೆಯುವ ಅರ್ಹತಾಸುತ್ತು ಬಹಳ ಒತ್ತಡ ಮೂಡಿಸುತ್ತವೆ. ಹೊಸಬರು ಬಂದಿರುತ್ತಾರೆ. ಅವರಿಗೆ ಸೋತರೂ ಕಳೆದುಕೊಳ್ಳುವುದು ಏನಿರುವುದಿಲ್ಲ. ಆದ್ದರಿಂದ ತಲೆ ಕೆಡಿಸಿಕೊಳ್ಳದೇ ಬಾಣ ಬಿಡುತ್ತಾರೆ. ಅದೇ ರೀತಿ ನಾವು ಮಾಡಲು ಸಾಧ್ಯವಿಲ್ಲ. ನಮ್ಮ ಮೇಲೆ ನಾವು ಗಳಿಸಿದ ಅರ್ಹತೆಯನ್ನು ಉಳಿಸಿಕೊಳ್ಳುವ ಒತ್ತಡವಿರುತ್ತದೆ.
ಅಂತಹಸ್ಥಿತಿಯಲ್ಲಿ ಯುವಕರ ಸ್ಪರ್ಧೆಯನ್ನು ನೋಡಿದಾಗ ಬಹಳ ಒತ್ತಡದ ಅನುಭವವಾಗುತ್ತದೆ ಎಂದು ದೀಪಿಕಾ ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
INDvsBAN: ಕುಸಿದ ಭಾರತಕ್ಕೆ ಆಸರೆಯಾದ ಅಶ್ವಿನ್, ಜಡೇಜಾ; ಶತಕ ಬಾರಿಸಿದ ಲೋಕಲ್ ಬಾಯ್
INDvsBAN: ”ಈತ ಭಾರತದ ಬಾಬರ್ ಅಜಂ..”: ಟೀಂ ಇಂಡಿಯಾ ಆಟಗಾರನಿಗೆ ನೆಟ್ಟಿಗರ ತರಾಟೆ
Cricket: ಲಂಕಾ ಕ್ರಿಕೆಟಿಗನನ್ನು 20 ವರ್ಷಗಳ ಕಾಲ ಬ್ಯಾನ್ ಮಾಡಿದ ಕ್ರಿಕೆಟ್ ಆಸ್ಟ್ರೇಲಿಯಾ
Ricky Ponting: ಡೆಲ್ಲಿಯಿಂದ ಪಂಜಾಬ್ ಗೆ ಬಂದ ರಿಕಿ ಪಾಂಟಿಂಗ್
Test Series: ಭಾರತ-ಬಾಂಗ್ಲಾ ತಂಡಗಳಿಗೆ ರಿಯಲ್ ಟೆಸ್ಟ್
MUST WATCH
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.