ಮಾಹಿತಿ ಬೇಕಾದ್ರೆ 60 ಸಾವಿರ ರೂ. ತುಂಬಿ!

ಕೃಷಿ ಅಧಿಕಾರಿ ಪತ್ರಕ್ಕೆ ಬೆಸ್ತು ಬಿದ್ದ ರೈತ

Team Udayavani, Mar 16, 2020, 1:42 PM IST

16-March-14

ಮುದ್ದೇಬಿಹಾಳ: ಕೃಷಿ ಇಲಾಖೆಯಡಿ ಕೃಷಿ ಹೊಂಡಗಳ ಮಾಹಿತಿ ಒದಗಿಸುವಂತೆ ಕೇಳಿದ ಅರ್ಜಿದಾರರೊಬ್ಬರಿಗೆ ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿಯೊಬ್ಬರು ಮಾಹಿತಿ ಬೇಕಾದಲ್ಲಿ ಒಟ್ಟು 60,000 ರೂ. ತುಂಬುವಂತೆ ಪತ್ರ ಬರೆದು ಅರ್ಜಿ ಹಾಕಿದ್ದ ರೈತ ಬೇಸ್ತು ಬೀಳುವಂತೆ ಮಾಡಿದ ಘಟನೆ ವಿಜಯಪುರ ಜಿಲ್ಲೆ ಮುದ್ದೇಬಿಹಾಳ ತಾಲೂಕು ನಾಲತವಾಡದಲ್ಲಿ ನಡೆದಿದೆ.

ತಾಲೂಕಿನ ಗರಸಂಗಿ ಗ್ರಾಮದ ಮಲ್ಲಪ್ಪ ತೋಟಪ್ಪ ಡೊಳ್ಳಿನ ಎನ್ನುವವರು ನಾಲತವಾಡ ಕೃಷಿ ಕೇಂದ್ರದ ಕೃಷಿ ಅಧಿಕಾರಿಗೆ 2014-15ನೇ ಸಾಲಿನಿಂದ 20-1-2020ರವರೆಗಿನ ನಾಲತವಾಡ ಹೋಬಳಿಯ ರೈತರ ಜಮೀನುಗಳಲ್ಲಿ ನಿರ್ಮಿಸಿರುವ ಕೃಷಿ ಹೊಂಡದ ಮಾಹಿತಿ ಕೊಡುವಂತೆ ಮಾಹಿತಿ ಹಕ್ಕು ಕಾಯ್ದೆಯಡಿ 20-1-2020ರಂದು ಅರ್ಜಿ ಸಲ್ಲಿಸಿದ್ದರು.

ಕೃಷಿ ಹೊಂಡದ ಸಮಗ್ರ ಮಾಹಿತಿ, ಫಲಾನುಭವಿ ರೈತರ ಯಾದಿ, ಕೃಷಿ ಹೊಂಡಕ್ಕೆ ರೈತರಿಂದ ಪಡೆದ ಕಾಗದ ಪತ್ರದ ನಕಲು, ಕೃಷಿ ಹೊಂಡಗಳ ಕ್ರಿಯಾಯೋಜನೆ, ಓಚರ್‌, ಎಂಪಿ ಪುಸ್ತಕದ ನಕಲು, ಬಿಲ್‌, ಚಕ್‌ ನಂಬರ್‌, 3 ಹಂತಗಳ ಫೋಟೊ ಕೊಡುವಂತೆ ಅವರು ಅರ್ಜಿಯಲ್ಲಿ ಕೇಳಿದ್ದರು.

ಇದಕ್ಕೆ ಒಂದೂವರೆ ತಿಂಗಳ ನಂತರ ಉತ್ತರ ರೂಪದ ಪತ್ರ ಬರೆದ ಕೃಷಿ ಅ ಧಿಕಾರಿ, ತಾವು ಕೇಳಿದ ಮಾಹಿತಿ ಒಟ್ಟು 1,600 ಪುಟಗಳಲ್ಲಿ ಲಭ್ಯವಿದ್ದು ಪ್ರತಿ ಪುಟಕ್ಕೆ 10 ರೂ.ನಂತೆ 1,6000 ರೂ. ಮತ್ತು ಪ್ರತಿ ಫೋಟೊಗೆ 45 ರೂ.ನಂತೆ 44,235 ರೂ. ತುಂಬಿದರೆ ಮಾಹಿತಿ ಒದಗಿಸಲಾಗುವುದು ಎಂದು ತಿಳಿಸಿರುವುದು ಅರ್ಜಿ ಹಾಕಿದ ರೈತನನ್ನು ಹೈರಾಣು ಮಾಡಿದೆ.

ಆ ಪತ್ರದ ಸಮೇತ ಮಲ್ಲಪ್ಪ ಅವರು ಸುದ್ದಿಗಾರರ ಎದುರು ಅಳಲು ತೋಡಿಕೊಂಡಿದ್ದು ಕೃಷಿ ಹೊಂಡದಲ್ಲಿ ಹಗರಣ ನಡೆದಿರುವ ಕಾರಣಕ್ಕೆ ಅದನ್ನು ಬಹಿರಂಗಪಡಿಸಲು ಮಾಹಿತಿ ಕೇಳಿದರೆ ಈ ರೀತಿ ಉತ್ತರ ಕೊಟ್ಟಿದ್ದಾರೆ. ಮಾಹಿತಿ ಹಕ್ಕು ಕಾಯ್ದೆ ನಿಯಮದ ಪ್ರಕಾರ ಪ್ರತಿ ಪುಟಕ್ಕೆ 2 ರೂ., ಪ್ರತಿ ಫೋಟೊವನ್ನು ಝರಾಕ್ಸ್‌ ಮಾಡಿಸಿದರೂ ಅದರ ಪ್ರತಿ ಪುಟಕ್ಕೆ 1 ರೂ. ಪಡೆಯಬೇಕು ಎಂದಿದೆ.

ಹೀಗಿರುವಾಗ ಮನಸ್ಸಿಗೆ ತೋಚಿದಂತೆ ಹಣ ತುಂಬಲು ಹೇಳಿ ಅರ್ಜಿದಾರರ ಆಸಕ್ತಿ ಕುಂದಿಸುವ ಪ್ರಯತ್ನ ನಡೆಸಿದ್ದು ಸರಿ ಅಲ್ಲ. ಈಗಲಾದರೂ ಸಂಬಂ ಧಿಸಿದ ಕೃಷಿ ಅಧಿಕಾರಿ ತಮ್ಮ ತಪ್ಪು ತಿದ್ದಿಕೊಂಡು ಮಾಹಿತಿ ಹಕ್ಕು ನಿಯಮದ ಅಡಿ ನಿಗದಿಪಡಿಸಿದ ಶುಲ್ಕ ಪಡೆದುಕೊಂಡು ತಾವು ಕೇಳಿದ ಮಾಹಿತಿ ಕೊಟ್ಟು ಸಹಕರಿಸಬೇಕು ಎಂದು ಆಗ್ರಹಿಸಿದ್ದಾರೆ.

ಜಿಪಂ ಸದಸ್ಯರ ಅಭಿವೃದ್ಧಿಗೆ ಅನುದಾನ
ಇನ್ನೊಂದು ಪ್ರಕರಣದಲ್ಲಿ ಇಲ್ಲಿನ ಪಂಚಾಯತ್‌ ರಾಜ್‌ ಎಂಜಿನಿಯರಿಂಗ್‌ ಉಪ ವಿಭಾಗದ ಕಚೇರಿಯ ಸಾರ್ವಜನಿಕ ಮಾಹಿತಿ ಹಕ್ಕು ಅಧಿಕಾರಿ ಅರ್ಜಿದಾರರಿಗೆ ಪತ್ರ ಬರೆದಿದ್ದು ಅದರಲ್ಲಿ ಜಿಪಂ ಸದಸ್ಯರ ಅಭಿವೃದ್ಧಿಗಾಗಿ ಕೈಗೊಂಡ ಕಾಮಗಾರಿ ಅನುದಾನ ಎಂದು ಉಲ್ಲೇಖೀಸಿ ನಗೆಪಾಟಲಿಗೀಡಾದ ಪ್ರಸಂಗ ಬೆಳಕಿಗೆ ಬಂದಿದೆ.

ರಕ್ಕಸಗಿ ಗ್ರಾಪಂ ಸದಸ್ಯ ಶಿವಶರಣ ಪರಪ್ಪ ಪಟ್ಟಣಶೆಟ್ಟಿ ಎನ್ನುವವರು ಉಪ ವಿಭಾಗದ ಎಇಇಗೆ ಮಾಹಿತಿ ಹಕ್ಕು ಕಾಯ್ದೆ ಅಡಿ ಅರ್ಜಿ ಸಲ್ಲಿಸಿ 2018-19ನೇ ಸಾಲಿನ ಮುದ್ದೇಬಿಹಾಳ ವಿಧಾನಸಭಾ ಮತಕ್ಷೇತ್ರದ ಅಭಿವೃದ್ಧಿ ಯೋಜನೆಗೆ ಜಿಪಂ ಸದಸ್ಯರ ಅನುದಾನದಡಿ ಕೈಗೊಂಡ ಕಾಮಗಾರಿಗಳ ಕ್ರಿಯಾಯೋಜನೆಯ ಮಾಹಿತಿ ಪೂರೈಸುವಂತೆ ಕೇಳಿದ್ದರು. ಈ ಅರ್ಜಿಗೆ ಉತ್ತರಿಸಿದ್ದ ಉಪ ವಿಭಾಗದ ಎಇಇ ಅವರು ನೀವು (ಶಿವಶರಣ ಪಟ್ಟಣಶೆಟ್ಟಿ) ಕೋರಿರುವ ಅರ್ಜಿಗೆ ಸಂಬಂಧಿಸಿದಂತೆ 11 ಪುಟಗಳ ಮಾಹಿತಿ ಒದಗಿಸಲಾಗಿದೆ ಎಂದು ತಿಳಿಸಿದ್ದೂ ಅಲ್ಲದೆ ಕೋರಿರುವ ಅರ್ಜಿಯಲ್ಲಿ 2018-19ನೇ ಸಾಲಿನಿಂದ ಮುದ್ದೇಬಿಹಾಳ ಮತಕ್ಷೇತ್ರದ ಅಭಿವೃದ್ಧಿ ಯೋಜನೆಗೆ ಜಿಪಂ ಸದಸ್ಯರ ಅಭಿವೃದ್ಧಿಗಾಗಿ ಕೈಗೊಂಡ ಕಾಮಗಾರಿಯ ಅನುದಾನದ ಮಂಜೂರಾದ ಕ್ರಿಯಾ ಯೋಜನೆಯ ಮಾಹಿತಿ ಎಂದು ಬಳಸಿದ್ದು ನಗೆಪಾಟಲಿಗೀಡಾದಂತಾಗಿದೆ. ಜಿಪಂ ಸದಸ್ಯರು ತಮ್ಮ ಮತಕ್ಷೇತ್ರದ ಅಭಿವೃದ್ಧಿ ಕಾಮಗಾರಿ ನಡೆಸುತ್ತಾರೋ ಅಥವಾ ತಮ್ಮ ಅಭಿವೃದ್ಧಿಗಾಗಿ ಕಾಮಗಾರಿ ನಡೆಸುತ್ತಾರೆಯೋ ಎನ್ನುವ ಸಂದೇಹ ಉಂಟಾಗುವ ರೀತಿ ಪತ್ರದ ಒಕ್ಕಣಿಕೆ ಇರುವುದು ಅಚ್ಚರಿ ಮೂಡಿಸಿದೆ. ಮಾಹಿತಿ ಹಕ್ಕು ಅಧಿಕಾರಿಯೂ ಆಗಿರುವ ಎಇಇ ಅವರು ನೀಡಿದ ಉತ್ತರದಲ್ಲಿ ವಾಸ್ತವವನ್ನೇ ಬಹಿರಂಗಪಡಿಸಿದ್ದಾರೆ. ಜಿಪಂ ಸದಸ್ಯರು ಜನರ ಅಭಿವೃದ್ಧಿಗಿಂತ ತಮ್ಮ ಅಭಿವೃದ್ಧಿಯನ್ನೇ ಮುಖ್ಯವಾಗಿಸಿಕೊಂಡಿದ್ದು ಬಹಿರಂಗವಾಗುಳಿದಿಲ್ಲ ಎಂದು ಅರ್ಜಿದಾರರು ತಿಳಿಸಿದ್ದಾರೆ.

ಟಾಪ್ ನ್ಯೂಸ್

Salman Khan: 5 ಕೋಟಿ ನೀಡಿ, ಇಲ್ಲದಿದ್ದರೆ… ಸಲ್ಮಾನ್ ಖಾನ್ ಗೆ ಮತ್ತೆ ಜೀವ ಬೆದರಿಕೆ

Salman Khan: 5 ಕೋಟಿ ನೀಡಿ, ಇಲ್ಲದಿದ್ದರೆ… ಸಲ್ಮಾನ್ ಖಾನ್ ಗೆ ಮತ್ತೆ ಜೀವ ಬೆದರಿಕೆ

2-vijayapura

Vijayapura: ಗ್ರಾಮಕ್ಕೆ ನುಗ್ಗಿದ ಮೊಸಳೆ ಸೆರೆ

Jaiswal

Canada Vs India: ನಿಜ್ಜರ್‌ ಹತ್ಯೆ ಕೇಸಲ್ಲಿ ಸತ್ಯ ಒಪ್ಪಿದ ಕೆನಡಾ ಪ್ರಧಾನಿ: ಕೇಂದ್ರ ಸರಕಾರ

Bhagavath

Helping Nature: ಭಾರತ ದಾಳಿ ಮಾಡಲ್ಲ, ತನ್ನ ಮೇಲಿನ ದಾಳಿಯನ್ನೂ ಸಹಿಸಲ್ಲ: ಭಾಗವತ್‌

ಪ್ರವಾಸ ಸಂದರ್ಭ ವಿದ್ಯಾರ್ಥಿನಿಯರಿಗೆ ಉಪನ್ಯಾಸಕರಿಂದ ಮದ್ಯಪಾನ: ದೂರು

Kanakapura: ಪ್ರವಾಸ ಸಂದರ್ಭ ವಿದ್ಯಾರ್ಥಿನಿಯರಿಗೆ ಉಪನ್ಯಾಸಕರಿಂದ ಮದ್ಯಪಾನ: ದೂರು

CJI-Ind

Recommendation: ನ್ಯಾ. ಸಂಜೀವ್‌ ಖನ್ನಾ ಸುಪ್ರೀಂಕೋರ್ಟ್‌ ಮುಂದಿನ ಮುಖ್ಯ ನ್ಯಾಯಮೂರ್ತಿ

Koppal: ಚಿಕನ್‌, ಮಟನ್‌ ಸೆಂಟರ್‌ಗೆ ಸಚಿವೆ ಶೋಭಾ ಕರಂದ್ಲಾಜೆ ಹೆಸರಿಟ್ಟ ಅಭಿಮಾನಿ

Koppal: ಚಿಕನ್‌, ಮಟನ್‌ ಸೆಂಟರ್‌ಗೆ ಸಚಿವೆ ಶೋಭಾ ಕರಂದ್ಲಾಜೆ ಹೆಸರಿಟ್ಟ ಅಭಿಮಾನಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

2-vijayapura

Vijayapura: ಗ್ರಾಮಕ್ಕೆ ನುಗ್ಗಿದ ಮೊಸಳೆ ಸೆರೆ

Vijayapura: 2-year-old child passed away after falling into Raj canal

Vijayapura: ರಾಜಕಾಲುವೆಗೆ ಬಿದ್ದು 2 ವರ್ಷದ ಮಗು ಸಾವು

Vijayapura: ವಕ್ಫ್ ಕಾಯ್ದೆ ರದ್ದತಿಗೆ ಆಗ್ರಹಿಸಿ ಯತ್ನಾಳ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ

Vijayapura: ವಕ್ಫ್ ಕಾಯ್ದೆ ರದ್ದತಿಗೆ ಆಗ್ರಹಿಸಿ ಯತ್ನಾಳ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ

Basangouda Patil Yatnal: ಫಸ್ಟ್‌ ಲೈನ್‌ ನಾಯಕರ ಆಸ್ತಿ ಬಗ್ಗೆ ತನಿಖೆ ಆಗಲಿ

Basangouda Patil Yatnal: ಫಸ್ಟ್‌ ಲೈನ್‌ ನಾಯಕರ ಆಸ್ತಿ ಬಗ್ಗೆ ತನಿಖೆ ಆಗಲಿ

I don’t know about Kharge returned plot : Minister MB Patil

Vijayapura: ಖರ್ಗೆ ಕುಟುಂಬ ನಿವೇಶನ ವಾಪಸ್ ಕೊಟ್ಟಿದ್ದು ಗೊತ್ತಿಲ್ಲ: ಸಚಿವ ಎಂ.ಬಿ.ಪಾಟೀಲ್

MUST WATCH

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

udayavani youtube

ಅಗಲಿದ ರತನ್ ಟಾಟಾಗೆ ಶ್ರದ್ಧಾಂಜಲಿ ಸಲ್ಲಿಸಿದ ಅಂಬಾನಿ ಕುಟುಂಬ

udayavani youtube

ಮಕ್ಕಳ ಸ್ಕ್ರೀನ್ ಟೈಮಿಂಗ್ ಕುರಿತು ಎಚ್ಚರಿಕೆ ಅತ್ಯವಶ್ಯಕ.. ಇಲ್ಲಿದೆ ಅಗತ್ಯ ಮಾಹಿತಿ

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

ಹೊಸ ಸೇರ್ಪಡೆ

Salman Khan: 5 ಕೋಟಿ ನೀಡಿ, ಇಲ್ಲದಿದ್ದರೆ… ಸಲ್ಮಾನ್ ಖಾನ್ ಗೆ ಮತ್ತೆ ಜೀವ ಬೆದರಿಕೆ

Salman Khan: 5 ಕೋಟಿ ನೀಡಿ, ಇಲ್ಲದಿದ್ದರೆ… ಸಲ್ಮಾನ್ ಖಾನ್ ಗೆ ಮತ್ತೆ ಜೀವ ಬೆದರಿಕೆ

2-vijayapura

Vijayapura: ಗ್ರಾಮಕ್ಕೆ ನುಗ್ಗಿದ ಮೊಸಳೆ ಸೆರೆ

Jaiswal

Canada Vs India: ನಿಜ್ಜರ್‌ ಹತ್ಯೆ ಕೇಸಲ್ಲಿ ಸತ್ಯ ಒಪ್ಪಿದ ಕೆನಡಾ ಪ್ರಧಾನಿ: ಕೇಂದ್ರ ಸರಕಾರ

Bhagavath

Helping Nature: ಭಾರತ ದಾಳಿ ಮಾಡಲ್ಲ, ತನ್ನ ಮೇಲಿನ ದಾಳಿಯನ್ನೂ ಸಹಿಸಲ್ಲ: ಭಾಗವತ್‌

ಪ್ರವಾಸ ಸಂದರ್ಭ ವಿದ್ಯಾರ್ಥಿನಿಯರಿಗೆ ಉಪನ್ಯಾಸಕರಿಂದ ಮದ್ಯಪಾನ: ದೂರು

Kanakapura: ಪ್ರವಾಸ ಸಂದರ್ಭ ವಿದ್ಯಾರ್ಥಿನಿಯರಿಗೆ ಉಪನ್ಯಾಸಕರಿಂದ ಮದ್ಯಪಾನ: ದೂರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.