ರಕುತದೆ ಬರೆದೆನು ಇದ ನಾನು…


Team Udayavani, Feb 15, 2020, 6:08 AM IST

rakutadi

ಸಂಗಮೇಶ ಅವರು ಕಳೆದ 7 ವರ್ಷಗಳಿಂದ ಸ್ವರಕ್ತದಿಂದ ಚಿತ್ರ ಬಿಡಿಸುತ್ತಿದ್ದಾರೆ. ಇದುವರೆಗೆ 300 ಸಾಧಕರ ಚಿತ್ರವನ್ನು ನೆತ್ತರಿನ ಮೂಲಕವೇ ಚಿತ್ರಿಸಿರುವುದು ವಿಶೇಷ…

ಕಲೆ- ಸಾಹಿತ್ಯದ ಗುಣ ರಕ್ತದಿಂದ ಬರುತ್ತೆ ಎನ್ನುವ ಮಾತುಂಟು. ಇದು ಎಷ್ಟು ವಾಸ್ತವವೋ ಗೊತ್ತಿಲ್ಲ. ಆದರೆ, ಇಲ್ಲೊಬ್ಬ ಕಲಾವಿದರಿಗೆ ಕಲೆ ಒಲಿದಿದ್ದು ರಕ್ತದ ಮೂಲಕ. ಇವರು ನೂರಾರು ಸಾಧಕರ ಚಿತ್ರ ಬಿಡಿಸುವುದು ಕೂಡ ತಮ್ಮ ನೆತ್ತರಿನಿಂದಲೇ. ರಬಕವಿ- ಬನಹಟ್ಟಿ ತಾಲೂಕಿನ ಹೊಸೂರ ಸರಕಾರಿ ಪ್ರೌಢಶಾಲೆಯ ಶಿಕ್ಷಕ ಡಾ. ಸಂಗಮೇಶ ಬಗಲಿ ಅವರ ರಕ್ತಚಿತ್ರ ಚರಿತ್ರೆ ಈ ಪರಿಯದ್ದು.

ಚಿತ್ರ ಬಿಡಿಸಬೇಕೆಂಬ ಹುಕೀ ಬಂದಾಗ, ಇವರು ಹೋಗುವುದು ಸೀದಾ ವೈದ್ಯರ ಬಳಿ. ವೈದ್ಯರ ಸಲಹೆಯಂತೆ, ಒಂದೆರಡು ಸಿರಿಂಜ್‌ ನಲ್ಲಿ 10 ರಿಂದ 15 ಎಂ.ಎಲ್‌. ರಕ್ತ ತೆಗೆಸಿ ಕೊಳ್ಳುತ್ತಾರೆ. ಆ ರಕ್ತ ಹೆಪ್ಪುಗಟ್ಟದೆ ಇರಲಿ ಯೆಂಬ ಕಾರಣಕ್ಕೆ ಅದಕ್ಕೆ ರಕ್ತ ಪರೀಕ್ಷಾ ಘಟಕದಲ್ಲಿ ಕೊಡುವ “ಇಡಿಟಿಎ’ ಎಂಬ ಲಿಕ್ವಿಡ್‌ ಅನ್ನು ಬೆರೆಸುತ್ತಾರೆ. ಒಂದು ಚಿತ್ರಕ್ಕೆ ಏನಿಲ್ಲವೆಂದರೂ ಕನಿಷ್ಠ 10 ಎಂ.ಎಲ್‌. ರಕ್ತ ಬೇಕು. ಒಟ್ಟಾರೆ, 3 ತಿಂಗಳಲ್ಲಿ ಚಿತ್ರಕ್ಕಾಗಿಯೇ ಇವರು ಮಾಡುವ ರಕ್ತದಾನ ಸುಮಾರು 300 ಎಂ.ಎಲ್‌.ನಷ್ಟು!

ಜಲವರ್ಣ, ತೈಲವರ್ಣ, ಆಕ್ರೆಲಿಕ್‌, ವ್ಯಾಕ್ಸ್‌ ಕಲರನ್ನು ಮಾಧ್ಯಮವನ್ನಾಗಿಸಿ­ಕೊಂಡಿರುವ ಸಂಗಮೇಶ ಅವರಿಗೆ ಚಿಕ್ಕಂದಿಂನಿಂದಲೇ ಚಿತ್ರಕಲೆಯಲ್ಲಿ ಆಸಕ್ತಿ ಇತ್ತು. ಕಳೆದ 7 ವರ್ಷಗಳಿಂದ ಸ್ವರಕ್ತದಿಂದ ಇವರು ಚಿತ್ರ ಬಿಡಿಸುತ್ತಿದ್ದಾರೆ. ಇದುವರೆಗೆ 300 ಸಾಧಕರ ಚಿತ್ರ ಬಿಡಿಸಿದ ಖ್ಯಾತಿ ಇವರದ್ದು.

ಈ ಸಾಧನೆಗಾಗಿ ಇವರಿಗೆ ಅಮೆರಿಕದ ವಿವಿಯೊಂದರಿಂದ ಗೌರವ ಡಾಕ್ಟರೇಟ್‌ ಲಭಿಸಿದೆ. ಇಂಡಿಯಾ ಬುಕ್‌ ಆಫ್‌ ರೆಕಾರ್ಡ್ಸ್, ಜೀನಿಯಸ್‌ ಬುಕ್‌ ಆಫ್‌ ರೆಕಾರ್ಡ್ಸ್ ನಿಂದ ಮೆಚ್ಚುಗೆ ಸಿಕ್ಕಿದೆ. ಜಮಖಂಡಿಯಲ್ಲಿನ ತಮ್ಮ ಮನೆಯಲ್ಲಿಯೇ ಪುಟ್ಟ ಗ್ಯಾಲರಿ ನಿರ್ಮಿಸಿಕೊಂಡು, ರಕ್ತವರ್ಣಕಲೆಯನ್ನು ತಪಸ್ಸಿನಂತೆ ಆಚರಿಸುತ್ತಿ­ದ್ದಾರೆ. ನವದೆಹಲಿ, ಬೆಂಗ­ ಳೂರು, ರಾಯಚೂರು, ಧಾರವಾಡ, ವಿಜಯಪುರ, ಬಾಗಲಕೋಟೆ ಸೇರಿದಂತೆ 25ಕ್ಕೂ ಹೆಚ್ಚು ಕಡೆಗಳಲ್ಲಿ ರಕ್ತವರ್ಣ ಚಿತ್ರಗಳನ್ನು ಪ್ರದರ್ಶನ ಮಾಡಿದ್ದಾರೆ.

ದೇಶಪ್ರೇಮದ ಕುರಿತು ಕೇವಲ ಮಾತಿನಲ್ಲಿ ಹೇಳುವುದರ ಬದಲು, ರಕ್ತವರ್ಣಚಿತ್ರದಿಂದ ದೇಶಭಕ್ತಿಯನ್ನು ಸಾರುತ್ತಿದ್ದೇನೆ. ದೇಶಕ್ಕಾಗಿ ಪ್ರಾಣ ಕೊಟ್ಟವರಿಗೆ ನನ್ನ ರಕ್ತದ ಒಂದು ಪಾಲು ಹೋಗಲಿ ಎಂದು ಇಂಥ ಸಾಧಕರ ಚಿತ್ರಗಳನ್ನು ಬಿಡಿಸಿದ್ದೇನೆ.
-ಡಾ. ಸಂಗಮೇಶ ಬಗಲಿ

* ಕಿರಣ ಶ್ರೀಶೈಲ ಆಳಗಿ

ಟಾಪ್ ನ್ಯೂಸ್

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

Delhi-Stamp

Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

naki

Naki Sumo: ಮಗುವನ್ನು ಅಳಿಸುವ ವಿಚಿತ್ರ ಆಚರಣೆ !; ನಡೆಯುವುದಾದರು ಎಲ್ಲಿ?

mohan bhagwat

RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bahumuki

ಅರಮನೆಯಂಥ ಬಂಗಲೆ ಇದೆ, ಏನುಪಯೋಗ?

ಮೊದಲ ಗುರಿಯೇ ಕೊನೆಯದೂ ಆಗಿದೆ!

ಮೊದಲ ಗುರಿಯೇ ಕೊನೆಯದೂ ಆಗಿದೆ!

bahumuki

ಹುಡುಗಿಯ ಚುಂಬನ ಮತ್ತು ಆಗಸದ ತಾರೆ

ಟೊಮೇಟೊ ಹಣ್ಣಿನ ಗೊಜ್ಜು

ಟೊಮೇಟೊ ಹಣ್ಣಿನ ಗೊಜ್ಜು

ದೀಪವನ್ನೇ ಏಕೆ ಬಳಸಬೇಕು?

ದೀಪವನ್ನೇ ಏಕೆ ಬಳಸಬೇಕು?

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

1

Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್‌ಮನ್‌ ಹಲ್ಲೆ; ದೂರು

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

16

Pro Hockey: ಇಂಗ್ಲೆಂಡ್‌ ವಿರುದ್ಧ ಭಾರತ ವನಿತೆಯರಿಗೆ ಸೋಲು

crimebb

Kasaragod: ಹಲ್ಲೆ ಪ್ರಕರಣ; ಕೇಸು ದಾಖಲು

Jagadish Shettar: ಯಾವಾಗ ಬೇಕಾದರೂ ಸರ್ಕಾರ ಪತನ: ಶೆಟ್ಟರ್‌

Jagadish Shettar: ಯಾವಾಗ ಬೇಕಾದರೂ ಸರ್ಕಾರ ಪತನ: ಶೆಟ್ಟರ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.