ಸಾಗುತ ದೂರ ಹೃದಯ ಭಾರ

ಚಿತ್ರ ವಿಮರ್ಶೆ

Team Udayavani, Feb 15, 2020, 7:01 AM IST

Sagutha-doora-doora

“ಅಮ್ಮನ ಊರಿಗೆ ದಾರಿ ಇದೇನಾ, ಹೇಳಿ ನೀವಾದ್ರೂ…?’ ಹೀಗೆ ಕೇಳುತ್ತಾ ತನ್ನ ಅಮ್ಮನನ್ನು ಹುಡುಕಿ ಹೊರಟವರ ಕಥೆ ಇದು. ಇಲ್ಲಿ ಕಥೆಯೂ ಇದೆ. ಕಣ್ಣೀರ ವ್ಯಥೆಯೂ ಇದೆ. ಒಂದೇ ಮಾತಲ್ಲಿ ಹೇಳುವುದಾದರೆ, ನಡೆದಷ್ಟು ದೂರ ಭಾವುಕತೆಯಲ್ಲೇ ಸಾಗುವ ಪಯಣದಲ್ಲಿ ಮುಗ್ಧ ಮನಸ್ಸುಗಳಿವೆ. ಅಸಹಾಯಕ ಜೀವಗಳಿವೆ. ನಿಷ್ಠುರ ಎನಿಸುವ ವ್ಯಕ್ತಿತ್ವಗಳೂ ಇವೆ. ಇವೆಲ್ಲದರ ನಡುವೆ ಸುಮ್ಮನೆ ನೋಡಿಸಿಕೊಂಡು ಹೋಗುವ, ಆಗಾಗ ಭಾವುಕತೆಗೆ ದೂಡುವ ಅಂಶಗಳೂ ಇವೆ.

ಹಾಗಾಗಿ, ಈ ವಾರವೂ ಕೂಡ ಒಂದೊಳ್ಳೆಯ ಅನುಭವ ಕಟ್ಟಿಕೊಡುವ, ಹೃದಯ ಭಾರ ಎನಿಸುವ, ನೋಡಿ ಸಣ್ಣದ್ದೊಂದು ಮರುಕಪಡುವ, ಕಣ್ಣಂಚು ಒದ್ದೆಯಾಗುವ ಕ್ಷಣಗಳಿಗೆ ಈ ಚಿತ್ರ ಸಾಕ್ಷಿಯಾಗುತ್ತೆ. ಇಲ್ಲಿ ಗಟ್ಟಿ ಕಥೆ ಇದೆ. ಅದಕ್ಕೆ ತಕ್ಕ “ಹೂರಣ’ ಎಂಬ ಚಿತ್ರಕಥೆಯೂ ಇದೆ. ಆಗಾಗ ನಗಿಸುವ, ಅಲ್ಲಲ್ಲಿ ಅಳಿಸುವ ದೃಶ್ಯಗಳೂ ಇವೆ. ವಿನಾಕಾರಣ ಗೊಂದಲವಿಲ್ಲದೆ, ಸುಖಾಸುಮ್ಮನೆ ಸೀನ್‌ಗಳನ್ನು ತುರುಕದೆ ಕಥೆ ಸಾಗಿದಷ್ಟೂ ದೂರ ನೋಡಿಸಿಕೊಂಡು ಹೋಗುತ್ತೆ.

ಹಾಗಾಗಿ, ಇದೊಂದು ಅಮ್ಮನ ಹುಡುಕಿ ಹೊರಡುವ ಭಾವುಕ ಪಯಣ. ಇಲ್ಲಿ ಆ ಭಾವುಕತೆಯನ್ನು ಕಟ್ಟಿಕೊಡುವುದಕ್ಕಿಂತ, ಒಂದೊಮ್ಮೆ ಸಿನಿಮಾ ನೋಡಿ, ತಾಯಿ ಹಾಗೂ ಮಗನ ಬಾಂಧವ್ಯದ ಅನನ್ಯ ಅನುಭವ ತಿಳಿಯಲ್ಲಡ್ಡಿಯಿಲ್ಲ. ನಿರ್ದೇಶಕ ರವಿತೇಜ, ಇಲ್ಲಿ ಏನು ಹೇಳಬೇಕು, ಎಷ್ಟನ್ನು ಹೇಳಬೇಕು, ಎಲ್ಲಿ ನಗಿಸಬೇಕು, ಎಲ್ಲೆಲ್ಲಿ ಅಳಿಸಬೇಕು ಎಂಬ ವಾಸ್ತವದ ಅರಿವನ್ನು ಸರಿಯಾಗಿ ತಿಳಿದುಕೊಂಡಂತಿದೆ. ಹಾಗಾಗಿಯೇ, ಚಿತ್ರ ಆರಂಭದಿಂದ ಅಂತ್ಯದವರೆಗೂ ಕುತೂಹಲ ಕಾಯ್ದಿಟ್ಟುಕೊಂಡೇ ಸಾಗುತ್ತೆ.

ಸಿನಿಮಾ ನೋಡಿದವರಿಗಂತೂ ತನ್ನ ಹೆತ್ತಮ್ಮನ ಪ್ರೀತಿ-ವಾತ್ಸಲ್ಯದ ದಿನಗಳು ಕಾಡದೇ ಇರದು. ಅಷ್ಟರಮಟ್ಟಿಗೆ ಜರ್ನಿಯಲ್ಲೇ ಹಿತಾನುಭವ ಎನಿಸುವ ಅಂಶಗಳನ್ನು ತೋರಿಸುವ ಮೂಲಕ ಒಂದಷ್ಟು ಮನಮುಟ್ಟುವ ಪ್ರಯತ್ನವೂ ನಡೆದಿದೆ. ಅಮ್ಮ-ಮಗನ ನಡುವಿನ ಅನೇಕ ಚಿತ್ರಗಳು ಬಂದಿದ್ದರೂ, ಈ ಚಿತ್ರ ಹೊಸ ವಿಷಯದೊಂದಿಗೆ ನೋಡುಗರ ಮನಸ್ಸು ಭಾರವಾಗಿಸುತ್ತಲೇ ಹತ್ತಿರವಾಗುತ್ತದೆ ಎಂಬುದು ವಿಶೇಷ.

ನೋಡುವ ಕಣ್ಣುಗಳಿಗೆ ಹಚ್ಚ ಹಸಿರು ತುಂಬಿದ್ದರೆ, ಕೇಳುವ ಕಿವಿಗಳಿಗೂ ಕಚಗುಳಿ ಇಡುವ ಮಾತುಗಳು, ಆಗಾಗ ಮನಕಲಕುವ ದೃಶ್ಯಗಳು ಕಾಡುವುದರಿಂದ ಚಿತ್ರತಂಡದ ಶ್ರಮ ಸಾರ್ಥಕ ಎನಿಸುತ್ತೆ. ಮೊದಲರ್ಧ ನೋಡುಗರಿಗೆ ಥ್ರಿಲ್ಲಿಂಗ್‌ ಸ್ಟೋರಿ ಎನಿಸಿದರೂ. ಕಥೆ ಸಾಗಿದಂತೆ, ಅದೊಂದು ಎಮೋಷನಲ್‌ ಜರ್ನಿಯತ್ತ ಕೊಂಡೊಯ್ಯುತ್ತದೆ. ದ್ವಿತಿಯಾರ್ಧ ಇಡೀ ಸಿನಿಮಾ ಗಂಭೀರತೆಗೆ ದೂಡುತ್ತದೆ. ಆರಂಭದಲ್ಲಿ ಬರುವ ತಾಯಿ ಹಾಡಿನ ಸಾಹಿತ್ಯ ಚೆನ್ನಾಗಿದೆ.

ಆದರೆ, ಆ ಹಾಡು ಹಾಡಿರುವ ರೀತಿ ಸರಿ ಎನಿಸುವುದಿಲ್ಲ. ಎಲ್ಲೋ ಒಂದು ಕಡೆ ಸಿನಿಮಾ ಗಂಭೀರತೆಗೆ ಕರೆದೊಯ್ಯುತ್ತೆ ಎನ್ನುವಾಗಲೇ, ಸಂಚಿತ್‌ ಹೆಗ್ಡೆ ಹಾಡೊಂದು ಕಾಣಿಸಿಕೊಂಡು ಕೊಂಚ ತಾಳ್ಮೆ ಕೆಡಿಸುತ್ತದೆ. ಅದು ತಾಯಿಗೆ ಸಂಬಂಧಿಸಿದ ಹಾಡು ಆಗಿದ್ದರೂ, ಹೇಳುವ ರೀತಿ ಕೇಳುವಂತಿಲ್ಲ. ಹಾಡು ಇರದಿದ್ದರೂ, ಸಿನಿಮಾಗೇನೂ ಸಮಸ್ಯೆ ಇರುತ್ತಿರಲಿಲ್ಲ. ಆದರೂ, ಕಥೆಯಲ್ಲಿ ನೋಡಿಸಿಕೊಂಡು ಹೋಗುವ ತಾಕತ್ತು ಇದೆ.

ಇನ್ನು, ಕೆಲವು ಕಡೆ ಛಾಯಾಗ್ರಹಣದಲ್ಲಿ ಸಣ್ಣಪುಟ್ಟ ಲೋಪಗಳಿದ್ದರೂ, ಮನಸ್ಸು ಭಾರವಾಗಿಸುವ ದೃಶ್ಯಗಳು ಬಂದಾಗ, ಎಲ್ಲಾ ಲೋಪಗಳು ಬದಿ ಸೇರುತ್ತವೆ. ಒಟ್ಟಾರೆ, ಅಮ್ಮನ ಪ್ರೀತಿ ಹುಡುಕಿ ಹೊರಡುವ ಹುಡುಗನೊಬ್ಬನ ಕಥೆಯಲ್ಲಿ ಸಾಕಷ್ಟು ಏರಿಳಿತಗಳಿವೆ. ಅಲ್ಲಲ್ಲಿ ಸಸ್ಪೆನ್ಸ್‌ ಅಂಶಗಳೂ ಇವೆ. ಅದನ್ನು ನೋಡುವ ಕುತೂಹಲವಿದ್ದರೆ, ಮಿಸ್‌ ಮಾಡದೆ ಈ ಚಿತ್ರ ನೋಡಲು ಯಾವುದೇ ತಕರಾರಿಲ್ಲ. ಶಾಲೆಗೆ ಹೋಗುವ ಅಶು ಎಂಬ ಮುದ್ದಾದ ಹುಡುಗ ಹನ್ನೆರೆಡು ವರ್ಷದಿಂದ ತನ್ನ ಹೆತ್ತವಳನ್ನು ನೋಡಿಲ್ಲ.

ಆದರೆ, ಅವನಿಗೆ ದೂರದಲ್ಲೆಲ್ಲೋ ಇರುವ ಅಮ್ಮ ಪತ್ರ ಬರೆದು, ವಿಚಾರಿಸುತ್ತಿರುತ್ತಾಳೆ. ಅಮ್ಮ ಹೇಗಿದ್ದಾಳೆ, ಎಲ್ಲಿದ್ದಾಳೆ ಅನ್ನುವ ಕುತೂಹಲದಲ್ಲೇ ದಿನ ಕಳೆಯುವ ಅಶು, ಒಂದು ದಿನ ಅಮ್ಮನ ಹುಡುಕಿ ಪಯಣ ಬೆಳೆಸುತ್ತಾನೆ. ನಡೆಯುವ ಆಕಸ್ಮಿಕ ಘಟನೆಗಳಲ್ಲಿ ಅವನೊಂದಿಗೆ ಮಾನಸಿಕ ಅಸ್ವಸ್ಥನೊಬ್ಬ ಜೊತೆಗೂಡುತ್ತಾನೆ. ಅವರಿಬ್ಬರ ಜೊತೆ ಪ್ರಿಯಕರನ ಮಾಡಿದ ತಪ್ಪಿನಿಂದಾಗಿ, ಹೊಟ್ಟೆಪಾಡಿಗೆ ವೇಶ್ಯೆಯಾಗಲು ಹೊರಟ ಹುಡುಗಿಯೊಬ್ಬಳು ಸಾಥ್‌ ಕೊಡುತ್ತಾಳೆ.

ಹೀಗೆ ದಾರೀಲಿ ಸಿಗುವ ಒಬ್ಬೊಬ್ಬರದ್ದೂ ಒಂದೊಂದು ಕಥೆ ಇದೆ. ಇದಕ್ಕೂ ಮುನ್ನ ಒಂದು ಕೊಲೆಯೂ ಆಗಿರುತ್ತೆ. ಅದಕ್ಕೆ ಕಾರಣ ಯಾರು, ಪೊಲೀಸರು ಇವರ ಹಿಂಬಾಲಿಸುವುದು ಯಾಕೆ? ಎಂಬಿತ್ಯಾದಿ ಪ್ರಶ್ನೆಗಳಿಗೆ ಸಿನಿಮಾದಲ್ಲೇ ಉತ್ತರವಿದೆ. ಸಣ್ಣಪುಟ್ಟ ಪಾತ್ರಗಳ ಮೂಲಕ ತಕ್ಕ ಮಟ್ಟಿಗೆ ಗುರುತಿಸಿಕೊಂಡಿದ್ದ ಮಹೇಶ್‌ ಸಿದ್ದು, ಸಿನಿಮಾದ ಆಕರ್ಷಣೆ. ಇಡೀ ಚಿತ್ರವನ್ನು ಹೆಗಲಮೇಲೆ ಹೊತ್ತಿದ್ದಾರೆಂದರೆ ಅತಿಶಯೋಕ್ತಿಯಲ್ಲ. ಹುಚ್ಚನಂತೆ ವರ್ತಿಸುವ ಮೂಲಕ ಎಲ್ಲರಿಗೂ ಇಷ್ಟವಾಗುತ್ತಾರೆ.

ಇನ್ನು, ಆಶಿಕ್‌ ಆರ್ಯ ಕೂಡ ಸಿಕ್ಕ ಅವಕಾಶವನ್ನು ಚೆನ್ನಾಗಿ ಬಳಸಿಕೊಂಡಿದ್ದಾರೆ. ಅಪೇಕ್ಷಾ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ಮಾತೇ ಇರದ ಪಾತ್ರದಲ್ಲೂ ಆಶಾ ಭಂಡಾರಿ ಗಮನಸೆಳೆಯುತ್ತಾರೆ. ಖಡಕ್‌ ಪೊಲೀಸ್‌ ಅಧಿಕಾರಿಯಾಗಿ ನವೀನ್‌ ಕೂಡ ಫೋಕಸ್‌ ಆಗುತ್ತಾರೆ. ಉಳಿದಂತೆ ಬರುವ ಪಾತ್ರಗಳು ಸಿನಿಮಾ ಓಟಕ್ಕೆ ಹೆಗಲು ಕೊಟ್ಟಿವೆ. ಮಣಿಕಾಂತ್‌ ಕದ್ರಿ ಸಂಗೀತದ ಒಂದು ಹಾಡು ಪರವಾಗಿಲ್ಲ. ಸತೀಶ್‌ ಬಾಬು ಹಿನ್ನೆಲೆ ಸಂಗೀತ ಪೂರಕವಾಗಿದೆ. ಅಭಿಲಾಶ್‌ ಕಲಾತಿ ಕ್ಯಾಮೆರಾದಲ್ಲಿ ಸಾಗುವ ದಾರಿ ಚೆನ್ನಾಗಿದೆ.

ಚಿತ್ರ: ಸಾಗುತ ದೂರ ದೂರ
ನಿರ್ಮಾಣ: ಅಮಿತ್‌ ಪೂಜಾರಿ
ನಿರ್ದೇಶನ: ರವಿತೇಜ
ತಾರಾಗಣ: ಮಹೇಶ್‌ ಸಿದ್ದು, ಅಪೇಕ್ಷಾ, ಆಶಾ ಭಂಡಾರಿ, ಆಶಿಕ್‌ ಆರ್ಯ, ನವೀನ್‌, ಹೊನ್ನವಳ್ಳಿ ಕೃಷ್ಣ, ಮೋಹನ್‌ ಜುನೇಜ ಇತರರು.

* ವಿಜಯ್‌ ಭರಮಸಾಗರ

ಟಾಪ್ ನ್ಯೂಸ್

Davanagere; Conspiracy to stop Ganeshotsava is going on: Yatnal

Davanagere; ಗಣೇಶೋತ್ಸವ ನಿಲ್ಲಿಸುವ ಷಡ್ಯಂತ್ರ, ಪಿತೂರಿ ನಡೆಯುತ್ತಿದೆ: ಯತ್ನಾಳ್‌ ಆರೋಪ

12-udupi

Yaduveer Wadiyar: ಉಡುಪಿ ಶ್ರೀಕೃಷ್ಣಮಠಕ್ಕೆ‌ ಸಂಸದ ಯದುವೀರ್‌‌ ಭೇಟಿ

11-joshi

ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಕೊಡದ ಸಿದ್ದರಾಮಯ್ಯ ದಪ್ಪ ಚರ್ಮದವರು: ಜೋಶಿ ಟೀಕೆ

Shimoga; ಈ ಸರ್ಕಾರಕ್ಕೆ ಶೀಘ್ರ ಜನ ಸರಿಯಾದ ಪಾಠ ಕಲಿಸುತ್ತಾರೆ: ಬಿ.ವೈ.ರಾಘವೇಂದ್ರ

Shimoga; ಈ ಸರ್ಕಾರಕ್ಕೆ ಶೀಘ್ರ ಜನ ಸರಿಯಾದ ಪಾಠ ಕಲಿಸುತ್ತಾರೆ: ಬಿ.ವೈ.ರಾಘವೇಂದ್ರ

10-health

Asthma: ಎತ್ತರ ಪ್ರದೇಶಗಳು ಮತು ಅಸ್ತಮಾ

Shimoga: ಪುರದಾಳು ಗ್ರಾಮದಲ್ಲಿ ಕಾಡಾನೆ ದಾಳಿ; ಬಾಳೆ-ಅಡಿಕೆ ತೋಟದಲ್ಲಿ ದಾಂಧಲೆ

Shimoga: ಪುರದಾಳು ಗ್ರಾಮದಲ್ಲಿ ಕಾಡಾನೆ ದಾಳಿ; ಬಾಳೆ-ಅಡಿಕೆ ತೋಟದಲ್ಲಿ ದಾಂಧಲೆ

9-bbk11

BBK-11: ಬಿಗ್ ಬಾಸ್ ಮನೆಗೆ ನಾಲ್ವರು ಎಂಟ್ರಿ; ಉಳಿದ ಸ್ಪರ್ಧಿಗಳು ಇವರೇನಾ?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Kedarnath Kuri Farm Movie Review

Kedarnath Kuri Farm Review: ಫಾರಂನಲ್ಲಿ ಪ್ರೇಮ ಸಂಭಾಷಣೆ

Nite Road Movie Review:

Nite Road Movie Review: ಪಾಪ ಕರ್ಮಗಳ ಲೆಕ್ಕಾಚಾರ!

Sanju Movie Review

Sanju Movie Review: ಪ್ರೀತಿ ಪಯಣದಲ್ಲೊಂದು ವಿಷ ಘಳಿಗೆ

Langoti Man Movie Review

Langoti Man Movie Review: ಸಂಪ್ರದಾಯದ ಕೊಂಡಿಯಲ್ಲಿ ಲಂಗೋಟಿ!

Hagga movie review

Hagga movie review: ರೋಚಕ ರಹಸ್ಯದ ಕಥಾನಕ

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

13-dandeli

ಚಕ್ರ ದುಸ್ಥಿತಿಯಲ್ಲಿದ್ದರೂ ಪ್ರಯಾಣಿಕರನ್ನು ಕರೆದೊಯ್ದ ಬಸ್: ತಡೆದು ನಿಲ್ಲಿಸಿದ ಸಾರ್ವಜನಿಕರು

Davanagere; Conspiracy to stop Ganeshotsava is going on: Yatnal

Davanagere; ಗಣೇಶೋತ್ಸವ ನಿಲ್ಲಿಸುವ ಷಡ್ಯಂತ್ರ, ಪಿತೂರಿ ನಡೆಯುತ್ತಿದೆ: ಯತ್ನಾಳ್‌ ಆರೋಪ

12-udupi

Yaduveer Wadiyar: ಉಡುಪಿ ಶ್ರೀಕೃಷ್ಣಮಠಕ್ಕೆ‌ ಸಂಸದ ಯದುವೀರ್‌‌ ಭೇಟಿ

11-joshi

ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಕೊಡದ ಸಿದ್ದರಾಮಯ್ಯ ದಪ್ಪ ಚರ್ಮದವರು: ಜೋಶಿ ಟೀಕೆ

MINCHU HULA: ತಂದೆ ಮಗನ ಸುತ್ತ ʼಮಿಂಚು ಹುಳʼ; ಅ.4ಕ್ಕೆ ತೆರೆಗೆ

MINCHU HULA: ತಂದೆ ಮಗನ ಸುತ್ತ ʼಮಿಂಚು ಹುಳʼ; ಅ.4ಕ್ಕೆ ತೆರೆಗೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.