ಆಸೆಯಲ್ಲೊಂದು ಧನಾತ್ಮಕ ಚಿಂತನೆ ಇರಲಿ


Team Udayavani, Feb 24, 2020, 5:32 AM IST

Positive-02

ಎಷ್ಟೋ ಬಾರಿ ನಮ್ಮದಲ್ಲದ ತಪ್ಪಿಗೆ ನಮ್ಮನ್ನು ಗುರಿಮಾಡಿದಾಗ ಕೋಪ, ಅಸಹನೆ, ದಃಖ ಹೀಗೆ ಎಲ್ಲೂವೂ ಒಟ್ಟಿಗೆ ಅಭಿವ್ಯಕ್ತಗೊಳ್ಳುವುದು ಸಹಜ. ಇಂತಹ ಸಂದರ್ಭದಲ್ಲಿ ಆಂತರಿಕ ಕೋಪ ಅಭಿವ್ಯಕ್ತಿಸುವ ಕಲೆ ಪ್ರಧಾನ ಪಾತ್ರವಹಿಸುತ್ತದೆ. ನಮ್ಮ ವರ್ತನೆ ಹೀಗೇ ಇರಬೇಕೆಂಬ ಬೇಲಿ, ಕಟ್ಟುಬದ್ಧ ನಿಯಮಗಳನ್ನು ಹಾಕಿದಾಗ ಅದನ್ನು ಮೀರಿ ಹೋಗಲೇಬೇಕೆಂಬ ಒಂದು ವಿಚಿತ್ರವಾದ ಹಠಮಾರಿತನ ಹೆಚ್ಚಾಗುತ್ತದೆಯೇ ವಿನಹ ಬೇರೆಯವರು ಹೇಳಿದಂತೆ ಸ್ವಭಾವ ಬದಲಿಸಲು ಮುಂದಾಗಲಾರೆವು. ಆದರೆ ಈ ರೀತಿ ಮಾಡುವುದರಿಂದ ನಮ್ಮ ವ್ಯಕ್ತಿತ್ವದ ಕೊಲೆಗಡುಕ‌ರು ನಾವಾಗುತ್ತೇವೆ ವಿನಹ ಬೇರೆನಿಲ್ಲ. ಇಂತ ಸಂದರ್ಭದಲ್ಲಿ ಕೊಪದ ಕೈಗೆ ಬುದ್ಧಿ ಕೊಡದಿರುವುದು ಒಳ್ಳೆಯದು.

ಆಂತರಿಕ ಅಭಿವ್ಯಕ್ತಿ
ಆಂತರಿಕ ಅಭಿವ್ಯಕ್ತಿ ನಮ್ಮ ಆಂತರ್ಯದಲ್ಲಿ ಅಡಗಿರುವ ನೋವು, ನಲಿವು, ಬೇಸರ ಮುಂತಾದವುಗಳ ಹೊರಹಾಕುವ ಪರಿಯಾಗಿದೆ. ಇದು ಏಷ್ಟೋ ಬಾರಿ ನಮಗರಿವಿಲ್ಲದಂತೆ ನಮ್ಮ ಏಕಾಂತ ಕಾಲದಲ್ಲಿ ಹೋರಹೊಮ್ಮುತ್ತದೆ. ನಮ್ಮನ್ನು ನಾವೇ ಸಮಾಧಾನ ಪಡಿಸಿಕೊಳ್ಳುವುವುದು, ಒಬ್ಬರೇ ಏನೆನೋ ನೆನೆದು ನಗುವುದು, ಯಾವತ್ತೋ ಆದ ಘಟನೆ ನೆನೆಸಿ ಅಳವುದು, ನಮ್ಮಷ್ಟಕ್ಕೆ ನಾವೇ ಮಾತಾಡುವುದು ಎಲ್ಲವೂ ಇದರ ಸಾಲಿಗೆ ಸೇರಿದೆ. ಈ ಅಭಿವ್ಯಕ್ತಿ ಮಿತಿ ಮೀರಿದರೆ ಒಂದು ಕಾಯಿಲೆ ಆಗಿಯೂ ಬದಲಾಗುತ್ತದೆ. ಹಾಗೆಂದು ಇದು ತಪ್ಪಲ್ಲ ಇದರಲ್ಲೂ ಹಲವಾರು ಉಪಯುಕ್ತತೆಗಳಿರುವುದನ್ನು ಸಹ ನೀವು ಗಮನಿಸಬೇಕಾಗಿದೆ. ನಿಮಗೆ ಯಾರೊಂದಿಗಾದರೂ ಬೇಸರ ಬಂದಾಗ ಎಲುಬಿಲ್ಲದ ನಾಲಿಗೆ ಬುದ್ದಿಯ ಸ್ಥಿಮಿತವಿಲ್ಲದೆ ಬಡಬಡಾಯಿಸುತ್ತದೆ. ಅಂತಹ ಸಂದರ್ಭದಲ್ಲಿ ನೀವು ಕನ್ನಡಿ ನೋಡಿ ಕೋಪವನ್ನು ಅಭಿವ್ಯಕ್ತಿಸಿದಾಗ ನಿಮಗೂ ಸಮಾಧಾನವಾಗುತ್ತದೆ ಜತೆಗೆ ಇತರರಿಗೂ ಬೇಸರ ಆಗಲಾರದು.

ನಿಮ್ಮನ್ನು ನೀವು ಪ್ರೀತಿಸಲು ಕಲಿಯಬೇಕು. ಆಗ ಇತರರ ಪ್ರೀತಿ ಅವರ ಸ್ವ-ಗೌರವವನ್ನು ನೀವು ಅರಿಯುತ್ತೀರಿ. ನಮ್ಮ ಸ್ವ-ಗೌರವಕ್ಕೆ ಕೆಲವೊಂದು ಬಾರಿ ಧನಾತ್ಮಕ ವ್ಯಕ್ತಿತ್ವ ಬುನಾದಿಯಾಗಿದೆ. ಏಷ್ಟೋ ಬಾರಿ ನೀವೇನು ಮಾಡುತ್ತಿದ್ದಿರಿ ಎಂದು ನಿಮಗೆ ಸ್ಪಷ್ಟತೆ ಇಲ್ಲದೆ ತಲ್ಹಣಗೊಳ್ಳುವಿರಿ. ಗೊತ್ತಿಲ್ಲದನ್ನು ಹೇಳಿಕೊಳ್ಳಿ ಅದನ್ನು ಕಲಿಯಲು ಪ್ರಯತ್ನಿಸಿ ಮೊದ ಮೊದಲು ಹಿಂಜರಿಕೆ ಆಗುವುದು ಸಹಜ. ಅನುಮಾನ, ಪರರ ಕುರಿತು ಅನಗತ್ಯ ಚಿಂತೆೆಯೂ ನಿಮ್ಮ ಧನಾತ್ಮಕ ಚಿಂತನೆಯ ಕುಸಿತಕ್ಕೆ ಕಾರಣವಾಗುತ್ತದೆ. ಪ್ರಯತ್ನ, ಪರಿಶ್ರಮ, ಧನಾತ್ಮಕ ವಿಚಾರಗಳು ನಿಮ್ಮ ಯಶಸ್ಸಿಗೆ ಹಿಡಿದ ಕೈಗನ್ನಡಿಯಾಗಿದೆ.

ಬೊಗಸೆಯಲ್ಲೂಂದು ಆಸೆ
ಎಷ್ಟೋ ಸಲ ನಮ್ಮ ಪುಟ್ಟ ಪುಟ್ಟ ಕನಸುಗಳು ಈಡೇರದಿದ್ದಾಗ ಹತಾಶರಾಗುತ್ತೇವೆ. ಇಂತಹ ಹತಾಶೆ ಮಾನಸಿಕ ಖನ್ನತೆಗೂ ಕಾರಣವಾಗಬಹುದು. ಆದರೆ ಈಡೇರದ ಆಸೆಯನ್ನೇ ಮನದಲ್ಲಿಟ್ಟುಕೊಂಡು ಇತರರ ಮೇಲೆ ಕೆಂಡಕಾರಿ ಅವರ ಭಾವನೆಗಳಿಗೆ ಘಾಸಿಗೊಳಿಸುವ ಮನೋಭಾವನೆ ನಿಮ್ಮದಾಗದಿರಲಿ. ಬದಲಾಗಿ ಎಂದಾದರೂ ಅಂತಹ ಆಸೆ ಈಡೇರುತ್ತದೆ ಎಂಬ ಭರವಸೆ ನಿಮ್ಮಲ್ಲಿದ್ದರೆ ನಿಮ್ಮ ಬೇಸರವೂ ದೂರ ಸರಿಯುತ್ತದೆ.

-ರಾಧಿಕಾ,ಕುಂದಾಪುರ

ಟಾಪ್ ನ್ಯೂಸ್

DKSHi (3)

Water; ಗೌಡರು ಅಧಿಕಾರದಲ್ಲಿದ್ದಾಗ ನೀರಿನ ಹೋರಾಟ ಏಕೆ: ಡಿಕೆಶಿ

Beer

ಶಾಲೆ ಸಮೀಪ ಮದ್ಯದಂಗಡಿ ಇದ್ದರೆ ದೂರು ನೀಡಿ

1-dee

ಕಾಲೇಜುಗಳಲ್ಲಿ ಜಾನಪದ ಉತ್ಸವ: ಇಲಾಖೆ ಸೂಚನೆ

Gun-Fire

Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್‌: 3 ವರ್ಷದ ಮಗು ಮೃತ್ಯು!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

Delhi-Stamp

Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

DKSHi (3)

Water; ಗೌಡರು ಅಧಿಕಾರದಲ್ಲಿದ್ದಾಗ ನೀರಿನ ಹೋರಾಟ ಏಕೆ: ಡಿಕೆಶಿ

Beer

ಶಾಲೆ ಸಮೀಪ ಮದ್ಯದಂಗಡಿ ಇದ್ದರೆ ದೂರು ನೀಡಿ

1-dee

ಕಾಲೇಜುಗಳಲ್ಲಿ ಜಾನಪದ ಉತ್ಸವ: ಇಲಾಖೆ ಸೂಚನೆ

arrested

CM ಕಚೇರಿಯ ಟಿಪ್ಪಣಿ ನಕಲು: ಬಂಧನ

Gun-Fire

Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್‌: 3 ವರ್ಷದ ಮಗು ಮೃತ್ಯು!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.