ಬೈಕ್ ಗಳ ರಾಜ ರಾಯಲ್ ಎನ್ ಫೀಲ್ಡ್ ಬೆಳೆದು ಬಂದ ಹಾದಿ


ಮಿಥುನ್ ಪಿಜಿ, May 18, 2020, 9:20 AM IST

royal-enfiled-bike

ರಾಯಲ್ ಎನ್ ಫೀಲ್ಡ್ ಬೈಕ್ ಗಳ ರಾಜ ಎಂದೇ ಕರೆಯಲ್ಪಡುವ,  ಪ್ರಪಂಚದಲ್ಲೇ ಅತ್ಯಂತ ಹಳೆಯದಾದ ಮತ್ತು ಈಗಲೂ ನಡೆಯುತ್ತಿರುವ ಮೋಟಾರ್ ಸೈಕಲ್ ಕಂಪೆನಿ. ಜಗತ್ತಿನ 50ಕ್ಕಿಂತ ಹೆಚ್ಚು ರಾಷ್ಟ್ರಗಳಿಗೆ ಬೈಕ್ ಗಳನ್ನು ರಫ್ತು ಮಾಡುತ್ತಿರುವ ಭಾರತೀಯ ಏಕೈಕ ಕಂಪೆನಿ. ರಾಯಲ್ ಎನ್ ಫೀಲ್ಡ್ ಬುಲೆಟ್ ಗಳನ್ನು ಖರೀದಿಸುವುದು ಪ್ರತಿಯೊಬ್ಬನ ಕನಸಾಗಿರುತ್ತದೆ. ಇದು ನನಸಾಗದಿದ್ದಲ್ಲಿ ಒಮ್ಮೆಯಾದರೂ ಇದನ್ನು ಓಡಿಸಬೇಕೆಂಬ ಕನಸನ್ನು ಹಲವರು ಕಟ್ಟಿಕೊಂಡಿರುತ್ತಾರೆ. ಭಾರತೀಯ ಮಾರುಕಟ್ಟೆಯಲ್ಲಿ ಈ ಬೈಕ್ ಐತಿಹಾಸಿಕ ಇತಿಹಾಸವನ್ನು ಹೊಂದಿದೆ. ದೂರದಿಂದಲೇ ಬರುವಾಗ ಕಿವಿಯಲ್ಲಿ ಕೇಳಿಸುವ ಗಡ ಗಡ ಶಬ್ದ ಯಾರಿಂದಲೂ ಮರೆಯಲು ಸಾಧ್ಯವಿಲ್ಲ.

ಯುವಕರಿಗೆ ಈ ಬೈಕ್ ಅಂದರೆ ಅದೆನೋ ಆಕರ್ಷಣೆ. ರಾಯಲ್ ಎನ್ ಫೀಲ್ಡ್ ಕಂಪೆನಿಯನ್ನು  ಆಲ್ಬರ್ಟ್ ಎಡಿ ಮತ್ತು ರಾಬರ್ಟ್ ವಾಕರ್ ಸ್ಮಿತ್ ಇಂಗ್ಲೆಂಡ್ ನಲ್ಲಿ ಹುಟ್ಟು ಹಾಕಿದರು. 1901ರಲ್ಲಿ ರಾಯಲ್ ಎನ್ ಫೀಲ್ಡ್ ಕಂಪೆನಿ ‘ದ ಇಂಗ್ಲೆಂಡ್ ಸೈಕಲ್ ಕಂಪೆನಿಯ’ ಹೆಸರಿನಿಂದ ಮೊಟ್ಟ ಮೊದಲ ಮೋಟಾರ್ ಸೈಕಲ್ ಅನ್ನು ತಯಾರಿಸುತ್ತದೆ. ಮೊದಲನೇ ಮಹಾಯುದ್ದದ ಸಮಯದಲ್ಲಿ ಈ ಕಂಪೆನಿ ರಷ್ಯನ್ ಸೈನಿಕರಿಗೆ ಯುದ್ದೋಪಕರಣಗಳನ್ನು ಸುಲಭವಾಗಿ ತೆಗೆದುಕೊಂಡು ಹೋಗಲು ಬೈಕ್ ಗಳನ್ನು ತಯಾರು ಮಾಡುವ ಮೂಲಕ ಸಹಾಯಹಸ್ತ ಚಾಚುತ್ತದೆ. ಎರಡನೇ ಪ್ರಪಂಚ ಯುದ್ದದ ಸಮಯದಲ್ಲಿ ರಾಯಲ್ ಎನ್ ಫೀಲ್ಡ್ ‘ಪ್ಲೇಯಿಂಗ್ ಪ್ಲೇ’ ಎಂಬ ಹೆಸರಿನಲ್ಲಿ ಒಂದು ಕಡಿಮೆ ತೂಕದ ಮೋಟಾರ್ ಸೈಕಲ್ ಅನ್ನು ತಯಾರು ಮಾಡುತ್ತದೆ. ಯುದ್ದದ ಸಮಯದಲ್ಲಿ ಬೈಕ್ ಗಳನ್ನು ಪ್ಯಾರಾಚೂಟ್ ಸಹಾಯದಿಂದ ಭೂಮಿಗೆ ಇಳಿಸುವ ಮಹಾನ್ ಉದ್ದೇಶ ಇದರ ಹಿಂದಿತ್ತು. ಈ ಬೈಕ್ 120 ಸಿಸಿ ಮತ್ತು 60ಕೆಜಿ ತೂಕವನ್ನು  ಹೊಂದಿತ್ತು.

1953ರಲ್ಲಿ ಭಾರತೀಯ ಸೇನೆ ಗಡಿ ಕಾಯುವ ಸೈನಿಕರಿಗಾಗಿ ಬೈಕ್ ಗಳನ್ನು ಖರೀದಿ ಮಾಡಬೇಕು  ಎಂದು ನಿರ್ಧರಿಸುತ್ತದೆ. ಆ ಸಮಯದಲ್ಲಿ ಇವರಿಗೆ ರಾಯಲ್ ಎನ್ ಫೀಲ್ಡ್ ಬೈಕ್ ಸೂಕ್ತವೆಂದೆನಿಸುತ್ತದೆ. ಅಚಾನಕ್ ಎಂಬಂತೆ ಅದೇ ವರ್ಷ ರಾಯಲ್ ಎನ್ ಫೀಲ್ಡ್ ಸಂಸ್ಥೆ ಮದ್ರಾಸ್ ನಲ್ಲಿ ‘ಮದ್ರಾಸ್ ಮೋಟಾರ್ ಸೈಕಲ್’ ಎಂಬ ಕಂಪೆನಿಯ ಜೊತೆ ಕೈಜೋಡಿಸಿ  350ಸಿಸಿ ಯ 800 ಬೈಕ್ ಗಳನ್ನು ಭಾರತಕ್ಕೆ ರಪ್ತು  ಮಾಡುತ್ತದೆ. ಅವಾಗಿನಿಂದ ಮದ್ರಾಸ್ ಮೋಟಾರ್ ಸೈಕಲ್ ಕಂಪೆನಿ ‘ಎನ್ ಫೀಲ್ಡ್ ಇಂಡಿಯಾ’ ಎನ್ನುವ ಹೆಸರಿನಿಂದ ಭಾರತದಲ್ಲಿ  ರಾಯಲ್ ಎನ್ ಫೀಲ್ಡ್ ಬೈಕ್ ಗಳನ್ನು ಮಾರಾಟ ಮಾಡುತ್ತದೆ.

ಆ ಸಮಯದಲ್ಲಿ ಮದ್ರಾಸ್ ಮೋಟಾರ್ ಸೈಕಲ್ ಕಂಪೆನಿಯಲ್ಲಿ ಕೇವಲ ಬಿಡಿಭಾಗಗಳನ್ನು ಮಾತ್ರ ಜೋಡಿಸಲಾಗುತ್ತಿತ್ತು. 1962ನೇ ವರ್ಷದಲ್ಲಿ ಈ ಕಂಪೆನಿ ಭಾರತದಲ್ಲಿಯೇ ಬಿಡಿಭಾಗಗಳನ್ನು ತಯಾರಿಸುವ ಲೈಸನ್ಸ್ ಅನ್ನು ಪಡೆಯುತ್ತದೆ. ಆದರೇ ದುರದೃಷ್ಟ ಎಂಬಂತೆ 1971 ರಲ್ಲಿ ರಾಯಲ್ ಎನ್ ಫೀಲ್ಡ್ ಕಂಪೆನಿ ಇಂಗ್ಲೆಂಡ್ ನಲ್ಲಿ ಸಂಪೂರ್ಣ ಮುಚ್ಚಿ ಹೋಗುತ್ತದೆ.

ಅದೇ ಸಮಯದಲ್ಲಿ ಎನ್ ಫೀಲ್ಡ್ ಇಂಡಿಯಾವನ್ನು ರಾಯಲ್ ಎನ್ ಫೀಲ್ಡ್ ಆಗಿ ಬದಲಾಯಿಸಲು ಮದ್ರಾಸ್ ಮೋಟಾರ್ ಸೈಕಲ್ ಕಂಪೆನಿ ಪೂರ್ಣ ಅಧಿಕಾರ ಪಡೆಯುತ್ತದೆ. ನಂತರ 1990ರಲ್ಲಿ ರಾಯಲ್ ಎನ್ ಫೀಲ್ಡ್ ಕಂಪೆನಿ ಈಚರ್ ಇಂಡಿಯಾ ಜೊತೆ ವಿಲೀನವಾಗುತ್ತದೆ. 1994 ರಿಂದ 2004ರವರೆಗೂ ಈ ಕಂಪೆನಿ ನಷ್ಟದ ಹಾದಿಯಲ್ಲಿತ್ತು. 2002ರಲ್ಲಿ ಜೈಪುರದಲ್ಲಿದ್ದ ಬೈಕ್ ನಿರ್ಮಾಣ ಘಟಕವೂ  ಕೂಡ ಮುಚ್ಚಿಹೋಗುತ್ತದೆ.

2005ರಲ್ಲಿ ರಾಯಲ್ ಎನ್ ಫೀಲ್ಡ್ ಕಂಪೆನಿ(ಮದ್ರಾಸ್ ಮೋಟಾರ್ ಸೈಕಲ್)ಗೆ 50 ವರ್ಷ ಪೂರ್ತಿಯಾದ್ದರಿಂದ ಚೆನ್ನೈ ನಲ್ಲಿರುವ ನಿರ್ಮಾಣ ಘಟಕದಿಂದ ಹಳೆಯ ಬೈಕ್ ಗಳನ್ನು ಪುನರ್ ನಿರ್ಮಾಣ ಮಾಡಿ ಮಾರಾಟಕ್ಕೆ ಬಿಡುಗಡೆ ಮಾಡುತ್ತದೆ. ಅಲ್ಲಿಂದಲೇ ಯಶಸ್ಸಿ ಹಾದಿಯನ್ನು ಈ ಕಂಪೆನಿ ಹಿಡಿಯಿತು. ಒಂದು ಕಾಲದಲ್ಲಿ ಇಂಗ್ಲೆಂಡ್  ನಿಂದ ಭಾರತಕ್ಕೆ ಈ ಬೈಕ್ ಗಳನ್ನು ಆಮದು ಮಾಡಿಕೊಳ್ಳಲಾಗುತ್ತಿತ್ತು. ಆದರೇ ಕಾಲ ಬದಲಾದಂತೆ ಭಾರತದಿಂದ ಇಂಗ್ಲೆಂಡ್ ಗೆ ಈ ಬೈಕ್ ಗಳನ್ನು ರಫ್ತು ಮಾಡಲಾಗುತ್ತಿದೆ. ಈ ರೀತಿಯಾಗಿ ರಾಯಲ್ ಎನ್ ಫೀಲ್ಡ್ ಕಂಪೆನಿ ಜಗತ್ತಿನಾದ್ಯಂತ ಮೈಲಿಗಲ್ಲನ್ನು ಸ್ಥಾಪಿಸಿತು.

ರಾಯಲ್ ಎನ್ ಫೀಲ್ಡ್ ಮೈಲಿಗಲ್ಲು:

ಭಾರತದಲ್ಲಿ ಮೊದಲು ಫೋರ್ ಸ್ಟ್ರೋಕ್ ಇಂಜಿನ್ ತಯಾರು ಮಾಡಿದ್ದು ಕೂಡ ಈ ಕಂಪೆನಿಯೇ. 1990 ರಲ್ಲಿ ಡಿಸೇಲ್ ಇಂಜಿನ್ ಮೋಟಾರ್ ಸೈಕಲ್ ಅನ್ನು ಕೂಡ ಆರಂಭಿಸುತ್ತದೆ. ಆದರೇ ಅದು ಯಶಸ್ಸು ಗಳಿಸದಿದ್ದರಿಂದ 2002ರಲ್ಲಿ ಈ ಪ್ರಯೋಗ ನಿಲ್ಲಿಸಲಾಯಿತು.

ಮೂಲ ರಾಯಲ್ ಎನ್ ಫೀಲ್ಡ್ ಲೋಗೋದಲ್ಲಿ ಒಂದು ಫಿರಂಗಿ ಗುರುತು ಮತ್ತು ಮೇಡ್ ಲೈಕ್ ಏ ಗನ್ ಎಂಬ ಅಕ್ಷರಗಳಿರುತ್ತದೆ. 1962ರಲ್ಲಿ ಈ ಕಂಪೆನಿ ಇಂಟರ್ ಸೆಪ್ಟರ್ ಎಂಬ ಹೆಸರಿನಿಂದ 750 ಸಿಸಿ ಬೈಕ್ ಅನ್ನು ತಯಾರು ಮಾಡುತ್ತದೆ. ಆಗಿನ ಕಾಲದಲ್ಲಿ ಜಗತ್ತಿನ ಅತೀ ವೇಗದ ಬೈಕ್ ಎಂಬ ಹೆಗ್ಗಳಿಕೆಗೆ ಕೂಡ ಪಾತ್ರವಾಗುತ್ತದೆ. 2011 ರಲ್ಲಿ ಚೆನ್ನೈನಲ್ಲಿ 2ನೇ ನಿರ್ಮಾಣ ಘಟಕ ಕೂಡ ಆರಂಭವಾಗಿ, ಇಲ್ಲಿ ಪ್ರತಿದಿನ 800 ಬೈಕ್ ಗಳು ತಯಾರು ಆಗುತ್ತಿದ್ದವು. 2014ರಲ್ಲಿ ರಾಯಲ್ ಎನ್ ಫೀಲ್ಡ್ ಭಾರತದಲ್ಲಿ 3ಲಕ್ಷಕ್ಕಿಂತ ಹೆಚ್ಚು ಬೈಕ್ ಗಳನ್ನು ಮಾರಾಟ ಮಾಡುತ್ತದೆ. ಇದು ಹಾರ್ಲೇ ಡೇವಿಡ್ಸನ್ ಕಂಪೆನಿ ಪ್ರಪಂಚದಾದ್ಯಂತ ಮಾರಾಟ ಮಾಡಿದ ಬೈಕ್ ಗಳ ಸಂಖ್ಯೆಗಿಂತ ಹೆಚ್ಚು ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

-ಮಿಥುನ್ ಮೊಗೇರ

ಟಾಪ್ ನ್ಯೂಸ್

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

naki

Naki Sumo: ಮಗುವನ್ನು ಅಳಿಸುವ ವಿಚಿತ್ರ ಆಚರಣೆ !; ನಡೆಯುವುದಾದರು ಎಲ್ಲಿ?

mohan bhagwat

RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

Lalu

Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್

1-sidda

Mahakumbh; ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರಲಿ: ಅಭಿಮಾನಿಯ ಪ್ರಾರ್ಥನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Mahakumbha–Kharge-Bjp

MahaKumbh Mela: ಪುಣ್ಯಸ್ನಾನದ ಬಗ್ಗೆ ಪ್ರಶ್ನಿಸಿ ಮಲ್ಲಿಕಾರ್ಜುನ ಖರ್ಗೆ ಸಾಧಿಸಿದ್ದೇನು?

kambalaHigh-tech touch for Kambala race

Kambala ಓಟಕ್ಕೆ ಹೈಟೆಕ್ ಸ್ಪರ್ಶ; ಗೇಟ್ ತೆರೆದ ಕೂಡಲೇ ಓಟ ಶುರು; ಇಲ್ಲಿದೆ ಸಮಗ್ರ ಮಾಹಿತಿ

JIO SPACE FIBER 1

JioSpace Fiber: ಭಾರತದಲ್ಲಿ ಮತ್ತೊಂದು ಇಂಟರ್ನೆಟ್ ಕ್ರಾಂತಿಗೆ ಜಿಯೋ ಮುನ್ನುಡಿ… ಏನಿದು.?

thumb news web exclusive uv (2) (1)

“ಈ ಕಾಯಿಲೆ” ಇರುವವರು ಅರಿಶಿನ ಹಾಕಿದ ಹಾಲು ಸೇವಿಸಬಾರದು…

thumb web ex (1) (1) (1) (1) (1) (1) copy (1)

ನೀವು ಮುಖಕ್ಕೆ ಅರಿಶಿನ ಹಚ್ತೀರಾ..? ಹಾಗಾದ್ರೆ ಈ ತಪ್ಪುಗಳನ್ನು ಮಾಡಿರೋದು ಪಕ್ಕಾ!

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

20

Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

19

Bharamasagara: ವಿದ್ಯುತ್ ಕಿಡಿಗೆ ಎರಡು‌ ಮೇವಿನ ಬಣವೆ ಸಂಪೂರ್ಣ ಭಸ್ಮ

1-tengu-dsdsa

Udayavani-MIC ನಮ್ಮ ಸಂತೆ: ತೆಂಗಿನ ಗರಟೆಯಲ್ಲಿ ಅರಳಿದ ಕಲಾಕೃತಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.