20ರಲ್ಲಿ ಹೂಡಿಕೆ ಮಾಡಿ 50ರಲ್ಲಿ ಅನುಭವಿಸಿ
Team Udayavani, Jan 27, 2020, 5:17 AM IST
ಇಂದಿನ ಯುವ ಜನತೆ ಕೈಯಲ್ಲಿ ಹಣ ಇದ್ದರೆ ಸಾಕು ಖರ್ಚು ಮಾಡುವ ನಾನಾ ಮಾರ್ಗಗಳನ್ನು ಹುಡುಕುತ್ತಾರೆಯೇ ಹೊರತು ಭವಿಷ್ಯದಲ್ಲಿ ಅವುಗಳ ಉಪಯೋಗದ ಬಗ್ಗೆ ಕಿಂಚಿತ್ತೂ¤ ಯೋಚಿಸುವುದಿಲ್ಲ. 20ನೇ ವಯಸ್ಸಿ ನಲ್ಲೇ ಹೂಡಿಕೆ ಆರಂಭಿಸಿದರೆ 50 ವಯಸ್ಸಿಗೆ ಚಿಂತೆಯಿಲ್ಲದೆ ಬದುಕಬಹುದು ಎಂಬ ಸಣ್ಣ ಲೆಕ್ಕಾಚಾರ ಮನದಲ್ಲಿದ್ದರೇ ಇಂದಿನ ಯುವ ಜನಾಂಗ ಹೂಡಿಕೆ, ಉಳಿತಾಯದ ಕಡೆ ಮುಖ ಮಾಡಬಹುದೇನೋ.
ಐಆರ್ಎ ಆರಂಭಿಸಿ
ಒಂದು ವೇಳೆ ನೀವು ಉದ್ಯೋಗದಲ್ಲಿದ್ದರೇ ನಿಮ್ಮ ಕಂಪೆನಿಯಲ್ಲಿ ವೈಯಕ್ತಿಕ ನಿವೃತ್ತಿ ಖಾತೆ (ಐಆರ್ಎ)/ ತೆರಿಗೆ ಅನೂಕೂಲ ನಿವೃತ್ತಿ ಯೋಜ ನೆಗಳು ಇರುತ್ತವೆ. ಅದರಲ್ಲಿ ತತ್ಕ್ಷಣ ನಿಮ್ಮ ಹೆಸರಿನಲ್ಲಿ ಖಾತೆ ತೆರೆಯಿರಿ. ನಿವೃತ್ತಿ ಯ ವೇಳೆ ತೆರಿಗೆ ಮುಂದುಲ್ಪಡುವುದು ಮಾತ್ರವಲ್ಲದೇ ನಿಮ್ಮ ಕೊಡುಗೆಯ ಕೆಲವು ಶೇಕಡಾವಾರಿಗೆ ಕಂಪೆನಿ ಕೂಡ ಕೊಡುಗೆಗಳನ್ನು ನೀಡುತ್ತದೆ.
ಆಕ್ರಮಣಕಾರಿಯಾಗಿರಿ
30 ಅಥವಾ 40ನೇ ವಯಸ್ಸಿನಲ್ಲಿ ಮಾಡುವ ಹೂಡಿಕೆಗಿಂತ 25ನೇ ವಯಸ್ಸಿನಲ್ಲಿ ಮಾಡುವ ಹೂಡಿಕೆ ನಮ್ಯತೆಯನ್ನು ಹೊಂದಿರುತ್ತದೆ. ಬಹುಬೇಗನೆ ನಿಮ್ಮ ಹೂಡಿಕೆಯ ಆಯ್ಕೆ ಮೇಲೆ ಆಕ್ರಮಣಕಾರಿಯಾಗಿರುವಂತೆ ಮಾಡುತ್ತದೆ ಮತ್ತು ಯಾವುದಾದರೂ ಹೂಡಿಕೆ ನಷ್ಟದಿಂದ ಹೊರಬರಲು ಸಾಕಷ್ಟು ಸಮಯ ಗಳಿರುತ್ತವೆ.
ತುರ್ತು ನಿಧಿ
ವಿಮಾ ಪಾಲಿಸಿಗಳು ಆಪದ್ಬಾಂಧವನ ಹಾಗೇ ಕಾರ್ಯ ನಿರ್ವಹಿಸುತ್ತವೆ. ಇಂದಿನಿಂದ ಲೇ ವಿಮಾ ಪಾಲಿಸಿಗಳಲ್ಲಿ ಹೂಡಿಕೆ ಮಾಡಿ ಮುಂದೆ ಅನಾರೋಗ್ಯ, ಇತ್ಯಾದಿ ಸಮಸ್ಯೆ ಗಳು ಉಂಟಾದಾಗ ಅವುಗಳು ನಿಮ್ಮ ಕೈ ಹಿಡಿಯು ವುದರಲ್ಲಿ ಅನುಮಾನವಿಲ್ಲ. ನಿಮ್ಮ 6 ತಿಂಗಳ ನಿಗದಿತ ಆದಾಯಕ್ಕೆ ಸಮಾನವಾಗಿ ತುರ್ತು ನಿಧಿ ಇದ್ದರೆ ಒಳ್ಳೆಯದು.
ನಂಬಿಕಸ್ಥ ಹೂಡಿಕೆ
ಹೂಡಿಕೆ ಮಾಡುವ ಸಂದರ್ಭದಲ್ಲಿ ನಂಬಿ ಕಸ್ಥ ಸಂಸ್ಥೆಗಳ ಮೇಲೆ ಹೂಡಿಕೆ ಮಾಡಬೇಕು. ತಪ್ಪಿದಲ್ಲಿ ಬಹಳಷ್ಟು ನಷ್ಟ ಅನುಭವಿಸಬೇಕಾ ಗುತ್ತದೆ. ಹೂಡಿಕೆ ಮಾಡುವ ಮುನ್ನ ಅನೇಕ ಕಡೆಗಳಲ್ಲಿ ವಿಚಾರಿಸಿ, ಅನೇಕ ವೆಬ್ಸೈಟ್ಗಳಲ್ಲಿ ಹುಡುಕಾಡಿ ಸರಿ ನಿರ್ಧಾರಕ್ಕೆ ಬರುವುದು ಉಳ್ಳೆಯದು.
ಉತ್ತಮ ಅಭ್ಯಾಸವಿರಲಿ
ಹಣ ಉಳಿಸುವುದು ಎಂದರೆ ಗುರಿ ನಿರ್ಧರಿ ಸುವುದು ಮತ್ತು ಆ ಗುರಿಯನ್ನು ತಲುಪಲು ನಿರಂತರವಾಗಿ ಶಿಸ್ತಿನಿಂದಿರುವುದು. ಹೂಡಿಕೆ ಯೋಜನೆಗೆ ಈ ಅಭ್ಯಾಸಗಳು ಅತೀ ಮುಖ್ಯ ನಮ್ಮ ಮುಂದಿನ ಆವಶ್ಯಕತೆಗಳಿಗಾಗಿ ಇಂದು ಉಳಿತಾಯವನ್ನು ಮಾಡಲೇಬೇಕು. 30-40 ವಯಸ್ಸಿನಲ್ಲಿ ಹೂಡಿಕೆ ಆರಂಭಿಸಿ ದಾಗ ಸಿಗುವ ಮೊತ್ತಗಿಂತ 25ನೇ ವಯಸ್ಸಿನಲ್ಲಿ ಆರಂಭಿ ಸುವ ಹೂಡಿಕೆಯಲ್ಲಿ ಲಭಿಸುವ ಲಾಭ ಅಧಿಕ. ಹೀಗಾಗಿ ಇಂದೇ ಹೂಡಿಕೆ/ ಉಳಿತಾಯದ ಕುರಿತು ಯೋಜನೆ ರೂಪಿಸಿಕೊಳ್ಳಿ.
25ರಲ್ಲೇ ಹೂಡಿಕೆ
ಮಾಡುವುದು ಹೇಗೆ? 25ನೇ ವಯಸ್ಸಿನಲ್ಲಿ ಹೂಡಿಕೆ ಮಾಡಲು ಯಾವುದೇ ಜಾದೂ, ಟ್ರಿಕ್ಗಳ ಆವಶ್ಯಕತೆ ಇಲ್ಲ. ಇದಕ್ಕೆ ಬೇಕಾ ಗಿರುವುದು ಉತ್ತಮ ಹೂಡಿಕೆ ಯೋಜನೆ ಮತ್ತು ಹೂಡಿಕೆಯನ್ನು ನಿಯಮಿತವಾಗಿ ಮಾಡುತ್ತಿರುವುದು. ಉಳಿತಾಯ ಗರಿಷ್ಠಗೊ ಳಿಸಿ ಹೂಡಿಕೆಯನ್ನು ಆಯ್ಕೆ ಮಾಡಿಕೊಳ್ಳುವ ಸಾಮರ್ಥ್ಯ. ಕೊನೆಯದಾಗಿ ಸಮಯ. ಸೂಕ್ತ ಹಣಕಾಸಿನ ಉಳಿತಾಯಕ್ಕೆ ಒಂದೊಳ್ಳೆ ಹಣ ಕಾಸಿನ ಯೋಜನೆ ಸಹಾಯಕವಾಗುತ್ತದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.