ನುಗ್ಗೆ ಕಟಾವು ಸುಲಭವಾಗಬೇಕು
Team Udayavani, Feb 3, 2020, 5:00 AM IST
ನುಗ್ಗೆ, ಒಂದು ಬಹುವಾರ್ಷಿಕ ತರಕಾರಿ ಬೆಳೆಯಾಗಿದೆ. ಅದನ್ನು ಎಲ್ಲಾ ಬಗೆಯ ಮಣ್ಣಿನಲ್ಲಿ ಬೆಳೆಯಬಹುದು. ಈ ಬೆಳೆಗೆ, ಮರಳು ಮಿಶ್ರಿತ ಗೋಡು ಮಣ್ಣು ಹೆಚ್ಚು ಸೂಕ್ತ. ಈ ಬೆಳೆಯನ್ನು ನಾಟಿ ಮಾಡಲು ಜೂನ್- ಜುಲೈ ಪ್ರಶಸ್ತ ತಿಂಗಳು. ನೀರಾವರಿ ಸೌಲಭ್ಯವಿದ್ದಲ್ಲಿ ಎಲ್ಲಾ ಕಾಲದಲ್ಲಿಯೂ ನಾಟಿ ಮಾಡಬಹುದು. ಭಾಗ್ಯ (ಕೆ.ಡಿ.ಎಮ್-01), ಪಿ.ಕೆ.ಎಮ್-01, ಧನರಾಜ್ (ಸೆಲೆಕ್ಷನ್ 64) ಮತ್ತು ಜಿ.ಕೆ.ವಿ.ಕೆ- 2, 3 ಎಂಬ ಗಿಡ್ಡ ತಳಿಗಳಿವೆ. ಎಕರೆಗೆ 100 ಗ್ರಾಂ ಬೀಜ ಹಾಗೂ ಸಸಿಗಳಾದಲ್ಲಿ 370 ಬೇಕಾಗುತ್ತದೆ. ಪ್ರತಿ ಸಸಿಯನ್ನು 3.25 ಮೀ. ಅಂತರದಲ್ಲಿ ನಾಟಿ ಮಾಡಬೇಕು. ನಾಟಿಯಾದ 65ರಿಂದ 70ನೇ ದಿನಕ್ಕೆ ಗಿಡದ ಮುಖ್ಯ ತುದಿಯನ್ನು ಚಿವುಟುವುದರಿಂದ ಗಿಡಗಳ ಕವಲುಗಳು ಹೆಚ್ಚಾಗಿ ಒಡೆದು ಇಳುವರಿ ಹೆಚ್ಚುವುದು. ಅಲ್ಲದೆ, ಗಿಡದ ಎತ್ತರ ಕಡಿಮೆಯಾಗಿ ಕಾಯಿಗಳನ್ನು ಕಟಾವು ಮಾಡಲು ಅನುಕೂಲವಾಗುತ್ತದೆ. ನಾಟಿ ಮಾಡಿದ 90 ದಿನಗಳ ನಂತರ ಎಕರೆಗೆ 5 ಕೆ.ಜಿ ಸಾರಜನಕ, 25 ಕೆ.ಜಿ. ರಂಜಕ, 6 ಕೆ.ಜಿ. ಪೊಟ್ಯಾಷ್ ರಸಗೊಬ್ಬರ ಮತ್ತು 10 ಟನ್ ಕೊಟ್ಟಿಗೆ ಗೊಬ್ಬರವನ್ನು ಒದಗಿಸಬೇಕು. ಇದೇ ಪ್ರಮಾಣದ ಗೊಬ್ಬರವನ್ನು ಮತ್ತೆ 90 ದಿನಗಳ ನಂತರ ಒದಗಿಸಬೇಕು. ನೆಟ್ಟ 8ನೇ ತಿಂಗಳಿನಿಂದ ಈ ಗಿಡ್ಡ ತಳಿಗಳು, ಹೂ ಮತ್ತು ಕಾಯಿಗಳನ್ನು ಬಿಡಲು ಆರಂಭಿಸುತ್ತವೆ. ಈ ತಳಿಗಳಲ್ಲಿ ಎರಡು ವರ್ಷಗಳ ನಂತರ ಪ್ರತಿ ಗಿಡದಿಂದ 200- 250 ಕಾಯಿಗಳು ದೊರೆಯುತ್ತವೆ. ನುಗ್ಗೆ ಸೊಪ್ಪನ್ನು ತರಕಾರಿಯಾಗಿ ಹಾಗೂ ಔಷಧಿಗಾಗಿಯೂ ಬಳಸುವುದರಿಂದ ಅವುಗಳಿಗೂ ತುಂಬಾ ಬೇಡಿಕೆ ಇದೆ.
ಒಂದು ಎಕರೆ ಜಮೀನಿನಲ್ಲಿ ನುಗ್ಗೆ ಬೇಸಾಯ ಮಾಡಬೇಕೆಂದುಕೊಂಡಿದ್ದೇನೆ. ಗಿಡದ ಕವಲುಗಳು ಹೆಚ್ಚು ಒಡೆಯಲು ಮತ್ತು ಕಟಾವಿಗೆ ಸುಲಭವಾಗುವಂತೆ ಗಿಡಗಳ ಎತ್ತರ ಕಡಿಮೆಯಾಗಲು ಏನು ಮಾಡಬೇಕು?
– ಮಸಕ್ ಸಾಬ ಹಿಟ್ನಾಳ, ಪ್ರಗತಿಪರ ರೈತ, ವಿಜಯಪುರ
– ಡಾ. ಅಶೋಕ ಪಿ.,
ಹಿರಿಯ ವಿಜ್ಞಾನಿ ಹಾಗೂ ಮುಖ್ಯಸ್ಥರು,
ಕೃಷಿ ವಿಜ್ಞಾನ ಕೇಂದ್ರ, ಹನುಮನಮಟ್ಟಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್
ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಹೊಸ ಸೇರ್ಪಡೆ
Court: ರಾಜ್ಯಕ್ಕೆ ಖನಿಜ ತೆರಿಗೆ ಅಧಿಕಾರ: ಪರಿಶೀಲನ ಅರ್ಜಿ ಸುಪ್ರೀಂ ವಜಾ
Bandipur ಸಫಾರಿ ವೀಕ್ಷಿಸಿದ CJI ಡಿ.ವೈ.ಚಂದ್ರಚೂಡ್: ಕಾಡಾನೆಗಳ ದರ್ಶನ
Dasara: ಶ್ರೀರಂಗಪಟ್ಟಣ ದಸರಾಗೆ ಯಾವುದೇ ತಡವಾಗಿಲ್ಲ: ಸಚಿವ ಚಲುವರಾಯಸ್ವಾಮಿ
Mangaluru: ಒಂದೂವರೆ ಕೋಟಿಗೂ ಅಧಿಕ ಬಿಜೆಪಿ ಸದಸ್ಯತ್ವ ಗುರಿ: ಧೀರಜ್ ಮುನಿರಾಜು
PDOಗಳ ಅನಿರ್ದಿಷ್ಟಾವಧಿ ಧರಣಿ: ರಾಜ್ಯಾದ್ಯಂತ ಗ್ರಾ.ಪಂ. ಸೇವೆ ಸ್ಥಗಿತ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.