ಅಂಗನವಾಡಿ ಮಕ್ಕಳಿಗೂ ಪದವಿ ಪ್ರದಾನ!

 ಇಂದು ಹಂಗಳೂರಿನಲ್ಲಿ ಸಮಾರಂಭ

Team Udayavani, Jan 31, 2020, 5:55 AM IST

ANGANAVADI

ಕುಂದಾಪುರ: ಪದವಿ, ಸ್ನಾತಕೋತ್ತರ ಪದವಿ, ಎಂಜಿನಿಯರಿಂಗ್‌, ವೈದ್ಯಕೀಯ ಹೀಗೆ ಉನ್ನತ ವ್ಯಾಸಂಗ ಮಾಡಿದವರಿಗೆ ಪದವಿ ಪ್ರದಾನ ಸಮಾರಂಭ (ಗ್ರಾಜುಯೇಶನ್‌ ಡೇ) ನಡೆಯುತ್ತದೆ. ಆದರೆ ಇಲ್ಲೊಂದು ವಿಶೇಷ ಇದೆ. ಕುಂದಾಪುರದಲ್ಲಿ ಅಂಗನವಾಡಿ ಮಕ್ಕಳಿಗೂ ಪದವಿ ಪ್ರದಾನ ಸಮಾರಂಭ ನಡೆಯಲಿದೆ!

ಯಾವಾಗ
ಜ.31ರಂದು ಹಂಗಳೂರಿನ ಸೈಂಟ್‌ ಪಿಯುಸ್‌ ಚರ್ಚ್‌ ಹಾಲ್‌ನಲ್ಲಿ ಸಮಾರಂಭ ನಡೆಯಲಿದೆ.

ಏನೆಲ್ಲ ಇದೆ
ಪದವಿ ಪ್ರದಾನ ಸಮಾರಂಭದಲ್ಲಿ ಗಣ್ಯರು ಎಲ್ಲ ವಿದ್ಯಾರ್ಥಿಗಳಿಗೆ ಅಂಗನ ವಾಡಿ ಪದವಿ ಪೂರೈಸಿದ ಪ್ರಮಾಣಪತ್ರಗಳನ್ನು ವಿತರಿಸುತ್ತಾರೆ. ವಿದ್ಯಾರ್ಥಿಗಳು ಶಿಕ್ಷಣದ ಕುರಿತು
ಅನಿಸಿಕೆ ವ್ಯಕ್ತಪಡಿಸುತ್ತಾರೆ. ಈ ವರ್ಷ ಅಂಗನವಾಡಿಯಲ್ಲಿ ನಡೆದ ಚಟುವಟಿಕೆಗಳ ವರದಿ ವಾಚಿಸ ಲಾಗುತ್ತದೆ.

ಅಂಗನವಾಡಿಯ ಆಹಾರ,ಕಾರ್ಯ
ಕರ್ತೆಯ ವೇತನ ಸರಕಾರದಿಂದ ನೀಡಿದರೂ ಇತರ ಚಟುವಟಿಕೆಗೆ ದಾನಿಗಳ ಅಗತ್ಯ ಇರುತ್ತದೆ. ಹಾಗೆ ದಾನಿಗಳಾದವರಿಗೆ ವಂದನೆ ಸಲ್ಲಿಸಲಾಗುತ್ತದೆ. ಅನಂತರ ಸಾಂಸ್ಕೃತಿಕ ಕಾರ್ಯಕ್ರಮ ನಡೆಯುತ್ತವೆ.

ಯಾಕಾಗಿ
ಎರಡೋ, ಮೂರೋ ವರ್ಷಗಳ ಅಂಗನವಾಡಿ ಯಲ್ಲಿ ಪೂರ್ವಪ್ರಾಥಮಿಕ ಶಿಕ್ಷಣ ಪೂರೈಸಿದ ವಿದ್ಯಾರ್ಥಿಗಳನ್ನು ಪ್ರಾಥಮಿಕ ಶಾಲೆಗೆ 1ನೇ ತರಗತಿ ಸೇರ್ಪಡೆಗಾಗಿ ಬೀಳ್ಕೊಡಲಾಗುತ್ತದೆ. ಹಾಗೆ ಬೀಳ್ಕೊಡುವಾಗ ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ ಮೂಡಿ ತಾನೇನೋ ಮಹತ್ತರವಾದುದನ್ನು ಕಲಿತು, ಇನ್ನಷ್ಟು ಕಲಿಯಲು ತೆರಳುತ್ತಿದ್ದೇನೆ ಎಂಬ ಭಾವ ಮೂಡಿಸುವುದು, ಉತ್ಸಾಹ ಹೆಚ್ಚಿಸುವುದು, ಕಲಿಕಾ ಪೂರ್ಣ ಅವಧಿಯಲ್ಲಿ ಉಲ್ಲಾಸ ಇರುವಂತೆ ಮಾಡುವುದು ಇದರ ಹಿಂದಿನ ಮೂಲ ಉದ್ದೇಶ. ಅಷ್ಟಲ್ಲದೇ ಸರಕಾರಿ ಅಂಗನವಾಡಿಗೆ ಆಗಮಿಸಿದ ಮಕ್ಕಳು ಆಂಗ್ಲಭಾಷಾ ಶಿಕ್ಷಣದ ಪ್ರಿ ನರ್ಸರಿ, ನರ್ಸರಿಗೆ ಹೋಗದವರು. ಅಂತಹ ಮಕ್ಕಳಿಗಿಂತ ಅಂಗನವಾಡಿ ಮಕ್ಕಳೂ ಕಡಿಮೆಯೇನಲ್ಲ ಎಂದು ಭಾವ ಬರುವಂತೆ ಮಾಡುವುದು ಕೂಡಾ ಕಾರ್ಯಕ್ರಮದ ಉದ್ದೇಶಗಳ ಪೈಕಿ ಒಂದು. ಅಷ್ಟೇ ಅಲ್ಲದೇ ಆಂಗ್ಲ ಭಾಷಾ ಶಾಲೆಗಳ ಸಂಖ್ಯೆ ಹೆಚ್ಚಾದಂತೆ, ಆಕರ್ಷಣೆ ಜಾಸ್ತಿಯಾದಂತೆ ಅಂಗನವಾಡಿಗಳ ಕಡೆಗೆ ಮಕ್ಕಳನ್ನು ಕರೆತರುವ ಪೋಷಕರ ಸಂಖ್ಯೆ ಕಡಿಮೆಯಾಗುತ್ತದೆ. ಆದ್ದರಿಂದ ಅಂಗನವಾಡಿ ಶಿಕ್ಷಣದಲ್ಲಿ, ಸರಕಾರಿ ಅಂಗನವಾಡಿಗಳಲ್ಲಿ ಆಸಕ್ತಿ ಮೂಡಿಸುವುದು, ದಾಖಲಾತಿ ಸಂಖ್ಯೆ ಹೆಚ್ಚಿಸುವ ಕಳಕಳಿಯೂ ಇದೆ. ಬಸೂÅರು ವಲಯದಲ್ಲಿ ಈಗಾಗಲೇ 10 ಅಂಗನವಾಡಿಗಳಲ್ಲಿ ಆಂಗ್ಲಭಾಷಾ ಕಲಿಕೆಯನ್ನೂ ಆರಂಭಿಸಲಾಗಿದೆ.

ವಲಯ
ಕುಂದಾಪುರದಲ್ಲಿ 412 ಅಂಗನವಾಡಿಗಳಿದ್ದು 17 ವಲಯಗಳಿವೆ. ಬಸ್ರೂರು ವಲಯದಲ್ಲಿ 25 ಅಂಗನವಾಡಿಗಳವೆ. ಬಸ್ರೂರು ವಲಯದ ಆಯ್ದ 9 ಅಂಗನವಾಡಿಗಳು ಒಟ್ಟಾಗಿ ಹಂಗಳೂರಿನಲ್ಲಿ ಪದವಿ ಪ್ರದಾನ ಸಮಾರಂಭ ನಡೆಸುತ್ತಿವೆ. ಕಳೆದ ವರ್ಷ ಕೋಣಿ ಗ್ರಾಮದ ಕಟೆRರೆ ಅಂಗನವಾಡಿಯಲ್ಲಿ ಪ್ರಾಯೋಗಿಕವಾಗಿ ಪದವಿ ಪ್ರದಾನ ಸಮಾರಂಭ ನಡೆದಿತ್ತು. ಈ ಬಾರಿ 9 ಅಂಗನವಾಡಿಗಳನ್ನು ಒಟ್ಟಾಗಿಸಿ ಸಮಾರಂಭ ಮಾಡಲಾಗುತ್ತಿದೆ.

ಉನ್ನತ ಸ್ಥಾನಮಾನ
ಸಣ್ಣ ಮಕ್ಕಳ ಮನಸ್ಸಿನಲ್ಲಿ ದೊಡ್ಡ ದೊಡ್ಡ ಆಸೆಗಳನ್ನು ಹುಟ್ಟಿಸಿ ಅವರು ಸಮಾಜದಲ್ಲಿ ಉನ್ನತ ಸ್ಥಾನಮಾನ ಪಡೆಯುವಂತಾಗಬೇಕೆಂದು ಭಾವಿಸುವಂತೆ ಮಾಡಬೇಕು. ಹಾಗೆ ಸ್ಥಾನಮಾನಗಳನ್ನು ಪಡೆಯಲು ಆಂಗ್ಲ ಮಾಧ್ಯಮ ಶಾಲೆಗಳಷ್ಟೇ ಆಯ್ಕೆ ಎಂದು ಮಕ್ಕಳಾಗಲೀ, ಪೋಷಕರಾಗಲೀ ಭಾವಿಸಕೂಡದು. ಸರಕಾರದ ಅಂಗನವಾಡಿಗಳಲ್ಲೂ ಸೌಲಭ್ಯ, ಸೌಕರ್ಯಗಳು, ಆಕರ್ಷಣೆಗಳು ಇವೆ ಎಂದು ತಿಳಿಯಬೇಕು. ಅದಕ್ಕಾಗಿ ಮಕ್ಕಳಿಗಾಗಿ ಇಂತಹ ವಿನೂತನ ಕಾರ್ಯಕ್ರಮ ಹಮ್ಮಿಕೊಳ್ಳ ಲಾಗಿದೆ.
– ಭಾಗ್ಯವತಿ, ಬಸ್ರೂರು ವಲಯ ಮೇಲ್ವಿಚಾರಕಿ

ಟಾಪ್ ನ್ಯೂಸ್

Mumbai: ಚಿಕಿತ್ಸೆಗೆಂದು ಮುಂಬೈಗೆ ಹೋಗಿದ್ದ ನಾಸಿಕ್ ನ ಒಂದೇ ಕುಟುಂಬದ ಮೂವರ ದುರಂತ ಸಾವು

Mumbai: ಚಿಕಿತ್ಸೆಗೆಂದು ಮುಂಬೈಗೆ ಹೋಗಿದ್ದ ನಾಸಿಕ್ ನ ಒಂದೇ ಕುಟುಂಬದ ಮೂವರ ದುರಂತ ಸಾ*ವು

Kadur: ದೇಗುಲ ಕಂಪೌಂಡ್‌ ಪ್ರವೇಶಿಸಿದರೆಂದು ದಲಿತರಿಗೆ ದಂಡ; ಸವರ್ಣೀಯರಿಂದ ದೇಗುಲಕ್ಕೆ ಬೀಗ

Kadur: ದೇಗುಲ ಕಂಪೌಂಡ್‌ ಪ್ರವೇಶಿಸಿದರೆಂದು ದಲಿತರಿಗೆ ದಂಡ; ಸವರ್ಣೀಯರಿಂದ ದೇಗುಲಕ್ಕೆ ಬೀಗ

0055

BBK11: ಮಂಜು ಅವರದ್ದು ಚೀಪ್ ಮೆಂಟಲಿಟಿ‌ ಎಂದ ರಜತ್; ಭವ್ಯ – ಮೋಕ್ಷಿತಾ ವಾಗ್ವಾದ

9-ullala

Ullala: ಸೇತುವೆಗೆ ತೇಪೆ ಹಚ್ಚುವ ಕಾಮಗಾರಿ; ರಾ. ಹೆದ್ದಾರಿಯಲ್ಲಿ ವಾಹನ ಸಂಚಾರ ವ್ಯತ್ಯಯ

BGT: ಆಸೀಸ್‌ ಮಾಧ್ಯಮದ ವಿರುದ್ದ ವಿರಾಟ್‌ ಗರಂ: ಏರ್‌ಪೋರ್ಟ್‌ ನಲ್ಲಿ ವರದಿಗಾರ್ತಿ ಜತೆ ಜಗಳ

BGT: ಆಸೀಸ್‌ ಮಾಧ್ಯಮದ ವಿರುದ್ದ ವಿರಾಟ್‌ ಗರಂ: ಏರ್‌ಪೋರ್ಟ್‌ ನಲ್ಲಿ ವರದಿಗಾರ್ತಿ ಜತೆ ಜಗಳ

8-belthangady

Belthangady: ಕ್ರಿಸ್ಮಸ್‌ ಹಬ್ಬಕ್ಕೆ ವಿದ್ಯುತ್ ಅಲಂಕಾರ ಮಾಡುವ ವೇಳೆ ಶಾಕ್: ಬಾಲಕ ಸಾವು

Chikkamagaluru: ಎಮ್ಮೆ ಹುಡುಕಲು ಹೋದವರ ಮೇಲೆ ಕಾಡಾನೆ ದಾಳಿ; ಮಗ ಪರಾರಿ, ತಂದೆ ಸಾವು

Chikkamagaluru: ಎಮ್ಮೆ ಹುಡುಕಲು ಹೋದವರ ಮೇಲೆ ಕಾಡಾನೆ ದಾಳಿ; ಮಗ ಪರಾರಿ, ತಂದೆ ಸಾವು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

9

Kaup: ಸಮಸ್ಯೆಗೆ ದೂರು ನೀಡಲು 1912ಗೆ ಕರೆ ಮಾಡಿ

8

Shirva: ಹೊಂಡ ಗುಂಡಿ, ಧೂಳುಮಯ ಕೋಡು-ಪಂಜಿಮಾರು ರಸ್ತೆ

7(1

Udupi: ಉದ್ಘಾಟನೆ ಕಾಣದ ಸರಕಾರಿ ಕಟ್ಟಡಗಳು

5(1

Kota: ಕಸ ಎಸೆಯುವ ಜಾಗದಲ್ಲಿ ನಿರ್ಮಾಣವಾಯಿತು ಪೌರ ಕಾರ್ಮಿಕನ ಪಾರ್ಕ್‌!

4

Karkala: ಈ ರಸ್ತೆಯಲ್ಲಿ ಬಸ್‌ ತಂಗುದಾಣಗಳೇ ಇಲ್ಲ!

MUST WATCH

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

udayavani youtube

ಮನೆ ತೊರೆದಿದ್ದ ವ್ಯಕ್ತಿ 14 ವರ್ಷಗಳ ಬಳಿಕ ಮರಳಿ ಗೂಡಿಗೆ.

ಹೊಸ ಸೇರ್ಪಡೆ

Mumbai: ಚಿಕಿತ್ಸೆಗೆಂದು ಮುಂಬೈಗೆ ಹೋಗಿದ್ದ ನಾಸಿಕ್ ನ ಒಂದೇ ಕುಟುಂಬದ ಮೂವರ ದುರಂತ ಸಾವು

Mumbai: ಚಿಕಿತ್ಸೆಗೆಂದು ಮುಂಬೈಗೆ ಹೋಗಿದ್ದ ನಾಸಿಕ್ ನ ಒಂದೇ ಕುಟುಂಬದ ಮೂವರ ದುರಂತ ಸಾ*ವು

Kadur: ದೇಗುಲ ಕಂಪೌಂಡ್‌ ಪ್ರವೇಶಿಸಿದರೆಂದು ದಲಿತರಿಗೆ ದಂಡ; ಸವರ್ಣೀಯರಿಂದ ದೇಗುಲಕ್ಕೆ ಬೀಗ

Kadur: ದೇಗುಲ ಕಂಪೌಂಡ್‌ ಪ್ರವೇಶಿಸಿದರೆಂದು ದಲಿತರಿಗೆ ದಂಡ; ಸವರ್ಣೀಯರಿಂದ ದೇಗುಲಕ್ಕೆ ಬೀಗ

9

Kaup: ಸಮಸ್ಯೆಗೆ ದೂರು ನೀಡಲು 1912ಗೆ ಕರೆ ಮಾಡಿ

8

Shirva: ಹೊಂಡ ಗುಂಡಿ, ಧೂಳುಮಯ ಕೋಡು-ಪಂಜಿಮಾರು ರಸ್ತೆ

0055

BBK11: ಮಂಜು ಅವರದ್ದು ಚೀಪ್ ಮೆಂಟಲಿಟಿ‌ ಎಂದ ರಜತ್; ಭವ್ಯ – ಮೋಕ್ಷಿತಾ ವಾಗ್ವಾದ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.