![Gun-Fire](https://www.udayavani.com/wp-content/uploads/2025/02/Gun-Fire-415x249.jpg)
![Gun-Fire](https://www.udayavani.com/wp-content/uploads/2025/02/Gun-Fire-415x249.jpg)
Team Udayavani, Feb 27, 2020, 7:01 AM IST
ನೂರಕ್ಕೊಬ್ಬ, ಸಾವಿರಕ್ಕೊಬ್ಬ, ಲಕ್ಷಕ್ಕೊಬ್ಬ, ಕೋಟಿಗೊಬ್ಬ…. ಸಾಮಾನ್ಯವಾಗಿ ಈ ಪದಬಳಕೆ ಗೊತ್ತಿರುತ್ತೆ. ಇನ್ನು “ಕೋಟಿಗೊಬ್ಬ’, “ಕೋಟಿಗೊಬ್ಬ-2′, ಕೋಟಿಗೊಬ್ಬ 3′ ಅಂಥ ಚಿತ್ರಗಳೂ ಇವೆ. ಆದರೆ, “99 ಲಕ್ಷಕ್ಕೊಬ್ಬ’ ಎಂಬ ಸಿನಿಮಾ ಹೆಸರನ್ನೂ ಇಡಲಾಗಿದೆ ಅನ್ನೋದು ಈ ಹೊತ್ತಿನ ಸುದ್ದಿ. ಹೌದು, ಪ್ರಥಮ್ ಈ ಚಿತ್ರದ ಹೀರೋ. ಪ್ರಥಮ್ ಸಿನಿಮಾ ಅಂದಮೇಲೆ, ಅಲ್ಲಿ ಒಂದಷ್ಟು ಗಿಮಿಕ್ ಇದ್ದೇ ಇರುತ್ತೆ. ಸಿನಿಮಾ ಸದ್ದು ಮಾಡದಿದ್ದರೂ, ಶೀರ್ಷಿಕೆ ಸದ್ದಿಗೇನೂ ಕೊರತೆ ಇಲ್ಲ. ಇತ್ತೀಚೆಗೆ ಪ್ರಥಮ್ ತಮ್ಮ ಹುಟ್ಟಹಬ್ಬ ಆಚರಿಸಿಕೊಂಡರು.
ಅಂದು “99 ಲಕ್ಷಕ್ಕೊಬ್ಬ’ ಚಿತ್ರದ ಪೋಸ್ಟರ್ ಅನ್ನು ಅಭಿಷೇಕ್ ಅಂಬರೀಷ್ ಬಿಡುಗಡೆ ಮಾಡಿ ಶುಭ ಹಾರೈಸಿದರು. ತಮ್ಮ ಚಿತ್ರದ ಶೀರ್ಷಿಕೆ ಕುರಿತು ಮಾತನಾಡುವ ಪ್ರಥಮ್, “ಇದಕ್ಕೂ ಮುನ್ನ “ಕೋಟಿಗೊಬ್ಬ’ ಟೈಟಲ್ ಇಡಲು ಯೋಚಿಸಲಾಗಿತ್ತು. ಆದರೆ ಡಾ. ವಿಷ್ಣುವರ್ಧನ್, ಸುದೀಪ್ ಅವರಿಗೆ ಮಾತ್ರ ಈ ಟೈಟಲ್ ಸರಿಹೊಂದುತ್ತೆ. ಆದ್ದರಿಂದ ಅವರಿಗಿಂತ ಒಂದು ಲಕ್ಷ ಕಡಿಮೆ ಇರಬೇಕು ಅಂದುಕೊಂಡು, ಈ ಶೀರ್ಷಿಕೆ ಇಡಲಾಗಿದೆ.
ಇನ್ನು, ಇದೊಂದು ಕ್ರಿಕೆಟ್ ಬೆಟ್ಟಿಂಗ್ ಕುರಿತ ಕಥೆ ಹೊಂದಿದೆ. ಹಿಂದಿನ ಕಾಲದಲ್ಲಿ ವಿದ್ಯಾರ್ಥಿಗಳು ಜಾಮಿಟ್ರಿ ಬಾಕ್ಸ್ ಇದ್ದರೆ ಅದನ್ನು ಎಲ್ಲರಿಗೂ ತೋರಿಸಿ ಖುಷಿ ಪಡುತ್ತಿದ್ದರು. ಆದರೆ ಈಗ ಕಾಲ ಬದಲಾದಂತೆ, ಇಂದು ಹುಡುಗರು ಕ್ರಿಕೆಟ್ ಮ್ಯಾಚ್ ಸಮಯದಲ್ಲಿ ನನ್ನದೊಂದು ಸಿಕ್ಸರ್ ಅಂಥ ಬೆಟ್ಟಿಂಗ್ ಕಟ್ಟುತ್ತಾರೆ. ಇದರಿಂದ ಏನೇನು ಅನಾಹುತಗಳು ಆಗುತ್ತದೆ ಎಂಬುದನ್ನು ತೋರಿಸುವ ಪ್ರಯತ್ನ ಮಾಡಲಾಗಿದೆ. ಮಹಾಭಾರತದ ಗುಣ ಲಕ್ಷಣಗಳನ್ನು ಇಟ್ಟುಕೊಂಡು, ಯಾರೂ ಹೇಳದ ಕಥೆಯನ್ನು ಇಲ್ಲಿ ಹೇಳುತ್ತಿದ್ದೇವೆ’ ಎಂಬುದು ಅವರ ಮಾತು.
“ಸ್ವಾರಸ್ಯ ಸಿನಿ ಕ್ರಿಯೇಶನ್ಸ್’ ಬ್ಯಾನರ್ನಲ್ಲಿ ನೀಲೇಶ್ “99 ಲಕ್ಷಕ್ಕೊಬ್ಬ’ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಪ್ರದ್ಯೋತ್ತನ್ ಚಿತ್ರಕ್ಕೆ ಸಂಗೀತ ಸಂಯೋಜಿಸುತ್ತಿದ್ದಾರೆ. ಶೋಭರಾಜ್, ಉಮೇಶ್, ನಿಹಾರಿಕಾ ಶಣೈ ಮೊದಲಾದವರು ಅಭಿನಯಿಸುತ್ತಿದ್ದಾರೆ. ಚಿತ್ರದ ನಾಯಕಿ ಆಯ್ಕೆ ನಡೆದಿಲ್ಲ. ಬಾಲಿವುಡ್ ನಟಿಯೊಬ್ಬರನ್ನು ಕರೆತರುವ ಯೋಚನೆ ಚಿತ್ರತಂಡದ್ದು. ಏಪ್ರಿಲ್ ಮೊದಲ ವಾರ ಚಿತ್ರಕ್ಕೆ ಚಾಲನೆ ಸಿಗಲಿದೆ.
Actor Darshan: ಪ್ರೇಮ್ – ದರ್ಶನ್ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್ ಪೋಸ್ಟರ್ ಔಟ್
Mallu Jamkhandi: ʼವಿದ್ಯಾ ಗಣೇಶʼ ನಂಬಿ ಬಂದವರು
Sandalwood: ʼನಾಗವಲ್ಲಿ ಬಂಗಲೆ’ಯಿಂದ ಹಾಡು ಬಂತು
ದಾಂಪತ್ಯ ಜೀವನಕ್ಕೆ ಕಾಲಿಟ್ಟ ಧನಂಜಯ – ಧನ್ಯತಾ: ಮದುವೆ ಬಳಿಕ ನವ ಜೋಡಿ ಹೇಳಿದ್ದೇನು?
Devil Teaser: ಚಾಲೆಂಜ್.. ಹೂಂ.. ಟೀಸರ್ನಲ್ಲೇ ʼಡೆವಿಲ್’ ಲುಕ್ ಕೊಟ್ಟ ʼದಾಸʼ
Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್: 3 ವರ್ಷದ ಮಗು ಮೃತ್ಯು!
Kaup: ಸ್ಕೂಟಿ, ಕಾರಿಗೆ ಬಸ್ ಢಿಕ್ಕಿ; ಸವಾರನಿಗೆ ಗಾಯ
Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!
Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್ಮನ್ ಹಲ್ಲೆ; ದೂರು
Restriction: ನಿಷೇಧವಿದ್ದರೂ ಗೂಡ್ಸ್ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!
You seem to have an Ad Blocker on.
To continue reading, please turn it off or whitelist Udayavani.