ಈ ಸಮಯ ಕಳೆದು ಹೋಗುತ್ತದೆ…


Team Udayavani, Feb 10, 2020, 5:27 AM IST

KIRU-LEKHANA1

ಒಮ್ಮೆ ಅರ್ಜುನ ಶ್ರೀ ಕೃಷ್ಣನನ್ನು ಕೇಳಿದ.. ಈ ಗೋಡೆಯ ಮೇಲೆ ಒಂದು ಸಂದೇಶ ಬರಿ, ಅದು ಹೇಗಿರಬೇಕೆಂದರೆ ಖುಷಿಯಲ್ಲಿದ್ದಾಗ ಓದಿದರೆ ದುಃಖವಾಗಬೇಕು, ದುಃಖದಲ್ಲಿದ್ದಾಗ ಓದಿದರೆ ಖುಷಿಯಾಗುವಂತಿರಬೇಕು ಎಂದ. ಆಗ ಶ್ರೀ ಕೃಷ್ಣ ಹೇಳುತ್ತಾನೆ ಈ ಸಮಯ ಕಳೆದು ಹೋಗುತ್ತದೆ… ಕೇವಲ ನಾಲ್ಕು ಪದಗಳಲ್ಲಿ ಸುಂದರವಾದ ಉತ್ತರ ನೀಡುತ್ತಾನೆ ಕೃಷ್ಣ.

ದುಃಖದಲ್ಲಿರುವವರು ಈ ಸಮಯ ಬೇಗ ಕಳೆದುಹೋಗಲಿ ಎಂದು ಬಯಸಿದರೆ ಸಂತೋಷದಲ್ಲಿದ್ದವರು ಸಂತೋಷ ಇಷ್ಟು ಬೇಗ ಮುಗಿದು ಹೋಯಿತೇ ಎಂದು ಬೇಸರಪಡುತ್ತಾರೆ. ಆದರೆ ಸಮಯ ಹೇಗಿದ್ದರೂ ಕಳೆದು ಹೋಗುತ್ತದೆ. ಆದರೆ ಕಳೆದು ಹೋಗುತ್ತಿರುವ ಸಮಯವನ್ನು ಹೇಗೆ ಅರ್ಥಪೂರ್ಣವಾಗಿ ಬಳಸಿಕೊಳ್ಳಬಹುದು ಎಂಬುದನ್ನು ಮಾನವನ ಬುದ್ದಿವಂತಿಕೆಗೆ ಬಿಟ್ಟದ್ದು.

ಮನುಷ್ಯನಿಗಿರುವ ಸಮಯ ಸ್ವಲ್ಪವಷ್ಟೇ. ಅದರಲ್ಲಿ ಬರೀ ಕೋಪ, ದ್ವೇಷ, ಗುರಿ ಹಿಂದೆ ಓಡುವುದರ ಜತೆಗೆ ಜೀವನದ ಸಣ್ಣ ಸಣ್ಣ ಖುಷಿಯನ್ನೂ ಅನುಭವಿಸಿಕೊಳ್ಳಿ. ಯಾಕೆಂದರೆ ಮುಂದೊಂದು ದಿನ ಗುರಿ ತಲುಪಿದ ಮೇಲೆ ಕಳೆದುಕೊಂಡ ಅನುಭವ, ಖುಷಿಯನ್ನು ಪಡೆದುಕೊಳ್ಳಲು ಖಂಡಿತ ಸಾಧ್ಯವಿಲ್ಲ. ಯಾವ ವಯಸ್ಸಿನಲ್ಲಿ ಯಾವ ಅನುಭವ ದೊರೆಯಬೇಕು ಅದು ದೊರೆತರೇನೇ ಚಂದ. ಮನುಷ್ಯನಿಗೆ ವಯಸ್ಸೂ ಹಾಗೆ. ಆದ್ದರಿಂದ ಕಳೆದು ಹೋಗುತ್ತಿರುವ ಸಮಯದ ಕುರಿತು ಚಿಂತೆ ಮಾಡುವ ಬದಲು ಕಳೆದುಹೋಗುತ್ತಿರುವ ಸಮಯವನ್ನು ಸದ್ಭಳಕೆ ಮಾಡಿಕೊಂಡರೆ ಸಮಯಕ್ಕೆ ಅರ್ಥ ದೊರೆಯುತ್ತದೆ.

ಅರ್ಥಪೂರ್ಣವಾಗಿ ಬಳಸಿಕೊಳ್ಳಿ
ಮನುಷ್ಯನಿಗೆ ಎಲ್ಲವನ್ನೂ ಖರೀದಿಸುವ ಶಕ್ತಿಯಿದೆ, ಆದರೆ ಸಮಯವನ್ನಲ್ಲ. ಮನುಷ್ಯನಿಗೆ ಸಮಯವನ್ನಂತೂ ನಿಲ್ಲಿಸಲು ಸಾಧ್ಯವಿಲ್ಲ.ಆದರೆ ಸಿಕ್ಕಿದ ಸಮಯವನ್ನು ಅರ್ಥಪೂರ್ಣವಾಗಿ ಬಳಸಿಕೊಳ್ಳಲು ಸಾಧ್ಯವಿದೆ. ಸಿಗುವ ಎಲ್ಲವನ್ನು ಅನುಭವಿಸುವುದನ್ನು ಕಲಿಯೋಣ. ಎಲ್ಲರನ್ನೂ ಪ್ರೀತಿಸಲು ಕಲಿಯೋಣ.. ಸಮಯ ಕಳೆದು ಹೋದ ಮೇಲೆ ಅಯ್ಯೋ ಕೋಪದಲ್ಲೇ ಜೀವನದ ಪ್ರಮುಖ ಖುಷಿಗಳನ್ನು ಕಳೆದುಕೊಂಡೆನಾ ಎಂದೂ ದುಃಖ ಪಡುವ ಬದಲು, ಆ ದಿನದ ಪ್ರತಿ ಖುಷಿಯನ್ನು ಅನುಭವಿಸಲು ಕಲಿತರೆ ಸಮಯ ಕಳೆದದ್ದಕ್ಕೂ ದುಃಖ ಪಡುವ ಅಗತ್ಯ ಇರುವುದಿಲ್ಲ.

-ರಂಜಿನಿ ಮಿತ್ತಡ್ಕ

ಟಾಪ್ ನ್ಯೂಸ್

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

Lalu

Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್

1-sidda

Mahakumbh; ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರಲಿ: ಅಭಿಮಾನಿಯ ಪ್ರಾರ್ಥನೆ

1-congress

Congress ಪಕ್ಷಕ್ಕೆ ಮರು ಸೇರ್ಪಡೆಯಾದ ಎಲ್.ಆರ್.ಶಿವರಾಮೇಗೌಡ, ಬ್ರಿಜೇಶ್ ಕಾಳಪ್ಪ

DKSHi-4

Siddaramaiah ನಮ್ಮ ನಾಯಕ, ಹೆಸರು ದುರ್ಬಳಕೆ ಮಾಡಿಕೊಳ್ಳುವ ಅಗತ್ಯವಿಲ್ಲ: ಡಿಕೆಶಿ

Actor Darshan: ಪ್ರೇಮ್‌ – ದರ್ಶನ್‌ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್‌ ಪೋಸ್ಟರ್‌ ಔಟ್

Actor Darshan: ಪ್ರೇಮ್‌ – ದರ್ಶನ್‌ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್‌ ಪೋಸ್ಟರ್‌ ಔಟ್

Gambhir-Agarkar have differences of opinion on Pant-Rahul issue

Team India: ಪಂತ್-ರಾಹುಲ್‌ ವಿಚಾರದಲ್ಲಿ ಗಂಭೀರ್-‌ ಅಗರ್ಕರ್‌ ನಡುವೆ ಭಿನ್ನಾಭಿಪ್ರಾಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

udayavani youtube

ಮುಕೇಶ್ ಅಂಬಾನಿ ಕುಟುಂಬದ ನಾಲ್ಕು ತಲೆಮಾರು ಮಹಾ ಕುಂಭಮೇಳದಲ್ಲಿ ಪವಿತ್ರ ಸ್ನಾನ

ಹೊಸ ಸೇರ್ಪಡೆ

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

Lalu

Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್

1-sidda

Mahakumbh; ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರಲಿ: ಅಭಿಮಾನಿಯ ಪ್ರಾರ್ಥನೆ

1sadgu

Pariksha Pe Charcha: ಸ್ಮಾರ್ಟ್ ಫೋನ್‌ಗಿಂತಲೂ ನೀವು ಸ್ಮಾರ್ಟ್ ಆಗಬೇಕು:ಸದ್ಗುರು

1-congress

Congress ಪಕ್ಷಕ್ಕೆ ಮರು ಸೇರ್ಪಡೆಯಾದ ಎಲ್.ಆರ್.ಶಿವರಾಮೇಗೌಡ, ಬ್ರಿಜೇಶ್ ಕಾಳಪ್ಪ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.