ಬೇಸಗೆಯ ಸಂಜೆಯಿದು ಬೇಕೆನಗೆ ನೀರ ಜೊತೆ


Team Udayavani, Feb 7, 2020, 5:00 AM IST

big-17

ನೀರು ದೇಹವನ್ನು ಕಾಪಾಡುವ ದಿವ್ಯ ಔಷಧ ಎಂದರೆ ತಪ್ಪಲ್ಲ. ಸ್ವತ್ಛವಾದ ನೀರನ್ನು ಮನಸ್ಸು ತೃಪ್ತಿಯಾಗುಷ್ಟು ಕುಡಿದರೆ ಉಂಟಾಗುವ ಆನಂದವೇ ಎಷ್ಟೋ ಕಾಯಿಲೆಗಳನ್ನು ವಾಸಿ ಮಾಡುತ್ತದೆ. ಬೇಸಿಗೆ ಕಾಲದಲ್ಲಿ ನೀರಿನ ಲಭ್ಯತೆಯೇ ಒಂದು ಸವಾಲು. ಹಾಗಂತ, ದೇಹದಲ್ಲಿ ನೀರಿನ ಪ್ರಮಾಣ ಕಡಿಮೆಯಾಗದಂತೆ ಎಚ್ಚರಿಕೆ ವಹಿಸಬೇಕಾಗುತ್ತದೆ.

ಬಿರುಬಿಸಿಲಿಗೆ ದೇಹಕ್ಕೆ ಹೆಚ್ಚಿನ ಪ್ರಮಾಣದ ನೀರು ಬೇಕಾಗುತ್ತದೆ. ಆದರೆ, ಎಲ್ಲರ ದೇಹಕ್ಕೂ ಇಂತಿಷ್ಟೇ ಪ್ರಮಾಣದ ನೀರಿನ ಅಗತ್ಯವಿದೆ ಎಂದು ಸಾರಾಸಗಟಾಗಿ ಹೇಳುವಂತಿಲ್ಲ. ಏಕೆಂದರೆ, ದೇಹದ ತೂಕಕ್ಕೆ ತಕ್ಕಂತೆ ನೀರಿನ ಅಗತ್ಯವೂ ಬದಲಾಗುತ್ತದೆ. ಆದರೆ, ಸುಮಾರಾಗಿ ಪ್ರೌಢ ವ್ಯಕ್ತಿಗೆ ಎರಡರಿಂದ ನಾಲ್ಕು ಲೀಟರ್‌ ನೀರಿನ ಅಗತ್ಯವಿದೆ. ಬಿಸಿಲಿನಲ್ಲಿ ಕೆಲಸ ಮಾಡುವವರು, ಋತುಸ್ರಾವದ ಸಂದರ್ಭದಲ್ಲಿ ಮಹಿಳೆಯರು ಹೆಚ್ಚಿನ ಪ್ರಮಾಣದ ನೀರು ಕುಡಿಯುವುದು ಅಗತ್ಯ.

ಇನ್ನು ಪ್ರತೀ ದಿನ ವ್ಯಾಯಾಮ ಮಾಡುವವರಿಗೆ, ಜಿಮ್‌ಗೆ ಹೋಗುವ ಅಭ್ಯಾಸ ಇರುವವರಿಗೂ ಹೆಚ್ಚಿನ ಪ್ರಮಾಣದ ನೀರು ಬೇಕು. ಯಾಕೆಂದರೆ, ಸ್ನಾಯುಗಳು ಕ್ರಿಯಾಶೀಲವಾಗುವುದರಿಂದ ಸಾಕಷ್ಟು ದ್ರವಾಂಶ ಅಗತ್ಯ.  ಬಾಯಾರಿಕೆ ಅನಿಸಿದಾಗ ಮಾತ್ರ ನೀರು ಕುಡಿಯುವುದು ಅಷ್ಟೇನೂ ಒಳ್ಳೆಯ ಅಭ್ಯಾಸವಲ್ಲ. ದಿನದಲ್ಲಿ ನಿರ್ದಿಷ್ಟವಾಗಿ ಕೆಲವು ಬಾರಿ ನೀರು ಕುಡಿಯುವ ಅಭ್ಯಾಸವಿದ್ದರೆ ಒಳಿತು. ಉದಾಹರಣೆಗೆ ಬೆಳಿಗ್ಗೆ ಎದ್ದಾಗ, ತಿಂಡಿ ಅಥವಾ ಊಟ ಸೇವನೆಯ ಬಳಿಕ, ರಾತ್ರಿ ಮಲಗುವ ಮುನ್ನ ಮನಸ್ಸು ತೃಪ್ತಿಯಾಗುವಷ್ಟು ನೀರು ಕುಡಿಯುವುದು ಉತ್ತಮ ಹವ್ಯಾಸ.

ದೇಹಕ್ಕೆ ನೀರಿನ ಅಂಶ ಕಡಿಮೆ ಆದಾಗ ಕಣ್ಣಿನಲ್ಲಿ ನೀರಿನ ತೇವ ಕಡಿಮೆಯಾಗುವುದು, ತಲೆಸುತ್ತು ಬಂದಂತೆ ಅನಿಸುವುದು, ತುಟಿ ಒಣಗಿ, ನಾಲಿಗೆ ಒಣಗಿದಂತೆ ಅನಿಸಿದರೆ ನಿರ್ಜಲೀಕರಣ (ಡಿಹೈಡ್ರೇಷನ್‌) ಆಗಿದೆ ಎಂದರ್ಥ. ಆದ್ದರಿಂದ ಬಾಯಾರಿಕೆ ಅನಿಸುವ ಮುನ್ನವೇ ಆಗಾಗ ನೀರು ಕುಡಿಯುತ್ತ ಇರುವುದು ಅತೀ ಅಗತ್ಯ. ವಯಸ್ಸು ಹೆಚ್ಚಾಗುತ್ತಿದ್ದಂತೆಯೇ ದೇಹದಲ್ಲಿ “ದಾಹ’ವನ್ನು ಸೂಚಿಸುವ ವ್ಯವಸ್ಥೆಯು ತುಸು ದುರ್ಬಲವಾಗುತ್ತದೆ. ಆದ್ದರಿಂದ ಉತ್ತಮ ಅಭ್ಯಾಸ ಬಲವೇ ದೇಹವನ್ನು ಕಾಪಾಡುತ್ತದೆ.

ದೇಹವನ್ನು ಕಾಪಾಡಿಕೊಳ್ಳಲು ನೀರು ಸೇವಿಸುವುದು ಮಾತ್ರವಲ್ಲ, ನೀರಿನ ಅಂಶ ಜಾಸ್ತಿ ಇರುವ ಹಣ್ಣು, ಆಹಾರ ಸೇವನೆಯೂ ಉತ್ತಮ. ಉದಾಹರಣೆಗೆ, ಸೌತೆಕಾಯಿ, ಕಲ್ಲಂಗಡಿ ಹಣ್ಣುಗಳ ಸೇವನೆ ದೇಹಕ್ಕೆ ಹೆಚ್ಚಿನ ದ್ರವಾಂಶ ಪೂರೈಸುತ್ತವೆ. ಪನೀರ್‌, ಮಾಂಸಾಹಾರ, ಚೀಸ್‌ ಸೇವಿಸಿದಾಗ ಆಹಾರದ ಪಚನ ಕ್ರಿಯೆಗೆ ಹೆಚ್ಚಿನ ನೀರು ಬೇಕಾಗುತ್ತದೆ. ಗಿಡದಲ್ಲಿ ಬೆಳೆಯುವ ತರಕಾರಿಗಳು ಅಂದರೆ ಗೆಡ್ಡೆ ಗೆಣಸಿಗಿಂತಲೂ, ಬೆಂಡೆ, ಬದನೆ, ಸೋರೆಕಾಯಿ, ಸೌತೆಕಾಯಿ, ಪಡುವಲಕಾಯಿಯಂತಹ ತರಕಾರಿಗಳು ಸರಳವಾಗಿ ಬೇಗನೆ ಜೀರ್ಣವಾಗುತ್ತವೆ.

ಸತ್ಯಭಾಮಾ ಎನ್‌.

ಟಾಪ್ ನ್ಯೂಸ್

Gun-Fire

Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್‌: 3 ವರ್ಷದ ಮಗು ಮೃತ್ಯು!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

Delhi-Stamp

Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Malayalam Kannada Translated Story

ವಿಲ್ಲನ್ ‌ಗಳು ಮಾತನಾಡುವಾಗ ಏನನ್ನೂ ಬಚ್ಚಿಡುವುದಿಲ್ಲ

k-20

ಸೆರಗು-ಲೋಕದ ಬೆರಗು

ಕಡಿಮೆ ಮಾಡೋಣ ಪ್ಲಾಸ್ಟಿಕ್‌ ಸದ್ದು

ಕಡಿಮೆ ಮಾಡೋಣ ಪ್ಲಾಸ್ಟಿಕ್‌ ಸದ್ದು

ದಿರಿಸು-ಪುಸ್ತಕಗಳ ನಡುವೆ ಬದುಕು ನವಿಲುಗರಿ

ದಿರಿಸು-ಪುಸ್ತಕಗಳ ನಡುವೆ ಬದುಕು ನವಿಲುಗರಿ

ಎಲ್ಲ ದಿನಗಳೂ ಮಹಿಳಾ ದಿನಗಳೇ!

ಎಲ್ಲ ದಿನಗಳೂ ಮಹಿಳಾ ದಿನಗಳೇ!

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

Gun-Fire

Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್‌: 3 ವರ್ಷದ ಮಗು ಮೃತ್ಯು!

accident

Kaup: ಸ್ಕೂಟಿ, ಕಾರಿಗೆ ಬಸ್‌ ಢಿಕ್ಕಿ; ಸವಾರನಿಗೆ ಗಾಯ

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

1

Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್‌ಮನ್‌ ಹಲ್ಲೆ; ದೂರು

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.