ಮಂತ್ರಾಲಯ ಭೇಟಿಯಿಂದ ನವ ಚೈತನ್ಯ ತುಂಬಿತು


Team Udayavani, Mar 2, 2020, 4:55 AM IST

mantralaya

ಮನೆಯಲ್ಲಿ ಬಹಳ ಸಮಸ್ಯೆಯಿತ್ತು. ಹಾಗೆ ಎನ್ನುವುದಕಿಂತ ಮಾನಸಿಕ ಕಿರಿಕಿರಿ ಎಂದುಕೊಳ್ಳೋಣ. ದಿನಾಲೂ ಏನಾದರೂ ಒಂದು ಘಟನೆ ನಡೆಯುತ್ತಲೇ ಇತ್ತು. ಕಚೇರಿಗೆ ಮಾನಸಿಕವಾಗಿ ಕುಗ್ಗಿಯೇ ಬರುತ್ತಿದ್ದೆ, ಯಾರಾದರೂ ಮಾತನಾಡಿಸಿದರೂ ನೆಗೆಟಿವ್‌ ಆಗಿ ಮಾತನಾಡುತ್ತಿದ್ದೆ.

ಇದನ್ನು ನಿತ್ಯವೂ ನೋಡುತ್ತಿದ್ದ ನನ್ನ ಸಹೋದ್ಯೋಗಿಯೊಬ್ಬರು (ಈಗ ಅವರು ನಮ್ಮ ಕಚೇರಿಯಲ್ಲಿಲ್ಲ) ಒಮ್ಮೆ ಸಂಜೆ ಕಾಫಿಗೆ ಕರೆದರು. ನಾನು ಅಳುಕುತ್ತಲೇ ಹೋದೆ. ಅದೂ ಇದೂ ಮಾತನಾಡಿದ ಮೇಲೆ, ನಿಜವಾದ ವಿಷಯಕ್ಕೆ ಬಂದರು. ಯಾಕೆ ನೀವು ನಿತ್ಯವೂ ಬೇಸರದಲ್ಲೇ ಕಚೇರಿಗೆ ಬರುತ್ತೀರಿ, ನೆಗೆಟಿವ್‌ ಆಗಿ ಮಾತನಾಡುತ್ತೀರಿ. ಕಚೇರಿಯಲ್ಲಿ ಎಲ್ಲರೂ ನೀವು ನೆಗೆಟಿವ್‌ ಎಂದು ಮಾತನಾಡತೊಡಗಿದ್ದಾರೆ ಎಂದರು.

ಆ ಕ್ಷಣಕ್ಕೆ ಕೊಂಚ ಸಿಟ್ಟು ಬಂದರೂ ಅವರೆದುರು ತೋರಿಸಿಕೊಳ್ಳುವುದು ಸರಿಯಲ್ಲ ಎಂದುಕೊಂಡು ಹಾಗೇನಿಲ್ಲ ಎಂದೆ. ಅವರು ಪಟ್ಟು ಸಡಿಲಿಸಲಿಲ್ಲ. ಅನಿವಾರ್ಯವಾಗಿ ನಾನು, ನನ್ನ ಮನೆಯಲ್ಲಿನ ಸಮಸ್ಯೆಯನ್ನು ಪೂರ್ತಿಯಾಗಿ ವಿವರಿಸಿದೆ. ಅದಕ್ಕೆ ಅವರು ಬಹಳ ಸೌಮ್ಯದಿಂದ, “ನೀವು ಒಮ್ಮೆ ಮಂತ್ರಾಲಯಕ್ಕೆ ಹೋಗಿ ಬನ್ನಿ’ ಎಂದರು. ನನಗೋ ಅವೆಲ್ಲವೂ ಆಗುತ್ತದೆಯೇ ಎಂಬ ಪ್ರಶ್ನೆಗಳಿದ್ದವು.

ಆದರೂ ಕೊನೇ ಹಂತದಲ್ಲಿ ಒಪ್ಪಿಕೊಂಡೆ. ನನ್ನ ಕುಟುಂಬ ಸಮೇತ ವೀಕೆಂಡ್‌ ಎಂದುಕೊಂಡು ಮಂತ್ರಾಲಯಕ್ಕೆ ಹೋದೆವು. ದೇವರ ದರ್ಶನ ಪಡೆಯುವಾಗ ರಾಘವೇಂದ್ರರಾಯರಿಗೆ ನಮಿಸಿದೆ. ಆ ಕ್ಷಣ ಮನಸ್ಸಿನೊಳಗೆ ಏನೋ ಒಂದು ಹೊಸ ಶಕ್ತಿ ತುಂಬಿದಂತೆನಿಸಿತು. ಮನಸ್ಸಿಗೆ ಸಮಾಧಾನವಾಯಿತು. ಅಂದಿನಿಂದ ವರ್ಷಕ್ಕೊಮ್ಮೆ ಮಂತ್ರಾಲಯಕ್ಕೆ ಹೋಗಿ ಹೊಸ ಚೈತನ್ಯ ತುಂಬಿಕೊಂಡು ಬರುತ್ತೇನೆ.

ತೀರ್ಥ ಕ್ಷೇತ್ರಗಳಲ್ಲಿ ಒಂದು ಬಗೆಯ ಅವ್ಯಕ್ತ ಶಕ್ತಿ ಇರುವುದು ನಿಜ ಎನಿಸಿದೆ.

-ಅನುಪಮಾ, ಭಟ್ಕಳ

ಟಾಪ್ ನ್ಯೂಸ್

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

naki

Naki Sumo: ಮಗುವನ್ನು ಅಳಿಸುವ ವಿಚಿತ್ರ ಆಚರಣೆ !; ನಡೆಯುವುದಾದರು ಎಲ್ಲಿ?

mohan bhagwat

RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

Lalu

Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್

1-sidda

Mahakumbh; ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರಲಿ: ಅಭಿಮಾನಿಯ ಪ್ರಾರ್ಥನೆ

1-congress

Congress ಪಕ್ಷಕ್ಕೆ ಮರು ಸೇರ್ಪಡೆಯಾದ ಎಲ್.ಆರ್.ಶಿವರಾಮೇಗೌಡ, ಬ್ರಿಜೇಶ್ ಕಾಳಪ್ಪ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

19

Bharamasagara: ವಿದ್ಯುತ್ ಕಿಡಿಗೆ ಎರಡು‌ ಮೇವಿನ ಬಣವೆ ಸಂಪೂರ್ಣ ಭಸ್ಮ

1-tengu-dsdsa

Udayavani-MIC ನಮ್ಮ ಸಂತೆ: ತೆಂಗಿನ ಗರಟೆಯಲ್ಲಿ ಅರಳಿದ ಕಲಾಕೃತಿ

1-namm-mannu-1

Udayavani-MIC ನಮ್ಮ ಸಂತೆ:ಮಣ್ಣಿನಿಂದ ಮಾಡಿದ ನಾನಾ ಉತ್ಪನ್ನ

naki

Naki Sumo: ಮಗುವನ್ನು ಅಳಿಸುವ ವಿಚಿತ್ರ ಆಚರಣೆ !; ನಡೆಯುವುದಾದರು ಎಲ್ಲಿ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.