ಶಂಕರನಾರಾಯಣ: ರಿಕ್ಷಾ ಚಾಲಕರಿಗಿಲ್ಲ ಸೂರು

ಬಿಸಿಲು, ಮಳೆಗೆ ದೇಹದಂಡನೆ: ಕೇಳುವವರಿಲ್ಲ ಇವರ ಗೋಳು

Team Udayavani, Mar 2, 2020, 5:23 AM IST

Rickshaw-Stand

ಕುಂದಾಪುರ: ಶಂಕರನಾರಾಯಣ ಬಸ್‌ ನಿಲ್ದಾಣ ಸುಸಜ್ಜಿತವಾಗಿ ನಿರ್ಮಾಣ ಗೊಂಡಿದ್ದರೂ ರಿಕ್ಷಾ ಸ್ಟ್ಯಾಂಡ್‌ ನಿಲ್ದಾಣದ ಸಮೀಪ ಇಲ್ಲದೆ ಚಾಲಕರು ಹಾಗೂ ಪ್ರಯಾಣಿಕರು ಪರದಾಡುವಂತೆ ಆಗಿದೆ. ದೂರದ ಊರಿಂದ ಸಾಮಾನು ಸರಂಜಾಮುಗಳೊಂದಿಗೆ ಇಳಿವ ಪ್ರಯಾಣಿಕರು, ಅಶಕ್ತರನ್ನು ಬಸ್‌ ನಿಲ್ದಾಣದಿಂದ ಹೊರಗಡೆ ಕೈ ಹಿಡಿದು ಲಗೇಜುಗಳನ್ನು ತಾವೇ ಎತ್ತಿಕೊಂಡು ರಿಕ್ಷಾಕ್ಕೆ ಹಾಕಿ ಮುಂದಕ್ಕೆ ಹೋಗಬೇಕಾದ ಪ್ರಮೇಯ ಶಂಕರನಾರಾಯಣ ರಿಕ್ಷಾ ಚಾಲಕರದ್ದು. ಕಾರಣ ಬಸ್‌ ನಿಲ್ದಾಣದ ಒಳಗೆ ರಿಕ್ಷಾಗಳಿಗೆ ಪ್ರವೇಶ ನಿರ್ಬಂಧ.

ರಿಕ್ಷಾಗಳೇ ವರದಾನ
ಎಂತಹ ಕಷ್ಟದ ಪರಿಸ್ಥಿತಿಯಲ್ಲೂ ತಮ್ಮ ಮನೆಮಠಗಳನ್ನು ಬಿಟ್ಟು ದುಡಿಮೆಯ ಜತೆಗೆ ಮಾನವೀಯ ಮೌಲ್ಯಗಳೊಂದಿಗೆ ಜನಸೇವೆಯಲ್ಲಿ ತೊಡಗಿರುವವರು ರಿಕ್ಷಾ ಚಾಲಕರು. ಹಳ್ಳಿ ಹಳ್ಳಿಗಳಲ್ಲೂ ತಮ್ಮ ದುಡಿಮೆ ಬಾಡಿಗೆ ಜತೆಗೆ ಸ್ನೇಹ ಹಸ್ತವನ್ನು ಚಾಚುತ್ತಾ ಆಬಾಲ ವೃದ್ಧರು, ಶಾಲಾ ಮಕ್ಕಳು, ರೋಗಿಗಳು, ಅಂಗವಿಕಲರು, ಮಧ್ಯಮ ವರ್ಗ ದವರಿಗೆ ಇಂದು ರಿಕ್ಷಾಗಳೇ ವರದಾನ.

ರಿಕ್ಷಾ ತಂಗುದಾಣ ಇಲ್ಲ
ಜಿಲ್ಲೆಯ ಎಲ್ಲಾ ಕಡೆಯೂ ಜನಪ್ರತಿನಿಧಿಗಳ ಅನುದಾನದೊಂದಿಗೆ ಸುಸಜ್ಜಿತ ರಿಕ್ಷಾ ನಿಲ್ದಾಣವನ್ನು ಅಲ್ಲಲ್ಲಿ ನೋಡಿದರೆ, ಶಂಕರನಾರಾಯಣ ರಿಕ್ಷಾ ಚಾಲಕರಿಗೆ ಇನ್ನೂ ರಿಕ್ಷಾ ನಿಲ್ದಾಣದ ಭಾಗ್ಯ ಸಿಕ್ಕಿಲ್ಲ. ಬಿಸಿಲು, ಮಳೆ, ಸಿಡಿಲು ಬಂದಾಗ ಎಲ್ಲಾದರೂ ಮರಗಳ ನೆರಳು, ಮರದ ಗೆಲ್ಲಿನ ಅಡಿಯಲ್ಲಿ ನಿಂತು ಅಪಾಯದೊಂದಿಗೆ ಜೀವ ಹಾಗೂ ರಿಕ್ಷಾದ ರಕ್ಷಣೆ ಮಾಡಿಕೊಳ್ಳಬೇಕು ಎಂಬ ಪರಿಸ್ಥಿತಿಯಲ್ಲಿದ್ದಾರೆ.

ಶಂಕರನಾರಾಯಣದಲ್ಲಿ 32ಕ್ಕೂ ಹೆಚ್ಚು ಮಂದಿ ರಿಕ್ಷಾ ಚಾಲಕರಿದ್ದೇವೆ. ಇದರಲ್ಲಿ ಹೆಚ್ಚಿನವರು ಸಾಲ ಮಾಡಿ ಸ್ವಂತ ರಿಕ್ಷಾ ಹೊಂದಿದ್ದೇವೆ. ಇಲ್ಲಿಯವರೆಗೆ ನಮಗೆ ಯಾವುದೇ ಸೂರು (ನಿಲ್ದಾಣ) ಅನುದಾನ ಸರಕಾರದಿಂದ ಬಂದಿಲ್ಲ. ಪ್ರತಿ ರಿಕ್ಷಾದಿಂದ 15 ರೂ. ಶುಲ್ಕ ಗ್ರಾಮ ಪಂಚಾಯತ್‌ಗೆ ಸಲ್ಲಿಕೆ ಆಗು ತ್ತದೆ. ಚುನಾವಣೆ ಹತ್ತಿರ ಬಂದಾಗ ರಾಜಕೀಯ ಸೋಗಿನ ಕೆಲವು ಮಂದಿ ಮೀಟರ್‌ ಟೇಪ್‌ ತೆಗೆದು ಬಂದು ಅನು
ದಾನ ಬಂದಿದೆ, ಕೂಡಲೇ ರಿಕ್ಷಾನಿಲ್ದಾಣ ಆಗುತ್ತದೆ ಎಂದು ವಿವಿಧ ಕಡೆಗಳಲ್ಲಿ ಅಳತೆ ಮಾಡಿ ಮುಂದೆ ಮಾಯ ವಾಗುತ್ತಾರೆ ಎನ್ನುತ್ತಾರೆ ಇಲ್ಲಿನ ಚಾಲಕರು.

ಶಾಸಕರ ಗಮನಕ್ಕೆ ತರಲಾಗುವುದು
ಜಿಲ್ಲೆಯ ಎಲ್ಲ ಕಡೆ ಜನಪ್ರತಿನಿಧಿ ಗಳ ಅನುದಾನದೊಂದಿಗೆ ಜನಸೇವೆ ಮಾಡುವ “ಆಟೋ ರಾಜ’ ರಿಕ್ಷಾ ಚಾಲಕರಿಗೆ ನಿಲ್ದಾಣದ ಭಾಗ್ಯ ಇದೆ. ಶಂಕರನಾರಾಯಣಕ್ಕೆ ಅನುದಾನ ಯಾಕೆ ಬಂದಿಲ್ಲವೆಂದು ತಿಳಿದು ಬಂದಿಲ್ಲ. ಜಿಲ್ಲಾಡಳಿತ ಹಾಗೂ ಶಾಸಕರ ಗಮನಕ್ಕೆ ಶೀಘ್ರ ತರಲಾಗುವುದು ಎನ್ನುತ್ತಾರೆ ಶಂಕರನಾರಾಯಣ ತಾಲೂಕು ರಚನಾ ಹೋರಾಟ ಸಮಿತಿ ಸಂಚಾಲಕ ಚಿಟ್ಟೆ ರಾಜಗೋಪಾಲ ಹೆಗ್ಡೆ ಅವರು.

ನಮ್ಮ ಗೋಳು ಕೇಳುವವರಿಲ್ಲ
ಹಲವು ವರ್ಷಗಳಿಂದ 32 ಮಂದಿ ರಿಕ್ಷಾ ಚಾಲಕ – ಮಾಲಕರು ಶಂಕರನಾರಾಯಣ ಬಸ್‌ ನಿಲ್ದಾಣದ ಸಮೀಪ ಜೀವನೋಪಾಯಕ್ಕಾಗಿ ರಿಕ್ಷಾ ಇಟ್ಟು ಕೊಂಡಿದ್ದೇವೆ. ಪರ ಊರಿಗೆ ಹೋಗುವ , ಬರುವ ಪ್ರಯಾಣಿಕರ ಹಿತಾಸಕ್ತಿ ಎಷ್ಟೇ ರಾತ್ರಿಯಾದರೂ ಗಮನಿಸಲೇ ಬೇಕು. ಬಸ್‌ ನಿಲ್ದಾಣದ ಒಳಗೆ ನಮಗೆ ಪ್ರವೇಶವಿಲ್ಲ, ಹೊರಗಡೆ ಸೂಕ್ತ ಸೂರು ಇಲ್ಲ, ಬಸ್‌ ನಿಲ್ದಾಣದ ಹತ್ತಿರ ನಮಗೆ ಸೂರಿನ ವ್ಯವಸ್ಥೆ ಮಾಡಬೇಕು. ನಮ್ಮ ಗೋಳು ಕೇಳುವವರಿಲ್ಲವಾಗಿದೆ-ಶಂಕರ ಶೆಟ್ಟಿಗಾರ, ಅಧ್ಯಕ್ಷ, ರಿಕ್ಷಾ ಚಾಲಕ – ಮಾಲಕರ ಸಂಘ, ಶಂಕರನಾರಾಯಣ.

ನಿಲ್ದಾಣ ಕಲ್ಪಿಸಲಿ
ಬಿಸಿಲಿಗೆ ಮೈಯೊಡ್ಡಿ ಮಳೆಗಾಲದಲ್ಲಿ ಹಲವು ವರ್ಷಗಳಿಂದ ನೆನೆಯುತ್ತಿದ್ದೇವೆ. ಬಸ್‌ ನಿಲ್ದಾಣದ ಪಕ್ಕ ಶ್ರೀಕೃಷ್ಣ ಕಾಂಪ್ಲೆಕ್ಸ್‌ , ಸದಾಶಿವ ನಾಯಕ್‌ ಅಂಗಡಿ ಮಧ್ಯ 6 – 7 ರಿಕ್ಷಾ ನಿಲ್ಲಲು ಅನುಕೂಲವಿದೆ. ಸ್ಥಳೀಯ ಆಡಳಿತ ಪ್ರಯಾಣಿಕರ ಅನುಕೂಲ ಕೋಸ್ಕರ ನಮಗೆ ಸೂರು ಕಲ್ಪಿಸಿದರೆ ಬಸ್ಸಿನಿಂದ ಇಳಿಯುವ ಪ್ರಯಾಣಿಕರಿಗೆ ಅನುಕೂಲ ಆಗುತ್ತದೆ.ಈ ಬಗ್ಗೆ ಸ್ಥಳೀಯಾಡಳಿತ ಗಮನ ಹರಿಸಬೇಕು.
– ಮಹಾಬಲ ಕುಲಾಲ, ಗೌರವ ಅಧ್ಯಕ್ಷ
ರಿಕ್ಷಾ ಚಾಲಕ – ಮಾಲಕರ ಸಂಘ, ಶಂಕರನಾರಾಯಣ

ಜಿಲ್ಲೆಯ ಎಲ್ಲಾ ಕಡೆ ಜನಪ್ರತಿನಿಧಿಗಳ ಸಹಾಯದಿಂದ ಸುಸಜ್ಜಿತ ರಿಕ್ಷಾ ನಿಲ್ದಾಣ ಸ್ಥಾಪನೆಯಾಗಿದೆ. ಆದರೆ ಶಂಕರನಾರಾಯಣ ರಿಕ್ಷಾ ಚಾಲಕರಿಗೆ ಮಾತ್ರ ಈ ಭಾಗ್ಯವಿಲ್ಲ. ಇವರು ಮಳೆ, ಬಿಸಿಲಿಗೆ ಮರಗಳ ನೆರಳು, ಮರದ ಗೆಲ್ಲಿನ ಅಡಿಯಲ್ಲಿ ನಿಂತು ಅಪಾಯಕಾರಿಯಾಗಿ ತಮ್ಮ ಜೀವ ಮತ್ತು ರಿಕ್ಷಾವನ್ನು ರಕ್ಷಣೆ ಮಾಡಿಕೊಳ್ಳಬೇಕಾಗಿದೆ. ಆದ್ದರಿಂದ ಇಲ್ಲಿಯ ರಿಕ್ಷಾ ಚಾಲಕರಿಗೆ ಒಂದು ಸುಸಜ್ಜಿತ ರಿಕ್ಷಾ ನಿಲ್ದಾಣ ಕಲ್ಪಿಸಿಕೊಡುವುದು ಅಗತ್ಯ.

ಟಾಪ್ ನ್ಯೂಸ್

Gun-Fire

Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್‌: 3 ವರ್ಷದ ಮಗು ಮೃತ್ಯು!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

Delhi-Stamp

Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

accident

Kaup: ಸ್ಕೂಟಿ, ಕಾರಿಗೆ ಬಸ್‌ ಢಿಕ್ಕಿ; ಸವಾರನಿಗೆ ಗಾಯ

1

Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್‌ಮನ್‌ ಹಲ್ಲೆ; ದೂರು

20

Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ

1-tengu-dsdsa

Udayavani-MIC ನಮ್ಮ ಸಂತೆ: ತೆಂಗಿನ ಗರಟೆಯಲ್ಲಿ ಅರಳಿದ ಕಲಾಕೃತಿ

1-namm-mannu-1

Udayavani-MIC ನಮ್ಮ ಸಂತೆ:ಮಣ್ಣಿನಿಂದ ಮಾಡಿದ ನಾನಾ ಉತ್ಪನ್ನ

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

Gun-Fire

Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್‌: 3 ವರ್ಷದ ಮಗು ಮೃತ್ಯು!

accident

Kaup: ಸ್ಕೂಟಿ, ಕಾರಿಗೆ ಬಸ್‌ ಢಿಕ್ಕಿ; ಸವಾರನಿಗೆ ಗಾಯ

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

1

Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್‌ಮನ್‌ ಹಲ್ಲೆ; ದೂರು

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.