ಭದ್ರತೆಯ ನೆಪ: ರಾವಲ್ಪಿಂಡಿಗೆ ಉಗ್ರ ಮಸೂದ್ ಸ್ಥಳಾಂತರಿಸಿದ ಪಾಕ್
Team Udayavani, Mar 9, 2020, 7:44 PM IST
ನವದೆಹಲಿ: ಜೈಶ್-ಎ-ಮೊಹಮ್ಮದ್ ಉಗ್ರ ಸಂಘಟನೆ ಮುಖ್ಯಸ್ಥ, ಉಗ್ರ ಮಸೂದ್ ಅಝರ್ನನ್ನು ರಾವಲ್ಪಿಂಡಿಗೆ ಸ್ಥಳಾಂತರಿಸಲಾಗಿದೆ. ಭದ್ರತೆಯ ಕಾರಣಗಳಿಗಾಗಿ ಪಾಕಿಸ್ತಾನ ಸರ್ಕಾರ ಈ ಕ್ರಮ ಕೈಗೊಂಡಿದೆ ಎಂದು ಹೇಳಲಾಗುತ್ತಿದೆಯಾದರೂ, ಸ್ಪಷ್ಟ ಕಾರಣಗಳು ಬಹಿರಂಗವಾಗಿಲ್ಲವೆಂದು ನವದೆಹಲಿಯಲ್ಲಿ ಮೂಲಗಳು ಖಚಿತಪಡಿಸಿವೆ. ಮಾ.3ರಂದೇ ಈ ಸ್ಥಳಾಂತರ ನಡೆದಿದೆ. ಅದಕ್ಕೆ ಪೂರಕವಾಗಿ ಸದ್ಯ ಅನಾರೋಗ್ಯದಿಂದ ಬಳಲುತ್ತಿದ್ದಾನೆ ಎಂದು ಹೇಳಲಾಗಿರುವ ಮಸೂದ್, ಆತನ ಇಬ್ಬರು ಸಹೋದರರಾಗಿರುವ ಮೌಲಾನಾ ರೌಫ್ ಅಸYರ್, ಮೌಲಾನಾ ಅಮ್ಮಾರ್ರನ್ನು ರಾವಲ್ಪಿಂಡಿಯ ಕೋರ್ಟ್ಗೆ ವಿಚಾರಣೆಗೆ ಮಾ.2ರಂದು ಹಾಜರಾಗುವಂತೆ ಸಮನ್ಸ್ ನೀಡಿರುವ ಬೆನ್ನಲ್ಲಿಯೇ ಈ ಕ್ರಮ ಕೈಗೊಳ್ಳಲಾಗಿದೆ.
ಇತ್ತೀಚೆಗೆ ಪ್ಯಾರಿಸ್ನಲ್ಲಿ ಮುಕ್ತಾಯಗೊಂಡ ಉಗ್ರ ಸಂಘಟನೆಗಳಿಗೆ ವಿತ್ತೀಯ ನೆರವಿನ ಮೇಲೆ ನಿಗಾ ಇರಿಸುವ ಕಾರ್ಯಪಡೆ- ಎಫ್ಎಟಿಎಫ್ ಸಭೆಯ ಸಂದರ್ಭದಲ್ಲಿ ಉಗ್ರ ಮಸೂದ್ ನಾಪತ್ತೆಯಾಗಿದ್ದಾನೆಂದು ಪಾಕಿಸ್ತಾನ ನಾಟಕವಾಡಿತ್ತು. ತಾಲಿಬಾನ್ ಉಗ್ರ ಸಂಘಟನೆ ಅಮೆರಿಕದ ಜತೆಗೆ ಒಪ್ಪಂದ ಮಾಡಿಕೊಂಡದ್ದರ ಬಗ್ಗೆ ಮೆಚ್ಚುಗೆಯ ಮಾತಾಡಿದ್ದು ಪಾಕ್ ಸರ್ಕಾರಕ್ಕೆ ಇರಿಸುಮುರಿಸು ಉಂಟಾಗಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.