ಆಸ್ಟ್ರೇಲಿಯನ್‌ ಓಪನ್‌: ಕೆನಿನ್‌ ಮೆಲ್ಬರ್ನ್ ಕ್ವೀನ್‌


Team Udayavani, Feb 1, 2020, 11:06 PM IST

KENIN

ಮೆಲ್ಬರ್ನ್: ಮಾಸ್ಕೊ ಮೂಲದ ಅಮೆರಿಕನ್‌ ಆಟಗಾರ್ತಿ ಸೋಫಿಯಾ ಕೆನಿನ್‌ “ಆಸ್ಟ್ರೇಲಿಯನ್‌ ಓಪನ್‌’ ಟ್ರೋಫಿಗೆ ಮುತ್ತಿಕ್ಕಿದ್ದಾರೆ. ಇದರೊಂದಿಗೆ ತಮ್ಮ ಟೆನಿಸ್‌ ಬಾಳ್ವೆಯ ಮೊದಲ ಗ್ರ್ಯಾನ್‌ಸ್ಲಾಮ್‌ ಪ್ರಶಸ್ತಿಯನ್ನು ಎತ್ತಿಹಿಡಿದು ಸಂಭ್ರಮಿಸಿದ್ದಾರೆ. ಶನಿವಾರ “ಮೆಲ್ಬರ್ನ್ ಪಾರ್ಕ್‌’ನಲ್ಲಿ ನಡೆದ 3 ಸೆಟ್‌ಗಳ ಫೈನಲ್‌ ಹೋರಾಟದಲ್ಲಿ ಅವರು ಅವಳಿ ಗ್ರ್ಯಾನ್‌ಸ್ಲಾಮ್‌ ವಿಜೇತೆ, ಸ್ಪೇನಿನ ಗಾರ್ಬಿನ್‌ ಮುಗುರುಜಾ ವಿರುದ್ಧ 4-6, 6-2, 6-2 ಅಂತರದ ಮೇಲುಗೈ ಸಾಧಿಸಿದರು.

21ರ ಹರೆಯದ, 14ನೇ ಶ್ರೇಯಾಂಕದ ಸೋಫಿಯಾ ಕೆನಿನ್‌ ಕಳೆದ 12 ವರ್ಷಗಳಲ್ಲಿ ಆಸ್ಟ್ರೇಲಿಯನ್‌ ಓಪನ್‌ ಚಾಂಪಿಯನ್‌ ಎನಿಸಿಕೊಂಡ ಅತೀ ಕಿರಿಯ ಆಟಗಾರ್ತಿ. 2008ರಲ್ಲಿ ಶರಪೋವಾ 20ರ ಹರೆಯದಲ್ಲಿ ಚಾಂಪಿಯನ್‌ ಆಗಿದ್ದರು.

ಸೆಮಿಫೈನಲ್‌ನಲ್ಲಿ ವಿಶ್ವದ ಅಗ್ರಮಾನ್ಯ ಆಟಗಾರ್ತಿ, ತವರಿನ ಆ್ಯಶ್ಲಿ ಬಾರ್ಟಿ ಅವರನ್ನು ಮಣಿಸಿದ್ದರು. ಇದಕ್ಕೂ ಮೊದಲು ತಮ್ಮದೇ ದೇಶದ ಕೋಕೋ ಗಾಫ್ ಅವರಿಗೆ ಆಘಾತವಿಕ್ಕಿದ್ದರು. ಇಲ್ಲಿ ಯಾವುದೇ ಶ್ರೇಯಾಂಕವಿಲ್ಲದೆ ಆಡಲಿಳಿದ ಮುಗುರುಜಾ ವಿರುದ್ಧ ಕೆನಿನ್‌ ಆಕ್ರಮಣಕಾರಿ ಆಟವನ್ನೇ ಆಡಿದರು. 2 ಗಂಟೆ, 3 ನಿಮಿಷಗಳ ತನಕ ಇವರ ಹೋರಾಟ ಸಾಗಿತು.

“ನನ್ನ ಕನಸು ಕೊನೆಗೂ ನನಸಾಗಿದೆ. ಈ ಸಂಭ್ರಮ ವನ್ನು ಬಣ್ಣಿಸಲು ನನ್ನಿಂದ ಸಾಧ್ಯವಿಲ್ಲ’ ಎಂಬುದು ಕೆನಿನ್‌ ಪ್ರತಿಕ್ರಿಯೆ. ಕೋಚ್‌ ಕೂಡ ಆಗಿರುವ ತಂದೆ ಅಲೆಕ್ಸಾಂಡರ್‌ ಈ ಗೆಲುವಿಗೆ ಸಾಕ್ಷಿಯಾಗಿದ್ದರು. ನೂತನ ರ್‍ಯಾಂಕಿಂಗ್‌ನಲ್ಲಿ ಕೆನಿನ್‌ 7ನೇ ಸ್ಥಾನಕ್ಕೆ ನೆಗೆಯಲಿದ್ದಾರೆ.

ಸೋಫಿಯಾ ಕೆನಿನ್‌ ಪ್ರೊಫೈಲ್‌
-1998ರ ನ. 14ರಂದು ಮಾಸ್ಕೋದಲ್ಲಿ ಜನನ. 6 ವರ್ಷವಾಗಿದ್ದಾಗ ಹೆತ್ತವರೊಂದಿಗೆ ಅಮೆರಿಕಕ್ಕೆ ಪಯಣ, ಅಲ್ಲಿನದೇ ಪೌರತ್ವ.
– 12ರಿಂದ 18ರ ವಯೋಮಿತಿಯ ಎಲ್ಲ ಅಮೆರಿಕನ್‌ ಟೆನಿಸ್‌ ಸ್ಪರ್ಧೆಗಳಲ್ಲಿ ಭಾಗಿ. ಎಲ್ಲದರಲ್ಲೂ ನಂ.1 ಗೌರವ.
– 14ರ ಹರೆಯದಲ್ಲಿ ಐಟಿಎಫ್ ಸರ್ಕ್ನೂಟ್‌ನಲ್ಲಿ ಮೊದಲ ಗೆಲುವು.
– 2015ರಲ್ಲಿ ಮೊದಲ ಗ್ರ್ಯಾನ್‌ಸ್ಲಾಮ್‌ ಸ್ಪರ್ಧೆ. ವೈಲ್ಡ್‌
ಕಾರ್ಡ್‌ ಮೂಲಕ ಯುಎಸ್‌ ಓಪನ್‌ ಪ್ರವೇಶ. 2016ರಲ್ಲೂ ಯುಎಸ್‌ ಓಪನ್‌ನಲ್ಲಿ ಸ್ಪರ್ಧೆ. ಎರಡೂ ಸಲ ಮೊದಲ ಸುತ್ತಿನಲ್ಲೇ ಸೋಲು.
– 2018ರಲ್ಲಿ ಮೊದಲ ಸಲ ಟಾಪ್‌-50 ರ್‍ಯಾಂಕಿಂಗ್‌ ಗೌರವ.
– 2019ರಲ್ಲಿ ಮೊದಲ ಡಬ್ಲ್ಯುಟಿಎ ಪ್ರಶಸ್ತಿ. ಹೋಬರ್ಟ್‌ ಇಂಟರ್‌ನ್ಯಾಶನಲ್‌ ಕೂಟದಲ್ಲಿ ಚಾಂಪಿಯನ್‌.
– 2019ರ ಆಸ್ಟ್ರೇಲಿಯನ್‌ ಓಪನ್‌ 3ನೇ ಸುತ್ತಿನಲ್ಲಿ ನಂ.1 ಸಿಮೋನಾ ಹಾಲೆಪ್‌ ವಿರುದ್ಧ ಭಾರೀ ಹೋರಾಟ. ಕೊನೆ ಯಲ್ಲಿ 3-6, 7-6 (7-5), 4-6 ಅಂತರದ ಸೋಲು.
– 2019ರ ವಿವಿಧ ಕೂಟಗಳಲ್ಲಿ ನವೋಮಿ ಒಸಾಕಾ, ಆ್ಯಶ್ಲಿ ಬಾರ್ಟಿ ವಿರುದ್ಧ ಗೆಲುವು. ವರ್ಷಾಂತ್ಯದಲ್ಲಿ 12ನೇ ರ್‍ಯಾಂಕಿಂಗ್‌ ಗೌರವ. “ಡಬ್ಲ್ಯುಟಿಎ ಮೋಸ್ಟ್‌ ಇಂಪ್ರೂವ್‌x ಪ್ಲೇಯರ್‌ ಆಫ್ ದಿ ಇಯರ್‌’ ಪ್ರಶಸ್ತಿ.

ಟಾಪ್ ನ್ಯೂಸ್

Anktaadka: ಹಾಡುಹಗಲೇ ಕಾಡುಕೋಣ ಸಂಚಾರ… ಸ್ಥಳೀಯರಲ್ಲಿ ಆತಂಕ

Ankathadka: ಹಾಡುಹಗಲೇ ಕಾಡುಕೋಣ ಸಂಚಾರ… ಸ್ಥಳೀಯರಲ್ಲಿ ಆತಂಕ

Mysuru: ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆಗೆ ಶರಣು… ಸ್ಥಳದಲ್ಲಿ ಡೆತ್ ನೋಟ್ ಪತ್ತೆ

Mysuru: ಒಂದೇ ಕುಟುಂಬದ ನಾಲ್ವರು ಆತ್ಮಹ*ತ್ಯೆಗೆ ಶರಣು… ಸ್ಥಳದಲ್ಲಿ ಡೆ*ತ್ ನೋಟ್ ಪತ್ತೆ

NR Pura: ಭದ್ರಾ ನದಿಯಲ್ಲಿ ಈಜಲು ಹೋಗಿ ನೀರು ಪಾಲಾದ ಯುವಕ… ಮುಂದುವರೆದ ಶೋಧ ಕಾರ್ಯ

NR Pura: ಭದ್ರಾ ನದಿಯಲ್ಲಿ ಈಜಲು ಹೋಗಿ ನೀರು ಪಾಲಾದ ಯುವಕ… ಮುಂದುವರೆದ ಶೋಧ ಕಾರ್ಯ

Dharwad: ದಾಂಪತ್ಯದಲ್ಲಿ ಅನ್ಯೋನ್ಯವಾಗಿದ್ದ ಹಿರಿಯ ದಂಪತಿಗಳು ಸಾವಿನಲ್ಲೂ ಒಂದಾದರು

Dharwad: ದಾಂಪತ್ಯದಲ್ಲಿ ಅನ್ಯೋನ್ಯವಾಗಿದ್ದ ಹಿರಿಯ ದಂಪತಿಗಳು ಸಾವಿನಲ್ಲೂ ಒಂದಾದರು

Mudigere: ಸುತ್ತಿಗೆಯಿಂದ ತಲೆಗೆ ಹೊಡೆದು ಅತ್ತೆಯ ಹತ್ಯೆ… ಅಳಿಯ ಪರಾರಿ, ಪೊಲೀಸರಿಂದ ಶೋಧ

Mudigere: ಸುತ್ತಿಗೆಯಿಂದ ತಲೆಗೆ ಹೊಡೆದು ಅತ್ತೆಯ ಹತ್ಯೆ… ಅಳಿಯ ಪರಾರಿ, ಪೊಲೀಸರಿಂದ ಶೋಧ

Shivamogga: ಹೊಟೇಲ್‌ನಲ್ಲಿ ಯುವಕ, ಯುವತಿಯ ವಿಡಿಯೋ ತೆಗೆದು ಕಿಡ್ನಾಪ್… ಹಣಕ್ಕೆ ಬೇಡಿಕೆ

Shivamogga: ಹೊಟೇಲ್‌ನಲ್ಲಿ ಯುವಕ, ಯುವತಿಯ ವಿಡಿಯೋ ತೆಗೆದು ಕಿಡ್ನಾಪ್… ಹಣಕ್ಕೆ ಡಿಮಾಂಡ್

Kunigal: ಕಾರು ಪಲ್ಟಿ ಮಹಿಳೆ ಸ್ಥಳದಲ್ಲೇ ಮೃತ್ಯು, ಇಬ್ಬರಿಗೆ ಗಾಯ

Kunigal: ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿ.. ಮಹಿಳೆ ಸ್ಥಳದಲ್ಲೇ ಮೃತ್ಯು, ಇಬ್ಬರಿಗೆ ಗಾಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

12

Ranji Trophy 2024-25: ಇಂದಿನಿಂದ ರಣಜಿ ಸೆಮಿಫೈನಲ್ಸ್‌

Yashasvi Jaiswal: ಚಾಂಪಿಯನ್ಸ್‌ ಟ್ರೋಫಿ ಮೀಸಲು ಪಟ್ಟಿಯಿಂದ ಜೈಸ್ವಾಲ್‌ ಹೊರಕ್ಕೆ?

Yashasvi Jaiswal: ಚಾಂಪಿಯನ್ಸ್‌ ಟ್ರೋಫಿ ಮೀಸಲು ಪಟ್ಟಿಯಿಂದ ಜೈಸ್ವಾಲ್‌ ಹೊರಕ್ಕೆ?

16

Pro Hockey: ಇಂಗ್ಲೆಂಡ್‌ ವಿರುದ್ಧ ಭಾರತ ವನಿತೆಯರಿಗೆ ಸೋಲು

WPL: ಮುಂಬೈ-ಡೆಲ್ಲಿ ಪಂದ್ಯದಲ್ಲಿ ರನೌಟ್‌ ವಿವಾದ

WPL: ಮುಂಬೈ-ಡೆಲ್ಲಿ ಪಂದ್ಯದಲ್ಲಿ ರನೌಟ್‌ ವಿವಾದ

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

Bengaluru: ನೀರಿನ ಸಮಸ್ಯೆಯಾಗದಂತೆ ಜಲಮಂಡಳಿ ಸಿದ್ಧತೆ

Bengaluru: ನೀರಿನ ಸಮಸ್ಯೆಯಾಗದಂತೆ ಜಲಮಂಡಳಿ ಸಿದ್ಧತೆ

Bengaluru: ಈ ವಾರವೇ ಕಾವೇರಿ ನೀರಿನ ದರ ಏರಿಕೆ ಬಿಸಿ?

Bengaluru: ಈ ವಾರವೇ ಕಾವೇರಿ ನೀರಿನ ದರ ಏರಿಕೆ ಬಿಸಿ?

Theft Case: ಕೆಲಸ ಮಾಡುತ್ತಿದ್ದ ಅಂಗಡಿಯಲ್ಲೇ 2 ಕೆ.ಜಿ. ಚಿನ್ನ ಕಳವು ಮಾಡಿದ್ದವರ ಸೆರೆ

Theft Case: ಕೆಲಸ ಮಾಡುತ್ತಿದ್ದ ಅಂಗಡಿಯಲ್ಲೇ 2 ಕೆ.ಜಿ. ಚಿನ್ನ ಕಳವು ಮಾಡಿದ್ದವರ ಸೆರೆ

Anktaadka: ಹಾಡುಹಗಲೇ ಕಾಡುಕೋಣ ಸಂಚಾರ… ಸ್ಥಳೀಯರಲ್ಲಿ ಆತಂಕ

Ankathadka: ಹಾಡುಹಗಲೇ ಕಾಡುಕೋಣ ಸಂಚಾರ… ಸ್ಥಳೀಯರಲ್ಲಿ ಆತಂಕ

Television actor: ಕಿರುತೆರೆ ನಟ ಬಾಳಪ್ಪ ವಿರುದ್ಧ ಮತ್ತೊಂದು ಕೇಸ್‌

Television actor: ಕಿರುತೆರೆ ನಟ ಬಾಳಪ್ಪ ವಿರುದ್ಧ ಮತ್ತೊಂದು ಕೇಸ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.